Sunday, August 31, 2014

ಶಾಂತಿ ಎಂಬ ಪ್ರತೀಕಾರದ ಯೋಚನೆ ಯುವಕರಲ್ಲಿ ಬೆಳೆದು ಬರಲಿ


ಕತ್ತಿ ಲಾಂಗು ಹಿಡಿದು ಹೋರಾಡಿ ದೇವನ ಬಳಿ ಸಂಪ್ರೀತಿ ಗಳಿಸಬಹುದೆಂದು ಅಡ್ಡ ದಾರಿ ಹಿಡಿದು ಅದನ್ನೇ ದೇವ ಸಂಪ್ರೀತಿ ಎಂದು ತಿಳಿದರೆ ಅದು ತಿಳಿದವನ ತಪ್ಪೇ ಹೊರತು ಧರ್ಮದ ಆಶಯವಲ್ಲ, ಧರ್ಮವನ್ನು ಸರಿಯಾಗಿ ಅರಿತವನಿಗೆ ಕತ್ತಿ ಲಾಂಗು ಇಲ್ಲದೆಯೇ ತನ್ನ ಧರ್ಮದ ಉಳಿವಿಗೆ ಪ್ರಸಕ್ತ ಕಾಲದಲ್ಲಿ ಹೋರಾಡಬಹುದು. ಕಾಲಘಟ್ಟದಲ್ಲಿ ಜಿಹಾದಿನ ನಿಜ ಅರ್ಥವನ್ನು ಜಗತ್ತಿಗೆ ಪರಿಚಯಿಸಬೇಕಾಗಿದೆ, ಭಾರತದಂತಹ ಪ್ರಜಾಪ್ರಬುತ್ವ ದೇಶದಲ್ಲಿ ಸಮರ್ಥ ಧರ್ಮ ಹೋರಾಟಗಾರರ ಅಗತ್ಯವಿದೆ, ಧರ್ಮದ ಉಳಿವಿಗೆ ಅಧರ್ಮದ ದಾರಿ ಹಿಡಿದವನು ಧರ್ಮೀಯ ಆಗಲಾರ ಮತ್ತು ದೇವನ ಬಳಿ ಯಾವ ಸ್ತಾನವನ್ನು ಗಿಟ್ಟಿಸಿಕೊಳ್ಳಲಾರ. ಸ್ವಂತ ವಿಚಾರಗಳಿಗೆ ಧರ್ಮದ ಚಹರೆಯನ್ನು ಬಳಸಿ ಹೊಟ್ಟೆ ಹೊರೆಯುವ ವ್ಯಕ್ತಿತ್ವಗಳಿಂದ ಯುವಕರು ದೂರವಿರಬೇಕಾಗಿದೆ, ಶಾಂತಿ ಅರಿತ ಒಂದು ಯುವ ಪಡೆ ಹಲವು ಮನಸ್ಸುಗಳನ್ನು ಗೆಲ್ಲಬಹುದಾಗಿದೆ, ಪ್ರತೀಕಾರವೂ ಕೂಡಾ ಒಡೆದ ಮನಸ್ಸನ್ನು ಗೆಲ್ಲುವ ಶಾಂತಿ ಮಂತ್ರವಾಗಿರಬೇಕು, ಶಾಂತಿ ಎಂಬ ಮಂತ್ರವನ್ನು ಲಾಂಗು ಕತ್ತಿ ಆಗಿ ಬಳಸಿಕೊಂಡಾಗ ಶಾಂತಿ ಪ್ರಖರತೆಯನ್ನು ಪಡೆದುಕೊಳ್ಳುತ್ತದೆ ಮತ್ತು ಕತ್ತಿ ಲಾಂಗುಗಳಿಗೆ ಕೆಲಸವಿಲ್ಲವಾಗುವುದು ಖಂಡಿತ. ಶಾಂತಿಯ ನೆಲೆಯಲ್ಲಿ ಇಸ್ಲಾಮಿ ನಡೆಯಲ್ಲಿ ಯುವಕರ ಆಲೋಚನೆಗಳು ಹೆಚ್ಚು ಹೆಚ್ಚುಬೆಳೆದು ಬರಲಿ.  

No comments: