Thursday, September 1, 2016

ಜಗಳ!

ಸ್ವಾತಂತ್ರ್ಯ ಕಿತ್ತುಕೊಳ್ಳುವೆ
ಎಂದು ಹೇಳಿ
ಹೊರಟು ಬಂದೆ
ಮಧ್ಯರಾತ್ರಿಯವರೆಗೂ
ಅವರೊಳಗೆ
ಜಗಳ ನಡೆಯುತ್ತಿತ್ತು

ಗಲ್ಫ್ ನ ಒಂದು ವರ್ಷದ ಅವಲೋಕನ ಮತ್ತು ತಂದೆ ಬೆವರಿಳಿಸಿದ ಮರುಭೂಮಿಯ ನೈಜ ಚಿತ್ರಣದ ಮೆಲುಕಿನೊಂದಿಗೆ.

ಗಲ್ಫ್! ಗಲ್ಫ್! ಗಲ್ಫ್!!! ಹೆಚ್ಚಿನವರು ಜೀವನದ ಪರ್ಯಾಯ ಭಾಗವಾಗಿ ಅಯ್ದುಕೊಂಡ ಸರಳ ಮಾರ್ಗ.

ಸಾಕಷ್ಟು ಸಮಯ ಗಲ್ಫ್ ಯಾತ್ರೆಯನ್ನು ತಿರಸ್ಕರಿಸಿ ಕೊನೆಗೊಮ್ಮೆ ಹೆಚ್ಚಿನವರು ಆಯ್ದುಕೊಂಡ ಅದೇ ಹಳೆಯ ದಾರಿಯಲ್ಲಿ ಸಾಗಿದೆ, ಆ ದಾರಿಯ ಪಯಣದಲ್ಲಿ  ಒಂದು ವರುಷ ದಾಟಿತು, ದಾರಿಯುದ್ದಕ್ಕು ನೋವಿದೆ ಎನ್ನುವುದಕ್ಕಿಂತ ಹೆಚ್ಚು ಹೆಚ್ಚಿನದೆಲ್ಲಾ ಕಳೆದುಕೊಂಡಿದ್ದೇನೆ ಎಂದು ಆಲೋಚಿಸಿದ್ದೆ ಹೆಚ್ಚು.

ಘಮಘಮಿಸುವ ಸೆಂಟ್, ಕಣ್ಣಿಗೊಂದು ಕನ್ನಡಕ, ಹೊಸ ಪದ್ದತಿಯ ಗಲ್ಫಿಗರನ್ನು ಕಂಡು ಬೆಳೆದಿದ್ದು ಮಾತ್ರ ಅಲ್ಲ ಹತ್ತನೇ ತರಗತಿಯಿಂದಲೇ ನಾನು ಕೂಡಾ ಗಲ್ಫಿಗೆ ಸಲ್ಲಬೇಕಾದವನು ಎನ್ನುವ ಕಲ್ಪನೆಯೊಂದಿಗೆ ಬೆಳೆದಿರುವುದು ಅದೇ ಕಾರಣ ಕಲಿಕೆಯುದ್ದಕ್ಕೂ ಪಡೆದುಕೊಂಡ ಮಾರ್ಕ್ಸ್ ಗಳು ಕೂಡಾ ಗಲ್ಫ್ ಗೆ ಸಲ್ಲುವುದಕ್ಕೆ ಮಾತ್ರ ಸಾಕೆನಿಸುವಂತಹದ್ದು, ಎಷ್ಟೇ ಸಮಜಾಯಿಸಿ ನೀಡಿದರೂ ಯುವತಲೆಮಾರುಗಳ ಗಲ್ಫ್ ಕನಸು ಜೀವನದ ಕೊನೆ ಘಳಿಗೆಗೆ ನೋವು ನೀಡುವಂತಹದ್ದು.

ಬಲಿಷ್ಟ ಉದಾಹರಣೆಯಾಗಿ ನನ್ನ ತಂದೆಯನ್ನೇ ಉದಾಹರಣೆಯಾಗಿ ನೀಡ ಬಯಸಿದೆ ಅವರಿಗೆ ಏನು ಇಷ್ಟ, ಯಾವುದು ಕಷ್ಟ, ಅವರೇನು ಹೆಚ್ಚಾಗಿ ಇಷ್ಟಪಡುತ್ತಾರೆ ಖಂಡಿತಾ ನಾನು ವಾಸ್ತವವಾಗಿ ಅತಿ ಹೆಚ್ಚು ತಿಳಿದವನಲ್ಲ ಕಾರಣ ಅದು ನನ್ನ ತಪ್ಪಲ್ಲ, ಅವರ ತಪ್ಪು ಕೂಡಾ ಅಲ್ಲ, ಅವರಂತು ಮರುಭೂಮಿಯ ಬಿಸಿಲಲ್ಲಿ ಬೆವರು ಸಹಿಸಿ ನಮ್ಮನ್ನು ಬೆಳೆಸಿದವರು ಹೆಚ್ಚೆಂದರೆ ವರುಷಕ್ಕೊಮ್ಮೆ ಅಪರೂಪಕ್ಕೆ ಅವರನ್ನು ಕಂಡು ಬೆಳೆದವನು ನಾನು ಸ್ವಲ್ಪ ಕಾಲವಷ್ಟೇ ಅವರ ಹತ್ತಿರದಲ್ಲಿದ್ದೆ ಮತ್ತೆ ನಾನು ದೂರವಾಗಿ ಅವರಿರುವ ನಾಡಿನಲ್ಲಿದ್ದೇನೆ ಮತ್ತು ಅವರಿಗಾಗಿ.

ಒಂದಂತು ಸತ್ಯ ಅವನಷ್ಟು ದುಡ್ಡು ಮಾಡಿದ ನೀನೇನು ಮಾಡಿದೆ ಎಂದು ಕೇಳುವ ಪ್ರತಿಯೊಬ್ಬ ಕೂಡಾ ಒಂದಲ್ಲ ಒಂದನ್ನು ಕಳೆದುಕೊಂಡಿದ್ದಾರೆ ಮತ್ತು ಮನುಷ್ಯ ಸ್ವಾಭಾವಿಕ ಭಾವುಕತೆಯನ್ನು ಅರ್ಥ ಮಾಡುವಲ್ಲಿ ಪ್ರತಿಯೊಬ್ಬರು ವಿಫಲರಾಗಿದ್ದಾರೆ, ಆಸ್ತಿ ಕೂಡಿಟ್ಟ ತಂದೆಯ ಹಿಂದೆ ಓಡಾಡುತ್ತಿರುವ ಮಕ್ಕಳು ಪಾಲು ಕೇಳುವ ಸಲುವಾಗಿ ಎಂದಾದರೆ ಅದು ಆ ತಂದೆಯ ದೌರ್ಭಾಗ್ಯ. ದುಡ್ಡು ಜೀವನದ ಮುಖ್ಯ ಅವಿಭಾಗ್ಯ ಅಂಗ ಅದಕ್ಕಾಗಿ ಎಲ್ಲರನ್ನು ಕಳೆದುಕೊಳ್ಳಬೇಕೆಂದಿಲ್ಲ. ನನ್ನ ಮಾತು ಎಲ್ಲಾ ಸಮಯದಲ್ಲಿ ವಾಸ್ತವವೆನಿಸಬೇಕೆಂದಿಲ್ಲ ಆದರೆ ಆ ನಿಟ್ಟಿನ ಪ್ರಯತ್ನ ಆಲೋಚನೆಗಳು ಅಗತ್ಯ.

ಸೌದಿ ಅರೇಬಿಯಾದ ಬದುಕಿನಲ್ಲಿ ನಾನಂತು ಹೆಚ್ಚು ಪ್ರೀತಿ, ವಾತ್ಸಲ್ಯ ಕುಟುಂಬಿಕರು ಮತ್ತು ಗೆಳೆಯರೊಂದಿಗೆ ಪಡೆದುಕೊಂಡಿದ್ದೇನೆ ನನ್ನವರನ್ನು ಅಗಲಿದ್ದೇನೆ ಎನ್ನುವ ದುಖ್ಹ ಬಿಟ್ಟರೆ ಬೇರೆ ನೋವಿದೆ ಎಂದರೆ ಅದು ತಪ್ಪಾಗುತ್ತದೆ, ಇಲ್ಲಿನ ಅನಿವಾಸಿಗಳು ಬಹಳ ಭಾವುಕ ಜೀವಿಗಳು ಪರಸ್ಪರ ಸ್ನೇಹ ಜೀವಿಗಳು, ನಗು ನಗುತ್ತಲೇ ಸ್ವಾಗತಿಸುವವರು.

ಊರಿನಲ್ಲಿ ಸಾಧಾರಣ ಸಂಬಳ ಪಡೆಯುತ್ತಿದ್ದೇನೆ ಎನ್ನುವ ಕಾರಣ ಮಾತ್ರ ನಾನಿಂದು ಅನಿವಾಸಿಯಾಗಳು ಕಾರಣವಾಯಿತು, ಊರಿನಲ್ಲಿ ನೂರಾರು ಹೊಸ ಬಳಗದ ಗೆಳೆಯರಿದ್ದರು ಇಂದು ಆ ಸ್ನೇಹ ಮುಂದುವರೆದಿದೆ ಹಾಗೆಯೇ ಪ್ರೋತ್ಸಾಹವಿರಲಿ.

ಗಲ್ಫ್ ಜೀವನ ಎಲ್ಲರಿಗು ಹಿಡಿಸಬೇಕೆಂದಿಲ್ಲ ಮತ್ತು ಹಿಡಿಸಿದವರೆಲ್ಲ ಇಲ್ಲೇ ನೆಲೆಸಿರಬೇಕು, ಹಿಡಿಸದವರು ಹೊರಟುಬಿಡಬೇಕು ಎನ್ನುವ ಪದ್ದತಿ ಕೂಡಾ ಜಾರಿಯಲ್ಲಿಲ್ಲ!. ಎಲ್ಲವು  ಕಾಲ ನಿರ್ಧರಿತ, ಪರಿಸ್ಥಿತಿ ಅವಲೋಕಿತ, ಮನುಷ್ಯನ ಮಾನಸಿಕ ಹಿತಚಿಂತನೆಗಿಂತ ಹಲವು ಗಂಟೆಗಳ ದುಡಿತವೇ ಹೆಚ್ಚು ತೂಕ, ಕೂಡಿಡುವ ಸಂಪತ್ತಿಗೆ ಪ್ರಶಂಶೆ. ಪ್ರೀತಿ, ವಾತ್ಸಲ್ಯ ನೀಡಬಯಸುವವರಿಂದ ಮಾತ್ರ ಪಡೆಯಬಹುದಷ್ಟೆ. ಇಲ್ಲಿನ ಅನಿವಾಸಿಗಳು ಕಷ್ಟಪಟ್ಟು ದುಡಿಯುವವರು ಮಾತ್ರವಲ್ಲ ತಿಂಗಳಾಗುವಾಗ ದುಡಿದ ಸಂಬಳ ಪಡೆಯಲು ಅದಕ್ಕಿಂತ ಹೆಚ್ಚು ಶ್ರಮ ಮತ್ತು ಬೆವರು ಇಳಿಸಬೇಕು ಎನ್ನುವುದು ಕೂಡಾ ಅಷ್ಟೇ ಸತ್ಯ.

ಸೌದಿ ಅರೇಬಿಯಾದ ತುರೈಫ್ ನಲ್ಲಿ ಹೊಸಬಳಗದ ಜೊತೆ ಕೆಲಸ ಮಾಡಿ ಹೊಸ ಅನುಭವಾಗಿದೆ, ಮೈ ಕೊರೆಯುವ ಚಳಿಯಲ್ಲು ಕೆಲಸ ಮಾಡಿದಾಗ ಕುಟುಂಬಿಕರ, ಗೆಳೆಯರ ಸಂಪರ್ಕ ಹುಮ್ಮಸ್ಸು ನೀಡಿತ್ತು. ಮಕ್ಕಾ, ಮದೀನ ಯಾತ್ರೆ ಜೀವನಕ್ಕೆ ಹೊಸ ಚೈತನ್ಯ ನೀಡಿದ್ದು ಸತ್ಯ, ಜೀವನದ ಅತ್ಯಂತ ದುಖ್ಹ ತಪ್ತ ದಿನಗಳ ನೆನಪು ಕೂಡಾ ಮಾಸಿಹೋಗಿದೆ, ಸಧ್ಯ ಕಡಲ ತೀರ ಜುಬೈಲ್ ನಲ್ಲಿ ಕೆಲಸ ನಾಳೆ ಎಲ್ಲಿ ಅರಿವಿಲ್ಲ.

