Tuesday, October 14, 2014

ದೇವನ ಭಯವಿರಲಿ

ಕಾನಣದ ಮಧ್ಯೆ
ಸಾಗುವಾಗ
ವನ್ಯ ಪ್ರಾಣಿಯ
ಭಯ ಕಾಡಿತು.

ಬಿದ್ದು ಸಣ್ಣಗೆ
ರಕ್ತ ಹರಿದಾಗ
ಮಯ್ಯಿಡೀ
ನೋವಾಯಿತು.

ಪುಣ್ಯ ಕಾರ್ಯಗಳೆಡೆಗೆ
ಗಮನ ನೀಡದ
ಆತನಿಗೆ
ದೇವನ
ನೆನಪು ಮರೆಯಾಗಿತ್ತು.

ದೇವನ ಭಯವಿರಲಿ,
ಸೃಷ್ಟಿಗಿಂತ
ಸೃಷ್ಟಿಕರ್ತನ ನೆನಪಾಗಲಿ,
ರಕ್ತ ಕುದಿಯುವ
ನರಕದ ಕಲ್ಪನೆಯಿರಲಿ,
ಮನದಾಳದಲ್ಲಿ ಹೆಚ್ಚು!
ದೇವನಿಗೆ ಜಾಗವಿರಲಿ. 

No comments: