Saturday, July 12, 2014

ಮರೆಯಾಗಿ ಮತ್ತೆ ಮತ್ತೆ ನೆನಪಾಗುವ ಗಾಝ (ಲೇಖನ)



ಕಣ್ಣೆದುರಿಗೆ ನಮ್ಮ ಆತ್ಮೀಯನೊಬ್ಬ ಮರಣ ಹೊಂದಿ ನಂತರ ಆತನನ್ನು ಗೋರಿಯಲ್ಲಿ ಮಲಗಿಸಿದ ಮೇಲೆ ಭಿನ್ನ ಭಿನ್ನವಾಗಿ ಮರುಕಪಡುವರವರು ನಾವುಗಳು, ಹೀಗಿರುವಾಗ ಮನುಷ್ಯತ್ವದ ಅರಿವಿಲ್ಲದವನೊಬ್ಬ ನಮ್ಮ ಬಳಿ ಬಂದು ನೀವು ಕಾಲಿಡದ ಒಂದು ದೇಶದ ಮೇಲೆ ಬೀಳುವ ಬಾಂಬುಗಳಿಗೆ ನೀವೇಕೆ ಮರುಕಪಡುತ್ತೀರಿ ಎಂದು ಕೇಳಿದರೆ ನಮಗೆ ಉತ್ತರ ನೀಡಲು ಸಾಧ್ಯವೇ? ನಮ್ಮ ಮಸೀದಿಯಲ್ಲಿ ನಮ್ಮವನಿಗೆ ಹೊಡೆಸುವವರು ನಾವುಗಳು, ನಮ್ಮದೇ ಕಾರ್ಯಕ್ರಮಗಳನ್ನು ಬಲವಂತದಿಂದ ನಿಲ್ಲಿಸುವವರು ನಾವುಗಳು, ನಮ್ಮದೇ ಪತ್ರಿಕೆಗಳಿಗೆ ಬೆಂಕಿ ಹಾಕುವವರು ನಾವುಗಳು, ಅದೆಷ್ಟೋ ಕಾಲ ನಮ್ಮವರ ಬಳಿಯೇ ತಲೆ ಎತ್ತಿ ಮಾತನಾಡಲಾಗದಷ್ಟು ಅಗಾಧವಾದ ಕೊಪವಿಟ್ಟುಕೊಂಡವರು ನಾವುಗಳು, ನಮ್ಮ ನೆರೆ ಹೊರೆಯವರನ್ನೇ ನಮ್ಮದಾಗಿಸಿಕೂಲ್ಲದ ನಾವುಗಳು ಗಾಝಾದ ಮೇಲೆ ಬಿದ್ದ ಬಾಂಬುಗಳ ಬಗ್ಗೆ ಮರುಕಪಡುವಾಗ ಯಾರಾದರು ಅಣಕಿಸಿದರೆ
ಉತ್ತರ ನೀಡಲು ನಾವು ಸಮರ್ಥರೆ?  ನಮ್ಮೊಳಗೇ ನ್ಯಾಯ ನೀಡಲು ಸಾಧ್ಯವಾಗದ ನಮಗೆ ಅಮಾಯಕರು ಬಲಿಯಾಗುತ್ತಿರುವ ಪ್ಯಾಲೆಸ್ತೀನಿನ ಪರ ದ್ವನಿ ಎತ್ತಲು ಸಾಧ್ಯವೇ?  ಒಂದು ವೇಳೆ ದ್ವನಿ ಎತ್ತಿದಲ್ಲಿ ನಮ್ಮ ದ್ವನಿ ಎತ್ತುವ ಶೈಲಿ ಹೇಗಿರಬಹುದು? ಅಲ್ಲಿ ಗಝಾಕ್ಕಿಂತ ನಾವು ನಾವು ಎನ್ನುವ ಪ್ರತಿಷ್ಟೆಯ ಪರಾಕಾಷ್ಟೇ ಹೆಚ್ಚಿರಲಿಕ್ಕಿಲ್ಲವೇ?


