Thursday, December 18, 2014

ಅಶಾಂತಿ!


ಕಲ್ಲು ಬಿದ್ದಾಗ
ಒಂದಾಗುವ ಕನಸು!
ಶಾಂತಿ ಇರುವಾಗ
ಕಚ್ಚಾಡುವ ಮನಸು!
ಶತ್ರುವಿನ ಕಲ್ಲಿಗೆ
ಒಂದಾಗುವ ಯುವಶಕ್ತಿ,
ಕಚ್ಚಾಡುವ ಮನೋಸ್ಥಿತಿಗೆ
ಜೈ ಎನ್ನುವ ಅತಿಶಯೋಕ್ತಿ.
ಸಭೆ ಕರೆದವರು ಸಭೆಯಲ್ಲೇ
ಮಾತು ಮುಗಿಸಿದರು,
ನಂಬಿ ಕುಳಿತವರು ನಂಬಿ
ಮತ್ತೆ ಮತ್ತೆ ಕೆಡುತಿರುವವರು.
ನ್ಯಾಯದ ನಿರೀಕ್ಷೆಗಾಗಿ
ಪ್ರತಿರೋಧದ ಒಂದು ಗುಂಪು,
ನಾಡಿನೆಲ್ಲೆಡೆ ನಡೆಯುವ
ನಡೆಯಲ್ಲಿ ಸಾಮಾನ್ಯನ
ಕಣ್ಣು ಕೂಡಾ ಕೆಂಪು.
ಶಾಂತಿ ಪ್ರೀಯರ
ಅರ್ಥವಾಗದ ಮಾಮೂಲಿ ನಡೆ,
ತಲೆಕೆಡಿಸದ ಮೌನಿಗಳಿಂದ
ಎಲ್ಲೆಡೆ ಅನ್ಯಾಯದ ಪಡೆ.
ಬಾಂಗ್ ನಿಲ್ಲಿಸಲು ಕೆಲವರು,
ನುಗ್ಗಿ ಹೊಡೆಯಲು ಹಲವರು,
ಅಪಪ್ರಚಾರ ನಡೆಸಲು
ಹಾತೊರೆಯುವವರು,
! ಅಶಾಂತಿ! ಅಶಾಂತಿ!
ಭಗ್ನವಾದ ಸಮಾಜದಲ್ಲಿ
ನಿರೀಕ್ಷೆಯೊಂದೇ,
ಒಳಿತಿನ
ಕಡೆ ಸಾಗಬೇಕಾದ
ಯುವಕರ ಸ್ಪಷ್ಟ ದಾರಿ.

Monday, December 1, 2014

ಅಧರ್ಮಿಗಳು ಮುಚ್ಚಿದ ಗೋಡೆಯೊಳಗೆ ಇನ್ಷಾ


ಇನ್ಷಾ ಖಲೀಲ್ ಭರತ್ ರಾಜ್ ಎನ್ನುವ ಯುವಕನೊಂದಿಗೆ ಓಡಿ ಹೋಗಿದ್ದಾಳೆ!! ಅದಕ್ಕಿಂತ ಹೆಚ್ಚಾಗಿ ಮುಸ್ಲಿಂ ಹೆಣ್ಣುಮಗಳೊಬ್ಬಳು ಹಿಂದು ಯುವಕನೊಂದಿಗೆ ಓಡಿ ಹೋಗಿದ್ದಾಳೆ, ರಕ್ತ ಕುದಿಸುವ ಯುವಕರಿಗೆ ಚರ್ಚಾ ವಸ್ತುವಾಗಿ ಇನ್ಷಾ ಓಡಿ ಹೋಗಿದ್ದಾಳೆ. ಇನ್ಷಾ ಎಂಬ ದಾರಿ ತಪ್ಪಿದ ಹುಡುಗಿ ಓಡಿ ಹೋಗಿದ್ದರೆ ಬಿಟ್ಟು ಬಿಡಬಹುದಿತ್ತು ಆದರೆ ಇನ್ಷಾಳನ್ನು ತಾಂತ್ರಿಕತೆಯ ಮೂಲಕ ಆತ್ಮ ಹತ್ಯೆ ಮಾಡಿಸಿ ಖುಷಿ ಪಟ್ಟ ಅಜ್ನಾನಿ  ಯುವಕರಿಂದಾಗಿ ಇನ್ನಷ್ಟು ಇನ್ಷಾ ಓಡಿ ಹೋಗಿವುದನ್ನು ನಿಲ್ಲಿಸಬೇಕಾಗಿದೆ. ಆ ಮುಗ್ದ ಯುವತಿ ಧರ್ಮದ ಎಲ್ಲೆಗಳನ್ನು ಮೀರಿ ಹೋಗಿರುವುದಕ್ಕೆ ಅವಳದೇ ಆದ ಕಾರಣವಿರಬಹುದು ಮತ್ತು ಆ ಕಾರಣಕ್ಕಾಗಿ ಅವಳು ತೆಗೆದುಕೊಂಡ ನಿರ್ಧಾರ ತಪ್ಪಾಗಿರಬಹುದು ಆದರೆ ಕಾರಣ ಹುಡುಕುತ್ತಾ ಹೋದಷ್ಟು ದಾರಿ ತಪ್ಪುತ್ತಿರುವ ಯುವತಿಯರ ಮನೋಸ್ಥಿತಿ ಅರ್ಥವಾಗಬಹುದು ಮತ್ತು ಸಮುದಾಯದ ಯುವಕರ ತಪ್ಪುಗಳ ಪರಿಚಯವಾಗಬಹುದು.

ಇನ್ಷಾ ಇಸ್ಲಾಮಿನಿಂದ ಎಷ್ಟು ದೂರವಾಗಿದ್ದಾಳೆ ಎಂದರೆ ಅವಳು ಒಂದು ವೇಳೆ ಮರಳಿ ಬರಲು ಇಷ್ಟಪಟ್ಟರೆ ಅವಳಿಗೆ ಬರಳು ಅಸಾಧ್ಯವಾಗುವಷ್ಟು ಧರ್ಮದ ಗೋಡೆಗಳನ್ನೆಲ್ಲಾ ಅಧರ್ಮಿಗಳು (ಧರ್ಮದ ಒಳಗಡೆ ಇರುವವರು) ಮುಚ್ಚಿಹಾಕಿದ್ದಾರೆ ಮತ್ತು ಧರ್ಮ ನಾಯಕರು ಕಚ್ಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಪ್ರಶ್ನೆಗಳಿಗೆ ಇನ್ಷಾ ಮಾತ್ರ ಉತ್ತರಿಸಲು ಸಾಧ್ಯ. ಇನ್ಷಾಳ ಘಟನೆ ಓಡಿಸಿಕೊಂಡು ಹೋದವನ ಬಗ್ಗೆ ಮಾತ್ರ ಚರ್ಚಿಸುವ ಚರ್ಚೆಯಾಗುವುದಕ್ಕಿಂತ ಸಮುದಾಯದ ಇನ್ಷಾ ರ ಬಗ್ಗೆ ಚಿಂತಿಸುವ ಪ್ರಯತ್ನ ನಡೆಸಬೇಕಾಗಿದೆ. ಕಿಡಿಗೇಡಿಗಳು ಇನ್ಶಾಳ ಸಹೋದರರಾಗಿ ಯೋಚಿಸಬೇಕಾಗಿದೆ. ಸಮುದಾಯದ ಮಧ್ಯೆ ಅವಳು ಕಂಡು ಕೊಂಡ ದುರಂತಗಳ ಬಗ್ಗೆ ಯೋಚಿಸಬೇಕಾಗಿದೆ, ಈ ಘಟನೆ ಕಚ್ಚಾಡುವ ಮನಸ್ಸುಗಳನ್ನು ತಳಮಳಗೊಳಿಸಬೇಕಾಗಿದೆ, ಭಿನ್ನತೆಯ ಪಾಪವನ್ನು ಅರಿಯುವಂತೆ ಚಿಂತನೆಗೊಳಪಡಿಸಬೇಕಾಗಿದೆ, ಧಾರ್ಮಿಕ
ಶಿಕ್ಷಣದ ಕೊರತೆಯನ್ನು ನೀಗಿಸಬೇಕಾಗಿದೆ, ತಮ್ಮ ಮಕ್ಕಳ ನಡೆದಾಟದ ಬಗ್ಗೆ ಗಮನ ಹರಿಸುವಂತೆ ಲಕ್ಶ್ಯ ಹರಿಸಬೇಕಾಗಿದೆ, ದುಡ್ಡು ಸಂಪಾದಿಸುವ ಆತುರದ ಮಧ್ಯೆ ತನ್ನವರನ್ನು ಮರೆತವನಿಗೆ ಯೋಚಿಸುವ ಕಾಲವಾಗಬೇಕಾಗಿದೆ.

ಇನ್ಷಾ ಧರ್ಮದ ಎಲ್ಲೆಗಳನ್ನು ಮೀರಿ ಹೋಗಿರುವುದನ್ನು ಖಂಡಿಸಲೇಬೇಕು ಅದಕ್ಕೆ ಕಾರಣವಾದವರನ್ನು ಕಾನೂನಿನ ಚೌಕಾಟ್ಟಿನ ಮುಂದೆ ತಂದು ನಿಲ್ಲಿಸಲೇಬೇಕು ಆದರೆ ಇನ್ಷಾಳ ಹೆಸರಿನಲ್ಲಿ ಮತಾಂಧತೆಯನ್ನು ಮೆರೆಯಬಾರದು. ತಮ್ಮೊಳಗಿನ ವೈಶಮ್ಯಕ್ಕಾಗಿ ಒಂದು ಹುಡುಗಿಯ ಹೆಸರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿಸಿ ಖುಶಿ ಪಡುವ ವಿಗ್ನ ಸಂತೋಷಿಗಳನ್ನು ಹುಡುಕಿ ಸದೆಬಡಿಯಬೇಕು. ಇನ್ಶಾಳ ದಾರಿ ಕಂಡುಕೊಳ್ಳುವ ಸಮುದಾಯದ ಯುವತಿಯರ ಸಮಸ್ಯಗಳನ್ನು ಸಮುದಾಯ ಒಟ್ಟಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಇನ್ಷಾಲಂತವರಿಗೆ ಬೇರೊಂದು ಧರ್ಮದ ಯುವಕರೊಂದಿಗೆ ಓಡಿ ಹೋಗಳು ಬೇರೆ ಬೇರೆ ಕಾರಣಗಳಿರಬಹುದು ಆದರೆ ಅಂತಹ ಮನೋಸ್ಥಿತಿಗಳನ್ನು ಬದಲಾಯಿಸಿ ಇಸ್ಲಾಮಿ ಕಲ್ಪನೆ ಮೂಡಿಸಳು ಸಮುದಾಯ ಒಗ್ಗಟ್ಟಿನ ಅಸ್ತ್ರವನ್ನು ಪ್ರಯೋಗಿಸಬೇಕು. ಒಂದು ಸ್ವಚ ಇಸ್ಲಾಮಿ ನಡೆಯನ್ನು ನಮ್ಮ ಯುವತಿಯರು ಮತ್ತು ಹೆಚ್ಚಾಗಿ ಯುವ ಸಮುದಾಯಕ್ಕೆ ಬಹಳ ಗಾಢವಾಗಿ ಅಭ್ಯಸಿಸಳು ಅವಕಾಸ ಕಲ್ಪಿಸಬೇಕು. ಧರ್ಮವನ್ನು ಸಂಕುಚಿತ ಸಂಕೋಲೆಗಳಿಂದ ಹೊರಗೆ ತಂದು ಸೃಷ್ಟಿಕರ್ತನ ಆದೇಶಗಳ ಕಲ್ಪನೆಗೆ ಒಗ್ಗಿಸಿಕೊಂಡಾಗ "ಲವ್ ಜಿಹಾದ್" ಎಂಬ ಕಟ್ಟು ಕತೆಯನ್ನು ಮಾತ್ರವಲ್ಲ ನಮ್ಮ ತಪ್ಪು ಕಲ್ಪನೆಗಳಿಂದಾಗಿ ಬೆಳೆದು ಬರುತ್ತಿರುವ "ಲವ್ ಕೇಸರಿ" ಎಂಬ ಮಾನಸಿಕ ಸಿದ್ದಾಂತಕ್ಕು ಕಡಿವಾಣ ಹಾಕಬಹುದಾಗಿದೆ.

ಚರ್ಚೆಯಾಗಬೇಕಾದ ಶ್ರದ್ಧಾ ಕೇಂದ್ರಗಳು


ಶಾಂತಿ ಸಮಾಧಾನ ಕಳೆದುಕೊಂಡು ಗೊಂದಲದಲ್ಲಿ ಬದುಕು ದೂಡುತ್ತಿರುವ ಒಂದು ಕಾಲ ಘಟ್ಟದಲ್ಲಿ ವ್ಯವಸ್ಥೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದ ಅಸಹಾಯಕತೆಯನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಸುಂದರವಾದ ಜೀವನದ ವಾಸ್ತು ವಿಷಯವನ್ನು ಕಲಿಸಿಕೊಡುವ ಇಸ್ಲಾಮಿನಲ್ಲಿ ಅದರ ಎಲ್ಲಾ ಅರ್ಥಬದ್ದ ವ್ಯವಸ್ಥೆಯನ್ನು ಬಳಸಿಕೊಳ್ಳುವಲ್ಲಿ ನಾವೆಲ್ಲೋ ಎಡವಿದ್ದೇವೆ! ಧರ್ಮದ ವಿಚಾರದಲ್ಲಿ ಅಧ್ಯಯನದ ಕೊರತೆ ಮತ್ತು ಅಂಧತೆಯಿಂದಾಗಿ ಅಸಂಸ್ಕೃತಿಯ ದಾಸ್ಯತನ, ಅನ್ಯ ಧರ್ಮೀಯರೊಂದಿಗೆ ಪಲಾಯನ ದಂತಹ ವಿಚಾರಗಳು ಹೆಚ್ಚುತ್ತಿದೆ.ಸಮುದಾಯದ ಮಧ್ಯೆ ಸಮಾಜಿಕ ಸ್ತಿತ್ಯಂತರಗಳ ಸಮಸ್ಯೆ ಉದ್ಬವಿಸಿದಾಗ ಚರ್ಚೆಗಳು ನಡೆದು ವಿಬಿನ್ನವಾದ ಪರಿಹಾರ ಶೈಲಿಗಳನ್ನು ಭಿನ್ನ ವೇದಿಕೆಗಳ ಮೂಲಕ ನೀಡಲಾಗುತ್ತದೆ, ತಡೆಗಟ್ಟುವ ಬಗ್ಗೆ ಸಂಪೂರ್ಣತೆಯಿಲ್ಲದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ಆದರೆ ಎಲ್ಲೋ ಇಸ್ಲಾಮಿನ ಎಲ್ಲೆಯಲ್ಲಿ ಬಹಳ ಸುಲಭವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾದ ವ್ಯವಸ್ಥೆಯನ್ನು ತಳ್ಳಿ ಹಾಕಿ ಮುಂದೆ ಸಾಗುತ್ತಿದ್ದೇವೆ. ಮುಸ್ಲಿಮರಿಗೆ ಅರಾಧನೆಯ ಮತ್ತು ಮಾರ್ಗದರ್ಶನದ ಶ್ರದ್ಧಾ ಕೇಂದ್ರವಾಗಿ ಮಸೀದಿಗಳು ನಿರ್ಮಿಸಲ್ಪಟ್ಟಿವೆ ಆದರೆ ಅದು ಅರಾಧನೆಗೆ ಮಾತ್ರ ಸೀಮಿತವಾಗಿ ಸಮುದಾಯದ ಸಮಾಜಿಕ ಸಮಸ್ಯೆಗಳ ಗಂಭೀರತೆಯ ಚರ್ಚೆಗೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯಾಗಿ ಉಳಿದಿಲ್ಲ, ಬದಲಾಗಿ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದೆ.

ಶ್ರದ್ದಾ ಕೇಂದ್ರವಾದ ಮಸೀದಿಯ ಭೋಧನೆ ಸಮುದಾಯದ ಎಲ್ಲಾ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡಳು ಸಾಧ್ಯ, ಒಂದು ಹೊಸ ಒಗ್ಗಟ್ಟಿನ ತಲೆಮಾರನ್ನು ಕಟ್ಟಿ ಬೆಳೆಸಲು ಸಾಧ್ಯ. ಧರ್ಮವನ್ನು ಕೆಲವೊಮ್ಮೆ ಸಂಕೋಲೆಗಳ ಒಳಗೆ ಬಂಧಿಸಲ್ಪಟ್ಟ ಹಾಗೆ ಪ್ರಭಾವಿಗಳಿಂದಾಗಿ ಮಸೀದಿಗಳು ಕೂಡಾ ಸಂಕುಚಿತ ಸಂಕೋಲೆಗಳ ಒಳಗೆ ಬಂಧಿಸಲ್ಪಟ್ಟಿವೆ. ಧಾರ್ಮಿಕ ಗುರುಗಳು ಯಾರದೋ ಅಣತಿಗೆ ತಲೆಬಾಗುವ ಶನ್ನಿವೇಶ ಕೂಡಾ ಹಲವು ಕಡೆಗಳಲ್ಲಿ ಕಾಣಸಿಗುತ್ತದೆ. ಸಮಾಜಿಕ ತೊಡಕುಗಳ ಬಗ್ಗೆ ಮಸೀದಿಯೆಂಬ ಶ್ರದ್ಧಾ ಕೇಂದ್ರದಲ್ಲಿ ಚರ್ಚೆ ನಡೆಯಬೇಕು, ಶ್ರದ್ಧಾ ಕೇಂದ್ರ ಯುವ ಮನಸ್ಸುಗಳಲ್ಲಿ ಬದಲಾವಣೆಯ ಬೇರು ಬೀರಲು ಸಾಧ್ಯ, ಕೆಟ್ಟು ಹೋಗುತ್ತಿರುವ ಒಂದು ವ್ಯವಸ್ಥೆಯಲ್ಲಿ ಇಸ್ಲಾಮಿನ ಸಂಪೂರ್ಣ ಪರಿಕಲ್ಪನೆಯ ಕನ್ನಡಿಯಾಗಿ ಮಸೀದಿಗಳು ಕೆಲಸ ನಿರ್ವಹಿಸಬೇಕಾಗಿದೆ.

ಮಸೀದಿಗಳು ಧಾರ್ಮಿಕತೆಯೊಂದಿಗೆ ಸಾಮಾಜಿಕ ಭೋಧನೆಗಳನ್ನು, ಆಗು ಹೋಗುಗಳ ಬಗ್ಗೆ ಚರ್ಚಿಸುವ ಕೇಂದ್ರಗಳಾಗಬೇಕು. ಬಹಳ ಸ್ಪಸ್ಟವಾದ ಸಂದೇಶಗಳನ್ನು, ನಿರ್ದೇಶನಗಳನ್ನು ನೀಡುವ ಮೂಲಕ ಮಸೀದಿಗಳು ಕ್ರಮಬದ್ದವಾದ ಜಮಾತ್ ವ್ಯವಸ್ಥೆಗೆ ಸ್ಪಷ್ಯ ರೂಪ ನೀಡಬೇಕು. ಭಿನ್ನತೆಯ ಗೂಡಾಗಿರುವ ನಾಡಿನಲ್ಲಿ ಶ್ರದ್ಧಾ ಕೇಂದ್ರವಾದ ಮಸೀದಿಯನ್ನು ಸಾಮಾಜಿಕ ತೊಡಕುಗಳ ನಿವಾರಣೆಗಾಗಿ, ಚರ್ಚೆಗಾಗಿ ಬಳಸಿಕೊಳ್ಳುವ ತಿರ್ಮಾನಗಳು ಬರುವಂತಹದ್ದು ಅಷ್ಟು ಸುಲಭದ ಮಾತು ಕೂಡಾ ಅಲ್ಲ!! ಒಟ್ಟಾರೆಯಾಗಿ ಚರ್ಚೆಯಾಗಬೇಕಾದ ವಿಚಾರ.