ತಲವಾರಿನಿಂದ ಕೈ ಕಡಿದಾಗ
ಚಿಮ್ಮಿ ಹರಿದಿದ್ದು ರಕ್ತ,
ಕೈ ಜೋಡಿಸಲು ಬಾಟಲಿಯಿಂದ
ಸಿರಿಂಜಿನಲ್ಲಿ ಹರಿದದ್ದೂ ರಕ್ತ.
ಕೈ ಕಡಿದಾತನ
ಮಯ್ಯಲ್ಲಿ ಬರೀ ರಕ್ತದ ಕಣ,
ರಕ್ತ ನೀಡಿದಾತನ
ರಕ್ತದಲ್ಲಿ ಮಾನವೀಯತೆಯ ಗುಣ.
ಕೈ ಕಡಿಯುವವರು,
ರಕ್ತ ಹರಿಸುವವರು,
ರಕ್ತ ನೀಡುವ
ಮಾನವರಾಗಬೇಕಾಗಿದೆ.
No comments:
Post a Comment