Sunday, August 3, 2014

ಫೇಕುಗಳಿಗೆ ದಾರಿಯಾಗುತ್ತಿರುವ ನಮ್ಮ ಕುತರ್ಕಗಳು (ಲೇಖನ)






ಅಸಮಾಧಾನ ಗೊಂಡವರನ್ನು ಸಮಾಧಾನ ಪಡಿಸುವಲ್ಲಿ ಕಾಲ ಕಳೆಯುವ ನಾವುಗಳು ಕಾರಣಗಳಿಲ್ಲದೆ ಕೆಲವು ಬಾರಿ ನೈತಿಕ ಪೋಲಿಸ್ ಗಿರಿಗೆ ಬಲಿಯಾಗುತಿದ್ದೇವೆ, ಆಯುಧಗಳೊಂದಿಗೆ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯದೊಂದಿಗೆ ಮನಸ್ಸಿನಲ್ಲಿ ಗುಮ್ಮವನ್ನಿಟ್ಟು ಆ ದಾರಿಯಲ್ಲಿ ಸಾಗುತ್ತಿದ್ದ ಒಂದು ಯುವ ಪಡೆ ಕಾನೂನಿನ ಕಣ್ಣಿಗೆ ಬಿದ್ದು ಜೈಲು ಕಂಬಿ ಎನಿಸಿದ್ದಲ್ಲದೆ  ಹಲವು ಅಮಾಯಕರು ಜೈಲಿನ ಕಂಬಿಗಳ ಹಿಂದೆ ಬಂದಿಯಾಗುವ ವ್ಯವಸ್ಥೆ ರೂಪಿತವಾಗಿದೆ, ಕ್ರಾಸ್ ರೂಟಿನಲ್ಲಿ ದೇವನ ಬಲಿ ವಿಜಯ
 ಸಾಧಿಸಬಹುದೆಂದು ಹಾತೊರೆಯುವವರು ಅಲ್ಲಲ್ಲಿ ಬೆಳೆದು ಬರುತಿದ್ದಾರೆ.

ಹಲವು ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ನಿರಂತರ ನಡೆಸಿ ಸಂಘಟಿಸಲು ಪ್ರಯತ್ನಿಸಿ ನಾವೊಂದು ಸೋತು ಹೋದ ಸಮುದಾಯವಾಗಿದ್ದೇವೆ, ಒಂದಾಗಬೇಕು ಎಂದು ಸೇರಿದವರಲ್ಲಿ ಹೆಚ್ಚಿನವರು ಬೇರೆ ಬೇರೆಯಾಗಿದ್ದಾರೆ, ತರ್ಕಗಳು ನಡೆದಿದ್ದರೆ ಅದು ಸಮಾಜದ, ಸಮುದಾಯದ ಬದಲಾವಣೆಗೆ ಫಲಪ್ರದ ಕಾರಣವಾಗುತ್ತಿತ್ತು, ಆದರೆ ನಡೆದಿರುವ ಕುತರ್ಕಗಳ ಫಲವಾಗಿ ವ್ಯವಸ್ಥೆ ಚಿನ್ನಬಿನ್ನವಾಗಿ ವ್ಯವಸ್ಥೆಯನ್ನು ಸರಿಪಡಿಸದ ದಾರಿಯತ್ತ ಸಾಗಿದ್ದೇವೆ, ಒಂದು ದುರವಸ್ಥೆಯ ಎಲ್ಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದೇವೆ.
ಆಡಂಬರ ಬೇಡ ಎಂದವರಂತು ತೆರೆಮರೆಯಲ್ಲಿ ಆಡಂಬರದ ಜೊತೆ ಒಗ್ಗೂಡಿ ತಲೆಮರೆಸಿಕೊಂಡು ಓಡಾಡುವ ಪರಿಸ್ಥಿತಿ ಇದೆ, ತಮ್ಮ ಅಭಿಪ್ರಾಯಗಳನ್ನು ಮೆಚ್ಚದಿದ್ದಾಗ ತಾವೇ ಒಂದು ಅಭಿಪ್ರಾಯವಾಗಿ ಬೆಳೆಯುವ ನಡೆ ಸಮುದಾಯಕ್ಕೆ ಮಾರಕವಾಗಿದೆ, ಇದೆಲ್ಲದಕ್ಕಿಂತ ಬದಲಾವಣೆಯ ದಾರಿ ಇನ್ನು ಕೂಡಾ ತೆರೆದೇ ಇದೆ ಎನ್ನುವುದನ್ನು ಮರೆಯಬಾರದು.

ಜಗತ್ತಿಗೆ ಜೀವನದ ಒಂದು ಪರಿಪೂರ್ಣ ವ್ಯವಸ್ಥೆಯನ್ನು ತೋರಿಸಿ ದೇವಮಾರ್ಗದಲ್ಲಿ ಜೀವುಸುವಂತೆ ಬದಲಾವಣೆಯ ಪರಿಕಲ್ಪನೆಯ ವ್ಯವಸ್ಥೆಯಲ್ಲಿ ಜಗತ್ತನ್ನೇ ಶೇಕ್ ಮಾಡಿದ್ದ ಇಸ್ಲಾಮಿನಲ್ಲಿ ಕೆಲವು ನಾಮಧಾರಿಗಳು ಫೇಕುಗಳಾಗಿ ಪರಿವರ್ತನೆಯಾಗಿದ್ದಾರೆ, ಅಲ್ಲಲ್ಲಿ ಫೇಕುಗಳು ತುಂಬಿ ಹೋಗಿದ್ದಾರೆ, ನಮ್ಮವರಲ್ಲಿ ಫೇಕುಗಳು ತುಂಬಿ ಹೋಗಿ ಸಚ್ಚಾರಿತ್ರ್ಯ ಪರಿಕಲ್ಪನೆ ಸ್ವಾರ್ಥಕ್ಕೆ ಬಲಿಯಾಗುತ್ತಿದೆ, ಫೇಕುಗಳನ್ನು ಬೆಂಬಲಿಸಿ ನಾವು ಇನ್ನಷ್ಟು ಫೇಕುಗಳು ಬೆಳೆದು ಬರಲು ದಾರಿಯಾಗಿದ್ದೇವೆ, ನಮ್ಮ ತರ್ಕ ಮತ್ತು ಕುತರ್ಕಗಳು ಒಂದು ಸುಂದರ ಇಸ್ಲಾಮಿ ಕಲ್ಪನೆಯನ್ನು ಬಲಿಪಸು ಮಾಡಿರುವುದು ವಿಪರ್ಯಾಸ.   

No comments: