ಮಾನವ ವಿಶ್ವಾಸಿಗಳೇ ಎಲ್ಲೆಡೆ ತುಂಬುತ್ತಿದ್ದಂತೆ!
ದೇವ ವಿಶ್ವಾಸಿಗಳು ಇತ್ತ ಕಣ್ಮರೆಯಾಗುತ್ತಿದ್ದಾರೆ.
ಸ್ವ ಹಿತಕ್ಕಾಗಿ ದೇವನನ್ನೇ
ಪಣವಾಗಿ ಇಟ್ಟವರಿದ್ದಾರೆ!
ನಾನೇ ಸ್ವರ್ಗವಾಸಿ ಎಂಬ ಅಹಂಕಾರಿಗಳೂ ನಮ್ಮಲ್ಲಿದ್ದಾರೆ,
ದೇವನೊಬ್ಬನೇ ಎನ್ನುವವರ ಮಧ್ಯೆ ಸದಾ ಗಲಿಬಿಲಿ!
ನಮ್ಮ ಗಲಿಬಿಲಿಯೇ ಇಲ್ಲಿ ಕೆಲವರಿಗೆ ಬಳುವಳಿ.
ದೇವ ಪ್ರೀತಿ ಮಾನವತೆಯಾಗಿ, ಮನುಷ್ಯತ್ವವಾಗಿ ಸ್ವಂತಕ್ಕಲ್ಲ!
ಒಂದಾಗಿ ಎನ್ನುವಾಗ ದೂರ ಓಡಿ ಮರೆಯಾಗುವುದಕ್ಕಲ್ಲ.
ನಾನು ನೀವು ಸ್ವಾರ್ಥಿಯಾದರೆ ಧರ್ಮವೆಲ್ಲಿ?
ಒಮ್ಮೆ ತಿರುಗಿ ನೋಡಿ ತುಂಬಿಲ್ಲವೇ ಅಧರ್ಮವಿಲ್ಲಿ?
.jpg)
No comments:
Post a Comment