ಮನೆಯಿಡೀ
ಒಂದರ್ದ ಘಂಟೆ
ಕತ್ತಲೆಯಾದಾಗ
ಹೊರಟಿತು ಕರೆಯೊಂದು
ವಿಚಾರಣೆಯ
ನೆಪದಲ್ಲಿ ಕರಂಟಿಂದು
ಬಂದೀತೆ ಎಂದು
ಜೋರು ದನಿಯಲಿ.
ಕರೆಂಟು
ಕಾಣದ ಮನೆಗಳು,
ಹಳ್ಳಿ ಕೇರಿಗಳು,
ಇರುವ ದೇಶದಲ್ಲಿ
ಒಂದರ್ದ ಘಂಟೆ
ಕರೆಂಟೋದರೆ
ಚಿಂತೆಯೇಕನಿಸಿತು.
ಕೋಟಿ ಕೋಟಿ
ಲೂಟಿ ಮಾಡಿದ
ಘನ ನಾಯಕರು
ಬಚ್ಚಿಟ್ಟು ಹೋಗಿರುವರು
ಜೈಲು ಕಂಬಿಗಳೆಡೆಗೆ,
ತೀರ್ಪಿನಲಿ
ಅಭಿಮಾನಿಗಳಿಗೆ
ಕರೆಂಟು ಶಾಕು
ನೀಡಿದವರಾಗಿ,
ಜನಮಾನಸವನು
ಬಡತನದ
ಬೇಗುದಿಯಲಿ
ಅಲೆದಾಡಿಸಿದವರಾಗಿ.
No comments:
Post a Comment