ಮಾರ್ಚ್ 13 ರಂದು ತೊಕ್ಕೊಟ್ಟಿನ ಖಾಸಗಿ ಶಾಲೆಯೊಂದರ ವಿಧ್ಯಾರ್ಥಿನಿ ಮೇಲೆ ಅದೇ ಶಾಲೆಯ ಬಸ್ ಡ್ರೈವರ್ ಲೈಂಗಿಕ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಕ್ರೋಶಕ್ಕೆ ಕಾರಣವಾಗಿತ್ತು ವಿವಿಧ ಸಂಘ ಸಂಶ್ಥೆ ಗಳು, ವಿಧ್ಯಾರ್ಥಿ ಸಂಘಟನೆಗಳು ಡೀಸಿ ಕಚೇರಿ ಮತ್ತು ಶಾಲಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತ್ತು ಹಲವು ಸಂಘ ಸಂಸ್ಥೆಗಳು ನಿರಂತರವಾಗಿ ಆಡಳಿತ ವರ್ಗಕ್ಕೆ ಪ್ರಕರಣದ ಗಂಭೀರತೆಯನ್ನು ಅರ್ಥೈಸುವ ಪ್ರಯತ್ನ ನಡೆಸುತ್ತಿತ್ತು. ಶಾಲಾ ಆಡಳಿತ ಮಂಡಲಿ ಆರೋಪಿಯನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಿರುವುದು ವಿವಿಧ ಸಂಘ ಸಂಸ್ಥೆಗಳ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿತ್ತು. ವಿವಿಧ ಸಂಘಟನೆಗಳ ಒಗ್ಗಟ್ಟಿನ ಹೋರಾಟದ ಫಲವಾಗಿ ಪ್ರಕರಣ ನಡೆದು ತಿಂಗಳುಗಳು ಕಳೆದರು ಪ್ರಕರಣ ಜೀವಂತವಾಗಿತ್ತು. ಪೋಷಕರು ತಮ್ಮ ಮಕ್ಕಳ ಬಗ್ಗೆ ಅತೀವ ಕಾಳಜಿ ವಹಿಸಬೇಕಾದ ಬಗ್ಗೆ ಸಮಾಜದಲ್ಲಿ ಜಾಗೃತಿಯಾಯಿತು, ಜಿಲ್ಲೆಯ ಶಾಲಾ ಆಡಳಿತ ಮಂಡಳಿ ಶಿಶ್ತು ಕ್ರಮಗಳನ್ನು ಪಾಲಿಸುವ ಅಗತ್ಯವು ಬಂದೊದಗಿತು. ಸಂಘ ಸಂಸ್ಥೆಗಳು ಸಿ ಐ ಡಿ ತನಿಖೆಯಾಗಬೇಕೆಂದು ಒತ್ತಾಯಿಸದಿದ್ದರು ರಾಜ್ಯ ಸರಕಾರ ಇದನ್ನೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ಇದೀಗ ಸಿ ಐ ಡಿ ತನಿಖೆಗೆ ಒಪ್ಪಿಸಿದೆ. ಇದು ಎಲ್ಲಾ ನಾಗರಿಕರ, ಸಂಘ ಸಂಸ್ಥೆಗಳ ಒಗ್ಗಟ್ಟಿನ ಹೋರಾಟಕ್ಕೆ ಸಧ್ಯ ಸಂದ ಜಯ ಎನ್ನಬಹುದು. ಈ ಪ್ರಕರಣದಲ್ಲಿ ನ್ಯಾಯ ಒದಗಿಸಲು ಇನ್ನಷ್ಟು ಸುದೀರ್ಘ ಪಯಣಿಸಳಿರುವ ಕಾರಣ ಒಗ್ಗಟ್ಟು ಜೀವಂತಿತವಾಗಿರಲಿ.
No comments:
Post a Comment