Thursday, July 30, 2015

ಬದಲಾಗಬಯಸುವ ದೋಷಿಗಳಿಗೆ ಹಿಂಜರಿಕೆಯಾಗುವ ಗಲ್ಲು!


ಯಾಕೂಬ್ ಮೆಮೊನ್ ಗೆ ಗಲ್ಲು ಶಿಕ್ಷೆ ಎಂಬ  ತೀರ್ಪನ್ನು ಎತ್ತಿ ಹಿಡಿಯುವವರಲ್ಲಿ ಹೆಚ್ಚಿನವರು ಗಲ್ಲು ಶಿಕ್ಷೆ ಎಂಬ ಪದ್ದತಿಯೇ ಬೇಡ ಎಂದು ವಾದಿಸುವವರು ಇದೊಂದು ವಿಚಾರ ಮಾತ್ರ ಸಾಕು ಜಾತಿ ಅಧಾರದ ಹಿನ್ನಲೆಯಲ್ಲಿ ತೀರ್ಪನ್ನು ಬೆಂಬಲಿಸಲಾಗುತ್ತಿದೆ ಮತ್ತು ಹಿತಾಶಕ್ತಿಗಳೆಲ್ಲ ಕೈ ಚಾಚಿದೆ ಎಂದು ತಿಳಿದುಕೊಳ್ಳಲು. ರಾಜೀವ್ ಹಂತಕರು ನೇಣು ಕುಣಿಕೆಯಿಂದ ಪಾರಾಗುವಾಗ ತುಟಿ ಬಿಚ್ಚಲು ತಾಕತ್ತಿಲ್ಲದವರು ಶರಣಾಗತಿಯಾದವನ ನೇಣು ಕುಣಿಕೆ ಯನ್ನು ಬಿಗಿಗೊಳಿಸುವಲ್ಲಿ ಹಾತೊರೆದಿದ್ದಾರೆ. ಸುಪ್ರೀಂ ಕೋರ್ಟ್ ಶರಣಾಗತಿ ವಾದವನ್ನು ತಾಳ್ಳಿಹಾಕಿರಬಹುದು ಮತ್ತು ಅದಕ್ಕೆ ಸಾಕ್ಷಗಳಿಲ್ಲ ಎನ್ನುವುದು ಮಾತ್ರ ಕಾರಣ ಎನ್ನುವುದು ವಾಸ್ತವ.

21 ವರ್ಷಗಳ ಸೆರೆವಾಸದ ನಂತರ ತನ್ನಲ್ಲಾದ ಬದಲಾವಣೆಯನ್ನು ತೋರಿಸಿಕೊಂಡರೂ ನ್ಯಾಯ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳು ಎದ್ದು ಕಾಣುತ್ತಿದೆ, ಕ್ರಿಮಿನಲ್ ಒಬ್ಬ ಜೈಲುವಾಸದಿಂದ ಬದಲಾಗಲು ಯತ್ನಿಸಿದಾಗ ಅವನಿಗೆ ಕ್ಷಮಾದಾನ ಇಲ್ಲವೆಂದಾದಲ್ಲಿ ಮನ ಪರಿವರ್ತನೆಯ ಕೇಂದ್ರಗಳಾಗಿ ಜೈಲುಗಳನ್ನು ಬಿಂಬಿಸಲು ಪ್ರಯತ್ನಿಸುತ್ತಿರುವ ಪರಿಶ್ರಮ ಅರ್ಥಹೀನ. 257 ಮಂದಿಯ ಮಾರಣಹೋಮದ ಹೊಣೆಗಾರಿಕೆ ಹೊತ್ತು ಯಾಕುಬ್ ಮೆಮೊನ್ ನೇಣು ಕುಣಿಕೆ ಏರುವುದಾದರೆ ಸಾವಿರಾರು ಜನರ ಸಾವಿನ ಹೊಣೆ ಹೊತ್ತು ಸಾಯಬೇಕಾದ
ಮೇಧಾವಿಗಳೆನಿಸಿಕೊಂಡ ನೂರಾರು ಮಂದಿ ನಮ್ಮಲ್ಲಿದ್ದಾರೆ ಮತ್ತು ಅವರುಗಳು ಯಾಕುಬ್ ಮೆಮೊನ್ ಗಿಂತ ಒಂದು ನಿಮಿಷ ಮುಂಚೆಯಾದರೂ ನೇಣು ಗಂಬ ಏರಲು ಅರ್ಹವಾದವರು.

ನೇಣುಗುಣಿಕೆ ಎಂಬುವುದು ಈ ದೇಶದ ಕ್ರಿಮಿನಲ್ ವ್ಯವಸ್ಥೆಯನ್ನು ಅಳಿಸಿಹಾಕಲು ಇರುವ ಪದ್ದತಿಯಲ್ಲ ಆದರೆ ಪ್ರಸ್ತುತ ಯಾಕುಬ್ ಎನ್ನುವ ಹೆಸರಿಗಾಗಿ ಒಬ್ಬ ನೇಣಿ ಗೇರುತ್ತಿದ್ದಾನೆ ಎನ್ನುವುದು ಸ್ಪಷ್ಟವಾದ ಚಿತ್ರಣ. ಅವನೊಬ್ಬ ಅಮಾಯಕ ಎಂದು ವಾದಿಸುವುದಕ್ಕಿಂತ ಜಾತಿ ಅಧಾರದಲ್ಲಿ ಬಲಿಯಾದ ವ್ಯಕ್ತಿಗಳಲ್ಲಿ ಈತನೂ ಒಬ್ಬ ಎಂದು ಬಣ್ಣಿಸಬಹುದು. ಹಲವಾರು ದೇಶಗಳಲ್ಲಿ ಗಲ್ಲು ಶಿಕ್ಷೆ ಎಂಬ ಪದ್ದತಿ ನಿರ್ಮೂಲನೆಯಾಗಿರುವಾಗ ಭಾರತದಲ್ಲಿ ಸಾಲು ಸಾಲಾಗಿ ಜಾತಿ ಅಧಾರದಲ್ಲಿ ನೇಣಿಗೇರುತ್ತಿದ್ದಾರೆ, ಸ್ವತಹ ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನ ಸಮೂಹ ಬೆಳೆದು ಬರುತ್ತಿರುವಾಗ ಅದನ್ನು ಸಮರ್ಥಿಸಲ್ಪಡುವ ಘಟನೆಗಳು ಮರುಕಳಿಸುತ್ತಿರುವುದು ವಿಷಾದನೀಯ.

1993 ರ ಮುಂಬೈ ಬ್ಲಾಸ್ಟ್ ನಲ್ಲಿ ಮಡಿದವರ ಬಗ್ಗೆ ಅನುಕಂಪ ಮತ್ತು ಅಗಾಧವಾದ ನೋವಿದೆ ಮತ್ತು ಆ ನೋವಿನ ಪ್ರತಿಫಲವೇ 21 ವರ್ಷಗಳ ಕಾಲ ಯಾಕೂಬ್ ಮೆಮೊನ್ ಜೈಲಿನ ಗೋಡೆಗಳ ಮದ್ಯೆ ಕಳೆದಿರುವುದು. ಬ್ರಷ್ಟರು, ಫ್ಯಾಸಿಸ್ಟರು ಈ ದೇಶವನ್ನು ಸಂಶಯ ಗಳ ಸುಳಿಯಲ್ಲಿ ಮುನ್ನಡೆಸುತ್ತಿರುವಾಗ ಯಾಕುಬ್ ನೇಣಿಗೇರುವುದು ವಿಚಿತ್ರವಲ್ಲ ಆದರೆ ಅನ್ಯಾಯದ ವಿರುದ್ದ ಸದಾ ದ್ವನಿ ಎತ್ತುವ ಬಹಳ ದೊಡ್ಡ ಬುದ್ದಿವಂತ ಸಮೂಹ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.

ಯಾಕೂಬ್ ನ ಗಲ್ಲು ಶಿಕ್ಷೆ ಎತ್ತಿ ಹಿಡಿದಾಗ ಸಂಬ್ರಮಿಸಿದವರು ತಮ್ಮ ಮುಖದ ನಗುವನ್ನು ಅಗಾಗ್ಗೆ ಬದಲಾಯಿಸುತ್ತಿದಾರೆ, ಅವರು ಸನ್ನಿವೇಷಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ. ತಮ್ಮ ಬಳಿಯೇ ಶಾಂತಿ ಕೆಡಿಸುವ ಪಡೆಯನ್ನಿಟ್ಟುಕೊಂಡು ಶಾಂತಿ ದೂತರ ಪೋಸು ನೀಡುತ್ತಿದ್ದಾರೆ.

ಕಲ್ಪನೆಗಲನ್ನು ಚಿವಿಟಿ ಹಾಕಿರುವ ಮಾದ್ಯಮಗಳಲ್ಲಿ ಚಿಂತನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಕಸಿದು ಸಂಬಳ ಪಡೆಯುವ ವ್ಯಕ್ತಿಯ ಬರಹಿತ ಮಾತುಗಳು ಪ್ರಚಲಿತದಲ್ಲಿದೆ. ಮಾನವ ಹತ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸುವ ಮಾಧ್ಯಮಗಳು " Yakoob should be hang out"  ಅನ್ನುವ ಘೋಷಣೆಗಳನ್ನು ತನ ಗೋಡೆಯಲ್ಲಿ ಸದ್ಯ ಭದ್ರಪಡಿಸಿಕೊಂಡಿದೆ. ಭಾರತದ ಕಾನೂನು ವ್ಯವಸ್ಥೆ ಪುಸ್ತಕದಲ್ಲಿ ಬಹಳ ಸುಂದರವಾಗಿ ಅಚ್ಚೊತ್ತಲ್ಪಟ್ಟಿದೆ ಆದರೆ ಅದನ್ನು ಕಾರ್ಯಗತಗೊಳಿಸುವವರ
ಕೈಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದೆ ಇಲ್ಲಿಯ ಜನ ಈ ಬೆಳವಣಿಗೆಗಳನ್ನು ಮೆಚ್ಚಿಕೊಂಡಿಲ್ಲ.

ಯಾಕೂಬ್ ಮೆಮೊನ್ ಗೆ ಗಲ್ಲು ಎಂಬುವುದು ಬರೀ ಗಲ್ಲಲ್ಲ ಬದಲಾಗಿ ಬದಲಾಗಳು ಮನಸ್ಸಿರುವ, ಬದಲಾಗಲು ಪ್ರೇರಣೆ ಹೊಂದುತ್ತಿರುವ ಪ್ರತಿಯೊಬ್ಬ ಕ್ರಿಮಿನಲ್ ಗೂ ಕೂಡಾ ಹಿಂಜರಿಕೆಯಾಗುವ ನ್ಯಾಯದ ನಿರಾಕರಣೆ.ಸಮೀಕ್ಷೆಗಳು ಜಾತಿ ಆದಾರದಲ್ಲಿ ಹೆಚ್ಚಿನ ಕ್ರಿಮಿನಲ್ ಗಳು ನೇಣು ಗಂಬ ಏರಿದ್ದಾರೆ ಎಂದು ಹೇಳುತ್ತಿರುವಾಗ ಅದನ್ನು ದ್ರಿಡೀಕರಿಸಲು ಯಾಕೂಬ್ ಸಜ್ಜಾಗಿ ನಿಂತಿದ್ದಾನೆ.

Tuesday, June 16, 2015

ಸಂತುಷ್ಟ - ಸಂಕಷ್ಟ

ಸರ್ಕಾರದ ಭರವಸೆ! 
ಹಾರ್ಟ್ ಸರ್ಜರಿಯಾ? 
ಬಿ. ಪಿ. ಎಲ್ ಕಾರ್ಡಾ? 
ಪಡೆದುಕೋ 
 ಉಚಿತ ಸೇವೆ.....  
ಬಡವನು  ಸಂತುಷ್ಟ.  

ಖಾಸಗಿ ಆಸ್ಪತ್ರೆಯ 
ಸರ್ಜರಿಯ ಡಾಕ್ಟರ್ 
ಗಂಬೀರತೆಯಿಂದ, 
ಸರಕಾರದ ವಸ್ತುಗಳು 
 ತುಕ್ಕು ಹಿಡಿದಿದೆ 
ಜಾಗ್ರತೆ !!
ನಮ್ಮದು ಒರಿಜಿನಲ್ 
 ...ಅದನ್ನೇ ಹಾಕಿ....  
ಕೌಂಟರ್ ನಲ್ಲಿ 
ಕಟ್ಟಿ ಬಾ.  
ಬಡವನಿಗೆ ಸಂಕಷ್ಟ.  

ವಿವಾದ


ವಿದೇಶಾಂಗ ಮಂತ್ರಿ 
ವಿದೇಶದಲ್ಲಿರುವವರಿಗೆ 
ಸಹಾಯ ಮಾಡಿ 
ವಿವಾದ,
ಪ್ರವಾಸ ಮಂತ್ರಿಯಾದ 
ಪ್ರಧಾನಿಯಿಂದ ದಿನಕ್ಕೊಂದು 
ವಿವಾದ,
ವಿದೇಶದ ಕಪ್ಪು ಹಣ ತರುತ್ತೇನೆಂದ 
ಭಾಷಣಗಳಿಂದ 
ಪದೇ ಪದೇ 
ವಿವಾದ,
ಮಂದಿರ ಎಂದು ಹೇಳಿ 
ಮಾಡಿರುವವರು 
ಬರೀ 
ವಿವಾದ,
ಹೌದು!!!
ಇದು ಸ್ವಚ್ಚ ಭಾರತದ 
ಕನಸು ಹೇಳಿಕೊಟ್ಟವರ 
ನಂಬಿ ಹಾಕಿದ ಮತಕ್ಕೆ 
ಸಿಕ್ಕಿದ ಅಚ್ಚೇ ದಿನ್.....

Monday, June 15, 2015

ಮಾನವೀಯತೆಯ ಗುಣ

ತಲವಾರಿನಿಂದ ಕೈ ಕಡಿದಾಗ
ಚಿಮ್ಮಿ ಹರಿದಿದ್ದು ರಕ್ತ,
ಕೈ ಜೋಡಿಸಲು ಬಾಟಲಿಯಿಂದ
ಸಿರಿಂಜಿನಲ್ಲಿ ಹರಿದದ್ದೂ ರಕ್ತ.

ಕೈ ಕಡಿದಾತನ
ಮಯ್ಯಲ್ಲಿ ಬರೀ ರಕ್ತದ ಕಣ,
ರಕ್ತ ನೀಡಿದಾತನ
ರಕ್ತದಲ್ಲಿ ಮಾನವೀಯತೆಯ ಗುಣ.

ಕೈ ಕಡಿಯುವವರು,
ರಕ್ತ ಹರಿಸುವವರು,
ರಕ್ತ ನೀಡುವ
ಮಾನವರಾಗಬೇಕಾಗಿದೆ. 

ಪ್ರೇರೇಪಣೆ

ಅವಳು 
ಓಡಿ ಹೋದಳು 
ಓಡಿ ಹೊದಳು 
ಎಂದು
ಬಾಯ್ಬಿರಿದುಕೊಂಡು 
ಇನ್ನಷ್ಟು 
ಮಂದಿಗೆ 
ಓಡಿ ಹೋಗಲು 
ಪ್ರೇರೇಪಣೆ ನೀಡದಿರಿ 

Monday, May 18, 2015

ಯಾರಿಗೂ ನೀಡದ ರಕ್ತ

ಮಡದಿಗೆ
ರಕ್ತ ಬೇಕೆಂದು
ಡಾಕ್ಟರ್ ಹೇಳಿದಾಗ
ರಕ್ತಕ್ಕಾಗಿ
ಇತರರಿಗೆ 
ಮೊರೆ ಇಟ್ಟ 
ಪತಿ
ಬೇರೊಬ್ಬ ರಕ್ತ
ಕೊಟ್ಟ ಮೇಲೆ
ತನ್ನಲ್ಲಿ ಯಾರಿಗೂ 
ನೀಡದ ರಕ್ತವಿದೆಯೆಂದು
ನೆನಪಿಸಿಕೊಂಡ

ಪಾಪ

ವಿರೋಧಿಸಲಿಕ್ಕಾಗಿಯೇ 
ಚುಚ್ಚಿ ಮಾತನಾಡುತ್ತಿದ್ದ 
ಒಬ್ಬಾತ 
ತನ್ನನ್ನು ತಾನೇ
ಪಾಪಗಳಿಂದ
ಚುಚ್ಚಿಸಿಕೊಳ್ಳುತ್ತಿದ್ದ.

ಒಗ್ಗಟ್ಟು ಜೀವಂತಿತವಾಗಿರಲಿ.

ಮಾರ್ಚ್ 13 ರಂದು ತೊಕ್ಕೊಟ್ಟಿನ ಖಾಸಗಿ ಶಾಲೆಯೊಂದರ ವಿಧ್ಯಾರ್ಥಿನಿ ಮೇಲೆ ಅದೇ ಶಾಲೆಯ ಬಸ್ ಡ್ರೈವರ್ ಲೈಂಗಿಕ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಕ್ರೋಶಕ್ಕೆ ಕಾರಣವಾಗಿತ್ತು ವಿವಿಧ ಸಂಘ ಸಂಶ್ಥೆ ಗಳು, ವಿಧ್ಯಾರ್ಥಿ ಸಂಘಟನೆಗಳು ಡೀಸಿ ಕಚೇರಿ ಮತ್ತು ಶಾಲಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತ್ತು ಹಲವು ಸಂಘ ಸಂಸ್ಥೆಗಳು ನಿರಂತರವಾಗಿ ಆಡಳಿತ ವರ್ಗಕ್ಕೆ ಪ್ರಕರಣದ ಗಂಭೀರತೆಯನ್ನು ಅರ್ಥೈಸುವ ಪ್ರಯತ್ನ ನಡೆಸುತ್ತಿತ್ತು. ಶಾಲಾ ಆಡಳಿತ ಮಂಡಲಿ ಆರೋಪಿಯನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಿರುವುದು ವಿವಿಧ ಸಂಘ ಸಂಸ್ಥೆಗಳ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿತ್ತು. ವಿವಿಧ ಸಂಘಟನೆಗಳ ಒಗ್ಗಟ್ಟಿನ ಹೋರಾಟದ ಫಲವಾಗಿ ಪ್ರಕರಣ ನಡೆದು ತಿಂಗಳುಗಳು ಕಳೆದರು ಪ್ರಕರಣ ಜೀವಂತವಾಗಿತ್ತು. ಪೋಷಕರು ತಮ್ಮ ಮಕ್ಕಳ ಬಗ್ಗೆ ಅತೀವ ಕಾಳಜಿ ವಹಿಸಬೇಕಾದ ಬಗ್ಗೆ ಸಮಾಜದಲ್ಲಿ ಜಾಗೃತಿಯಾಯಿತು, ಜಿಲ್ಲೆಯ ಶಾಲಾ ಆಡಳಿತ ಮಂಡಳಿ ಶಿಶ್ತು ಕ್ರಮಗಳನ್ನು ಪಾಲಿಸುವ ಅಗತ್ಯವು ಬಂದೊದಗಿತು. ಸಂಘ ಸಂಸ್ಥೆಗಳು ಸಿ ಐ ಡಿ ತನಿಖೆಯಾಗಬೇಕೆಂದು ಒತ್ತಾಯಿಸದಿದ್ದರು ರಾಜ್ಯ ಸರಕಾರ ಇದನ್ನೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ಇದೀಗ ಸಿ ಐ ಡಿ ತನಿಖೆಗೆ ಒಪ್ಪಿಸಿದೆ. ಇದು ಎಲ್ಲಾ ನಾಗರಿಕರ, ಸಂಘ ಸಂಸ್ಥೆಗಳ ಒಗ್ಗಟ್ಟಿನ ಹೋರಾಟಕ್ಕೆ ಸಧ್ಯ ಸಂದ ಜಯ ಎನ್ನಬಹುದು. ಈ ಪ್ರಕರಣದಲ್ಲಿ ನ್ಯಾಯ ಒದಗಿಸಲು ಇನ್ನಷ್ಟು ಸುದೀರ್ಘ ಪಯಣಿಸಳಿರುವ ಕಾರಣ ಒಗ್ಗಟ್ಟು ಜೀವಂತಿತವಾಗಿರಲಿ.

Friday, May 1, 2015

ನ್ಯಾಯಾಲಯದ ಮೇಲೆ ನಂಬಿಕೆ ಇಡಬಹುದಾದಂತ ತೀರ್ಪುಗಳು.


ದೇಶದ ಹಲವು ಜೈಲುಗಳಲ್ಲಿ ಉಗ್ರಗಾಮಿಗಳು ಎನ್ನುವ ಹೆಸರಿನಲ್ಲಿ ಹಲವು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ ವಿಚಾರಣೆಗಳು ನಡೆಯುತ್ತಿದೆ ಹಲವು ಬಾರಿ ಸಾಕ್ಷ್ಯಾ ಧಾರಗಳ ಕೊರತೆ ಎಂದು ಹಲವು ಅಮಾಯಕ ಯುವಕರನ್ನು ಹೊರಬಿಡಲಾಗಿದೆ ಇನ್ನಷ್ಟು ಅಮಾಯಕ ಯುವಕರು ಜೈಲಿನಲ್ಲಿ ಬಂಧಿಯಾಗಿದ್ದಾರೆ. ರಾತ್ರೋರಾತ್ರಿ ಮನೆಗೆ ನುಗ್ಗಿ ಯುವಕರನ್ನು ಎಳೆದು ಕೊಂಡು ಹೋಗುವ ಕೆಲಸಗಳು ಅಗಾಗ ನಡೆಯುತ್ತಿರುತ್ತದೆ ಇದೆಲ್ಲದರ ಮಧ್ಯೆ ಕಾನೂನಿನ ಮೇಲೆ ನಂಬಿಕೆ ಇಡಬಹುದಾದಂತಹ ತಿರ್ಪುಗಳು ಹೊರಬೀಳುತ್ತಿರುತ್ತದೆ.
ಹುಬ್ಬಳ್ಳಿಯ 1ನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದ್ದು ಇದರಲ್ಲಿ 2008ರಲ್ಲಿ ಹುಬ್ಬಳ್ಳಿ ಮಾತ್ತು ರಾಜ್ಯದ ಇತರೆಡೆಗಳಿಂದ ಬಂಧಿಸಲ್ಪಟ್ಟಿದ್ದ 17ಮಂದಿ ಯುವಕರನ್ನು ಕೇಸಿನಿಂದ ಖುಲಾಸೆಗೊಳಿಸಲಾಗಿದೆ, ಇವರೆಲ್ಲರೂ ಸಿಮಿ ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಪಟ್ಟಿದ್ದರು ಮತ್ತು ವಿದ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು ಎನ್ನುವ ಆರೋಪ ಇತ್ತು, ಬಾಂಬ್ ಮತ್ತು ಡಿಟೋನೇಟರ್ ವಷಪಡಿಸಲಾಗಿತ್ತು. ಸುದೀರ್ಘವಾದ ತನಿಖೆಯಲ್ಲಿ ಸುಮಾರು 278 ರಷ್ಟು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿತ್ತು, ನಾರ್ಕೋ ಎನಾಲಿಸಿಸ್ ನಂತಹ ಪರೀಕ್ಷೆಗಳನ್ನು ಕೂಡಾ ನಡೆಸಲಾಗಿತ್ತು ಕೊನೆಯಲ್ಲಿ ನ್ಯಾಯಾಲಯ ಸಾಕ್ಷಾಧಾರಗಳ ಕೊರತೆಯಿಂದ ಇವರನ್ನೆಲ್ಲ ಕೇಸಿನಿಂದ ಮುಕ್ತಗೊಳಿಸಿದೆ.
ನಿವೃತ್ತ ಡಿವೈಯೆಸ್ಪಿ ಒಬ್ಬರ ಅಭಿಪ್ರಾಯದಂತೆ ಸಾಕ್ಷಾಧಾರಗಳೆಲ್ಲ ಬಂಧಿತರ ವಿರುದ್ದವಾಗಿಯೇ ಇತ್ತು ಆದರೆ ಅದನ್ನು ನ್ಯಾಯಿಕರಿಸುವಲ್ಲಿ ಪ್ರೊಷಿಕ್ಯೂಶನ್ ವಿಫಲವಾಯಿತು ಮತ್ತು ನಾರ್ಕೋ ಎನಾಲಿಸಿಸ್ ಪರೀಕ್ಷೆಯಲ್ಲಿ ಇವರೆಲ್ಲ ಬಾಯಿ ಬಿಟ್ಟಿದ್ದರು ಆದರೂ ಹೊರಬಂದರೂ ಎಂದು ಬೇಸರ ವ್ಯಕ್ತಪಡಿಸುವಂತಹ ಮನೋಸ್ಥಿತಿ. ಎನೇ ಆಗಲಿ 17 ಅಮಾಯಕ ಯುವಕರು ಉಗ್ರ ಪಟ್ಟಿಯಿಂದ ವಿಮುಕ್ತಿ ಹೊಂದಳಿದ್ದಾರೆ ಇನ್ನಷ್ಟು ಅಮಾಯಕರು ಶೀಘ್ರವೇ ಹೊರಬರಲಿ. ಈ ಕೇಸಿಗೆ ಸಂಬಂಧಪಟ್ಟಂತೆ ರಿಯಾಜ್ ಭಟ್ಕಳ್, ಯಾಸೀನ್ ಭಟ್ಕಳ್, ಇಕ್ಬಾಳ್ ಭಟ್ಕಳ್ ರನ್ನು ವಿಚಾರಣೆಗೊಳಡಿಸಿಲ್ಲ ಇವರನ್ನು ಹೊರತು ಪಡಿಸಿ ಉಳಿದ 17 ಮಂದಿಯನ್ನು ಕೇಸಿನಿಂದ ಖುಲಾಸೆಗೊಳಿಸಲಾಗಿದೆ. ಇ ದೇಶದ ಕಾನೂನಿನ ಮೇಲೆ ನಂಬಿಕೆ ಇಡಬಹುದಾದಂತಹ ತೀರ್ಪುಗಳು ನ್ಯಾಯಲಯದಿಂದ ಹೊರಬೀಳುತ್ತಿರುವುದರಲ್ಲಿ ಸಂತೋಷವಿದೆ ಅದು ಕಪೋಲಕಲ್ಪಿತ ವರದಿ ಪ್ರಕಟಿಸುವ ಕೆಲ ಮಾಧ್ಯಮಗಳಿಗೂ ಅರ್ಥವಾಗಲಿ.

Monday, February 2, 2015

ಮುಸ್ಲಿಂ ಐಕ್ಯ ಕಮಿಟಿಯ ಅಗತ್ಯ!!


ಫ್ಯಾಸಿಸ್ಟ್ ವ್ಯಕ್ತಿಗಳ ಪರವಾದ ಸರಕಾರ ದೇಶದಲ್ಲಿ ಆಡಳಿತಕ್ಕೆ ಬಂದ ನಂತರ ಕೋಮುವಾದ ಹೆಚ್ಚಾಗತೊಡಗಿದೆ, ಅದರಲ್ಲೂ ಕೋಮುವಾದದ ದಳ್ಳುರಿಗೆ ಬುದ್ದಿವಂತರ ಜಿಲ್ಲೆ ಹೆಚ್ಚು ನಾಶ ನಷ್ಟ ಅನುಭವಿಸಿದೆ, ಮಾತ್ರವಲ್ಲ ಸಹಬಾಳ್ವೆಯಿಂದ ಬದುಕುತ್ತಿದ್ದ ಜನರ ಮನಸ್ಸುಗಳಲ್ಲಿ ಒಡಕುಂಟು ಮಾಡುವಲ್ಲಿ ಸಫಳತೆಯತ್ತ ಸಾಗುತ್ತಿದೆ. ಪ್ರತಿನಿತ್ಯ ಜಿಲ್ಲೆಯಲಿ ಅನುಮಾನದ ನೆಲೆಯಲ್ಲಿ ಒಂದಲ್ಲ ಒಂದು ಅಹಿತಕರ ಘಟನೆ ನಡೆಯುತ್ತಿದೆ, ಸಾಮಾನ್ಯವಾಗಿ ಇಲ್ಲಿ ಹೆಚ್ಚು ಅನಾಹುತಕ್ಕೆ ಒಳಗಾಗಿರುವುದು ಅಮಾಯಕರು, ಅದರಲ್ಲೂ ಮುಸ್ಲಿಮರು. ಮುಸ್ಲಿಮರು ಅನಾಯಕ್ಕೊಳಗಾಗುವ ಸಮಯದಲ್ಲಿ ಹೆಚ್ಚಿನವರಿಗೆ ಮುಸ್ಲಿಮರ ಮಧ್ಯೆ ಇರುವ ಭಿನ್ನತೆಯನ್ನು ಕೊನೆಗಾಣಿಸಬೇಕು ಎಂದು ನೆನಪಾಗುತ್ತದೆ, ಹಲವರು ಆ ನಿಟ್ಟಿನಲ್ಲಿ ಐಕ್ಯತೆಗಾಗಿ ಕೂಡಾ ಶ್ರಮಿಸುತ್ತಿದ್ದಾರೆ.

ಇವುಗಳ ಮಧ್ಯೆ ವೇದಿಕೆ ಏರಿದ ಕೆಲವು ಮೇಧಾವಿಗಳು ತೀವ್ರವಾದಿಗಳು, ಕುಶ್ಕ ಮತ್ತು ಇತರ ಮಾತುಗಳನ್ನು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಸುತ್ತಿದ್ದಾರೆ. ಅವರೊಂದಿಗೆ, ಇವರೊಂದಿಗೆ ಕೈ ಜೋಡಿಸಳು ಸಾಧ್ಯವಿಲ್ಲ ಎಂದು ಘಂಟಾಘೋಸವಾಗಿ ಘೋಷಿಸುತ್ತಾರೆ. ಎಲ್ಲಿಯೋ ಕಲ್ಲು ಬಿದ್ದ ಕೆಲ ದಿನಗಳ ನಂತರ ಈ ಕಚ್ಚಾಟ ಮತ್ತಷ್ಟು ಹೆಚ್ಚುತ್ತದೆ, ಇದರ ಮಧ್ಯೆ ಹೌದು ಮುಸ್ಲಿಮ್ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯಗಳ ಕಾರಣದಿಂದ ಕಚ್ಚಾಟ ನಡೆಯುತ್ತಿದೆ ಎಂದು ಹೇಳಿದರೆ ಮುಸ್ಲಿಮರ ಕಚ್ಚಾಟದ ಬಗ್ಗೆ ಏಕೆ ಮಾತನಾಡುತ್ತೀರಿ ಎಂದು ಹೇಳುವ ಆವೇಶದ ತಂಪಲ್ಲಿ ಬೆಳೆಯುತ್ತಿರುವ ಯುವಕರ ಗುಂಪು ಕೂಡಾ ಬೆಳೆದು ಬರುತ್ತಿದೆ. ಅಭಿಪ್ರಾಯಗಳನ್ನು ಉಪದೇಶ ಎಂದು ಪರಿಗಣಿಸಿ ಉಪದೇಶ ಬೇಡ ಎನ್ನುವ ಕಡೆಗನಿಸುವಿಕೆ ಕೂಡಾ ನಮ್ಮಲ್ಲಿದೆ.

ಒಬ್ಬರ ಜೊತೆ ಬೆರೆತು ಅರಿತುಕೊಂಡಾಗ ಮಾತ್ರ ವ್ಯಕ್ತಿತ್ವಗಳನ್ನು ಅರಿಯಲು ಸಾಧ್ಯ ಇಲ್ಲದೆ ಹೋದಲ್ಲಿ ಅದು ಮತ್ತಷ್ಟು ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಮುಸ್ಲಿಮರು ಯಾರ ವಿರುದ್ದವೂ ಒಗ್ಗಟ್ಟಾಗುವ ಅಗತ್ಯ ಇಲ್ಲ ಆದರೆ ಮುಸ್ಲಿಮರು ಮುಸ್ಲಿಮರು ಎನ್ನುವ ನೆಲೆಯಲ್ಲಿ ಒಗ್ಗಟ್ಟಾಗುವ ಅಗತ್ಯ ಖಂಡಿತಾ ಇದೆ, ಒಗ್ಗಟ್ಟಾಗುವ ಯೋಚನೆ ಇರುವ ಪ್ರತಿಯೊಬ್ಬನು ಬಿಕ್ಕಟ್ಟನು ಪ್ರಶ್ನಿಸಲೇಬೇಕಾಗಿದೆ. ಸಾಮಾನ್ಯವಾಗಿ ಮುಸ್ಲಿಮರಿಗೆ ಹೊಡೆತ ಬಿದ್ದು ಸಾಕಷ್ಟು ನಾಶ ನಷ್ಟ ಸಂಭವಿಸಿದ ನಂತರ ಮುಸ್ಲಿಂ ನಾಯಕರು ಸಭೆ ಸೇರಿ ಚರ್ಚಿಸುತ್ತಾರೆ ಮತ್ತು ಅಲ್ಲಿಯ ತಿರ್ಮಾನಗಳು ಒಂದು ಸಮಯಕ್ಕೆ ಮಾತ್ರ ಸೀಮಿತ.

ಬರಲಿರುವ ದಿನಗಳು ಅದು ಘರ್ ವಾಪಸಿ, ಲವ್ ಜಿಹಾದ್ ಮತ್ತು ಇನ್ನಿತರ ವ್ಯವಸ್ಥಿತ ಷಡ್ಯಂತ್ರಗಳ ದಿನಗಳಾಗಿವೆ, ಅವುಗಳಿಂದ ಹೆಚ್ಚು ಇಕ್ಕಟ್ಟಿಗೆ ಸಿಳುಕಿಕೊಳ್ಳುವವರು ಮುಸ್ಲಿಮರು ಈ ನಿಟ್ಟಿನಲ್ಲಿ ಮುಸ್ಲಿಂ ನಾಯಕರ ಪ್ರತಿನಿಧಿಗಳು ಸೀಮಿತ ಸಮಯಕ್ಕೆ ಮಾತ್ರ ಒಂದಾಗುವ ಪರಿಸ್ಥಿತಿಗೆ ಸೀಮಿತ ಆಗದೆ ಒಂದು ಶಾಶ್ವತ ಮುಸ್ಲಿಂ ಐಕ್ಯ ಕಮಿಟಿಯನ್ನು ಸ್ಥಾಪಿಸಬೇಕಾಗಿದೆ. ವಿವಿಧ ಮುಸ್ಲಿಂ ಸಂಘಟನೆಗಳ, ಸಂಸ್ಥೆಗಳ ನಾಯಕರ ಪ್ರತಿನಿಧಿ ಕೂಟವನ್ನು ರಚಿಸಿ ಚರ್ಚಿಸುವ ವಿಶಾಲ ಮನೋಭಾವ ಬೆಳೆದುಬರಬೇಕಾಗಿದೆ, 

ಮುಸ್ಲಿಮರು ಒಂದಾಗಿ ಸ್ಥಾಪಿಸಲ್ಪಡುವ ಸಂಸ್ಥೆ ಅಹಿತಕರ ಘಟನೆ ನಡೆದಾಗ ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವ ಮತ್ತು  ಅದರ ಬಗ್ಗೆ ಪ್ರತಿಭಟಿಸುವ ಕೆಲಸ ಮಾಡಬೇಕಾಗಿದೆ, ಕಾನೂನು ಹೋರಾಟಗಳನ್ನು ರೂಪಿಸಿಕೊಳ್ಳಬೇಕಾಗಿದೆ, ಮುಸ್ಲಿಮರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕಂಡುಕೊಳ್ಳಬೇಕಾಗಿದೆ, ಆಗ ಯಾರನ್ನು ಕೂಡ ಅವರು ಅವರಷ್ಟಕ್ಕೆ ಪ್ರತಿಭಟಿಸಿದ್ದಾರೆ ಚರ್ಚೆಗಳು ನಡಿದಿಲ್ಲ ಎನ್ನುವ ಹೇಳಿಕೆ ನೀಡಿ ತಪ್ಪಿಸಿಕೊಳ್ಳುವ ಪ್ರಮೇಯಯವನ್ನು ಇಲ್ಲವಾಗಿಸಬಹುದು. ಒಟ್ಟಲ್ಲಿ ಬಹುಕಾಲದ ಬೇಡಿಕೆ ಎಂಬಂತೆ ಮುಸ್ಲಿಮರು ಒಂದು ಮುಸ್ಲಿಂ ಐಕ್ಯ ಕಮಿಟಿಯನ್ನು ಸ್ಥಾಪಿಸಬೇಕಾಗಿದೆ, ಹಿತಾಶಕ್ತಿಗಳನ್ನು, ಪ್ರತಿಷ್ಠೆಗಳನ್ನು ಬದಿಗಿಟ್ಟು ನಾಯಕರು ಉದಾತ್ತವಾಗಿ ಯೋಚಿಸಬೇಕಾಗಿದೆ. ಭಟ್ಕಳದ ತಂಝೀಮ್ ಅಥವಾ ಉಡುಪಿಯ ಮುಸ್ಲಿಂ ಒಕ್ಕೂಟವನ್ನು ಉದಾಹರಣೆಯಾಗಿ ತೆಗೆದುಕೊಂಡು ಮುನ್ನಡೆಯಬೇಕಾಗಿದೆ. 

Saturday, January 17, 2015

ಟೀವಿ ತೆರೆದೆ!!ಪರದೆಯಲಿಭಯೋತ್ಪಾದಕ ಮುಸ್ಲಿಂ,ಭಟ್ಕಳದ ನಂಟು,ದುಬೈನ ಸಂಬಂಧ,ಹವಾಲ ಹಣ,ಸಂಚು!!!ಹೊರ ನಡೆದೆ!!ಆಸ್ಪತ್ರೆಯಲಿ,ಅಪಘಾತ ಸ್ಥಳದಲಿ,ರಕ್ತ ನೀಡುವಲಿ,ಮಾನವೀಯತೆಯಲಿ,ಮುಸ್ಲಿಮನ ನಂಟು..

ಧಾರ್ಮಿಕತೆಗೆ ತೊಡಕಾದ ಆರ್ಥಿಕ ವ್ಯವಸ್ಥೆ!!


ಮಾಲಿಕನಾದವನು ಕೆಲಸಗಾರನಿಗೆ ಒಳ್ಳೆಯ ಸಂಬಳ ನೀಡಿ ಆತನನ್ನು ಚೆನ್ನಾಗಿ ನೋಡಿಕೊಂಡರೆ ಕೆಲಸಗಾರನು ನಿಷ್ಟೆಯಿಂದ ಕೆಲಸ ಮಾಡಿ ಮಾಲಿಕನಿಗೆ ಅತಿ ಪ್ರೀಯವಾದ ವ್ಯಕ್ತಿಯಾಗಿ ಬಹು ಕಾಲದ ವರೆಗೆ ಆತನ ಬಳಿಯಲ್ಲಿಯೇ ಕೆಲಸ ಮಾಡಿಕೊಂಡಿರುತ್ತಾನೆ. ಆ ಮೂಲಕ ಮಾಲಕ ವಿಶ್ವಾಸ ಗಳಿಸಿಕೊಳ್ಳುತ್ತಾನೆ, ಒಂದು ವೇಳೆ ಕೆಲಸಗಾರನ ಆರ್ಥಿಕತೆಯ ಮೇಲೆ ಹೊಡೆತ ಬಿದ್ದರೆ ಆತ ಸಂಪಾದನೆಗಾಗಿ ಅಥವಾ ಆರ್ಥಿಕತೆಯ ಸುಧಾರಣೆಗಾಗಿ ಕೆಲವು ಅಡ್ಡ ದಾರಿಗಳನ್ನು ನೋಡಿಕೊಳ್ಳುತ್ತಾನೆ. ವಿಷಯವನ್ನು ಪ್ರಸ್ತಾಪಿಸುವುದಾದರೆ ಪ್ರಸ್ತುತ ಬಹಳ ಹೊಣೆಗಾರಿಕೆ ಮತ್ತು ಪ್ರಜ್ನಾವಂತಿಕೆಯಿಂದ ಕೆಲಸ ನಿರ್ವಹಿಸಬೇಕಾಗಿದ್ದ ಧಾರ್ಮಿಕ ವಿದ್ವಾಂಸರುಗಳು ಕೆಲವೊಮ್ಮೆ ಅಸಹಜ ತಪ್ಪುಗಳ ಹೊಣೆ ಹೊತ್ತುಕೊಳ್ಳಬೆಕಾಗುತ್ತದೆ, ಆರ್ಥಿಕತೆಯ ಪರಿಣಾಮ ಈ ತಪ್ಪುಗಳ ನಿರ್ಮಾರ್ತ್ ಎಂದು ಬಣ್ಣಿಸಿದರೆ ತಪ್ಪಾಗದು.


ಬಹಳ ನಿಷ್ಟೆಯಿಂದ ಕಾರ್ಯನಿರ್ವಹಿಸುವ ಧಾರ್ಮಿಕ ವಿದ್ವಾಂಸರಿಗೆ ಆರ್ಥಿಕತೆ ಒಂದು ಸಮಸ್ಯೆಯಾಗದು ಆದರೆ ವಾಸ್ತವಿಕತೆಯನ್ನು ಅರಿತು ಜಮಾತ್ ಕಮಿಟಿಗಳು ಸಮಸ್ಯೆಯ ಮೂಲ ವ್ಯವಸ್ಥೆಗೆ ಪರಿಹಾರ ಕಲ್ಪಿಸಿದರೆ ಒಂದು ಸುಭದ್ರ ಧಾರ್ಮಿಕತೆಯ ಅಡಿಪಾಯದಲ್ಲಿ ಬೆಳೆದ ತಲೆಮಾರನ್ನು ಬೆಳೆಸಬಹುದು. ಧಾರ್ಮಿಕ ವಿದ್ಯಾಭ್ಯಾಸ ನೀಡುವ ವ್ಯಕ್ತಿಯೊಬ್ಬರಿಗೆ ತನ್ನ ಆರ್ಥಿಕ ಪರಿಸ್ಥಿತಿಯ ಚಿಂತನೆ ದೊಡ್ಡ ಸಮಸ್ಯೆಯಾಗಿ ಅದನ್ನು ಮಕ್ಕಳೊಂದಿಗೆ ತೋರ್ಪಡಿಸುವ ಸ್ಥಿತಿ ಒದಗಿ ಬಂದಿದೆ, ಕೆಲವೊಮ್ಮೆ ಆರ್ಥಿಕತೆಯ ಪರಿಣಾಮದಿಂದ ದಾಂಪತ್ಯಕ್ಕೆ ಕಾಲಿಡದೇ ಇದ್ದಲ್ಲಿ ಅದು ಇನ್ನಷ್ಟು ಗಂಭೀರ ಸಮಸ್ಯೆಗಳಿಗೆ ನಾಂದಿಯಾಗಬಹುದು ಮತ್ತು ಇಂತಹ ಸಮಸ್ಯೆಗಳು ಮಕ್ಕಳು ಮತ್ತು ಹೆತ್ತವರ ಮಧ್ಯೆ ಚರ್ಚೆಯಾಗಿ ಪ್ರತಿಷ್ಟೆಯ ಕಾರಣದಿಂದ ಮನಸ್ಸಿನಲ್ಲಿ ಬಚ್ಚಿಡುವಂತೆ ಆಗಿರುವುದೇ ಹೆಚ್ಚು. ಅಲ್ಲಲ್ಲಿ ನಡೆಯುವ ಕೆಲವು ಗಂಭೀರ ಸಮಸ್ಯೆಗಳು ಲೋಕಲ್ ಸಮಸ್ಯೆ ಎಂದು ಪರಿಗಣಿಸಿ ಚರ್ಚೆಯಾಗದೆ ಉಳಿದಿದೆ. ಆದರೆ ಮುಂದೊಮ್ಮೆ ಇದು ಬೆಳೆದು ಬರುವ ತಲೆಮಾರಿನ ಮೇಲೆ ಬಹಳ ವ್ಯತಿರಿಕ್ತ ಪರಿಣಾಮವನ್ನು ಬಿರುತ್ತದೆ ಮತ್ತು ಬೀರುತ್ತಿದೆ.


ನ್ಯಾಯಯುತವಾದ ಗೌರವಧನ, ಸಂಬಳ ಮತ್ತು ಅವರ ಅರ್ಥಿಕತೆಯ ಬಗ್ಗೆ ಅರಿತು ಜೊತೆಗೂಡಿ ಸಮಸ್ಯೆಗೆ ಪರಿಹಾರ ಕಲ್ಪಿಸಿದರೆ ಅವರ ಒಲವನ್ನು ಹೆಚ್ಚಾಗಿಸಬಹುದು ಮತ್ತು ಇದು ಸಮಸ್ಯೆಯ ವಾಸ್ಥವಿಕತೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ಅವರನ್ನೇ ಅಣಕಿಸುವಂತೆ ಮನುಷ್ಯ ನಿರ್ಮಿತ ಕೆಮರಾಗಳನ್ನು ಅಳವಡಿಸುವ ಪ್ರಮೆಯವೂ ಒದಗದು. 4000 ದಿಂದ 5000 ದ ವರೆಗೆ ದುಡಿದು ದೇವನಿಗೆ ತಲೆಬಾಗಿ ಜೀವನ ನಡೆಸುವ ಧಾರ್ಮಿಕ ವಿದ್ವಾಂಸರನ್ನು ಸಾಮಾನ್ಯರಾದ ನಾವು ಗೌರವಿಸಲೇಬೇಕು. ಧಾರ್ಮಿಕ ವಿದ್ವಾಂಸರ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ಬಗ್ಗೆ ಬಲು ದೊಡ್ಡ ಚರ್ಚೆ ಅಸ್ತಿರಗೊಂಡಿರುವ ಸಮುದಾಯಕ್ಕೆ ಕಾಲಘಟ್ಟದ ಅಗತ್ಯ.