Wednesday, August 6, 2014

ಸಮಸ್ಯೆಗಳನ್ನು ಸೃಸ್ಟಿಸುವ ಕೊಳವೆ ಬಾವಿ ದುರಂತ (ಲೇಖನ)



ಮಗುವೊಂದು ಕೊಳವೆ ಬಾವಿಗೆ ಬಿದ್ದು ಅದು ಬಲು ದೊಡ್ಡ ದುರಂತವಾಗೋದು ಸಹಜ, ಅಲ್ಲಿ ಕೆಲವು ಮಾನವ ನಿರ್ಮಿತ ಉಪಕರಣಗಳ ರಿಹರ್ಸಲ್ ನಡೆಯುವುದು ಕೂಡಾ ಇತ್ತೀಚೀಗೆ ತೀರಾ ಸಾಮಾನ್ಯ, ಹಲವು ಉಪಕರಣಗಳಿಂದ ಆಳವಾದ ಗುಂಡಿ ತೊಡಲು ಸಹಕಾರಿ ಆಗಿದೆಯಾದರೂ ಕೊಳವೆ ಬಾವಿ ದುರಂತಕ್ಕೆಂದೇ ತಯಾರಿಸಿದ ಉಪಕರಣಗಳು ಕೈ ಕೊಟ್ಟು ಹಲವು ಜೀವಗಳು ಬಲಿಯಾಗಿದೆ ಎನ್ನುವುದು ಗಮನಿಸಬೇಕಾದ ವಿಚಾರ. ಮುನ್ನೆಚ್ಚರಿಕೆ ಇಲ್ಲದ ಸಲುವಾಗಿ ಆಗಾಗ್ಗೆ ಕೊಳವೆ ಬಾವಿ ದುರಂತಗಳು ಅಲ್ಲಲ್ಲಿ ನಡೆಯುತ್ತಿದೆ! ಬಿದ್ದ ನಂತರ ರಾತ್ರಿ ಹಗಲು ಎನ್ನದೆ ಅದರ ಹಿಂದೆ ಶ್ರಮ ವಹಿಸಿ ಮಕ್ಕಳನ್ನು ಬಲಿಮಾಡುವುದಕ್ಕಿಂತ ಕಠಿಣ ಕಾನೂನು ತಂದರೆ ಹಲವು ಪೋಷಕರ ಕಣ್ಣುಗಳಲ್ಲಿ ಕಣ್ಣೀರು ತರಿಸುವುದನ್ನು ನಿಲ್ಲಿಸಬಹುದು, ಬಿದ್ದ ಮೇಲೆ ಹಲವು ಲಕ್ಷ ರೂಪಾಯಿಗಳನ್ನು ಜಿಲ್ಲಾಡಳಿತ ವ್ಯಯಿಸುವುದನ್ನು ನಿಲ್ಲಿಸಬಹುದು.
ಸದ್ಯಕ್ಕೆ ತಿಮ್ಮಣ್ಣ ಅವರ  ತಂದೆ ಹನುಮಂತ ಅವರು ಒಂದು ಹೊಸ ಸಮಸ್ಯೆಯನ್ನು ಎತ್ತಿ ಹಿಡಿದಿದ್ದಾರೆ, ಕೊಳವೆ ಬಾವಿ ದುರಂತದ ನಂತರ ತನ್ನ ಮಗನ್ನನ್ನು ಕಳೆದುಕೊಳ್ಳುವ ಭೀತಿಯೊಂದಿಗೆ ತನ್ನ ಹೊಲ ನಾಶವಾಗಿ ತಾನು ಮಾಡಿದ ಸಾಲ ತೀರಿಸಲಾರೆ ಎನ್ನುವ ಗೋಜಿನಲ್ಲಿದ್ದಾರೆ, ಏನಿದ್ದರೂ ಇದು ಅವರ ನಿಜ ಸಮಸ್ಯೆಯು ಹೌದು ಎಲ್ಲ ರಿಹರ್ಸಲ್ ಗಳು ನಡೆದು ಕಾರ್ಯಾಚಾರಣೆ ಕೊನೆಗಂಡ ನಂತರ ಅತ್ತ ಕಡೆ ತಿರುಗಿ ನೋಡುವವರು ಯಾರೂ ಇಲ್ಲ ಆ ಮೇಲೆ ಅವರ ಪಾಡು ಕೇಳುವವರು ಯಾರೂ ಇಲ್ಲ, ಹೌದು ತಿಮ್ಮಣ್ಣ ಅವರು ಹೇಳುವುದು ಕೂಡಾ ಇದನ್ನೇ ಒಂದು ಮಗು ಕೊಳವೆ ಬಾವಿಯ ಆಳದಲ್ಲಿ ಸಿಲುಕಿರುವ ಸಮಯದಲ್ಲಿ ತನ್ನ ಇನ್ನಿಬ್ಬರು ಮಕ್ಕಳ ಭವಿಷ್ಯಕ್ಕಾಗಿ ಕಾರ್ಯಾಚರಣೆ ನಿಲ್ಲಿಸಿ ಎಂದು ಅಂಗಲಾಚುತಿದ್ದಾರೆ, ಮಗು ಕೊಳವೆ ಬಾವಿಗೆ ಬಿದ್ದದ್ದು ದುರಂತವಾದರೆ ಅವರ ಈ ಪೇಚಾಟ ಅದಕ್ಕಿಂತಲೂ ದೊಡ್ಡ ದುರಂತ ಅನ್ನುವುದು ಖೇದಕರ, ಸರಕಾರ ಆದಷ್ಟು ಬೇಗ ತೆರೆದ ಎಲ್ಲ ಕೊಳವೆ ಬಾವಿಯನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಿ ಆ ಮೂಲಕ ಇನ್ನಾದರೂ ಕೂಡಾ ಮಗುವನ್ನು ಕಳೆದುಕೊಳ್ಳುವ ಭೀತಿಯೊಂದಿಗೆ ಭವಿಷ್ಯವನ್ನು ಕಳೆದುಕೊಳ್ಳುವ ಭೀತಿ ಯಾರಿಗೂ ಬಾರದಿರಲಿ.

No comments: