Monday, November 10, 2014

"ಕಪ್ಪು ಹಣದ ಜಿಹಾದ್" (ಲೇಖನ)



ಅಬ್ದುಲ್ಲಾ! ಮಹಮ್ಮದ್! ಸ್ವಿಸ್ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ಗೌಪ್ಯವಾಗಿ ಇಟ್ಟು ಅದೇನಾದರೂ 628 ಖದೀಮರ ಪಟ್ಟಿಯಲ್ಲಿ ಸೇರಿದ್ದಲ್ಲಿ ಕೆಲವು ಅತಿರೇಕಿ ದರ್ಮರಕ್ಷಕರು ಎಂದು ಭಾವಿಸಿಕೊಂಡವರು ಮಾಧ್ಯಮಗಳಲ್ಲಿ ಸುದ್ದಿಗೋಷ್ಠಿ ಏರ್ಪಡಿಸುತಿದ್ದರು, ಮಾಧ್ಯಮಗಳು ಅವುಗಳನ್ನು ವೈಭವೀಕರಿಸಿ ಕಥೆಗಳನ್ನು ಜನರ ಮುಂದಿಡುತ್ತಿದ್ದವು ಭಾರತದಲ್ಲಿ ಜಿಹಾದಿ ಸಂಘಟನೆಗಳನ್ನು ಬಲಪಡಿಸಲು ಇವರು ಸ್ವಿಸ್ ಬ್ಯಾಂಕಿನಲ್ಲಿ ಹಣವನ್ನು ಕೂಡಿಟ್ಟಿದ್ದಾರೆ ಮತ್ತು ಅದನ್ನು ಭಾರತದಲ್ಲಿ ನಡೆಯುವ ಹಲವು ಬಾಂಬ್ ದಾಳಿಗಳಿಗೆ ಮತ್ತು ದುಸ್ಕ್ರುತ್ಯಗಳಿಗೆ ಬಳಸಿಕೊಳುತ್ತಿದ್ದಾರೆ ಎಂದು ಬೊಬ್ಬಿಡುತ್ತಿದ್ದವು ತನ್ಮೂಲಕ "ಕಪ್ಪು ಹಣದ ಜಿಹಾದ್" ಎಂದು ಗಂಟಾಘೋಷವಾಗಿ ಘೋಷಿಸುತ್ತಿದ್ದರು.


ಮುಸ್ಲಿಮರು ಸ್ವಿಸ್ ಬ್ಯಾಂಕಿನಲ್ಲಿ ಹಣ ಕೂಡಿಟ್ಟಿರುವುದು ದೇಶಕ್ಕೆ ಮಾರಕ ಈ ಬಗ್ಗೆ ಗಂಬೀರ ಚಿಂತನೆಗಳು ನಡೆಯಬೇಕು, ಕಪ್ಪು ಹಣದ ಪಟ್ಟಿಯಲ್ಲಿ ಮುಸ್ಲಿಂ ಹೆಸರಿರುವವರನ್ನು ಭಯೋತ್ಪಾದಕರು ಎಂದು ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದರೆ ಆಶ್ಚರ್ಯಪಡಬೇಕಾಗಿರಲಿಲ್ಲ, ಅಷ್ಟಕ್ಕೂ ಮುಸ್ಲಿಮರ ಹೆಸರು ಕಪ್ಪು ಹಣದ ಪಟ್ಟಿಯಲ್ಲಿ ಇಲ್ಲದೇ ಇರಲು ಅದರದೇ ಆದ ಕಾರಣಗಳಿವೆ ಹೆಚ್ಚಿನವರು ಬ್ಯಾಂಕಿನಲ್ಲಿ ಹಣ ಕೊಳೆಯಲು ಬಿಡದೆ ಅದನ್ನು ಭಾರತದಲ್ಲೋ ಅಥವಾ ಬೇರೆಡೆಯಲ್ಲೋ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು ಒಂದು ಕಾರಣವಾಗಿರಬಹುದು, ಆದರೆ ಮತಾಂದಿಗಳು ಕಪ್ಪು ಹಣದ ಪಟ್ಟಿಯಲ್ಲಿ ಮುಸ್ಲಿಮರ ಹೆಸರು ಕಾಣ ಸಿಗಬಹುದೇ ಎಂದು ಹುಡುಕಾಡುವ ಉತ್ಸಾಹದಲ್ಲಿದ್ದಾರೆ ಇಲ್ಲಿ ಕಪ್ಪು ಹಣಕ್ಕಿಂತಲೂ ಮುಸ್ಲಿಮರನ್ನು ಹೇಗೆಲ್ಲ ಜಿಹಾದಿಗಳು ಎಂದು ಘೊಷಿಸಬಹುದು ಎಂದು ಸಿಳುಕಿಸಲು ತವಕ ಪಡುವವರಿದ್ದಾರೆ.  

ತವಕಪಡುವವರು ಮುಸ್ಲಿಮರು ಭಾರತದ ವಿರುದ್ದ ಜಿಹಾದಿನಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಮುಸ್ಲಿಮರನ್ನು ಆದಷ್ಟು ದೇಶದ್ರೋಹಿಗಳು ಎಂದು ಬಿಂಬಿಸಬೇಕು ಎಂದು ಯೋಚಿಸುತ್ತಾರೆ, ಮುಸ್ಲಿಮರನ್ನು ಹಂತ ಹಂತವಾಗಿ
ಜಿಹಾದಿಗಳು ಎಂದು ಘೋಷಿಸಿ ದೇಶದ ಜನರನ್ನು ಇಬ್ಬಾಗ ನಡೆಸುವ ಕೆಲಸ ಬಹಳ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ ಮೊದಲು ಶಶ್ತ್ರಾಸ್ತದ ಮೂಲಕ ಜಿಹಾದ್ ನಡೆಸಲಾಗುತ್ತಿದೆ ಎಂದು ಘೋಷಿಸಿ ಪಿತೂರಿ ನಡೆಸಲಾಯಿತು, ತದನಂತರ ಲವ್ ಜಿಹಾದ್ ಎನ್ನುವ ಕಲ್ಪನೆಯನ್ನು ಹರಿಯಬಿಟ್ಟು ಒಂದು ಸಮುದಾಯವನ್ನು ಸಂಶಯದ ದೃಷ್ಟಿಯಿಂದ ನೋಡುವ ಪ್ರವೃತ್ತಿ ಬೆಳೆಸಲಾಯಿತು, ಮದರಸ ಭಯೋತ್ಪಾದನೆಯ ಬಗ್ಗೆಯೂ ಕಲಿಸಿಕೊಡಲಾಯಿತು ಇನ್ನು ಕಪ್ಪು ಹಣದ ಪಟ್ಟಿಯಲ್ಲಿ ಮುಸ್ಲಿಮರ ಹೆಸರು ಕಂಡರೆ ಅದನ್ನು ಜಿಹಾದ್ ನೊಂದಿಗೆ ಸಂಬಂದ ಕಲ್ಪಿಸುವಲ್ಲಿ ಮತಾಂದಿಗಳು ಹಿಂಜರಿಯುವರು ಎನ್ನುವಂತಿಲ್ಲ. 

ವಿಚಿತ್ರವಾದ ಹೇಳಿಕೆಗಳನ್ನು ತುದಿಗಾಳಲ್ಲಿ ನಿಂತು ಮತಾಂದಿಗಳು ಮಾಡುತ್ತಿರುವುದರ ಹಿಂದೆ ದೇಶ ಒಡೆಯುವ ಒಂದು ಜಾಲದ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ, ಒಟ್ಟಿನಲ್ಲಿ ಮುಸ್ಲಿಮರನ್ನು ದೇಶದ್ರೋಹಿಗಳು ಎಂದು ಬಿಂಬಿಸಬೇಕು ಆ ಮೂಲಕ ದೇಶದಲ್ಲಿ ವೈಮನಸ್ಸು ಹೆಚ್ಚಿಸಬೇಕು ಮತ್ತು ಅವರ ಆಶಯಗಳು ಸಲೀಸಾಗಿ ಸಾಗಬೇಕು ಎನ್ನುವುದು ಮಾತ್ರ ವಿಚಿದ್ರಕಾರಿಗಳ ಚಿಂತನೆ. ಸಂದರ್ಭ ಒದಗಿ ಬಂದರೆ ದೇಶಕ್ಕಾಗಿ ಪ್ರಾಣ ನೀಡುವುದು ದೇವ ಮಾರ್ಗದಲ್ಲಿ ಮಾಡುವ ಜಿಹಾದ್ ಎಂದು ತಿಳಿದು ಬದುಕುತ್ತಿರುವ ಒಂದು ಸಮುದಾಯವನ್ನು ದೇಶದ್ರೋಹಿಗಳನ್ನಾಗಿ ಬಿಂಬಿಸಿರುವುದು ವಿಪರ್ಯಾಸ, ಈ ದೇಶದಲ್ಲಿ 1857ರ ಸ್ವಾತಂತ್ರ್ಯ ಹೋರಾಟದ ಆರಂಭ ಕಾಲ ಅದರ ಇತಿಹಾಸ ಮತ್ತು ಮುಸ್ಲಿಮರ ಪಾತ್ರವನ್ನು ದೇಶ ಇಬ್ಬಾಗ ನಡೆಸಲು ಹೊರಟಿರುವ ದೇಶದ್ರೋಹಿಗಳು ಚೆನ್ನಾಗಿ ಅರಿತುಕೊಳ್ಳುವ ಮೂಲಕ ಮುಸ್ಲಿಮರ ದೇಶಪ್ರೇಮವನ್ನು ಚೆನ್ನಾಗಿ  ಅರ್ಥಮಾಡಿಕೊಳ್ಳಲಿ.....  

No comments: