Tuesday, April 29, 2014

ದೇವನ ಉತ್ತರ (ಚುಟುಕ)




ಅಮೇರಿಕಾದ ದುಷ್ಟನ ಮೇಲೆ ಸೇಡು ತೀರಿಸಬೇಕಿದ್ದರೆ,  
ಅಮೇರಿಕಾದ ಮಡಿಲಿಗೆ ಹೋಗುವ ಕಾಲವೊಂದಿತ್ತು.   

ದುಷ್ಟನು ಅನುಭವಿಸಿಯೇ ತೀರುವನೆಂಬ ಯಾದರ್ಷಿಕ ಮಾತೆಸ್ಟು ಸರಿ,
ಭೂಮಿಯಲ್ಲಿ ಕ್ಷೋಬೆ ಮಾಡಿದ ಪಾಪಿಗಳ ಪಾಪಕ್ಕೆ ಉತ್ತರ ಸಿಗಲೇಬೇಕು. 

ಬುಶ್'ನ ಆಡಳಿತ ಮುಗಿದಾಗ ಒಬಾಮ ಆಸರೆಯಾಗುವರು ಎನ್ನಲಾಯಿತು,
ಇಬ್ಬರ ಆದರ್ಶ ಒಂದೇ ಎಂದು  ಅಧಿಕಾರ ಹಿಡಿದ ನಂತರ ಗೊತ್ತಾಯಿತು. 
 
ಕೊನೆಯದಾಗಿ ಕೇಳಿ, ಮರ್ದಿತರ ರೋಧನೆ ನಿಮ್ಮನ್ನು ಬಿಡದು,
ಪಾಪಿಗಳಿಗೆ ಪ್ರಕೃತಿಯ ಏರುಪೇರೇ ದೇವನ ಉತ್ತರ. 

ದೇವ ಸಂಪ್ರೀತಿ (ಚುಟುಕ)






ಕತ್ತಲಲ್ಲಿ ದಾರಿ ಕಾಣದಾಯಿತು....

ಬೆಳಕಿನಲ್ಲಿ ಹೊಂಡ ಎದುರಿಗಿತ್ತು....


ಮರಣ ನನ್ನ ಸಮೀಪವೇ ಇತ್ತು .....

ಅದೇ ಕ್ಸಣ ಆಯುಸ್ವವೂ ಗಟ್ಟಿ ಇತ್ತು...


ಜೀವನದಲ್ಲಿ ಮಾಡಿದ ಪುಣ್ಯ ಕಾರ್ಯವೇನೂ ಇಲ್ಲವಾಗಿತ್ತು....

ಸಾವನ್ನಪ್ಪಿದ್ದರೆ ಪರಲೋಕದಲ್ಲಿ ನನ್ನ ಅವಸ್ತೆ ಏನಾಗಿರುತ್ತಿತ್ತು?...


ಇಷ್ಟಕ್ಕೆ ಸತ್ಕರ್ಮವೊಂದೆ ನನ್ನ ಗುರಿಯಾಗಿತ್ತು....

ದೇವನ ಪ್ರೀತಿಯ ಅರಿವು ನನಗಾಗಿತ್ತು....


Thursday, April 24, 2014

ಪಟ್ಟಿಯಲ್ಲಿ ಸೇರಿಕೊಂಡೆಯಾ "ಕಬೀರ್" (ಚುಟುಕ)


"ಕಬೀರ್" ಅಮಾನುಷವಾಗಿ ಮಾರ್ಗ ಮಧ್ಯೆ ನೀನು ಕೊಲೆಯಾದೆ, 
ಹೆತ್ತವರ ಜೊತೆ ಕೂಡಿ ಸಾವಿರಾರು ಕಣ್ಣುಗಳಲ್ಲಿ ನೀನು ಕಣ್ಣೀರಾದೆ.  

ಪ್ರತಿಭಟನೆ, ಪತ್ರಿಕಾಗೋಷ್ಠಿ, ಮನವಿಗಳಲ್ಲಿ ನೀನು ಹೆಸರಾದೆ, 
ಕೋಮುವಾದಿಗಳ ಅಟ್ಟಹಾಸಕ್ಕೆ ಕ್ರೂರವಾಗಿ ನೀನು ಬಲಿಯಾದೆ. 

ನಿನ್ನೆದೆಗೆ ನಾಟಿದ ಗುಂಡಿನ ನೋವಿನಿಂದ ಮೆಲ್ಲಗೆ ನಮ್ಮಿಂದ ನೀನು ಮರೆಯಾದೆ? 
ಈ ಮುಂಚೆ ಅಟ್ಟಹಾಸಕ್ಕೆ ಬಲಿಯಾದವರ ಪಟ್ಟಿಗೆ ನೀನು ಕೂಡಾ ಸೇರಿಹೋದೆ?

ನಿನ್ನ ನೋವಿನ ಅಕ್ರೋಶ ನಮಗೆ ಕೆಲವು ದಿನಗಳ ಮಟ್ಟಿಗೆ ಮಾತ್ರ "ಕಬೀರ್"
ಕ್ಷಮಿಸಿ ಬಿಡು ಇನ್ನೊಂದು ಕೊಲೆಯಾದ ಮೇಲೆ ನೀನು ನಮಗೆ ನೆನಪಾಗಬಹುದು. 



Wednesday, April 23, 2014

"ಕಬೀರ್" ಕ್ಷಮಿಸಿ ಬಿಡು !! ನಿನಗೆ ನ್ಯಾಯ ಕೊಡಿಸುವುದಕ್ಕಿಂತ ಸಂಘಟನೆಗಳ ಬಲಪ್ರದರ್ಶನ ಮತ್ತು ಕಚ್ಚಾಟವೆ ನಮಗೆ ಮುಖ್ಯ !! (ಲೇಖನ)




"ಹಾಜಬ್ಬ ಹಸನಬ್ಬ" ಬೆತ್ತಲಾದ ಪ್ರಕರಣ, "ನೌಶಾದ್ ಖಾಸಿಮ್ಜಿ" ಹತ್ಯೆ ಮತ್ತು ಇಂತಹ ಹತ್ತು ಹಲವು ಕೊಲೆಗಳು, ದೌರ್ಜ್ಯನ್ಯಗಳು ಕರಾವಳಿ ಜಿಲ್ಲೆಯಲ್ಲಿ ನಡೆದಾಗ ಪ್ರಗತಿಪರರು, ಸಮುದಾಯದ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು, ಪತ್ರಿಕಾ ಹೇಳಿಕೆಯು ಕೊಟ್ಟಿತ್ತು ಮತ್ತು ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆಯುವ ಕಟ್ಟ ಕಡೆಯ ಕೊಲೆ ಇದು, ಇನ್ನೆಂದು ಅಮಾಯಕರ ಕೊಲೆ ನಡೆಯದು ನಾವು ಎಚ್ಚೆತ್ತುಕೊಂಡಿದ್ದೇವೆ ಎಂದು ಬೊಬ್ಬೆ ಇಟ್ಟಿದ್ದೆವು, ಪ್ರತಿಭಟನೆ, ಘೋಷನೆಗಳನ್ನು ಕೂಗಿದ್ದೆವು, ಸರಕಾರಗಳು "CID"  ತನಿಖೆ ಎಂದಾಗ "CBI" ತನಿಖೆ ನಡೆಸಬೇಕು ಎಂದು ಬೇಡಿಕೆ ಇಟ್ಟು ಕೆಲವು ದಿನ ಪ್ರತಿಭಟನೆ ನಡೆಸಿದೆವು, ಅಂದು ಕೆಲವು ದಿನ ಕಚ್ಚಾಟ ಮರೆತು ಒಂದಾಗಿಯೇ ಇದ್ದೆವು. ದಿನ ಕಳೆದಂತೆ ಪ್ರಕರಣ ಹಳೆಯದಾಯಿತು, ಎಲ್ಲರೂ ಮರೆತು ಬಿಟ್ಟರು, ಎಲ್ಲವನ್ನು ಮರೆತು ಅದೇ ಹಳೆಯ ಕಚ್ಚಾಟದಲ್ಲಿ, ಕೆಸೆರೆರೆಚಾಟದಲ್ಲಿ ತೊಡಗಿಕೊಂಡಿದ್ದೆವು.



ಈ ಹಿಂದೆ ನಡೆದ ಕೊಲೆಯೇ ಅಂತಿಮ ಕೊಲೆ ಎಂದು ನಂಬಿದ್ದವರಿಗೆ ಮುಂಜಾನೆಯ ಹೊತ್ತಿಗೆ ಆಘಾತದ ವಿಷಯವೊಂದು ಕಿವಿಗೆ ಬಿತ್ತು ಈ ಹಿಂದೆ ನಡೆದ ಎಲ್ಲ ಕೊಲೆಗಳಿಗಿಂತ ಭೀಕರವಾದ ಕೊಲೆ, ಬಜರಂಗಿ ಪ್ರಾಯೋಜಿತ  "ANF" ನ  ಅಮಾನವೀಯ ಕೃತ್ಯಕ್ಕೆ "ಕಬೀರ್" ಎನ್ನುವ ಮುಗ್ದ ಯುವಕ ತನ್ನ ಎದೆಯಲ್ಲಿ ಗುಂಡು ನಾಟಿಕೊಂಡು ಜಗತ್ತಿಗೆ ಹಲವು ಪ್ರಶ್ನೆಗಳನ್ನು ಬಿಟ್ಟು ಇಹಲೋಕ ತ್ಯಜಿಸಿದ್ದ. ವಾಹನ ನಿಲ್ಲಿಸಿದೆವು, ನಿಲ್ಲಿಸಲಿಲ್ಲ ಆ ಕೂಡಲೇ ನಾವು ನಮ್ಮ ತುಕ್ಕು ಹಿಡಿದ ಬಂದೂಕಿನಿಂದ ಹಾರಿಸಿದ ಗುಂಡು ಅವನ ಎದೆ ಸೀಳಿತು ಎಂದು "ANF" ನ ಅಧಿಕಾರಿಗಳು ಮತ್ತು ಪೋಲಿಸರಿಂದ ಹೇಳಿಕೆ ಕೂಡ ಬಂತು. ಘಟನೆಯ ಸ್ಥಳದಿಂದ ತಪ್ಪಿಸಿಕೊಂಡು ಬಂದು ಶಾಸಕರಲ್ಲಿ ನಡೆದ ಘಟನೆಯನ್ನು ವಿವರಿಸಿದವರು ಹೇಳಿದ ವಿವರೆಣೆಗು "ANF" ಪೊಲೀಸರು ಹೇಳಿದ ಹೇಳಿಕೆಗೆ ಯಾವುದೇ ಹೋಲಿಕೆ ಇರಲಿಲ್ಲ, ಬಜರಂಗಿ ಪ್ರಾಯೋಜಕತ್ವದ ಗುಂಡಾಗಳಿಗೆ ಸತ್ಯ ಹೇಳಲು ಗೊತ್ತಿಲ್ಲ ಬಿಡಿ.


ಅಷ್ಟೊತ್ತಿಗೆ  ಜಿಲ್ಲೆಯ ಪ್ರಗತಿಪರರಿಂದ, ಸಮುದಾಯದ ನಾಯಕರಿಂದ, ರಾಜಕೀಯ ನೇತಾರರಿಂದ ಆಕ್ರೋಶದ ಮಾತುಗಳು ಕೇಳಿ ಬಂದವು, ಕೆಲವರು ಸಾವಿರಾರು ಮಂದಿಯನ್ನು ಸೇರಿಸಿ ಪ್ರತಿಭಟನೆಯಲ್ಲಿ ತೊಡಗಿದರೆ ಇನ್ನು ಹಲವರು ನೂರಾರು ಜನರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಿದರು, ಇನ್ನು ಕೆಲವರು ಅತಿ ವೇಗವಾಗಿ, ಹಲವರು ತಡವಾಗಿ ಪತ್ರಿಕಗೋಷ್ಟಿ ನಡೆಸಿದರು, ಮತ್ತು ಕೆಲವರು ತಮ್ಮ ಮನವಿಯನ್ನು ಸಲ್ಲಿಸಿ "ಕಬೀರ್" ನ ಕೊಲೆಯನ್ನು ಖಂಡಿಸಿದರು. ಒಟ್ಟಿನಲ್ಲಿ ಕಚ್ಚಾಟದಲ್ಲಿ, ಕೆಸರೆರೆಚಾಟದಲ್ಲಿ  ತೊಡಗಿದವರೆಲ್ಲ  "ಕಬೀರ್" ನ ಕೊಲೆ ಪ್ರಜಾಪ್ರಭುತ್ವದ ಕೊಲೆ ಎಂದು ಒಪ್ಪಿಕೊಂಡರು. ಎಲ್ಲರೂ "ANF" ನಡೆಯನ್ನು ವಿರೋಧಿಸಿದರು.

"DC" ಕಚೇರಿಯ ಮುಂದೆ ಹಲವು ಪತಾಕೆಗಳು ರಾರಾಜಿಸಿದವು, ಘೋಷನೆಗಳು ಮೊಳಗಿದವು ಆದರೆ "ಕಬೀರ್" ಮತ್ತು ಆತನ ಕುಟುಂಬ ಅನುಭವಿಸಿದ ಕಷ್ಟ ಇನ್ನು ಯಾರಿಗೂ ಬರಬಾರದು ಎನ್ನುವ ಸ್ಪಸ್ಟ ನಿರ್ದಾರ ಸಮುದಾಯದಿಂದ ಬರಲಿಲ್ಲ, ಈ ಪ್ರತಿಭಟನೆ ನಡೆಸಿದವರಿಗೆ, ಪತಾಕೆ ಹಿಡಿದವರಿಗೆ, ಘೋಷಣೆ ಕೂಗಿದವರಿಗೆ, ಪತ್ರಿಕಾಘೋಸ್ಟಿ ಕರೆದವರಿಗೆ, ಮನವಿ ಸಲ್ಲಿಸಿದವರಿಗೆ ಇದು ನಮ್ಮ ನಮ್ಮ ಬಲಪ್ರದರ್ಶನದ, ನಮ್ಮ ಅಸ್ತಿತ್ವ ತೋರಿಸುವ ಸಮಯವಲ್ಲ, ಇದು ನಾವೆಲ್ಲಾ ಒಟ್ಟಾಗಿ ಮಾಡಬೇಕಾದ ಹೋರಾಟ, ಇದು ಸಂಘಟನಾ ಸಮಸ್ಯೆಯಲ್ಲ ಬದಲಾಗಿ ನಮ್ಮ ಸಮುದಯಾದ ಸಮಸ್ಯೆ,ಇನ್ನಸ್ಟು ಕಬೀರ್ ಗಳು ಮರಣವನ್ನಪ್ಪಲು ದಾರಿ ಮಾಡಿಕೊಡದಿರೋಣ, ಇನ್ನಾದರೂ ಒಂದಾಗಿ ಹೋರಾಡೋಣ ಎಂದು ಯಾರಿಗೂ ಅನ್ನಿಸಲಿಲ್ಲ, ಅದರ ಅಗತ್ಯ ಯಾರಿಗೂ ಇಲ್ಲ, ಹಾಗೆ ಮಾಡಿದಲ್ಲಿ ತಮ್ಮ ಪತಾಕೆಗಳಿಗೆ ಅಲ್ಲಿ ಜಾಗವಿರದು ಎನ್ನುವ ಭಯವೋ ಏನೋ??

ಈ  ಹಿಂದೆಯೂ ಈ ಕೊಲೆ ಜಿಲ್ಲೆಯ ಕಟ್ಟ ಕಡೆಯ ಕೊಲೆ ಎಂದು ಹೇಳಿದಾಗ ಕೂಡಾ ಸಿಳ್ಳೆ ಹೊಡೆದಿದ್ದೇವೆ, ಚಪ್ಪಾಳೆ ತಟ್ಟಿದ್ದೇವೆ, ಜೈಕಾರ ಕೂಗಿದ್ದೇವೆ ಅದರೂ ಅದು ಮುಂದುವರಿಯುತ್ತಲೇ ಇದೆ, "ಕಬೀರ್" ನ  ವಿಷಯದಲ್ಲೂ ಕೂಡಾ ಹಾಗೆ ಅದು ಸಿಳ್ಳೆಗೆ ಮತ್ತು ಚಪ್ಪಾಳೆಗೆ ಮಾತ್ರ ಸೀಮಿತವಾಗಬಹುದು, ಎಲ್ಲರೂ ಪ್ರತಿಭಟನೆ ನಡೆಸಿದರು, ಹೇಳಿಕೆ ಕೊಟ್ಟರು ಮತ್ತು ತಮ್ಮ ಪಾಡಿಗೆ ತಾವು ಹೊರಟು ಹೋದರು ಇನ್ನು ಇವರೆಲ್ಲ ಬರುವುದು ಇನ್ನೊಂದು "ಕಬೀರ್" ಕೊಲೆಯಾದ ನಂತರ, ಪ್ರಜಾಪ್ರಭುತ್ವದ  ಕೊಲೆಯನ್ನು ನಾವು ಒಂದಾಗಿ ಪ್ರತಿಭಟಿಸೋಣ ಎಂದು ಯಾರೂ ಸಿದ್ದರಿಲ್ಲ, ಏಕೆಂದರೆ ಅವನನ್ನು ಕಂಡರೆ ಇವನಿಗೆ ಆಗುವುದಿಲ್ಲ, ಇವನನ್ನು ಕಂಡರೆ ಅವನಿಗೆ ಆಗುವುದಿಲ್ಲ, ಅವನ ಜೊತೆ ಇವನು ವೇದಿಕೆ ಹಂಚುವುದಿಲ್ಲ, ಇವನ ಜೊತೆ ಅವನು ವೇದಿಕೆ ಹಂಚುವುದಿಲ್ಲ ಇದು ಸಮಸ್ಯೆ, ಈ ಸಮಸ್ಯೆಯಿಂದ ಯಾವತ್ತಿನವರೆಗೆ ಹೊರಗೆ ಬರುವುದಿಲ್ಲವೋ ಅಲ್ಲಿಯವರಗೆ ಇಂತಹ "ಕಬೀರ್" ಗಳು ಕೊಲೆಯಾಗುತ್ತಲೇ ಇರುತ್ತಾರೆ ಮತ್ತು  "ಕಬೀರ್" ನ  ಕೊಲೆ ಈ  ಜಿಲ್ಲೆಯ ಕೊನೆಯ ಕೊಲೆ ಕೂಡಾ ಅಲ್ಲ.



ಸತ್ಯವಾಗಿಯೂ ಈ ಸಮುದಾಯಕ್ಕೆ ಐಕ್ಯತೆಯ ಅಗತ್ಯವಿದೆ "ಕಬೀರ್" ನ  ಕೊಲೆ ನಿಜವಾಗಿಯೂ ಕೊನೆಯ ಕೊಲೆ ಆಗಬೇಕೆಂದಾದಲ್ಲಿ ಎಲ್ಲರೂ ಒಂದಾಗಬೇಕು, ಒಟ್ಟಿಗೆ ಕುಳಿತು ಚರ್ಚಿಸಿ ಸರಕಾರದ ಮುಂದೆ ಬೇಡಿಕೆ ಇಡಬೇಕು ಆ ಮೂಲಕ ಸರಕಾರಕ್ಕೂ ಕೂಡ ನಡುಕ ಉಂಟಾಗಬೇಕು, ಮುಂದೆ ಅಮಾನವೀಯವಾಗಿ ಕೊಲೆ ಮಾಡುವ ಪುಂಡರಿಗೆ ಸಹಾಯಕ್ಕೆನಿಲ್ಲಲಿಕ್ಕೆ ಯಾರೂ ಕೂಡ ಇರಬಾರಾದು ಈ ಸಮುದಾಯದ ಐಕ್ಯತೆಗಾಗಿ ಸಮುದಾಯ ಒಂದೆಡೆ ಸೇರಬೇಕು, ಸಮುದಾಯದ ಐಕ್ಯತಾ ವೇದಿಕೆ ನಿರ್ಮಾಣವಾಗಬೇಕು, ಈ ಮುಂಚೆ  ಚಿಂತಕರು ಚಿಂತಿಸಿ ಸ್ಥಾಪಿಸಿದ್ದ ಸಮುದಾಯದ ವೇದಿಕೆಗಳು ದುರಾದ್ರುಸ್ಟವಸಾತ್ ಕೇವಲ ಕೆಲವು ಮುಖಗಳಿಗೆ ಮಾತ್ರ ಸೀಮಿತವಾಗಿದೆ, ಅದು ಕೆಲವರ ಎಜೆಂಟರಂತೆ   ವರ್ತಿಸುತ್ತದೆ, ಮತ್ತು ಕೆಲವರ ಪೊಲೊವೆರ್ಸ್ ಗಳು ಮಾತ್ರ ಅದರಲ್ಲಿ ಸೇರಿಕೊಂಡಿದ್ದಾರೆ. ಆದ್ದರಿಂದ ಅದು ಸಮುದಾಯಕ್ಕೆ ಮಹತ್ವದ ಲಾಭ ತಂದುಕೊಡಲಿಲ್ಲ, ಎಲ್ಲ ಸಿದ್ದಾಂತಗಳಿರುವ ಸಮುದಾಯದ ನಾಯಕರು ಸೇರಿಕೊಂಡು ಐಕ್ಯತ ವೇದಿಕೆ ಅಥವಾ ಅಂತಹ ಒಕ್ಕೂಟ ಸ್ಥಾಪಿಸಬೇಕು, ಅದು "ಕಬೀರ್" ನ  ಕೊಲೆಯ ಹಿನ್ನಲೆಯ  ಮೂಲಕವಾದರೂ ಆರಂಭವಾಗಬೇಕು, ಇಷ್ಟರವರೆಗೆ ಪಾಠ ಕಲಿಯದ ಸಮುದಾಯ "ಕಬೀರ್" ಎದೆಗೆ ಗುಂಡು ಏರಿಸಿಕೊಂಡು ಇಹಲೋಕ ತ್ಯಜಿಸಿದ್ದನ್ನು ನೆನಪಿಸಿಕೊಂಡಾದರು ಒಂದಾಗಬೇಕು.

ಇದುವರೆಗೆ ಒಂದೇ ಕಡೆ ಕುಳಿತುಕೊಳ್ಳದವರು, ಕುಳಿತುಕೊಂಡವರು, ಇಷ್ಟವಿದ್ದರು, ಇಷ್ಟವಿಲ್ಲದಿದ್ದರು ಎಲ್ಲ ಇಷ್ಟ, ಕಷ್ಟಗಳನ್ನು ಬದಿಗಿಟ್ಟು "ಕಬೀರ್" ಗಾಗಿಯಾದರೂ ಒಂದಾಗಬೇಕು, ಇನ್ನಸ್ಟು "ಕಬೀರ್" ಮಾರ್ಗದ ಮಧ್ಯೆ ಎದೆಗೆ ಗುಂಡು ನಾಟಿಕೊಂಡು ಸಾಯುವುದು, ತಲಾವಾರು ಏಟಿನಿಂದ ಹತ್ಯೆಗೊಳಗಾಗುವುದು, ಅನಾಥವಾಗಿ ಹೆಣವಾಗುವದನ್ನು ತಡೆಯಲು ಎಲ್ಲರೂ ಮನಸ್ಸು ಮಾಡಬೇಕು, ಎಲ್ಲರೂ ಒಗ್ಗಟ್ಟಾಗಿ ತೀರ್ಮಾನಿಸಿ  "CBI" ತನಿಕೆ ಬೇಕೋ, ಪರಿಹಾರ ಹೆಚ್ಚಿಸಬೇಕೋ, ಪೋಲೀಸರ ವರ್ಗಾವಣೆ ಆಗಬೇಕೋ, ಇನ್ನು ಮುಂದೆ ಈ ರೀತಿ ನಡೆಯದಂತೆ ಮಾಡಲು ಏನು ಮಾಡಬೇಕು ಎಂದು ತೀರ್ಮಾನಿಸಬೇಕು.  ಆ ಮೂಲಕ ಕೊಲೆ ಪಾತಕರಿಗೆ ನಿಮ್ಮ ಸಮಯ ಮುಗಿದು ಹೋಗಿದೆ "ಕಬೀರ್" ನಮ್ಮನ್ನು ಎಚ್ಚರಿಸಿದ್ದಾನೆ ಇನ್ನು "ಕಬೀರ್" ರನ್ನು ಅನ್ಯಾಯವಾಗಿ ಕೊಲ್ಲಲು ನಿಮಗೆ ಸಾದ್ಯವಿಲ್ಲ ಎನ್ನುವ ಸ್ಪಸ್ಟ ಸಂದೇಶ ಸಮುದಾಯ ಒಟ್ಟಾಗಿ ಸೇರಿ ಕೊಲೆಪಾತಕರಿಗೆ ರವಾನಿಸಬೇಕು.


ಐಕ್ಯತಾ ವೇದಿಕೆ ಅಥವಾ ಅಂತಹ ಎಲ್ಲರೂ ಸೇರಿದ ಒಂದು ವೇದಿಕೆಯಿಯಿಂದ ಸ್ಪಸ್ಟ ಸಂದೇಶ ಹೊರಬೀಳಬೇಕು ಆ ಮೂಲಕ "ಕಬೀರ್" ಮತ್ತು ಈ ಮುಂಚೆ ಅನ್ಯಾಯವಾಗಿ ಕೊಲ್ಲಲ್ಪಟ್ಟವರಿಗೆ, ಮರ್ಧನಕ್ಕೊಳಗಾದವರಿಗೆ ನ್ಯಾಯ ಸಿಗಲಿ ಅವರಿಗೆ ನ್ಯಾಯ ಕೊಡಿಸುವುದರಲ್ಲಿ ನಮ್ಮ ಪಾತ್ರ ಬಹಳ ಮುಖ್ಯ, ಇನ್ನೂ ನಾವು ಒಂದಾಗದಿದ್ದಲ್ಲಿ "ಕಬೀರ್" ನನ್ನು ಕೊಂದವರು ಅಟ್ಟಹಾಸ ಮುಂದುವರೆಸುತ್ತಾರೆ, ಅವರಿಗೆ ನಮ್ಮ ಕಚ್ಚಾಟ, ಒಳಜಗಳ ಕಂಡು ದೈರ್ಯ ಹೆಚ್ಚುತದೆಯೇ ಹೊರತು ಕಡಿಮೆ ಆಗುವುದಿಲ್ಲ.

ಕಟ್ಟ ಕಡೆಯ ಮಾತು ಒಂದು ವೇಳೆ  ಸಮುದಾಯಕ್ಕೆ ಇನ್ನು ಕೂಡಾ ತಮ್ಮ ಕಚ್ಚಾಟವನ್ನು ಬಿಟ್ಟು ಒಂದಾಗಲು ಸಾದ್ಯವಿಲ್ಲ ಎಂದಾದಲ್ಲಿ,  ಅವನ ಜೊತೆ, ಇವನ ಜೊತೆ ಕುಳಿತುಕೊಳ್ಳಲು ಮನಸ್ಸು ತಯಾರಿಲ್ಲ ಎಂದಾದಲ್ಲಿ, "ಕಬೀರ್" ಗಿಂತ  ನಮ್ಮ ಸ್ವಂತ ವೇದಿಕೆ ನಮಗೆ ಮುಖ್ಯ ಎಂದಾದಲ್ಲಿ, ಇನ್ನೂ ನಾವು ಪಾಠ ಕಲಿಯಲಿಲ್ಲ ಎಂದಾದಲ್ಲಿ, ನಮ್ಮ ಅದೇ ಸ್ವಂತ  ವೇದಿಕೆಯಿಂದ ಹೇಳಬೇಕು   "ಕಬೀರ್", "ಕಬೀರ್", "ಕಬೀರ್"  ಕ್ಷಮಿಸಿ ಬಿಡು!! ನಿನಗೆ ನ್ಯಾಯ ಕೊಡಿಸುವುದಕ್ಕಿಂತ ನಮ್ಮ ಸಂಘಟನೆಗಳ ಬಲಪ್ರದರ್ಶನ ಮತ್ತು ಕಾಚ್ಚಾಟವೆ ನಮಗೆ ಮುಖ್ಯ !! ಬಹಿರಂಗವಾಗಿ  ಘೋಷಿಸುವ ಮೂಲಕವಾದರೂ "ಕಬೀರ್" ಮತ್ತು ಕಣ್ಣೀರಿನಿಂದ ತುಂಬಿರುವ ಆತನ ಕುಟುಂಬಕ್ಕೂ, ಮಾತ್ರವಲ್ಲ ಇನ್ನು ಬರ್ಬರವಾಗಿ ಹತ್ಯೆಯಾಗಳಿರುವ "ಕಬೀರ್" ಗಳಿಗೂ ಅವರ  ಕುಟುಂಬಕ್ಕೂ ಈಗಲೇ ಸಂತಾಪ ಸೂಚಿಸಿ ನಮ್ಮ ಸಂಘಟನೆಗಳನ್ನು ಬೆಳೆಸಿಕೊಂಡು, ಪತಾಕೆಗಳನ್ನು ಹಾರಿಸಿಕೊಂಡು ಹಾಯಾಗಿರೋಣ.









Sunday, April 20, 2014

ವಯಕ್ತಿಕ ಬಲಪ್ರದರ್ಶನಕ್ಕೆ ಸಮಯವಲ್ಲ , ಕಬೀರ್ ಬಿಟ್ಟು ಹೋದ ಪ್ರಶ್ನೆಗೆ ಉತ್ತರಿಸಬೇಕಾದ ಸಕಾಲ (ಲೇಖನ)


ದಟ್ಟ ಕಾಡಿನ ಮಧ್ಯೆ ಮುನ್ನುಗಿ ದೇಶಕ್ಕೆ ಮಾರಕವಾಗಿರುವ ನಕ್ಷಲರನ್ನು ಹುಡುಕಿ, ಪರಿಸ್ಥಿತಿ ಕೈ ಮೀರಿದರೆ ಗುಂಡಿಕ್ಕಿ ಕೊಂದು ಹಾಕಿ ಮತ್ತು ಗುಂಡಿಕ್ಕುವಾಗ ಕೆಲವು  ನಿಯಮಗಳನ್ನು ಪಾಲಿಸಿ ಎಂದು ಹೇಳಿ "ANF" ಸೈನಿಕರನ್ನು ಕಾಡಿಗೆ ಕಳಿಸುತ್ತದೆ.  ಕೆಲವೊಮ್ಮೆ ಅಪರೂಪಕ್ಕೆ ಪ್ರತ್ಯಕ್ಷವಾಗುವ ನಕ್ಷಲರು ಎದುರಾದಾಗ, ದಾಳಿ ನಡೆದಾಗ "ANF" ಎನ್ನುವವರ ಬಂದೂಕಿನಿಂದ ಹಾರಿಸಿದ ಗುಂಡು ಹಾರುವುದೇ ಇಲ್ಲ, ಕಾರಣ ಅದು ಉಪಯೋಗಿಸದೆ ತುಕ್ಕು ಹಿಡಿದಿತ್ತು ಎಂದು ಸಬೂಬು, ಒಂದು ವೇಳೆ ಹಾರಿದರೂ ಅದು ನಕ್ಷಲನ ಎದೆಯನ್ನು ಬಿಡಿ, ಅವನ ಕಾಲಿಗೂ ಕೂಡ ತಾಗುವುದಿಲ್ಲ. ಚಲಾಯಿಸಿದ ಗುಂಡುಗಳ ದಾಖಲೆ ಪರಿಶೀಲಿಸಿದಾಗ ಹೆಚ್ಚಿನದೆಲ್ಲ ಮರಕ್ಕೋ ಅಥವಾ ಇನ್ನೆಲ್ಲಿಯೋ ಬಿದ್ದಿರುತ್ತದೆ.

ರಾಜ್ಯ ಹೆದ್ದಾರಿಯಲ್ಲಿ ಅಮಾಯಕರು ಸಾಗುತ್ತಿರುವಾಗ, ದನ ಸಾಗಾಟ ಮಾಡುತಿದ್ದರು,  ತಡೆದಾಗ ಓಡಿ ಹೋದರು ಎಂದು ಆಗ ಹಾರಿಸಿದ ಗುಂಡು ಮಾತ್ರ "ಕಬೀರ್" ಎನ್ನುವವನ ಎದೆ ನಾಟಿರುತ್ತದೆ,  "ANF" ನ ಕೆಲವು ಬಜರಂಗಿ ಚೇಲಾಗಳಿಗೆ ಆ ಕ್ಷಣದಲ್ಲಿ ತಾವು ಪಡೆದಿರುವ ತರಬೇತಿ ಸರಿಯಾಗಿ ನೆನಪಿಗೆ ಬರುತದೆ, ಅಲ್ಲ್ಲಿಒಂದು ಗುಂಡು ಕೂಡಾ ಗುರಿ ತಪ್ಪುವುದಿಲ್ಲ, ಇದು "ANF " ನಲ್ಲಿ ಬಜರಂಗಿ ಅಜೆಂಡಾ ಹೊಂದಿರುವವರಿದ್ದಾರೆ ಎನ್ನುವುದಕ್ಕೆ ಆಧಾರ.

"ಕಬೀರ್" ಎನ್ನುವವ ಮುಸ್ಲಿಮನಾಗಿದ್ದ ಎನ್ನುವ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ, ಅದಕ್ಕಿಂತ ಹೆಚ್ಚಾಗಿ ಇದು ಪ್ರಜಾಪ್ರಬುತ್ವದ ಕಗ್ಗೊಲೆ, ಮಾಹಿತಿಯ ಪ್ರಕಾರ ಆಲ್ಲಿ ದನವನ್ನು ಪರವಾನಿಗೆ ಪಡೆದೇ ಸಾಗಿಸಲಾಗುತ್ತಿತ್ತು ಅಷ್ಟಕ್ಕೂ ಕರ್ನಾಟಕ ಗೋಹತ್ಯೆ ನಿಷೇದ ಹೊಂದಿರುವ ರಾಜ್ಯವೇನೂ ಅಲ್ಲ.

ಕಗ್ಗೊಲೆಯ ವಿರುದ್ದ ಜನದ್ವನಿ ಆರಂಭವಾಗುತ್ತದೆ, ಪ್ರತಿಭಟನೆಗಳ ಸರಮಾಲೆಗಳು ಶುರುವಾಗುತ್ತದೆ ಎಂದು ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಗೊತ್ತು, ಅದಕ್ಕಾಗಿಯೇ ಎಲ್ಲ ಘಟನೆಗಳ ಸಂದರ್ಭ ಮಾಮೂಲಿ ಎನ್ನುವಂತೆ ೫ಲಕ್ಷ ಪರಿಹಾರ ಕೊಟ್ಟು ಕಗ್ಗೊಲೆಯ ತಾಪವನ್ನು ಕುಗ್ಗಿಸುವ ಕೆಲಸ ಯಥಾವತ್ತಾಗಿ ನಡೆದಿದೆ. ಈ ಘಟನೆಗೆ ಕಾಂಗ್ರೆಸ್ ಸರಕಾರ ನೇರ ಹೊಣೆ ಎನ್ನುವುದು ಸ್ಪಷ್ಟ.

ಇದರ ಮಧ್ಯೆ "ಕಬೀರ್" ಕೊಲೆಯ ಹೆಸರಿಟ್ಟು ಹಲವು ಸಂಘಟನೆಗಳು ಪ್ರತಿಭಟನೆ ನಡೆಸುವ ತಯಾರಿಯಲ್ಲಿದೆ, ಇಲ್ಲಿ ಕಬೀರ್ ಎನ್ನುವ ಅಮಾಯಕನ ಕಗ್ಗೊಲೆಗೆ ನ್ಯಾಯ ಕೊಡಿಸಬೇಕು ಎನ್ನುವುದಕ್ಕಿಂತ ಸಂಘಟನೆಗಳು ತಮ್ಮ ಬಲ ಪ್ರದರ್ಶಿಸುವ ಹುನ್ನಾರ ನಡೆಸುವಂತೆ ಕಾಣುತ್ತಿದೆ.  ಎಲ್ಲರೂ ಅವರವರ ಪಾಡಿಗೆ ಅವನಿಗಿಂತ ನಾನು ಮುಂಚೆ ಎನ್ನುವ ಹಾಗೆ, ನನಗೆ ಹೆಚ್ಚು ನೋವು ಎಂದು ತೋರಿಸಲು ಪ್ರತಿಭಟನೆ, ಪತ್ರಿಕಾಗೋಷ್ಠಿ ನಡೆಸಲು ಹೊರಟಿದೆ.

ವಿಪರ್ಯಾಸ ಇವರ್ಯಾರಿಗೂ ಇದು "ಕಬೀರ್" ಎನ್ನುವ ಅಮಾಯಕನ ಕೊಲೆ ಪ್ರಜಾಪ್ರಬುತ್ವದ ಕೊಲೆ ನಾವೆಲ್ಲಾ ಒಟ್ಟಾಗಿ ಪ್ರತಿ ಭಟಿಸಬೇಕು  ಅನ್ನುವ ಬುದ್ದಿ ಇಲ್ಲ, ಇದರ ಮೂಲಕ ತಮ್ಮ ಸಂಘಟನೆಗಳ ಬಲ ಪ್ರದರ್ಶನಕ್ಕೆ ದಾರಿ ಮಾಡಿ ಕೊಳ್ಳುವ ತವಕದಲ್ಲಿದ್ದಾರೆ, ಇಲ್ಲಿ ನಿನ್ನೆ "ನೌಶಾದ್ ಖಾಸಿಮ್ಜಿ" ಇವತ್ತು "ಕಬೀರ್" ನಾಳೆ "ನಾನು" ಎನ್ನುವವರು ನಾಳೆ ನಾನು ಇದೇ ರೀತಿ ಕಗ್ಗೊಲೆಯಾಗುವುದು ಬೇಡ, ನಾವೆಲ್ಲಾ ಒಟ್ಟಾಗಿ ಒಂದೇ ವೇದಿಕೆಯಡಿ ಹೋರಾಡೋಣ, ಆ ಮೂಲಕ ಮರಣವನ್ನಪ್ಪಿದ "ಕಬೀರ್" ನಿಗೆ ನ್ಯಾಯ ಕೊಡಿಸೋಣ ಎಂದು ಯೋಚಿಸಲು ಇಲ್ಲಿ ಯಾರಿಗೂ ಪುರುಸೊತ್ತಿಲ್ಲ, ಇಲ್ಲಿ ಎಲ್ಲರಿಗೂ ಅವರವರ ಲೆಟರ್ ಹೆಡ್, ಸ್ಟ್ಯಾಂಪ್, ಬ್ಯಾನರ್ ಮೇಲೆಯೇ ಪ್ರೀತಿ ಜಾಸ್ತಿ.  ಇನ್ನಾದರೂ ಒಂದಾಗಿ ಹೋರಾಡೋಣ ಇಲ್ಲದಿದ್ದರೆ ಇನ್ನಸ್ಟು "ನಾನು" ಗಳು ಇಲ್ಲಿ ಕಗ್ಗೊಲೆಯಾಗುತ್ತಾರೆ, ಬಜರಂಗಿಗಳು ತಮ್ಮ ಅಟ್ಟ ಹಾಸ ಬೇರೆ ಬೇರೆ ರೀತಿಯಲ್ಲಿ ಮುಂದುವರೆಸುತ್ತಾರೆ, ಇದು ಎಚ್ಚರಿಕೆಯಲ್ಲ!! ವಾಸ್ತವ.
ವಯಕ್ತಿಕ ಬಲ ಪ್ರದರ್ಶನದ  ಹಿತಾಸಕ್ತಿ ಬದಿಗಿಟ್ಟು ಕಬೀರ್ ಬಿಟ್ಟು ಹೋದ ಪ್ರಶ್ನೆಗೆ ಒಟ್ಟಾಗಿ ಉತ್ತರಿಸಬೇಕಾದ ಸಕಾಲ. 

Sunday, April 13, 2014

ಸಮಾಜ ಸೇವೆ ದೇವ ಸಂಪ್ರೀತಿಗಾಗಿರಲಿ (ಲೇಖನ)


ಜೇಬಿನಲ್ಲಿ ದುಡ್ಡು ತುಂಬಿರುವ ಒಬ್ಬ ಧನಿಕನಿಂದ ಮಾತ್ರ ಸಮಾಜ ಸೇವೆ ಮಾಡಲು ಸಾಧ್ಯ ಎಂದು ತಿಳಿದಿರುವ ಮನೋಸ್ಥಿತಿಯ ಮಧ್ಯೆ ಬದುಕುತ್ತಿರುವವರು ನಾವು. ಆದರೆ ಇದು ಸತ್ಯಕ್ಕೆ ಬಲು ದೊರವಾದ ಮಾತು ಸಮಾಜ ಸೇವೆ ಮಾಡಲು ಮನಸ್ಸಿರಬೇಕೇ ಹೊರತು ದುಡ್ಡಲ್ಲ, ಸಾಧನೆಗಳ ಪಟ್ಟಿಯಲ್ಲಿ ಹೆಚ್ಚು ಸಾಧಿಸಿದವರು ಬಡತನದ ಮಧ್ಯೆ ಕಾಲ ಕಳೆದವರು.

ದುಡ್ಡಿರಲಿ ಇಲ್ಲದೆ ಇರಲಿ ಸಮಾಜ ಸೇವೆ ಮಾಡುವ ಮನಸ್ಸಿರಲಿ, ಸಮಾಜದ ಬಗ್ಗೆ ಕಾಳಜಿ ಇರಲಿ, ವ್ಯವಸ್ಥೆಯನ್ನು ಬದಲಾಯಿಸುವ ಬಗ್ಗೆ ಗುರಿಯಿರಲಿ, ಆ ನಡೆಯಲ್ಲಿ ಸ್ಪಸ್ಟತೆಯಿರಲಿ. ಜೇಬಿನಲ್ಲಿ ಬಿಡುಗಾಸು ಇಲ್ಲದ ಒಬ್ಬ ವ್ಯಕ್ತಿಯಿಂದ ಸಮಾಜದಲ್ಲಿ ಬಹಳಸ್ಟು ಕೆಲಸ ಮಾಡಲು ಸಾಧ್ಯ, ದಾರಿಯಲ್ಲಿ ಹೊಗುವ ದಾರಿಹೋಕನಿಗೆ ದಾರಿ ತೋರಿಸುವುದು, ರಸ್ತೆಯಲ್ಲಿ ಬಿದ್ದ ಒಬ್ಬ ವ್ಯಕ್ತಿಯನ್ನು ಎತ್ತುವುದು ಕೊಡ ಸಮಾಜ ಸೇವೆಯ ಭಾಗ.  

 ತನ್ನ ನೋವುಗಳ ನಡುವೆ ಸಮಾಜದ ಬಗ್ಗೆ ಕಾಳಜಿ ಇಡುವವನೇ ನಿಜವಾದ ಸಮಾಜ ಪ್ರೇಮಿ, ಕಸ್ಟಗಳಿಗೆ ಸ್ಪಂದಿಸುವವನಿಗೆ ನೋವುಗಳ ಅರಿವಿರಬೇಕು ಆಗ ಸೇವೆಯಲ್ಲಿ ಭಾವನಾತ್ಮಕ ಸಂಭಂದವಿರುತ್ತದೆ.


ದುಡ್ಡಿರುವವರು ಇಲ್ಲದವರು ಜೊತೆಗೊಡಿ ಕೆಲಸ ಮಾಡಿದಾಗ ಮಾತ್ರ ಅದು ಸಮಾಜಮುಖಿಯಾದ ಕೆಲಸವಾಗುತ್ತದೆ ಇಲ್ಲಿ ಇದು ಒಂದೇ ನಾಣ್ಯದ ಎರಡು ಮುಖ. ಸಮಾಜ ಸೇವಕನಿಗೆ ತನ್ನ ಕೊಪವನ್ನು, ಆವೇಷವನ್ನು, ಭಾವುಕತೆಯನ್ನು ತಡೆದುಕೊಲ್ಲುವ ಕಲೆ ಗೊತ್ತಿರಬೇಕು ಆಗ ಅವನೊಬ್ಬ ಯಶಸ್ಞಿ ಸಮಾಜ ಸೇವಕನಾಗಲು ಸಾಧ್ಯ. ಸಮಾಜ ಸೇವೆ ಮಾನವ ಪ್ರೀತಿಯಿಂದ ದೇವ ಸಂಪ್ರೀತಿಗಾಗಿ ನಡೆದಾಗ ಅನುಗ್ರಹಗಳ ಸುರಿಮಳೆ ಸುರಿಯುವುದನ್ನು ನಿರೀಕ್ಶಿಸಿಸಬಹುದು ಮತ್ತು ಅದು ನಾಳಿನ ಲೋಕದಲ್ಲಿ ಉತ್ತರ ನೀಡುವ ವಸ್ತುವಾಗಬಹುದು ಮತ್ತು ಅದೇ ಆಗಲಿ ದೇವನು ಅನುಗ್ರಹಿಸಲಿ......

Thursday, April 10, 2014

ಜನತೆಗೊಂದು ಸದವಕಾಶ ಮತದಾನ (ಕವನ)



ದೇಶದ ಆರ್ಥಿಕ ಬಿಕ್ಕಟ್ಟು
ಎಲ್ಲ ನಮ್ಮ ದುರ್ಗುಣಗಳ ಎಡವಟ್ಟು
ಬೆಲೆಯೇರಿಕೆಯ ಪರಿಣಾಮ ತಿಳಿದಿದೆ
 ಪಾವತಿಸಲಾಗದೆ ಸಾಲ ಮೈಮೇಲಿದೆ 

ಟಾಟಾ, ಅಂಭಾನಿಗಳ ರಾಷ್ಟ್ರದ
 ಅಭಿವ್ರಿದ್ದಿ ಹೆಸರಿನ ಹರಿಕಾರರ
   ಗದ್ದುಗೆಗಾಗಿ ನಡೆಯುವ ಗಲಭೆಯ ಮಧ್ಯೆ   
ಜನತೆಗೊಂದು ಸದವಕಾಶ ಮತದಾನ  

ಬೆಳೆಯುತ್ತಿರುವ ಒಂದು ದೇಶದಲ್ಲಿ  
ಕುಡಿಯಲು ಯೋಗ್ಯ ನೀರಿಲ್ಲದ ಕಾಲದಲ್ಲಿ
ಪೊಳ್ಳು ಭರವಸೆಗಳ ಮಿಶ್ರಣದ ಮಧ್ಯೆ 
ಮತದಾರರಿಗೆ ತೀರ್ಪು ನೀಡುಸುವರ್ಣವಕಾಶ 
 

ಬಡ ಜನತೆಯ ಹಕ್ಕುಗಳನ್ನು ಕಸಿಯಲಾದಾಗ 
ಕುರ್ಚಿ ಬಿಸಿ ಮಾಡಿ ಜನತೆಗೆ ವಂಚನೆಯಾದಾಗ 
ಕಾಲ ಬಂದಿದೆ, ನಮ್ಮ ಮುಂದಿದೆ, ಮತ ಹಾಕಬೇಕಿದೆ 
 ಸಂಚಕಾರದ ರಾಜಕೀಯ ಬದಲಾವಣೆಯ ಗುರಿಯಾಗಿಸಿ 



ಪರಿವರ್ತನೆಯ ಸ್ಫೂರ್ತಿದಾಯಕ ನಾಯಕರನ್ನು ಆರಿಸಿ ,
ಯಾರಾಗಬಹುದೆಂದು ಹುಡುಕಾಡಿ ಸಮರ್ಥವಾಗಿ ನಿರ್ಧರಿಸಿ
 ಮಿಶ್ರಣದ, ಗದ್ದಲ ಗಲಾಟೆಯಿಲ್ಲದ ನಾಯಕರ ಆಯ್ಕೆಯಾಗಲಿ  
ಜನಮನ್ನಣೆ ಜನಾಂಧೋಲನವಾಗಿ ರೂಪುಗೊಳ್ಳಲಿ

ಯಾರಿಗೆ ಮತ ? ಯಾವ ಪಕ್ಷಕ್ಕೆ ?
ಯಾರ ಅಹವಾಲಿಗೆ ? ಯಾವ ಘೋಷನೆಗೆ

ದೇಶದ ಬದಲಾವಣೆಗೆ ಮತ ಚಲಾಯಿಸಿ 
ಕಾಪಟ್ಯದ ಹಳೆಯ ಮುಖಗಳಿಗೆ ಮುಕ್ತಿ ಕೊಡಿಸಿ
ಯಾರನ್ನು ಆರಿಸಬೇಕೆಂದು ನೀವೇ ನಿರ್ಧರಿಸಿ!!