ಪಕ್ಕದ ಬೆಂಚಿನಲ್ಲಿ ಕುಳಿತ ಸಹಪಾಠಿಯೊಬ್ಬ ವಾಗ್ವಾದದ ಕಾರಣದಿಂದ ಪೆನ್ಸಿಲಿನಿಂದ ಚುಚ್ಚಿದರೆ ಅದನ್ನು ಪ್ರಿನ್ಸಿಪಾಲರ ಟೇಬಲಿಗೆ ಕಂಪ್ಲೆಂಟ್ ತಲುಪಿಸುವ ಮೂಲಕ ಆತನಿಗೆ ತಕ್ಕ ಪಾಟ ಕಲಿಸಿ ನ್ಯಾಯ ಪಡೆದುಕೊಳ್ಳಬಹುದು ಎಂದು ಕಾನೂನಿನ ಜ್ನಾನ ಬೆಳೆಸಿಕೊಂಡು ಬಂದವರು ನಾವು. ಸಮಾಜದ ಬದಲಾವಣೆಗೆ ಯಾವ ಪದಗಳಿಂದಲೂ ಅರ್ಥ ಕಲ್ಪಿಸಲು ಸಾಧ್ಯವಿಲ್ಲದ ಕೆಲವು ಸ್ವಘೋಷಿತ ಧರ್ಮ ರಕ್ಷಕರಿಗೆ ಸಜ್ಜನರು ಎನಿಸಿಕೊಂಡವರು ಅದೇ ರೀತಿ ಪ್ರತಿಭಟನೆ ವ್ಯಕ್ತಪಡಿಸಿ ಸಂಸ್ಕೃತಿಯ ಹರಣ ಮಾಡುವುದು ಎಷ್ಟು ಸರಿ? ನ್ಯಾಯ ವಾದವನ್ನು ತಿರಸ್ಕರಿಸಿದ ಪುಂಡರಿಗೆ ಸಂಸ್ಕೃತಿಯ ಹರಣ ಮಾಡಿ ನ್ಯಾಯ ವಾದವನ್ನು ಪಾಲಿಸಲು ಕರೆ ನೀಡುತ್ತೇವೆ ಎನ್ನುವುದು ಮೂರ್ಖತನವಲ್ಲವೇ? ಅನ್ಯಾಯ ವಾದವನ್ನೇ ತಮ್ಮ ಜೀವನದ ಮಹೋನ್ನತ ಗುರಿ ಎಂದು ತಿಳಿದಿರುವ ಅಷಾಡ ಭೂತಗಳಿಗೆ "ಕಿಸ್ ಡೇ" ತಮ್ಮ ಅನ್ಯಾಯದ ಪ್ರವೃತ್ತಿಯನ್ನು ನಿಲ್ಲಿಸಲು ಪ್ರೇರಣೆಯಾಗಬಹುದೇ? ಆಗಬಹುದು ಎನ್ನುವವರು ಚಿಂತಿಸಬೇಕಾಗಿದೆ.
ಅನೈತಿಕ ಪೋಲಿಸ್ ಗಿರಿಯನ್ನು ತಡೆಗಟ್ಟಲು "ಕಿಸ್ ಡೇ" ಒಂದು ಸಾಂಕೇತಿಕ ಪ್ರತಿಭಟನೆ ಎನ್ನಲಾಗುತ್ತಿದೆ, ಪ್ರತಿಭಟಿಸುವ ಉತ್ಸಾಹಕ್ಕೆ ದಿಟ್ಟತನ ಸರಿ ಎಂದೆನಿಸಿದರು ಹಾದಿಯಂತು ಸರಿಯಲ್ಲ. ಈ ಹಾದಿ ಯುವಜನತೆಯನ್ನು ಅಧಪತನಕ್ಕೆ ತಲುಪಿಸಿತ್ತದೆ, ಅಸಂಸ್ಕೃತಿಯ ಬಿಡಾಗಿ ಈ ನಾಡು ಮುಂದುವರೆಯಲು ಪ್ರೆರೇಪಣೆಯಾದ ವಸ್ತುವಾಗುತ್ತದೆ. ಕೊಚ್ಚಿಯಲ್ಲಿ ನಡೆದ "ಕಿಸ್ ಡೇ" "ಗೇ" ವಾದಕ್ಕೆ ಮುನ್ನುಡಿ ಇಟ್ಟಿದೆ, ಸಂಬಂಧ ಕೆಡಿಸುವ ಅಸಂಸ್ಕೃತಿಯ ಸ್ವಚ್ಚಂದ ಅನಾವರಣಕ್ಕೆ ನಾಂದಿ ಹಾಕಿದೆ. ಅನೈತಿಕತೆಯನ್ನು ನಿಲ್ಲಿಸುವ ದಾರಿ ಅನೈತಿಕತೆಯಾದರೆ ಅದು ಮತ್ತಷ್ಟು ಹೊಸ ಅನೈತಿಕತೆಗಳಿಗೆ ದಾರಿ ತೆರೆದು ಕೊಡುತ್ತದೆ.
ವೇಶ್ಯಾವಾಟಿಕೆಯನ್ನು, ಮೂಡನಂಬಿಕೆಗಳನ್ನು, ಅನಿಷ್ಟ ಪದ್ದತಿಗಳನ್ನು, ಮಾದಕದ್ರವ್ಯಗಳನ್ನು, ಅಶ್ಲೀಲ ಚಿತ್ರಗಳನ್ನು ವಿರೋಧಿಸಲು ಸಮಯವಿಲ್ಲದ ಹಣೆ ಪಟ್ಟಿ ದೇಶರಕ್ಷಕರು ಕೋಮುವಾದದ ಬಲವರ್ಧನೆಗೆ ಕೈ ಹಾಕಿ ಅನೈತಿಕ ಪೋಲಿಸ್ ಗಿರಿಯನ್ನು ಸಮರ್ಥಿಸುತ್ತಾರೆ, ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಧೀರರು ಎನ್ನುವ ಹೆಮ್ಮೆ ಬೇರೆ. ಪಬ್ ದಾಳಿ ಮಾಡಿದ್ದಾರೆ ಎಂದು ಪಬ್ ನಲ್ಲಿ ಮತ್ತಷ್ಟು ಕುಡಿದು ಕುಪ್ಪಳಿಸಿದರೆ ಸಮಸ್ಯೆ ಪರಿಹಾರ ಆಗದು, ಭಾರತೀಯತೆಯಲ್ಲಿ ಧಾರ್ಮಿಕತೆಗೆ ಬಹಳಷ್ಟು ಮಹತ್ವ ಇದೆ,
ಸುಸಂಸ್ಕೃತಯೆಯ ಗಟ್ಟಿ ಪಾಯದ ಮೇಲೆ ಭಾರತೀಯತೆ ಅಡಗಿದೆ, ವಿರೋಧಿಸುವ ನೆಪದಲ್ಲಿ ಹಿಡಿತ ತಪ್ಪಿದವುಗಳನ್ನು ಸಂಸ್ಕೃತಿಯ ರಕ್ಷಣೆ ಎನ್ನಲಾಗದು.
"ಕಿಸ್ ಡೇ" ಪರಿಚಯಸ್ಥರಿಗೆ, ಇಷ್ಟಪಟ್ಟವರಿಗೆ, ಪ್ರೇಮಿಗಳಿಗೆ ಕಿಸ್ ಕೊಟ್ಟು ನಡೆಯುವ ಪ್ರತಿಭಟನೆ ಎನ್ನುವ ವಾದ, ಈ ವಾದ ದುರ್ಬಳಕೆಗಳಿಗೆ ವೇದಿಕೆ!! ಕಾಮುಕರಿಗೆ! ಅಸ್ವಾದಿಸುವವರಿಗೆ! "ಗೇ" ಸಂಸ್ಕೃತಿಯನ್ನು ಬೆಳೆಸುವ, ಕುಟುಂಬ ಕಲಹಗಳನ್ನು ಸೃಷ್ಟಿಸುವ ಮಾದರಿ. ಪ್ರತಿಭಟಿಸುವ ನೆಪದಲ್ಲಿ ಕನೂನು ಮೂಲೆಗುಂಪಾಗುತ್ತಿದೆ.
"ಕಿಸ್ ಡೇ" ಮಾಡಿ ಪ್ರತಿಭಟಿಸುವಾಗ ಅಸಂಸ್ಕೃತಿಯ ದಾಸರು ದೇಶ ಒಡೆಯುವ ಕೆಲಸ ಮಾಡುತ್ತಾರೆ, ಅಶ್ಲೀಲ ಪ್ರತಿಭಟನೆಗಳು ದೇಶವನ್ನು ಒಡೆಯುತ್ತಲೇ ಸಾಗುತ್ತದೆ. ನಾಳೆ ಧರ್ಮ ರಕ್ಷಕರು ಎಂದು ಘೋಷಿಸಿ ಕೊಂಡವರು ಮತ್ತಷ್ಟು ಅಟ್ಟಾಡಿಸಿ ಹೊಡೆದಾಗ ಪ್ರತಿಬಟಿಸುವವರು ಮನೆಯ ಮಂಚವನ್ನು ರಸ್ತೆಯಲ್ಲಿಟ್ಟು ಮಧು ಮಿಲನ ಮಾಡಿ "ಮಧು ಸಿಂಚನ" ಡೇ ಆಚರಿಸಿದರೆ ಈ ದೇಶದ ಪರಿಸ್ಥಿತಿ ಹೇಗಾಗಬಹುದು?? ಊಹಿಸಲು ಕಷ್ಟ ಆದರೆ ಅದರ ಅಡಿಗಲ್ಲೇ ಚರ್ಚೆಯಲ್ಲಿರುವ "ಕಿಸ್ ಡೇ"...



