ಗಲ್ಫ್ ನ ವಾಸ್ತವಿಕತೆ ಬದಲಾಗುತ್ತಿದೆ, ಹೊಸ ಪೋಲಿಸಿಗಳು ಅನಿವಾಸಿಗಳನ್ನು ಅತಂತ್ರವಾಗಿಸಿದೆ, ಯುವ ತಲೆಮಾರು ಹೊಸ ಜೀವನ ಪದ್ದತಿ ರೂಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ, ಬದಲಾವಣೆಯನ್ನು ಒಪ್ಪಿಕೊಂಡು ಮುನ್ನಡೆಯಬೇಕಾಗಿದೆ, ಅನಿವಾಸಿಯಾಗುವ ಕನಸು ಮನಸ್ಸಿನಿಂದ ದೂರವಿರಿಸಬೇಕಾಗಿದೆ, ಕಾಲಕ್ಕೆ ತಕ್ಕಂತೆ ಚಲಿಸುವ ಅಭ್ಯಾಸವಿಟ್ಟುಕೊಳ್ಳುವುದು ಒಳ್ಳೆಯ ಕ್ರಮ, "ಬದಲಾವಣೆ ಆಡು ಮೇಯಿಸಲು ಬಯಸುವಷ್ಟು ವೀಪರೀತವಾಗಬಾರದು ಹಾಗು ದುಡಿದವನ ಸಂಬಲ ನೀಡುವಲ್ಲಿ ಸತಾಯಿಸಿ ಮಹಲ್ಲು ಕಟ್ಟುವಷ್ಟು ನೀಚವಾಗಿರಬಾರದು".

ಬಹಳ ಮುಕ್ತವಾಗಿ ಹಂಚಿಕೊಂಡಿದ್ದೇನೆ ಓದುಗರೆಲ್ಲ ಒಪ್ಪಿಕೊಳ್ಳಬೇಕೆಂದಿಲ್ಲ, ತಂದೆ, ತಾಯಿ, ಹೆಂಡತಿ, ಮಕ್ಕಳು, ಕುಟುಂಬಿಕರು, ಸ್ನೇಹಿತರನ್ನು ದೂರವಿರಿಸಿ ಬದುಕು ಸವೆಸುವ ಪ್ರತಿಯೊಬ್ಬನ ದ್ವನಿ ಎಂದು ತಿಳಿದ್ದೇನೆ ನನ್ನ ಅನುಭವ. ಬದುಕಿನಲ್ಲಿ ಬದಲಾವಣೆಗಳು ನಡೆಯಲಿ ಎಂಬ ಆಶಯದೊಂದಿಗೆ...

Monday, February 15, 2016

I am listen to enough rubbish from You....!!  now you listen to me....!! Anti National Eliments...!! Fiction Writters...!! I heard your rubbish....!! I am cutting you off.....!! these Students destroy India.......!! ಡಿಬೇಟ್ ನ ಹೆಸರಲ್ಲಿ ಕರೆಯಿಸಿ ತನ್ನ ಪರವಾಗಿರುವವರು ಮಾತನಾಡಬಹುದು ಇತರರು ತಾನು ಹೇಳಿದ್ದನ್ನು ಮಾತ್ರ ಕೇಳಬೇಕು ಎಂಬಂತೆ "ARNAAB GOSWAMI" ವರ್ತಿಸುತ್ತಿರುವುದು ಇದೇ ಮೊದಲೇನಲ್ಲ, ತನ್ನ ವಾಕ್ ಸ್ವಾತಂತ್ರ್ಯದಂತೆ ಮಾತನಾಡಲು ಬಾಯಿ ತೆಗೆಯುವಾಗಲೇ ವಿದ್ಯಾರ್ಥಿ ನಾಯಕರೆನಿಸಿಕೊಂಡವರನ್ನು "Anti Nationalist" ಎಂದು ಹೆಚ್ಚೆಚ್ಚು ಬಾರಿ ಹೇಳಬಹುದಾದರೆ ಇದಕ್ಕಿಂತ ಅಪಹಾಸ್ಯ ಬೇರೇನಿರಬಹುದು.

JNU Campus ನಲ್ಲಿ ಅಫ್ಜಲ್ ಗುರು ಮರಣ ದಂಡಣೆಯ ಬಗ್ಗೆ ವಿಚಾರ ಸಂಕೀರ್ಣ ಏರ್ಪಡಿಸಿದಾಗ ಅದರ ಮೂಲ ಸಿದ್ದಾಂತದ ಬಗ್ಗೆ ಅರಿಯದೆ ಆ ವಿಧ್ಯಾರ್ಥಿಗಳು "Anti Nationalist" ಆಗುವುದುದಾದರೆ ಗಾಂಧೀಜಿಯ ಚಿತ್ರವಿರುವ ನೋಟು ಬಳಸಿ ಜೀವಿಸುತ್ತಿರುವವರು ಮಧ್ಯ ರಾತ್ರಿ ಸ್ವಾತಂತ್ರ್ಯ ಆಚರಿಸುವಾಗ ಆ ಕೂಟ ದೇಶ ಭಕ್ತರು ಎನ್ನುವ ವಾದದಂತಲ್ಲವೇ ಅರ್ನಾಬ್ ರದ್ದು.

ನಾನು ನಿನ್ನ ಮಾತನ್ನು ಬಹಳಷ್ಟು ಕೇಳಿದೆ ಈಗ ನೀನು ನನ್ನ ಮಾತು ಕೇಳು ಎಂದು ಹೇಳಬೇಕಾದರೆ ಡಿಬೆಟಿಗನೊಬ್ಬನ ಮಾತು ಕೇಳಿರಬೇಕಾಗುತ್ತದೆ ಏನನ್ನು ಕೇಳದೆ ನಿನ್ನ ಮಾತು ಸಾಕು Anti Nationalist ಎಂದು ಹೇಳಿದರೆ ಯಾರು ಸಂವಿಧಾನ ಸಿದ್ದಾಂತದ Anti ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಮಾಧ್ಯಮಗಳ ವಕ್ತಾರರು ಯಾರದೋ ಚಮಚಾಗಳ ಹಾಗೆ ವರ್ತಿಸುವುದು ನಿಜಕ್ಕೂ ಖೇಧಕರ ಅದರಲ್ಲೂ "Times Now" ನಂತಹ ಮಾಧ್ಯಗಳ ಈ ನಡೆ ಅಸಹ್ಯವಾದದ್ದು.

ಹೋರಾಟಕ್ಕೆ ಬೆಂಬಲಕ್ಕಿಂತ ಹೆಚ್ಚು ಸ್ಥೆರ್ಯ ಕುಗ್ಗಿಸುವ ಕೆಲಸವಾದಾಗ ವಿಧ್ಯಾರ್ಥಿ ಸಮೂಹಕ್ಕೆ ಹೋರಾಟದ ಕಿಚ್ಚು ಹತ್ತಿಸಿದ ರೋಹಿತ್ ವೆಮುಲನಂತವರು "Institutional Murder" ಗೆ ಒಳಗಾಗುತ್ತಾರೆ. ಎಬಿವಿಪಿ ಯಂತಹ ಕೂಟ ಪಾಕಿಸ್ತಾನ್ ಜಿಂದಾಬಾದ್ ಹಾಕಿ ಅದನ್ನು ಯಾರದೋ ತಲೆಗೆ ಕಟ್ಟಿದಾಗ ಮಾಹಿತಿ ಕಲೆಹಾಕಿ ಸಿಕ್ಕಿರುವ ಪೇಪರ್ ಇಟ್ಟುಕೊಳ್ಳುವ ಅರ್ನಾಬ್ ರಿಗೆ ಯಾವುದು ಸತ್ಯ ಯಾವುದು ಸುಳ್ಳು ಎಂದು ವಾದಿಸಲು ಮನಸ್ಸಿರಲಿಲ್ಲ. ಯಾವೊಂದೂ ಸಾಕ್ಷಿ ಅಧಾರಗಳಿಲ್ಲದೆ ವಿಧ್ಯಾರ್ಥಿ ಕೂಟದ ನಾಯಕರನ್ನು Anti Nationalist ಎಂದು ಬಿಂಬಿಸುವುದು ಒಂದು ಪೂರ್ವ ನಿರ್ಧರಿತ ಅಜೆಂಡಾದ ಭಾಗ ಅಷ್ಟೇ..

Arnab ದೇಶದ ಜನತೆಗೆ ಬಹಳ ಕೆಟ್ಟ ಸಂದೇಶ ನೀಡಿದ್ದಾರೆ, JNU ನಲ್ಲಿ ಹೋರಾಟಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆಯೂ ಗಂಭೀರ ವಿಚಾರಗಳ ಬಗ್ಗೆ ಹೋರಾಟಗಳು ನಡೆದಿದೆ ಅರ್ನಾಬ್ ನಂತವರು ಈ ವಿಧ್ಯಾರ್ಥಿಗಳನ್ನು Anti Nationalist ಎಂದು ಬಿಂಬಿಸುತ್ತಲೇ ಇದ್ದಾರೆ. ಡಿಬೆಟ್ ನಲ್ಲಿ Voice Mute ಮಾಡಿ ಡಿಬೆಟ್ ನ ಅರ್ಥವೇ ಕಳೆದುಹಾಕಿದ್ದಾರೆ, News Hour ನ ಪ್ರಾಮುಖ್ಯತೆಯನ್ನು ಕಳಕೊಂಡಿದ್ದಾರೆ.

Arnab ಡಿಬೇಟ್ ಮಾಡುವುದು ಅವರೊಬ್ಬರೇ ಮಾತನಾಡುವುದನ್ನು ನಾವು ಕೇಳುತ್ತಿರೋಣ, "Rohit Vemula" ಬೊಬ್ಬೆ ಹಾಕಿ ನಮ್ಮಿಂದ ದೂರವಾಗುತ್ತಿರಲಿ, Dontha Prashanth ನಂತವರು ವಿಧ್ಯಾರ್ಥಿ ಸಮೂಹವನ್ನು ಒಟ್ಟುಗೂಡಿಸಲು ಹರಸಾಹಸ ಪಡಲಿ, Umar Khalid, Lenin Kumar, Ishaan ದೇಶದ ಜನತೆಯ ಮುಂದೆ ಬೈಗುಳ ತಿಂದು Anti Nationalist ಆಗಲಿ, ಕ್ರೂರ ಭಾಷಣದ ಹೆಸರಲ್ಲಿ Kanhaiya ಬಂಧನವಾಗುತ್ತಿರಲಿ, JNU, Hyderabad University ಸಂಘರ್ಷ ದ ಹೋರಾಟಕ್ಕೆ ಹೆಸರಾಗುತ್ತಿರಲಿ, ನನಗೂ ನಿಮಗೂ ಕೇಕೆ ಹಾಕಲು ದಿನಕ್ಕೊಂದು ಸುದ್ದಿ ಬಿತ್ತರವಾಗುತ್ತಿರಲಿ.......

I am listen to enough rubbish from You....!!  now you listen to me....!! Anti National Eliments...!! Fiction Writters...!! I heard your rubbish....!! I am cutting you off.....!! these Students destroy India.......!! ಡಿಬೇಟ್ ನ ಹೆಸರಲ್ಲಿ ಕರೆಯಿಸಿ ತನ್ನ ಪರವಾಗಿರುವವರು ಮಾತನಾಡಬಹುದು ಇತರರು ತಾನು ಹೇಳಿದ್ದನ್ನು ಮಾತ್ರ ಕೇಳಬೇಕು ಎಂಬಂತೆ "ARNAAB GOSWAMI" ವರ್ತಿಸುತ್ತಿರುವುದು ಇದೇ ಮೊದಲೇನಲ್ಲ, ತನ್ನ ವಾಕ್ ಸ್ವಾತಂತ್ರ್ಯದಂತೆ ಮಾತನಾಡಲು ಬಾಯಿ ತೆಗೆಯುವಾಗಲೇ ವಿದ್ಯಾರ್ಥಿ ನಾಯಕರೆನಿಸಿಕೊಂಡವರನ್ನು "Anti Nationalist" ಎಂದು ಹೆಚ್ಚೆಚ್ಚು ಬಾರಿ ಹೇಳಬಹುದಾದರೆ ಇದಕ್ಕಿಂತ ಅಪಹಾಸ್ಯ ಬೇರೇನಿರಬಹುದು.

JNU Campus ನಲ್ಲಿ ಅಫ್ಜಲ್ ಗುರು ಮರಣ ದಂಡಣೆಯ ಬಗ್ಗೆ ವಿಚಾರ ಸಂಕೀರ್ಣ ಏರ್ಪಡಿಸಿದಾಗ ಅದರ ಮೂಲ ಸಿದ್ದಾಂತದ ಬಗ್ಗೆ ಅರಿಯದೆ ಆ ವಿಧ್ಯಾರ್ಥಿಗಳು "Anti Nationalist" ಆಗುವುದುದಾದರೆ ಗಾಂಧೀಜಿಯ ಚಿತ್ರವಿರುವ ನೋಟು ಬಳಸಿ ಜೀವಿಸುತ್ತಿರುವವರು ಮಧ್ಯ ರಾತ್ರಿ ಸ್ವಾತಂತ್ರ್ಯ ಆಚರಿಸುವಾಗ ಆ ಕೂಟ ದೇಶ ಭಕ್ತರು ಎನ್ನುವ ವಾದದಂತಲ್ಲವೇ ಅರ್ನಾಬ್ ರದ್ದು.

ನಾನು ನಿನ್ನ ಮಾತನ್ನು ಬಹಳಷ್ಟು ಕೇಳಿದೆ ಈಗ ನೀನು ನನ್ನ ಮಾತು ಕೇಳು ಎಂದು ಹೇಳಬೇಕಾದರೆ ಡಿಬೆಟಿಗನೊಬ್ಬನ ಮಾತು ಕೇಳಿರಬೇಕಾಗುತ್ತದೆ ಏನನ್ನು ಕೇಳದೆ ನಿನ್ನ ಮಾತು ಸಾಕು Anti Nationalist ಎಂದು ಹೇಳಿದರೆ ಯಾರು ಸಂವಿಧಾನ ಸಿದ್ದಾಂತದ Anti ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಮಾಧ್ಯಮಗಳ ವಕ್ತಾರರು ಯಾರದೋ ಚಮಚಾಗಳ ಹಾಗೆ ವರ್ತಿಸುವುದು ನಿಜಕ್ಕೂ ಖೇಧಕರ ಅದರಲ್ಲೂ "Times Now" ನಂತಹ ಮಾಧ್ಯಗಳ ಈ ನಡೆ ಅಸಹ್ಯವಾದದ್ದು.

ಹೋರಾಟಕ್ಕೆ ಬೆಂಬಲಕ್ಕಿಂತ ಹೆಚ್ಚು ಸ್ಥೆರ್ಯ ಕುಗ್ಗಿಸುವ ಕೆಲಸವಾದಾಗ ವಿಧ್ಯಾರ್ಥಿ ಸಮೂಹಕ್ಕೆ ಹೋರಾಟದ ಕಿಚ್ಚು ಹತ್ತಿಸಿದ ರೋಹಿತ್ ವೆಮುಲನಂತವರು "Institutional Murder" ಗೆ ಒಳಗಾಗುತ್ತಾರೆ. ಎಬಿವಿಪಿ ಯಂತಹ ಕೂಟ ಪಾಕಿಸ್ತಾನ್ ಜಿಂದಾಬಾದ್ ಹಾಕಿ ಅದನ್ನು ಯಾರದೋ ತಲೆಗೆ ಕಟ್ಟಿದಾಗ ಮಾಹಿತಿ ಕಲೆಹಾಕಿ ಸಿಕ್ಕಿರುವ ಪೇಪರ್ ಇಟ್ಟುಕೊಳ್ಳುವ ಅರ್ನಾಬ್ ರಿಗೆ ಯಾವುದು ಸತ್ಯ ಯಾವುದು ಸುಳ್ಳು ಎಂದು ವಾದಿಸಲು ಮನಸ್ಸಿರಲಿಲ್ಲ. ಯಾವೊಂದೂ ಸಾಕ್ಷಿ ಅಧಾರಗಳಿಲ್ಲದೆ ವಿಧ್ಯಾರ್ಥಿ ಕೂಟದ ನಾಯಕರನ್ನು Anti Nationalist ಎಂದು ಬಿಂಬಿಸುವುದು ಒಂದು ಪೂರ್ವ ನಿರ್ಧರಿತ ಅಜೆಂಡಾದ ಭಾಗ ಅಷ್ಟೇ..

Arnab ದೇಶದ ಜನತೆಗೆ ಬಹಳ ಕೆಟ್ಟ ಸಂದೇಶ ನೀಡಿದ್ದಾರೆ, JNU ನಲ್ಲಿ ಹೋರಾಟಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆಯೂ ಗಂಭೀರ ವಿಚಾರಗಳ ಬಗ್ಗೆ ಹೋರಾಟಗಳು ನಡೆದಿದೆ ಅರ್ನಾಬ್ ನಂತವರು ಈ ವಿಧ್ಯಾರ್ಥಿಗಳನ್ನು Anti Nationalist ಎಂದು ಬಿಂಬಿಸುತ್ತಲೇ ಇದ್ದಾರೆ. ಡಿಬೆಟ್ ನಲ್ಲಿ Voice Mute ಮಾಡಿ ಡಿಬೆಟ್ ನ ಅರ್ಥವೇ ಕಳೆದುಹಾಕಿದ್ದಾರೆ, News Hour ನ ಪ್ರಾಮುಖ್ಯತೆಯನ್ನು ಕಳಕೊಂಡಿದ್ದಾರೆ.

Arnab ಡಿಬೇಟ್ ಮಾಡುವುದು ಅವರೊಬ್ಬರೇ ಮಾತನಾಡುವುದನ್ನು ನಾವು ಕೇಳುತ್ತಿರೋಣ, "Rohit Vemula" ಬೊಬ್ಬೆ ಹಾಕಿ ನಮ್ಮಿಂದ ದೂರವಾಗುತ್ತಿರಲಿ, Dontha Prashanth ನಂತವರು ವಿಧ್ಯಾರ್ಥಿ ಸಮೂಹವನ್ನು ಒಟ್ಟುಗೂಡಿಸಲು ಹರಸಾಹಸ ಪಡಲಿ, Umar Khalid, Lenin Kumar, Ishaan ದೇಶದ ಜನತೆಯ ಮುಂದೆ ಬೈಗುಳ ತಿಂದು Anti Nationalist ಆಗಲಿ, ಕ್ರೂರ ಭಾಷಣದ ಹೆಸರಲ್ಲಿ Kanhaiya ಬಂಧನವಾಗುತ್ತಿರಲಿ, JNU, Hyderabad University ಸಂಘರ್ಷ ದ ಹೋರಾಟಕ್ಕೆ ಹೆಸರಾಗುತ್ತಿರಲಿ, ನನಗೂ ನಿಮಗೂ ಕೇಕೆ ಹಾಕಲು ದಿನಕ್ಕೊಂದು ಸುದ್ದಿ ಬಿತ್ತರವಾಗುತ್ತಿರಲಿ.......

Thursday, July 30, 2015

ಬದಲಾಗಬಯಸುವ ದೋಷಿಗಳಿಗೆ ಹಿಂಜರಿಕೆಯಾಗುವ ಗಲ್ಲು!


ಯಾಕೂಬ್ ಮೆಮೊನ್ ಗೆ ಗಲ್ಲು ಶಿಕ್ಷೆ ಎಂಬ  ತೀರ್ಪನ್ನು ಎತ್ತಿ ಹಿಡಿಯುವವರಲ್ಲಿ ಹೆಚ್ಚಿನವರು ಗಲ್ಲು ಶಿಕ್ಷೆ ಎಂಬ ಪದ್ದತಿಯೇ ಬೇಡ ಎಂದು ವಾದಿಸುವವರು ಇದೊಂದು ವಿಚಾರ ಮಾತ್ರ ಸಾಕು ಜಾತಿ ಅಧಾರದ ಹಿನ್ನಲೆಯಲ್ಲಿ ತೀರ್ಪನ್ನು ಬೆಂಬಲಿಸಲಾಗುತ್ತಿದೆ ಮತ್ತು ಹಿತಾಶಕ್ತಿಗಳೆಲ್ಲ ಕೈ ಚಾಚಿದೆ ಎಂದು ತಿಳಿದುಕೊಳ್ಳಲು. ರಾಜೀವ್ ಹಂತಕರು ನೇಣು ಕುಣಿಕೆಯಿಂದ ಪಾರಾಗುವಾಗ ತುಟಿ ಬಿಚ್ಚಲು ತಾಕತ್ತಿಲ್ಲದವರು ಶರಣಾಗತಿಯಾದವನ ನೇಣು ಕುಣಿಕೆ ಯನ್ನು ಬಿಗಿಗೊಳಿಸುವಲ್ಲಿ ಹಾತೊರೆದಿದ್ದಾರೆ. ಸುಪ್ರೀಂ ಕೋರ್ಟ್ ಶರಣಾಗತಿ ವಾದವನ್ನು ತಾಳ್ಳಿಹಾಕಿರಬಹುದು ಮತ್ತು ಅದಕ್ಕೆ ಸಾಕ್ಷಗಳಿಲ್ಲ ಎನ್ನುವುದು ಮಾತ್ರ ಕಾರಣ ಎನ್ನುವುದು ವಾಸ್ತವ.

21 ವರ್ಷಗಳ ಸೆರೆವಾಸದ ನಂತರ ತನ್ನಲ್ಲಾದ ಬದಲಾವಣೆಯನ್ನು ತೋರಿಸಿಕೊಂಡರೂ ನ್ಯಾಯ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳು ಎದ್ದು ಕಾಣುತ್ತಿದೆ, ಕ್ರಿಮಿನಲ್ ಒಬ್ಬ ಜೈಲುವಾಸದಿಂದ ಬದಲಾಗಲು ಯತ್ನಿಸಿದಾಗ ಅವನಿಗೆ ಕ್ಷಮಾದಾನ ಇಲ್ಲವೆಂದಾದಲ್ಲಿ ಮನ ಪರಿವರ್ತನೆಯ ಕೇಂದ್ರಗಳಾಗಿ ಜೈಲುಗಳನ್ನು ಬಿಂಬಿಸಲು ಪ್ರಯತ್ನಿಸುತ್ತಿರುವ ಪರಿಶ್ರಮ ಅರ್ಥಹೀನ. 257 ಮಂದಿಯ ಮಾರಣಹೋಮದ ಹೊಣೆಗಾರಿಕೆ ಹೊತ್ತು ಯಾಕುಬ್ ಮೆಮೊನ್ ನೇಣು ಕುಣಿಕೆ ಏರುವುದಾದರೆ ಸಾವಿರಾರು ಜನರ ಸಾವಿನ ಹೊಣೆ ಹೊತ್ತು ಸಾಯಬೇಕಾದ
ಮೇಧಾವಿಗಳೆನಿಸಿಕೊಂಡ ನೂರಾರು ಮಂದಿ ನಮ್ಮಲ್ಲಿದ್ದಾರೆ ಮತ್ತು ಅವರುಗಳು ಯಾಕುಬ್ ಮೆಮೊನ್ ಗಿಂತ ಒಂದು ನಿಮಿಷ ಮುಂಚೆಯಾದರೂ ನೇಣು ಗಂಬ ಏರಲು ಅರ್ಹವಾದವರು.

ನೇಣುಗುಣಿಕೆ ಎಂಬುವುದು ಈ ದೇಶದ ಕ್ರಿಮಿನಲ್ ವ್ಯವಸ್ಥೆಯನ್ನು ಅಳಿಸಿಹಾಕಲು ಇರುವ ಪದ್ದತಿಯಲ್ಲ ಆದರೆ ಪ್ರಸ್ತುತ ಯಾಕುಬ್ ಎನ್ನುವ ಹೆಸರಿಗಾಗಿ ಒಬ್ಬ ನೇಣಿ ಗೇರುತ್ತಿದ್ದಾನೆ ಎನ್ನುವುದು ಸ್ಪಷ್ಟವಾದ ಚಿತ್ರಣ. ಅವನೊಬ್ಬ ಅಮಾಯಕ ಎಂದು ವಾದಿಸುವುದಕ್ಕಿಂತ ಜಾತಿ ಅಧಾರದಲ್ಲಿ ಬಲಿಯಾದ ವ್ಯಕ್ತಿಗಳಲ್ಲಿ ಈತನೂ ಒಬ್ಬ ಎಂದು ಬಣ್ಣಿಸಬಹುದು. ಹಲವಾರು ದೇಶಗಳಲ್ಲಿ ಗಲ್ಲು ಶಿಕ್ಷೆ ಎಂಬ ಪದ್ದತಿ ನಿರ್ಮೂಲನೆಯಾಗಿರುವಾಗ ಭಾರತದಲ್ಲಿ ಸಾಲು ಸಾಲಾಗಿ ಜಾತಿ ಅಧಾರದಲ್ಲಿ ನೇಣಿಗೇರುತ್ತಿದ್ದಾರೆ, ಸ್ವತಹ ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನ ಸಮೂಹ ಬೆಳೆದು ಬರುತ್ತಿರುವಾಗ ಅದನ್ನು ಸಮರ್ಥಿಸಲ್ಪಡುವ ಘಟನೆಗಳು ಮರುಕಳಿಸುತ್ತಿರುವುದು ವಿಷಾದನೀಯ.

1993 ರ ಮುಂಬೈ ಬ್ಲಾಸ್ಟ್ ನಲ್ಲಿ ಮಡಿದವರ ಬಗ್ಗೆ ಅನುಕಂಪ ಮತ್ತು ಅಗಾಧವಾದ ನೋವಿದೆ ಮತ್ತು ಆ ನೋವಿನ ಪ್ರತಿಫಲವೇ 21 ವರ್ಷಗಳ ಕಾಲ ಯಾಕೂಬ್ ಮೆಮೊನ್ ಜೈಲಿನ ಗೋಡೆಗಳ ಮದ್ಯೆ ಕಳೆದಿರುವುದು. ಬ್ರಷ್ಟರು, ಫ್ಯಾಸಿಸ್ಟರು ಈ ದೇಶವನ್ನು ಸಂಶಯ ಗಳ ಸುಳಿಯಲ್ಲಿ ಮುನ್ನಡೆಸುತ್ತಿರುವಾಗ ಯಾಕುಬ್ ನೇಣಿಗೇರುವುದು ವಿಚಿತ್ರವಲ್ಲ ಆದರೆ ಅನ್ಯಾಯದ ವಿರುದ್ದ ಸದಾ ದ್ವನಿ ಎತ್ತುವ ಬಹಳ ದೊಡ್ಡ ಬುದ್ದಿವಂತ ಸಮೂಹ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.

ಯಾಕೂಬ್ ನ ಗಲ್ಲು ಶಿಕ್ಷೆ ಎತ್ತಿ ಹಿಡಿದಾಗ ಸಂಬ್ರಮಿಸಿದವರು ತಮ್ಮ ಮುಖದ ನಗುವನ್ನು ಅಗಾಗ್ಗೆ ಬದಲಾಯಿಸುತ್ತಿದಾರೆ, ಅವರು ಸನ್ನಿವೇಷಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ. ತಮ್ಮ ಬಳಿಯೇ ಶಾಂತಿ ಕೆಡಿಸುವ ಪಡೆಯನ್ನಿಟ್ಟುಕೊಂಡು ಶಾಂತಿ ದೂತರ ಪೋಸು ನೀಡುತ್ತಿದ್ದಾರೆ.

ಕಲ್ಪನೆಗಲನ್ನು ಚಿವಿಟಿ ಹಾಕಿರುವ ಮಾದ್ಯಮಗಳಲ್ಲಿ ಚಿಂತನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಕಸಿದು ಸಂಬಳ ಪಡೆಯುವ ವ್ಯಕ್ತಿಯ ಬರಹಿತ ಮಾತುಗಳು ಪ್ರಚಲಿತದಲ್ಲಿದೆ. ಮಾನವ ಹತ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸುವ ಮಾಧ್ಯಮಗಳು " Yakoob should be hang out"  ಅನ್ನುವ ಘೋಷಣೆಗಳನ್ನು ತನ ಗೋಡೆಯಲ್ಲಿ ಸದ್ಯ ಭದ್ರಪಡಿಸಿಕೊಂಡಿದೆ. ಭಾರತದ ಕಾನೂನು ವ್ಯವಸ್ಥೆ ಪುಸ್ತಕದಲ್ಲಿ ಬಹಳ ಸುಂದರವಾಗಿ ಅಚ್ಚೊತ್ತಲ್ಪಟ್ಟಿದೆ ಆದರೆ ಅದನ್ನು ಕಾರ್ಯಗತಗೊಳಿಸುವವರ
ಕೈಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದೆ ಇಲ್ಲಿಯ ಜನ ಈ ಬೆಳವಣಿಗೆಗಳನ್ನು ಮೆಚ್ಚಿಕೊಂಡಿಲ್ಲ.

ಯಾಕೂಬ್ ಮೆಮೊನ್ ಗೆ ಗಲ್ಲು ಎಂಬುವುದು ಬರೀ ಗಲ್ಲಲ್ಲ ಬದಲಾಗಿ ಬದಲಾಗಳು ಮನಸ್ಸಿರುವ, ಬದಲಾಗಲು ಪ್ರೇರಣೆ ಹೊಂದುತ್ತಿರುವ ಪ್ರತಿಯೊಬ್ಬ ಕ್ರಿಮಿನಲ್ ಗೂ ಕೂಡಾ ಹಿಂಜರಿಕೆಯಾಗುವ ನ್ಯಾಯದ ನಿರಾಕರಣೆ.ಸಮೀಕ್ಷೆಗಳು ಜಾತಿ ಆದಾರದಲ್ಲಿ ಹೆಚ್ಚಿನ ಕ್ರಿಮಿನಲ್ ಗಳು ನೇಣು ಗಂಬ ಏರಿದ್ದಾರೆ ಎಂದು ಹೇಳುತ್ತಿರುವಾಗ ಅದನ್ನು ದ್ರಿಡೀಕರಿಸಲು ಯಾಕೂಬ್ ಸಜ್ಜಾಗಿ ನಿಂತಿದ್ದಾನೆ.

Tuesday, June 16, 2015

ಸಂತುಷ್ಟ - ಸಂಕಷ್ಟ

ಸರ್ಕಾರದ ಭರವಸೆ! 
ಹಾರ್ಟ್ ಸರ್ಜರಿಯಾ? 
ಬಿ. ಪಿ. ಎಲ್ ಕಾರ್ಡಾ? 
ಪಡೆದುಕೋ 
 ಉಚಿತ ಸೇವೆ.....  
ಬಡವನು  ಸಂತುಷ್ಟ.  

ಖಾಸಗಿ ಆಸ್ಪತ್ರೆಯ 
ಸರ್ಜರಿಯ ಡಾಕ್ಟರ್ 
ಗಂಬೀರತೆಯಿಂದ, 
ಸರಕಾರದ ವಸ್ತುಗಳು 
 ತುಕ್ಕು ಹಿಡಿದಿದೆ 
ಜಾಗ್ರತೆ !!
ನಮ್ಮದು ಒರಿಜಿನಲ್ 
 ...ಅದನ್ನೇ ಹಾಕಿ....  
ಕೌಂಟರ್ ನಲ್ಲಿ 
ಕಟ್ಟಿ ಬಾ.  
ಬಡವನಿಗೆ ಸಂಕಷ್ಟ.  

ವಿವಾದ


ವಿದೇಶಾಂಗ ಮಂತ್ರಿ 
ವಿದೇಶದಲ್ಲಿರುವವರಿಗೆ 
ಸಹಾಯ ಮಾಡಿ 
ವಿವಾದ,
ಪ್ರವಾಸ ಮಂತ್ರಿಯಾದ 
ಪ್ರಧಾನಿಯಿಂದ ದಿನಕ್ಕೊಂದು 
ವಿವಾದ,
ವಿದೇಶದ ಕಪ್ಪು ಹಣ ತರುತ್ತೇನೆಂದ 
ಭಾಷಣಗಳಿಂದ 
ಪದೇ ಪದೇ 
ವಿವಾದ,
ಮಂದಿರ ಎಂದು ಹೇಳಿ 
ಮಾಡಿರುವವರು 
ಬರೀ 
ವಿವಾದ,
ಹೌದು!!!
ಇದು ಸ್ವಚ್ಚ ಭಾರತದ 
ಕನಸು ಹೇಳಿಕೊಟ್ಟವರ 
ನಂಬಿ ಹಾಕಿದ ಮತಕ್ಕೆ 
ಸಿಕ್ಕಿದ ಅಚ್ಚೇ ದಿನ್.....

Monday, June 15, 2015

ಮಾನವೀಯತೆಯ ಗುಣ

ತಲವಾರಿನಿಂದ ಕೈ ಕಡಿದಾಗ
ಚಿಮ್ಮಿ ಹರಿದಿದ್ದು ರಕ್ತ,
ಕೈ ಜೋಡಿಸಲು ಬಾಟಲಿಯಿಂದ
ಸಿರಿಂಜಿನಲ್ಲಿ ಹರಿದದ್ದೂ ರಕ್ತ.

ಕೈ ಕಡಿದಾತನ
ಮಯ್ಯಲ್ಲಿ ಬರೀ ರಕ್ತದ ಕಣ,
ರಕ್ತ ನೀಡಿದಾತನ
ರಕ್ತದಲ್ಲಿ ಮಾನವೀಯತೆಯ ಗುಣ.

ಕೈ ಕಡಿಯುವವರು,
ರಕ್ತ ಹರಿಸುವವರು,
ರಕ್ತ ನೀಡುವ
ಮಾನವರಾಗಬೇಕಾಗಿದೆ. 

ಪ್ರೇರೇಪಣೆ

ಅವಳು 
ಓಡಿ ಹೋದಳು 
ಓಡಿ ಹೊದಳು 
ಎಂದು
ಬಾಯ್ಬಿರಿದುಕೊಂಡು 
ಇನ್ನಷ್ಟು 
ಮಂದಿಗೆ 
ಓಡಿ ಹೋಗಲು 
ಪ್ರೇರೇಪಣೆ ನೀಡದಿರಿ 

Monday, May 18, 2015

ಯಾರಿಗೂ ನೀಡದ ರಕ್ತ

ಮಡದಿಗೆ
ರಕ್ತ ಬೇಕೆಂದು
ಡಾಕ್ಟರ್ ಹೇಳಿದಾಗ
ರಕ್ತಕ್ಕಾಗಿ
ಇತರರಿಗೆ 
ಮೊರೆ ಇಟ್ಟ 
ಪತಿ
ಬೇರೊಬ್ಬ ರಕ್ತ
ಕೊಟ್ಟ ಮೇಲೆ
ತನ್ನಲ್ಲಿ ಯಾರಿಗೂ 
ನೀಡದ ರಕ್ತವಿದೆಯೆಂದು
ನೆನಪಿಸಿಕೊಂಡ