ಗಾಝಾದ ಮೇಲೆ ಇಸ್ರೇಲ್ ದಾಳಿ ಮಾಡುತ್ತಿರುವುದು ಇಂದು ಹೊಸದೇನಲ್ಲ, ಮಾಧ್ಯಮಗಳು ಸತ್ಯವನ್ನು ಬಚ್ಚಿಟ್ಟದ್ದು ಕೂಡಾ ಹೊಸತಲ್ಲ, ಪ್ಯಾಲೆಸ್ತೀನಿಯರ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ! ಅಮಾಯಕ ಮಕ್ಕಳು, ಮಹಿಳೆಯರು ಮುಗ್ದ ಯುವಕರು, ತಂದೆಯಂದಿರು ಅಲ್ಲಿ ಕ್ರೂರವಾಗಿ ಬಲಿಯಾಗುತ್ತಲೇ ಇದ್ದಾರೆ. ಒಂದೆರಡು ನೈಜ ಚಿತ್ರಗಳು ಹರಿದಾಡಿದಾಗ ನಾವು ಕೂಡ ಅದನ್ನು ಹರಿದಾಡಿಸಿ ಗಾಝಾ ಎಂದು ಬೋಬ್ಬಿಡುತ್ತೇವೆ ಆದರೆ ಒಂದೆರಡು ದಿನಗಳಲ್ಲಿ ನಾವು ಗಾಝಾವನ್ನು ಮರೆತು ಬಿಡುತ್ತೇವೆ! ಯಾಕೆಂದರೆ ಅಷ್ಟೊತ್ತಿಗೆ ನಾವು ನಾವುಗಳಾಗಿ ಬಿಡುತ್ತೇವೆ ಮತ್ತು ಗಾಝಾ ಅಲ್ಲಿ ಮರೆಯಾಗುತ್ತದೆ, ಗಾಝಾದ ಮಕ್ಕಳ ನೋವುಗಳಿಗೆ ಪರಿಹಾರ ಸಿಕ್ಕಿರುವುದಿಲ್ಲ, ಎಲ್ಲರೂ ಗಾಝಾದ ಹೆಸರಿನಲ್ಲಿ ತಮ್ಮ ತಮ್ಮ ಬಾವುಟಗಳಿಗೆ ಕೆಲಸ ಕೊಡುವ ಹಂತಕ್ಕೆ ತಲುಪಿ ತಮ್ಮ ಬೇಳೆ  ಬೇಯಿಸಿ ಕೊಳ್ಳುತ್ತಾರೆ.

ಮುಸ್ಲಿಂ ರಾಷ್ಟ್ರಗಳು ಎಷ್ಟು ಗಂಭೀರವಾಗಿ ಪ್ಯಾಲೆಸ್ತೀನಿನ ಮುದ್ದು ಮಕ್ಕಳ ಬಗ್ಗೆ ಯೋಚಿಸಿದೆ ಎನ್ನುವುದು ಬಲು ದೊಡ್ಡ ಪ್ರಶ್ನೆ, ಪ್ಯಾಲೆಸ್ತೀನಿಗರ ನೋವನ್ನು ಅರಬ್ ದೇಶಗಳು ಎಷ್ಟು ಅರ್ಥ ಮಾಡಿದೆ? ಹಲವು ಅರಬ್ ದೇಶಗಳು ಕಣ್ಣೊರೆಸಲು ಪರಿಹಾರ ನಿದಿಯನ್ನು ಬಿಡುಗಡೆ ಮಾಡುತ್ತದೆ ಇದು ಪ್ಯಾಲೆಸ್ತೀನಿನ ಸಮಸ್ಯೆಗೆ ಪರಿಹಾರವೇ? ಮುಗ್ದ ಅಮಾಯಕರ ಬಳಿ ಇದರಿಂದ ನಿಲ್ಲುತ್ತದೆಯೇ? ಇನ್ನು ಕೆಲವು ದಿನಗಳಲ್ಲಿ ದೊಡ್ದಣ್ಣಗಳು ಪೋಸು ನೀಡಿ ಸಂಧಾನದ ನಾಟಕ ನಡೆಯುತ್ತದೆ ಅಲ್ಲಿಗೆ ಒಂದಿಷ್ಟು ಭೀಕರತೆ ಕಡಿಮೆಯಾಗುತ್ತದೆ ಮತ್ತೆ ಅವರು ಬದುಕು ಕಟ್ಟಿಕೊಂಡು ನೋವುಗಳನ್ನು ಮರೆಯುವ ಹೊತ್ತಿಗೆ ಇಸ್ರೇಲಿ ರಾಕೆಟುಗಳು ಮತ್ತೆ ಗಾಝಾದ ನೆಲವನ್ನು ತಲುಪಿರುತ್ತದೆ, ನಿರಂತರವಾಗಿ ಇದು ಹೀಗೆಯೇ ನಡೆದುಕೊಂಡು ಬಂದಿದೆ, ಇದು ಜಗತ್ತಿನ ಕಣ್ಣಿಗೆ ಮಣ್ಣೆರೆಚುವ ತಂತ್ರ ಅಷ್ಟೇ.


ಕ್ರೂರಿಗಳಾದ ಇಸ್ರೇಲಿಗರು ಕ್ರೂರತೆಯನ್ನೇ ಬಯಸುತ್ತಾರೆ, ಅವರು ಸಂತೋಷ ಪಟ್ಟುಕೊಂಡು ಗಾಝೀಗಳನ್ನು ಕೊಲ್ಲುತ್ತಾರೆ ಮತ್ತು ಭಾರತದಂತಹ ದೇಶಗಳನ್ನು ಇದನ್ನು ಖಂಡಿಸುತ್ತವೆ ಮತ್ತು ಕೆಲವರಿಗೆ ಗಾಝಾ ತಮ್ಮ ಪ್ರದರ್ಶನ ಹೆಚ್ಚಿಸಿಕೊಳ್ಳುವ ಸ್ವತ್ತಾಗುತ್ತದೆ, ಇನ್ನು ಕೆಲವರಿಗೆ ಗಾಝಾದ ಹೆಸರಿನಲ್ಲಿ ದುಡ್ಡು ಮಾಡಿಕೊಳ್ಳುವ ಉತ್ಸಾಹ, ಸತ್ಯದೊಂದಿಗೆ ಅಸತ್ಯವನ್ನು ಬೆರೆಯಿಸಿ ಮಾನವೀಯ ಮೌಲ್ಯಗಳಿರುವವರ ಜೇಬಿಗೆ ಕತ್ತರಿ ಹಾಕಿ ಗಾಝಾವನ್ನು ಸ್ವಂತಿಕೆಗೆ ಬಳಸಿಕೊಳ್ಳುತ್ತಾರೆ, ಹೀಗೆ ಬಳಸಿಕೊಳ್ಳುವವರು ಗಾಝಾದಲ್ಲಿ ಬಲಿಯಾದ ಮುಗ್ದ ಮಕ್ಕಳನ್ನು, ತಂದೆಯಂದಿರನ್ನು, ಯುವಕರನ್ನು, ವಿಧವೆಯರಾದ ಮಹಿಳೆಯರನ್ನು ಮರೆಯದಿರಲಿ.

ನಮ್ಮವರು ಮರಣ ಹೊಂದಿದಾಗ ನಮಗೆ ವೇದನೆ ಆಗುವುದಾದರೆ ಗಾಝಾದ ಮುಗ್ದ ಮಕ್ಕಳು ಕ್ರೂರವಾಗಿ ಬಲಿಯಾಗುವಾಗ ಕೂಡಾ ಅ ನೋವು ನಮಗಾಗಲಿ, ಆಸ್ಪತ್ರೆಯಲ್ಲಿ ನರಲಾಡುವ ನಮ್ಮ ಸ್ನೇಹಿತನ್ನನ್ನು ನೋಡುವಾಗ ನಮಗಾಗುವ ನೋವು ಪ್ಯಾಲೆಸ್ತೀನಿನ ಮನುಷ್ಯ ಮಕ್ಕಳು ಆಸ್ಪತ್ರೆ ಸೇರಿ ನರಲಾಡುವಾಗ ಅದೇ ಅನುಕಂಪ ಅವರ ಮೇಲೆ ಕೂಡಾ ಬರಲಿ,ಇದು ಮನುಷ್ಯತ್ವಕ್ಕೆ ಸಂಬಂಧಿಸಿದ ವಿಚಾರ, ನೋವು ಅರ್ಥವಾಗುವ ಪ್ರತಿಯೊಬ್ಬನಿಗೂ ನೋವಾಗಬೇಕಾದ ವಿಚಾರ,  ಜಗತ್ತಿನಾದ್ಯಂತ  ಈ  ಕ್ರೌರ್ಯದ ವಿರುದ್ದ  ಪ್ರಶ್ನಿಸುವ ಹೋರಾಟಗಳು ನಡೆಯಲಿ, ನಮ್ಮ ಭಾರತದಲ್ಲೂ ದೇಶದ ಕಾನೂನಿನ ಚೌಕಟ್ಟಿನೊಳಗೆ ನೋವನ್ನು ಅರ್ಥ ಮಾಡಿಕೊಂಡ ಪ್ರತಿಯೊಬ್ಬರೂ ಪ್ಯಾಲೆಸ್ತೀನಿಗರ ಪರವಾಗಿ ಒಂದಾಗಿ ದ್ವನಿಯೆತ್ತಲಿ, ವಾಸ್ತವಿಕತೆಯ ಚಿತ್ರಣ ಜನರಿಗೆ ಅನಾವರಣವಾಗಲಿ.



ಪ್ಯಾಲೆಸ್ತೀನಿಗರ ಪರವಾಗಿ ಜಗತ್ತು ಬೆಂಬಲವಾಗಿ ನಿಲ್ಲಲಿ, ಅಕ್ರಮಿಗಲು ಸದಾ ಅಕ್ರಮಿಸಲ್ಪಡುವುದಿಲ್ಲ, ದ್ವನಿಯೆತ್ತುವವರು ಜೊತೆ ಸೇರಿದಾಗ ಆಕ್ರಮಣ ನಿಲ್ಲುತ್ತದೆ ಈ ಮಾತನ್ನು ಒಗ್ಗಟ್ಟಾಗಿ ಎಲ್ಲರು ಜಗತ್ತಿಗೆ ತೋರಿಸಲಿ, ನಮ್ಮದೇ ಕಾರ್ಯಕ್ರಮಗಳನ್ನು ನಿಲ್ಲಿಸುವ ನಾವುಗಳು ಅವರಿಗಾಗಿ ಒಂದಾಗೋಣ ಆ ದೇಶದ ಮಕ್ಕಳು ಶಾಂತಿಯುತವಾಗಿ ಜೀವಿಸುವಲ್ಲಿ ನಮ್ಮ ಪ್ರಯತ್ನ ಕೂಡಾ ಇರಲಿ, ದುಡ್ಡು ಸಂಪಾದಿಸುವದಕ್ಕಾಗಿ, ಬಾವುಟಗಳನ್ನು ಪ್ರದರ್ಸಿಸುವುದಕ್ಕಾಗಿ ಹೆಸರಾಗಿ ಬಲಿಯಾದ ಕೂಟದಲ್ಲಿ ಗಾಝಾ ಸೇರದಿರಲಿ. 

No comments: