Friday, August 22, 2014

ಕಳೆದುಕೊಳ್ಳುವ ದಿನಗಳಲ್ಲಿ (ಲೇಖನ)



ಅತಿ ಹಚ್ಚಿ ಲಾಭ ಗಳಿಸುವ ಉದ್ದೇಶಕ್ಕಾಗಿಯೇ ಕೆಲವು ಸೀಸನ್ ವ್ಯಾಪಾರಗಳಿರುತ್ತದೆ, ಅದೇ ರೀತಿ ನಮ್ಮ ದೇಶದಲ್ಲಿ ಭಾಷಣಕಾರರ ಹೊಸ ಸರಕಾರ ಅಧಿಕಾರಕ್ಕೆ ಬರುತ್ತದೆ ಎನ್ನುವಾಗ ಹಲವರು ತಾತ್ಕಾಲಿಕ ಹೊಸ ವ್ಯಾಪಾರವನ್ನು ನಡೆಸಿ ಲಾಭ ಗಳಿಸುವ ಚಿಂತನೆ ನಡೆಸುತಿದ್ದರು, ಹಲವರು ಹಲವು ರೀತಿಯ ವ್ಯಾಪಾರದಲ್ಲಿ ತೊಡಗಿಕೊಂಡರು, ತರ ತರದ ಸಿಹಿ ತಿಂಡಿ ತಯಾರಿಸುವ ವ್ಯಾಪಾರದ ಐಡಿಯಾದಿಂದ ಹಿಡಿದು ಪಟಾಕಿ ವ್ಯಾಪಾರದವರೆಗೆ ತಮ್ಮದೇ ರೀತಿಯಲ್ಲಿ ಯೋಚಿಸತೊಡಗಿದರು ಆದರೆ ಇದರ ನಡುವೆ ಭಾಷಣ ಸ್ವಲ್ಪ ಹೆಚ್ಚಾಗಿಯೇ ತಲೆಗೆ ಹಚ್ಚಿಕೊಂಡ ವ್ಯಾಪಾರಿಯೊಬ್ಬ ಗೋಣಿ ಚೀಲ ತಯಾರಿಸುವ ಯೋಚನೆ ಮಾಡಿದ!

ಭಾಷಣಕಾರರ ಹೊಸ ಸರಕಾರ ಅಧಿಕಾರಕ್ಕೆ ಬರುವುದಕ್ಕೂ ಈ ಗೋಣಿ ಚೀಲ ವ್ಯಾಪಾರಕ್ಕೂ ಏನು ಸಂಬಂದ? ಭಾಷಣವನ್ನು ಆಳವಾಗಿ ನಂಬಿದ್ದ ವ್ಯಾಪಾರಿಯೊಬ್ಬ ಸಂಬಂದ ಕಲ್ಪಿಸಿಕೊಂಡಿದ್ದ ಮತ್ತು ಬಲು ಜೋರಾಗಿಯೇ ತನ್ನ ಹೊಸ ವ್ಯಾಪಾರಕ್ಕೆ ಕೈ ಹಾಕಿದ್ದ,  ಭಾಷಣಕಾರರು ಅಲ್ಲಲ್ಲಿ ಆಗಾಗ್ಗೆ ಕಿರುಚಾಡುತಿದ್ದ ವಿಷಯಗಳ ಮೇಲೆ ಹಲವರು ತಮ್ಮ ವ್ಯಾಪಾರ ಆರಂಬಿಸಿದ್ದರು ಆದರೆ ಗೋಣಿ ಚೀಲ ತಯಾರಿಸಲು ಹೊರಟ ವ್ಯಾಪಾರಿಗೆ ಸ್ವಿಸ್ ಬ್ಯಾಂಕಿನ ಕಥೆ ಪದೇ ಪದೇ ಕೇಳುತಿತ್ತು, ಹೊಸ ಸರಕಾರ ಸ್ಥಾಪಿಸಲು ಹೋರಾಟ ವಕ್ತಾರರು ಆಗಾಗ್ಗೆ ನಾವು ಸ್ವಿಸ್ ಬ್ಯಾಂಕಿನಿಂದ ದುಡ್ಡು ತರುತ್ತೇವೆ ಎಂದು ಬೊಬ್ಬಿಡುತ್ತಿದ್ದ ಮತ್ತು ಗಂಟೆ ಗಟ್ಟಲೆ ಕೊರೆಯುತ್ತಿದ್ದ ವಿಚಾರ ಇವನಲ್ಲಿ ಹೊಸ ವ್ಯಾಪಾರದ ಲಾಭದ ಆಶಾಭಾವನೆ ಮೂಡಿಸಿತ್ತು. ಆದಷ್ಟು ಬೇಗ ಭಾರತಕ್ಕೆ ತರುತ್ತೇವೆ ಎಂದು ಹೇಳಿದಾಗ ಈತನ ವ್ಯಾಪಾರಿ ಮನಸ್ಸು ಜಾಗೃತವಾಗಿತ್ತು!

ಈ ಬಿಸಿನೆಸ್ ಐಡಿಯ ಹೊಳೆಯಲು ಕಾರಣ ಸುಲಭದಲ್ಲಿ ಲಾಭ ಗಳಿಸುವ ಯೋಚನೆ ಮತ್ತು ಅದಕ್ಕಿಂತ ಹೆಚ್ಚಾಗಿ ಕೇಳಿದ ಭಾಷಣದ ಬಗ್ಗೆ ಆತನಿಗಿದ್ದ ನಂಬಿಕೆ, ಸ್ವಿಸ್ ಬ್ಯಾಂಕಿನಿದ ತರಬೇಕಾಗಿರುವುದು ಕೋಟಿ ಗಟ್ಟಲೆ ದುಡ್ಡು ಅದನ್ನು ಹಾಗೆಯೇ ತರಲಾಗದು ಹೇಗಿದ್ದರೂ ಗೋಣಿ ಚೀಲದಲ್ಲಿ ತುಂಬಿ ತರಬೇಕು ಮತ್ತು ಆ ದುಡ್ಡಿನಲ್ಲಿ ಇಡೀ ದೇಶದ ವ್ಯವಸ್ಥೆಯನ್ನೇ ಬದಲಾಯಿಸಲು ಸಾದ್ಯ ಎಂದು ಪದೇ ಪದೇ ಕೇಳಿ ತಿಳಿದುಕೊಂಡಿದ್ದ ಮತ್ತು ಅದರ ಫಲವಾಗಿ ಅಲ್ಲಿರುವ ದುಡ್ಡಿನ ರಾಶಿಯ ಬಗ್ಗೆ ಅರಿತುಕೊಂಡಿದ್ದ ಅ ದುಡ್ಡಿನಿಂದ ಇಲ್ಲಿನ ಬಡತನ, ಹಸಿವಿನ ಸಮಸ್ಯೆ ಮುಕ್ತವಾಗುತ್ತದೆ ಮತ್ತು ಅದು ಭಾರತಕ್ಕೆ ತಕ್ಷಣವೇ ಬರುತ್ತದೆ ಎಂದು ನಂಬಿ ಪೆದ್ದು ಆದುದರಲ್ಲಿ ಇತನೂ ಒಬ್ಬ.

ಕೋಟಿ ಗಟ್ಟಲೆ ದುಡ್ಡು ತರುವಾಗ ಅದನ್ನು ಸುಮ್ಮನೆ ತರಲಾಗುಗುವುದಿಲ್ಲ ಆದ್ದರಿಂದ ಅತ್ಯುನ್ನತ ಶೈಲಿಯ ಗೋಣಿ ಚೀಲಗಳನ್ನು ತಯಾರಿಸಿ ಕೊಡುವ ಬಗ್ಗೆ ಚಿಂತಿಸಿ ಅದನ್ನು ತಯಾರಿಸಿಟ್ಟಿದ್ದ, ವ್ಯಾಪಾರಿ ಗೋಣಿ ಚೀಲಗಳನ್ನು ತಯಾರಿಸಿಟ್ಟು ವ್ಯಾಪಾರಕ್ಕಾಗಿ ಕಾಯುತಿದ್ದಾಗ ಸಾಮಾನ್ಯ ರಾಜಕಾರಣಿಯಂತೆ ಉದ್ದುದ್ದ ಭಾಷಣ ಮಾಡಿದ ವ್ಯಕ್ತಿಗಳ ಉನ್ನತಿಯ ನಾಯಕನೊಬ್ಬ ವ್ಯಾಪಾರಿ ತಲೆ ಮೇಲೆ ಕೈ ಇಡುವಂತೆ ಮಾಡಿದ್ದ, ಸ್ವಿಸ್  ಬ್ಯಾಂಕಿನಿಂದ ರಾಶಿ ರಾಶಿ ದುಡ್ಡನ್ನು ಗೋಣಿ ಚೀಲದಲ್ಲೊ  ಅಥವಾ ಇನ್ಯಾವುದರಲ್ಲೋ ತುಂಬಿಸುವುದು ಬಿಡಿ ಅಲ್ಲಿ ಭಾರತೀಯರ ಖಾತೆಯೇ ಇಲ್ಲ ಎಂದು ತಲೆ ಗಿರ್ರನೆ ತಿರುಗುವಂತೆ ಬಹಳ ನಯವಾಗಿ ವಿವರಿಸಿದ್ದರು ಈತ ನಂಬಿದ್ದ ಭಾಷಣಕಾರ.

ಸದ್ಯಕ್ಕಂತೂ ವೋಟು ಹಾಕಿದ ಮತದಾರನನ್ನು ಬದಲಾವಣೆಯ ಭಾಷಣ ಬಾಯಿ ಮುಚ್ಚಿ ಹಾಕಿಸಿದೆ ಆದರೆ ಈ ಗೋಣಿ ಚೀಲ ತಯಾರಿಸಿದವನು ವೇದಿಕೆಯ ಮೇಲೆ ಹತ್ತಿ ಇವನ ಗೋಣಿ ಚೀಲ ವ್ಯಾಪಾರಕ್ಕೆ ಉತ್ತೇಜನ ನೀಡಿದವರನ್ನು ಸಮಯ ಸಿಕ್ಕರೆ ಅದೇ ಗೋಣಿ ಚೀಲದೊಳಗೆ ತುರುಕಿಸಿ ಒಂದು ನಾಲ್ಕು ಬಾರಿಸಬೇಕು ಎಂದು ಹುಡುಕಾಡುತಿದ್ದಾನೆ, ಭಾಷಣ ಭಾಷಣವಾಗಿ ಉಳಿಯುವ ಹಂತದಲ್ಲಿ ವ್ಯಾಪಾರಿಯೊಬ್ಬ ಶಪಿಸುತ್ತಾ ನಡೆದಾಡುತಿದ್ದಾನೆ, ಭಾರವಾದ ಹೆಜ್ಜೆಗಳನ್ನಿಡುತ್ತಿದ್ದಾನೆ. ಗೋಣಿ ಚೀಲ ವ್ಯಾಪಾರಿ ಭಾಷಣ ಕೇಳಿ ಅದನ್ನು ನಂಬಿ ಸ್ವತಹ ಕೆಟ್ಟಿದ್ದಾನೆ ಅದರ ನಡುವೆ ಇನ್ನು ಹಲವರು ಭಾಷಣವನ್ನು ಕೇಳುತ್ತಾ ಚಪ್ಪಾಳೆ ತಟ್ಟಿ ಮುಂದೊಂದು ದಿನ ವ್ಯಾಪಾರಿಯ ಹಾಗೆ ಎಲ್ಲವನ್ನು ಕಳೆದುಕೊಳ್ಳುವ ದಿನಗಳಿಗಾಗಿ ಕಾಯುತಿದ್ದಾರೆ.


No comments: