Tuesday, October 14, 2014

ಕರೆಂಟು ಶಾಕು

ಮನೆಯಿಡೀ 
ಒಂದರ್ದ ಘಂಟೆ 
ಕತ್ತಲೆಯಾದಾಗ 
ಹೊರಟಿತು ಕರೆಯೊಂದು 
ವಿಚಾರಣೆಯ 
ನೆಪದಲ್ಲಿ ಕರಂಟಿಂದು 
ಬಂದೀತೆ ಎಂದು 
ಜೋರು ದನಿಯಲಿ.

ಕರೆಂಟು 
ಕಾಣದ ಮನೆಗಳು, 
ಹಳ್ಳಿ ಕೇರಿಗಳು, 
ಇರುವ ದೇಶದಲ್ಲಿ 
ಒಂದರ್ದ ಘಂಟೆ 
ಕರೆಂಟೋದರೆ 
ಚಿಂತೆಯೇಕನಿಸಿತು.

ಕೋಟಿ ಕೋಟಿ 
ಲೂಟಿ ಮಾಡಿದ 
ಘನ ನಾಯಕರು 
ಬಚ್ಚಿಟ್ಟು ಹೋಗಿರುವರು 
ಜೈಲು ಕಂಬಿಗಳೆಡೆಗೆ, 
ತೀರ್ಪಿನಲಿ
ಅಭಿಮಾನಿಗಳಿಗೆ 
ಕರೆಂಟು ಶಾಕು 
ನೀಡಿದವರಾಗಿ, 
ಜನಮಾನಸವನು 
ಬಡತನದ 
ಬೇಗುದಿಯಲಿ 
ಅಲೆದಾಡಿಸಿದವರಾಗಿ.

No comments: