Monday, June 30, 2014

ಅರ್ಥೈಯಿಸಿ! ಅರ್ಥೈಯಿಸಿಕೊಡುವ ತಿಂಗಳಾಗಲಿ ರಮಝಾನ್ (ಲೇಖನ)




ಬದಲಾವಣೆಯ ಅವಕಾಶವಾಗಿ ರಮಝಾನ್ ಮತ್ತೊಮ್ಮೆ ಮರಳಿ ಬಂದಿದೆ, ಆತ್ಮೀಯವಾಗಿ ಸ್ವಾಗತಿಸಿ ಸತ್ಕರ್ಮದೊಂದಿಗೆ  ಮುನ್ನಡೆಯುತ್ತಿದೆ, ಸತ್ಯವಿಶ್ವಾಸಿಗಳ ಮನದಲ್ಲಿ ಮಂದಹಾಸ ಮೂಡಿದೆ. ಪುಣ್ಯ ಕಾರ್ಯಗಳಿಗೆ ದುಪ್ಪಟ್ಟು ಫಲ ಸಿಗುವ ಮಹತ್ತರ ತಿಂಗಳು ಚೈತನ್ಯ ತುಂಬಿಸಿದೆ, ಕುರಾನ್ ಅವತ್ತೀರ್ಣ ಗೊಂಡ ತಿಂಗಳಾದುದರಿಂದ ಸತ್ಯವಿಶ್ವಾಸಿಗಳ ಅಂತರಾಳದಲ್ಲಿ ಭಾವುಕತೆಯ ಉದ್ಗಾರವುಂಟಾಗಿದೆ, ಸತ್ಕರ್ಮದ ಕಡೆಗೆ ಸಂಪೂರ್ಣವಾಗಿ ವಾಲಿಕೂಳ್ಳಬೇಕಾದ ತಿಂಗಳಾಗಿ ರಮಝಾನ್ ಬೆಳಕು ಚೆಲ್ಲಿದೆ, ಪ್ರತಿಯೊಬ್ಬ ಸತ್ಯವಿಶ್ವಾಸಿಯೂ ತನ್ನನ್ನು ಬದಲಾಯಿಸಿಕೊಳ್ಳುವ ಸದವಕಾಶವಾಗಿ ರಮಝಾನ್ ಸಾಗುತ್ತಿದೆ.

 ಭರದ ಸಿದ್ದತೆಯೊಂದಿಗೆ ರಮಝಾನನ್ನು ಸ್ವಾಗತಿಸಲಾಗಿದೆ ಆದರೆ ಸ್ವಾಗತಿಸಿದವನೇ ರಮಝಾನಿನ ನೈಜತೆಯನ್ನು ಮರೆತು  ಕೇವಲ ಆಚರಣೆಯ ತಿಂಗಳು ಮಾತ್ರ ಆಗುತ್ತಿದೆಯೋ ಎಂದು ನೆನಪಿಸುವಂತೆ ಇರುತ್ತದೆ ಕೆಲವು ನಡೆ. ಸತ್ಯವಿಶ್ವಾಸಿಗಳು ತಾವಷ್ಟೇ ತಮ್ಮ ವಿಶ್ವಾಸವನ್ನು ಬಲಪಡಿಸಿಕೊಳ್ಳಬೇಕಾದ ತಿಂಗಳಾಗಿ ರಮಝಾನ್ ಉಳಿಯದೆ ಧರ್ಮದೊಳಗಿರುವ  ಆಧರ್ಮಿಗಳನ್ನು ಮತ್ತು ಸತ್ಯವಿಶ್ವಾಸದ ಪರಿಚಯ ಇಲ್ಲದ ಒಂದು ಜನ ಕೂಟಕ್ಕೆ ಇಸ್ಲಾಮಿನ ಮಹತ್ವನ್ನು ವಿವರಿಸಬೇಕಾದ ತಿಂಗಳು ಕೂಡಾ ರಮಝಾನ್ ಎನ್ನುವ ಕಲ್ಪನೆ ಮೂಡಿಬರಬೇಕಾಗಿದೆ.

