Monday, November 10, 2014

ದರ್ಪದಾರಿಯ ಕಡೆಯ ಮಾತು!!


ಕೊಡಲಿಲ್ಲ ಕೊಟ್ಟವನೂ ಅಲ್ಲ
ಕೂಡಿಟ್ಟವನು ಹೌದು,
ಕೊಡಲು ಪ್ರೋತ್ಸಾಹಿಸಿದವನಲ್ಲ
ಕೊಡಲು ಬಿಟ್ಟವನೂ ಅಲ್ಲ
ಕಣ್ಣೆದುರಿಗೆ ರೋಧನೆಯ
ಕಂಡವನು ಹೌದು. 

ಪಡೆದು ಮೇಲೆ ಬಂದವನು,
ಪಡೆಯಲು ಸುಳ್ಳು ಕಲಿತವನು,
ಸುಳ್ಳಿನಲ್ಲೇ ಬದುಕುತ್ತಿರುವವನು.

ಸಮಯ ಕಳೆತವನು
ದೇವನ ಮರೆತವನು
ಗೋರಿಗೆ ಹತ್ತಿರವಾಗುತ್ತಿರುವವನು
ದೇವ ಕೊಟ್ಟ ಮಾನಸಿಕ
ಖಿನ್ನತೆಗೆ ಬಲಿಯಾಗುತ್ತಿರುವವನು. 


No comments: