ಬಹು ಬೇಗ ಬಂದ ಮಳೆಗೆ ಕಂಗಾಲಾದ ರೈತನಿತ್ತ.
ಗಾಳಿಯ ರಭಸಕ್ಕೆ ಮರ ಉರುಳಿತು, ಪ್ರಾಣವು ಹೋಯಿತು,
ಕರೆಂಟು ಚೆಲ್ಲಾಟವಾಡಿದರೂ! ಪ್ರಾಣ ತೆಗೆಯುವವರೆಗೆ ಇತ್ತು.
ಎಲ್ಲಿ! ಎಷ್ಟು ಪ್ರಾಣ ಹೋಯಿತೆಂದು ಸರಕಾರ ಲೆಕ್ಕ ಮಾಡುತಿತ್ತು,
ಲೆಕ್ಕದ ನಡುವೆ ಅಮಾಯಕ ಜೀವಗಳು ಬಲಿಯಾಗುತ್ತಲೇ ಇತ್ತು.
24 ಘಂಟೆ ಸುರಿದ ಮಳೆಯನ್ನು ಜನತೆ ಅಚ್ಚರಿಯಿಂದ ನೋಡುತ್ತಿತ್ತು,
48 ಘಂಟೆ ಭಾರೀ ಮಳೆಯಿದೆಯೆಂದು ಹವಾಮಾನ ವರದಿ ಬಂತು.
ವರದಿ ಓದಿದ ಬಳಿಕ ಜೋರಾಗಿ ಬರುವನೆಂಬ ಮಳೆರಾಯನೆತ್ತ ಓಡಿದನೋ ಅರಿವಿಲ್ಲ!
ಯಾಕೋ ಬೇಸರ! ಹವಾಮಾನ ಇಲಾಖೆಯ ವರದಿಗೆ ಮಳೆ ಸ್ಪಂದಿಸುವುದೇ ಇಲ್ಲ.

No comments:
Post a Comment