ಭೂಲೋಕದ ಸರ್ವ ಮನುಷ್ಯರಿಗೆ ಸಮರ್ಪಿಸಲ್ಪಟ್ಟ ದೇವವಾಣಿ ಪವಿತ್ರ ಕುರಾನ್ ಅವತ್ತೀರ್ಣ ಗೊಂಡ ತಿಂಗಳು ರಮಝಾನ್, ಅದೇ ಮಹತ್ವದಿಂದ ಈ ತಿಂಗಳು ದೇವನ ಬಲಿ ಕಾರುಣ್ಯವನ್ನು ಯಾಚಿಸಬೇಕಾದ ತಿಂಗಳು, ಪ್ರತಿಯೊಬ್ಬ ವಿಶ್ವಾಸಿಯೂ ಕೂಡ ಕಡ್ಡಾಯ ಉಪವಾಸವನ್ನು ಹಿಡಿಯಬೇಕು ಅದು ಬಡವನ ಹಸಿವಿನ ಕಷ್ಟವನ್ನು ಅರಿಯಲು ಶ್ರೀಮಂತನಿಗೆ ಇರುವ ಅವಕಾಶ,  ಸ್ವಭಾವವನ್ನು ಸಂಸ್ಕರಿಸಿಕೊಳ್ಳಬೇಕಾದ ತಿಂಗಳು, ಸತ್ಯವಿಶ್ವಾಸವನ್ನು ಮರಳಿಸಿಕೊಳ್ಳಬೇಕಾದ ತಿಂಗಳು, ನಮಾಝಾನ್ನು ಹೆಚ್ಚಿಸಿಕೊಳ್ಳಬೇಕಾದ ತಿಂಗಳು, ತಪ್ಪಿನ ನಡೆಯನ್ನು ಸರಿ ಪಡಿಸಿಕೊಳ್ಳಬೇಕಾದ ತಿಂಗಳು, ಕಲಿಯುವ ಮತ್ತು ಕಲಿತು ಸತ್ವವಿಶ್ವಾಸವನ್ನು ಪುನರ್ಚೇತನಗೊಳಿಸಬೇಕಾದ ತಿಂಗಳು, ರಮಝಾನ್ ಧಾನ ಧರ್ಮರ್ಗಳಿಗೆ ಪ್ರೆರೇಪಿಸಬೇಕಾದ ತಿಂಗಳು, ಒಟ್ಟಿನಲ್ಲಿ ರಮಝಾನ್ ಬದಲಾವಣೆಯ ತಿಂಗಳು, ದೇವನ ಕಡೆಗೆ ಹತ್ತಿರವಾಗುವ ತಿಂಗಳು, ಆ ಮೂಲಕ ಸುಂದರ ಬಾಳನ್ನು ದೇವ ಮಾರ್ಗದಲ್ಲಿ  ಮುಂದುವರೆಸಬೇಕಾದ ತಿಂಗಳು, ದೇವ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿ ತಪ್ಪುಗಳು ಮರಳಿ ಬಾರದಂತೆ ತಿದ್ದಿಕೊಲ್ಲಬೇಕಾದ ತಿಂಗಳು.

ಇಸ್ಲಾಂ ಧರ್ಮದ ಆಳವನ್ನು ತಿಳಿಯದ ಪ್ರತಿಯೊಬ್ಬ ಮನುಷ್ಯನಿಗೆ ಇಸ್ಲಾಮಿನ ಸಂದೇಶವನ್ನು ಬಹಳ ಸುಂದರವಾಗಿ ರಮಝಾನ್ ಪರಿಚಯಪಡಿಸಬೇಕಾಗಿದೆ ಆ ಮೂಲಕ ಜಗದೊಡೆಯನನ್ನು ಮನುಕುಲದ  ಪ್ರತಿಯೊಬ್ಬರಿಗೂ ಅರ್ಥೈಸಿ ಕೊಡಬೇಕಾದ ತಿಂಗಳು, ಈ ತಿಂಗಳಲ್ಲೂ ಕೂಡಾ ಆ ಕೆಲಸ ಸಮರ್ಪಕವಾಗಿ ನಡೆಯದೇ ಇರುವುದು ವಿಷಾದನೀಯ. ರಮಝಾನಿನ ತಿಂಗಳಿನ ಮಹತ್ವವನ್ನು ಸತ್ಯವಿಶ್ವಾಸಿಗಳು ಪ್ರತಿಯೊಬ್ಬ ಮಾನವನಿಗೂ ತಲುಪಿಸಬೇಕು ಆ ಮೂಲಕ ಇಸ್ಲಾಮಿನ ನೈಜತೆಯ ಪರಿಚಯವಾಗಿ ಇಸ್ಲಾಮಿನ ಮೇಲೆ ಘಾಡವಾಗಿ ಬಿದ್ದಿರುವ ಸುಳ್ಳಾರೋಪಗಳ ನಿರಾಕರಣೆಯಾಗಬೇಕು.
ಆದರೆ ಸಹಜವಾಗಿ ಇಂದು ರಮಝಾನಿನ ಬಗ್ಗೆ ಬೀಳುವ ಪ್ರಶ್ನೆ! ರಮಝಾನ್ ಬೇರೆ ತಿಂಗಳಿಗಿಂತ ಹೆಚ್ಚು ಸ್ವಾದಿಷ್ಟವಾದ ಉಪಹಾರಗಳನ್ನು ತಿಂದು ಮೈ ಕೊಬ್ಬಿಸಿಕೊಲ್ಲಬೇಕಾದ ತಿಂಗಳೇ? ಅತಿ ಹೆಚ್ಚು ನಿದ್ರೆ ಮಾಡಬೇಕಾದ ತಿಂಗಳೇ ? ಆಹಾರವನ್ನು ಪೋಲು ಮಾಡಬೇಕಾದ ತಿಂಗಳೇ? ಭಿಕ್ಷೆ ಬೇಡುವವರು ಅಧಿಕವಾಗುವ ತಿಂಗಳೇ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ನೀಡಲು ಹಲವು ಬಾರಿ ಹೆಚ್ಚಿನವರಿಗೆ ಸಮಸ್ಯೆಯಾಗಬಹುದು, ರಮಝಾನಿನ ಮಹತ್ವದ ಬಗ್ಗೆ ಮನುಕುಲಕ್ಕೆ ಸರಿಯಾಗಿ ತಿಳಿಸಿಕೊಡಬೇಕಾಗಿದೆ, ರಮಝಾನಿನ ನೈಜ ಮಹತ್ವನ್ನು ಮರೆತು ಅಂದ ಕೆಡಿಸುವ ವರ್ತನೆಗಳ ಬಗ್ಗೆ ಸತ್ಯವಿಶ್ವಾಸಿಗಳು ಸದಾ ಬೆಳಕು ಚೆಲ್ಲಬೇಕಾಗಿದೆ, ರಮಝಾನ್ ಬಡವರ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕಾದ ತಿಂಗಳು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು, ರಮಝಾನಿನ ಮಹತ್ವದ ಬಗ್ಗೆ ಅರಿವಿಲ್ಲದವನಿಗೆ ರಮಝಾನಿನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು, ರಮಝಾನನ್ನು ಹೆಚ್ಚು ದೇವ ಮಾರ್ಗದಲ್ಲಿ ವ್ಯಯಿಸಬೇಕು, ರಮಝಾನ್ ದಾನ ಧರ್ಮಗಳನ್ನು ಹೆಚ್ಚಿಸಬೇಕಾದ ತಿಂಗಳು, ಉತ್ತಮ ಸಭ್ಯ ನಡತೆಯನ್ನು ಮೈಗೂಡಿಸಿಕೊಲ್ಲಬೇಕಾದ ತಿಂಗಳು ಮತ್ತು ಅದನ್ನು ಜೀವನ ಪರ್ಯಂತ ಮುಂದುವರೆಸಿಕೊಲ್ಲಬೇಕಾದ ತಿಂಗಳು ಎನ್ನುವುದನ್ನು ಮುಖ್ಯವಾಗಿ ಮರೆಯಬಾರದು.

ಕುರಾನ್ ಸ್ವತಹ ಪರಿಚಯಪಡಿಸುವಂತೆ "ಸತ್ಯ ವಿಶ್ವಾಸಿಗಳೇ ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ದಾಯಗೊಳಿ ಸಿರುವಂತೆಯೇ ನಿಮ್ಮ ಮೇಲೆಯೂ ಉಪವಾಸ ಕಡ್ಡಾಯಗೊಳಿಸಲಾಗಿದೆ ಇದರಿಂದ ನಿಮ್ಮ ದರ್ಮನಿಷ್ಟೆಯ ಗುಣವಿಷೇಶತೆ  ಉಂಟಾಗುವುದೆಂದು ಆಶಿಸಲಾಗಿದೆ"  ಇಸ್ಲಾಮಿನ ಗುಣವಿಶೇಷತೆಗಳನ್ನು ಉಪವಾಸ ಆಚರಿಸುವ ಮೂಲಕ ಈ ಜಗತ್ತಿಗೆ ಸಾರಬೇಕಾದದ್ದು ಸತ್ಯವಿಶ್ವಾಸಿಯ ಕರ್ತವ್ಯ, ಸತ್ಕರ್ಮದ ಹಾದಿಯಲ್ಲಿ ಮುಂದೆ ಸಾಗಬೇಕಾದದ್ದು ಮತ್ತು ಧರ್ಮದ ಬಗ್ಗೆ ತಿಳಿಯ ಬಯಸುವವನಿಗೆ ರಮಝಾನಿನಲ್ಲಿ ಪಾಲಿಸುವ ಕ್ರಮಗಳು ಅವನನ್ನು ಇನ್ನಷ್ಟು ಹತ್ತಿರಗೊಳಿಸಬೇಕು, ಬದಲಾಗಿ ಕೆಲವು  ನಡೆ ಅವನು ಇಸ್ಲಾಮಿನಿಂದ ದೂರ ಸರಿಯುವ ಹಾಗೆ ಇರದೇ ನಮ್ಮನ್ನು ನಾವು ಪರಿಶುದ್ದಗೊಳಿಸಬೇಕು. ಧರ್ಮದ ಆಳ ತಿಳಿಯ ಬಯಸುವವನೊಬ್ಬನಿಗೆ ಇದು ಭಿಕ್ಸೆ ಬೇಡುವವರ ತಿಂಗಳು ಎಂದು ಹೇಳುವ ಹಾಗೆ ಸಮುದಾಯಕ್ಕೆ ಮಾರಕವಾಗುವ ನಡೆ ರಮಝಾನ್ ಆಗಬಾರದು, ಝಕಾತನ್ನು ಕ್ರಮ ಬದ್ದವಾಗಿ ಪಾಲಿಸಿ ಇಸ್ಲಾಮಿಗೆ ಅಂಟಿಕೊಂಡಿರುವ ಇಂತಹ ತಪ್ಪು ಕಲ್ಪನೆಗಳಿಗೆ ಇತಿಶ್ರೀ ಹಾಕಬೇಕು, ಈ ನಿಟ್ಟಿನಲ್ಲಿ ಇಸ್ಲಾಮಿನ ವಾಸ್ತವ ಕಲ್ಪನೆಯ ರಮಝಾನ್ ಮರಳಿ ಬರುವಲ್ಲಿ ಸತ್ಯವಿಶ್ವಾಸಿಯ ಪಾತ್ರ ಬಹುಮುಖ್ಯವಾಗಿದೆ.

ರಮಝಾನ್ ಶ್ರೀಮಂತರು ತಮ್ಮ ಸೊತ್ತಿನಲ್ಲಿ ಬಡವರಿಗಾಗಿ ಇರುವ ಹಕ್ಕನ್ನು ಝಕಾತ್ ಮೂಲಕ ನೀಡಬೇಕಾದ ತಿಂಗಳು, ಆ ಮೂಲಕ ಇಸ್ಲಾಂ ಬಡವರಿಗೆ ನೀಡುತ್ತಿರುವ ನ್ಯಾಯವನ್ನು ಎತ್ತಿ ತೋರಿಸಬೇಕು, ರಮಝಾನ್  ಒಂದು ನಡೆಯನ್ನು ಕಲಿಸುವ, ಸಭ್ಯತೆಯನ್ನು ಭೋಧಿಸುವ ಆ ಮೂಲಕ ದೇವನಿಗೆ ಹತ್ತಿರವಾಗುವ ತಿಂಗಳು ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು, ನಮಾಝನ್ನು ಸಮಯಕ್ಕೆ ಸರಿಯಾಗಿ ಪಾಲಿಸಿ, ಸರ್ವರ ಮೇಲೆ ಕರುಣೆ ತೋರಿಸಿ ಇಸ್ಲಾಮೆಂಬ ಸತ್ಯದ ಧರ್ಮವನ್ನು ಎಲ್ಲೆಡೆ ಪಸರಿಸುವಲ್ಲಿ, ಧರ್ಮ ತಿಳಿಯಬಯಸುವವರಿಗೆ ಕಲಿಸಿಕೊಡುವಲ್ಲಿ ಮಾತ್ರವಲ್ಲ, ಅವರಾಗಿಯೇ ಅರ್ಥೆಯಿಸುವಲ್ಲಿ ಏಕದೇವ  ವಿಶ್ವಾಸಿಗಳಾದ ರಮಝಾನಿನ ಪಾಲಕರು ಶ್ಲಾಘನೀಯ ಪಾತ್ರ ವಹಿಸಬೇಕು.


No comments: