Wednesday, November 12, 2014

ಸಂತಾನ ಹರಣದ ಮಾನವ ಹತ್ಯೆ (ಲೇಖನ)


ಸರಕಾರದ ಯೋಜನೆಗಳು ಫಲಾನುಭವಿಗಳನ್ನು ತಲುಪಿ ಅವರು ಅನುಭವಿಸುತ್ತಿರುವುದು ಬಹಳ ಕಡಿಮೆ, ಯೋಜನೆಗಳು ನಿಜವಾದ ಅನುಷ್ಟಾನವಾಗಿ ಭಾರತ ಅಬಿವೃದ್ದಿಯಾಗುವುದಕ್ಕಿಂತ ಕಪ್ಪು ಹಣದ ರೂಪದಲ್ಲಿ ಶೇಕರಣೆಗೊಂಡಿರುವುದು ಅಧಿಕ.  ಆರ್ಥಿಕ ಪರಿಸ್ಥಿತಿ ತಾಯಂದಿರಾಗಬೇಕಾದ ಹೆಣ್ಣುಮಕ್ಕಳನ್ನು ಅತಿಯಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೊಳಗಾಗುವಂತೆ ಮಾಡಿ ತಾಯ್ತನವನ್ನೇ ಕಳೆದುಕೊಳ್ಳಲು ಉತ್ತೇಜನ ನೀಡುತ್ತದೆ, ಇತರ ಬೇರೆ ರೂಪಗಳನ್ನೂ ಹುಡುಕಾಡುತ್ತದೆ ಜನಸಂಖೆಯೇ ಭಾರತದ ಅಭಿವೃದ್ದಿಗೆ ತೊಡಕು ಎಂಬ ನೆಪ ಬೇರೆ ಇದೆ. ಛತ್ತಿಸಗಡದ ಬಿಲಾಸಪುರದಲ್ಲಿ ಸರಕಾರದ ಪ್ರಾಯೋಜತ್ವದಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಏರ್ಪಡಿಸಲಾಗಿತ್ತು, ಶಸ್ತ್ರ ಚಿಕಿತ್ಸೆಯ ಬಳಿಕ ಹೆಚ್ಚಿನವರು ಅಸ್ವಸ್ಥಗೊಂಡರು, 13 ಮಹಿಳೆಯರು ತಮ್ಮ ಪ್ರಾಣ ಕಳೆದುಕೊಂಡರು ಮತ್ತು ಅದು ಇನ್ನಷ್ಟು ಹೆಚ್ಚುತ್ತಿದೆ ಕೂಡಾ, ಇಳಿ ವಯಸ್ಸಿನಲ್ಲೇ ತಾಯ್ತನವನ್ನು ಕಳೆದುಕೊಂಡು ಪ್ರಾಣ ಬಿಟ್ಟರು, ಇನ್ನು ಹಲವಾರು ಮಂದಿ ನರಳಾಡುತ್ತಿದ್ದಾರೆ. ಸರಕಾರಿ ವೈಧ್ಯಾಧಿಕಾರಿಗಳ ಅಲ್ಪತನದಿಂದಾಗಿ ಬಾಳಿ ಬದುಕಬೇಕಾದ ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ, ಹಗರಣಗಳ ಸರಮಾಲೆ ಇರುವ ದೇಶದಲ್ಲಿ ಮತ್ತೊಂದು ಬಲು ದೊಡ್ಡ ಹಗರಣ ಹಲವು ಮಹಿಳೆಯರನ್ನು ಸಾಮೂಹಿಕವಾಗಿ ಬಲಿತೆಗೆದುಕೊಂಡಿದೆ. 

ಸಂತಾನ ಹರಣ ಶಸ್ತ್ರ ಚಿಕಿತ್ಸೆ ಎಂಬುದೇ ದೇಶದಲ್ಲಿ ನಡೆಯುತ್ತಿರುವ ಬಲು ದೊಡ್ಡ ರಾಜಕೀಯ ಲಾಭಿ! ಇದರ ಹಿಂದೆ ಒಂದು ಸಮೂಹವನ್ನೇ ನಾಶ ಪಡಿಸುವ ಬಲು ದೊಡ್ಡ ಗುರಿ ಇದೆ. ಆದಿವಾಸಿಗಳ, ಅಲ್ಪಸಂಖ್ಯಾತರ ಮಾನಸಿಕ ಸ್ಥೈರ್ಯವನ್ನು ಜನಸಂಖೆ ಕಡಿಮೆಗೊಳಿಸುವ ಮೂಲಕ ಕುಗ್ಗಿಸುವ ಪ್ರಯತ್ನ, ಆದಿವಾಸಿಗಳನ್ನು ಅವರು ಬದುಕುತ್ತಿರುವ ಭೂಮಿಯಿಂದ ಕ್ರಮೇಣವಾಗಿ ಅವರ ವಿರೋಧವಿಲ್ಲದೆ ದೂರ ಮಾಡಿಸುವ ಬಲು ದೊಡ್ಡ ಸಂಚು, ವಿರೋಧಗಳನ್ನು ಸೃಷ್ಟಿ ಮಾಡಿ ಅವರು ಬಲಿಷ್ಟವಾಗುವುದನ್ನು ಅರಿತು ಒಳಗಿಂದಲೇ ಯೋಜನೆಗಳ ಮೂಲಕ ಅವರನ್ನು ನಂಬಿಸಿ ಅವರಿಂದಲೇ ಸಂತಾನವನ್ನು ಇಲ್ಲವಾಗಿಸುವ ಪಿತೂರಿ, ಆರ್ಥಿಕತೆ ಮತ್ತು ಜನಸಂಖ್ಯಾ ಸ್ಪೋಟ ಆದಕ್ಕೆ ನೀಡಿರುವ ಸುಳ್ಳಿನ ಕಂತೆ, ಸಂತಾನ ಹರಣ ಚಿಕತ್ಸೆ ಈ ದೇಶದಲ್ಲಿ ನಡೆಯುವ ಮಾರಕತೆಗೆ ಮುಂದಿನ ದಿನಗಳಲ್ಲಿ ನೀಡಬಹುದಾದ ಒಂದು ಶಕ್ತಿ!! ಛತ್ತಿಸಗಡದ ಮಹಿಳೆಯರ ಮರಣ ಒಂದಿಷ್ಟು ಸುದ್ದಿಯಾಯಿತು ಆದರೆ ಅದೆಷ್ಟೋ ಅರಿಯದ ಕಥೆಗಳ ಮೂಲಕ ಸಾವಿರಾರು ಜೀವಗಳು ಬಲಿಯಾದ ಕಥೆ ಹುದುಗಿ ಹೋಗಿದೆ. 

ಒಳಗಿಂದೊಳಗೆ ನಡೆಯುವ ಸಂತಾನ ಹರಣ ಚಿಕಿತ್ಸೆ ಈ ದೇಶದ ಅಲ್ಪಸಂಖ್ಯಾತರನ್ನೂ ಬಿಟ್ಟಿಲ್ಲ, ಹೇಳುವುದಕ್ಕೆ ಮಾತ್ರ ಇದು ಯೋಜನೆ ಒಳಗಿಂದ ಇದು ಸಮೂಹಗಳನ್ನು ಕುಗ್ಗಿಸುವ, ಬಲ ಕಡಿಮೆಗೊಳಿಸುವ ಸಂಚು, ಇಲ್ಲಿ ವೈದ್ಯರುಗಳು, ಶಸ್ತ್ರ ಚಿಕಿತ್ಸೆ ಏರ್ಪಡಿಸಿದ ಸರಕಾರ ಮತ್ತು ಹಿಂದಿರುವ ಕಾಣದ ಕೈಗಳ ಬಗ್ಗೆ ತನಿಖೆ ನಡೆಯಬೇಕಾಗಿದೆ ಆ ಮೂಲಕ ಜೀವತೆತ್ತ ಸಾವಿರಾರು ಸಂತಾನಹರಣಗೊಂಡ ಮುಗ್ದ ಜೀವಗಳಿಗೆ ನ್ಯಾಯ ಕೊಡಿಸಬೇಕಾಗಿದೆ. ಆರ್ಥಿಕ ಪರಿಸ್ಥಿತಿಗೆ ಹೆದರಿ ಮಕ್ಕಳಿಲ್ಲದ ಹಾಗೆ ಮಾಡಲು ಹೋಗಿ ತಾವೇ ಇಲ್ಲವಾಗಿ ಹೋದದ್ದು ಬಲು ದೊಡ್ಡ ದುರಂತ, ಕಣ್ಣೆದುರಿಗೆ ಕಂಡರೂ ಒಳಗೊಳಗೇ ಅಡಗಿಕೊಂಡು ಪಿತೂರಿ ನಡೆಸುವ ಕಾರ್ಪೋರೇಟರ್ ಕೈಗಳ ಕುತಂತ್ರ. "ನಿಮ್ಮ ಮಕ್ಕಳನ್ನು ಬಡತನದ ಭೀತಿಯಿಂದ ಕೊಲ್ಲಬೇಡಿರಿ ನಾವು ಅವರಿಗೂ ಆಹಾರ ನೀಡುವೆವು ನಿಮಗೂ ನೀಡುವೆವು ವಾಸ್ತವದಲ್ಲಿ ಅವರ ವಧೆಯು ಒಂದು ಘೋರ ಅಪರಾಧವಾಗಿದೆ" (ಕುರ್ ಆನ್ 17: 31) ಸೃಷ್ಟಿಕರ್ತ ಕಲ್ಪಿಸಿದ ಅಪರಾಧದ ಬಗೆಯ ಬೋಧನೆಗೆ ಆರ್ಥಿಕತೆ ಅಡ್ಡಿ ಬಂತು, ಬೇಕೆಂತಲೇ ಆರ್ಥಿಕತೆಯ ನೆಪವೊಡ್ಡಿ ದೇಶದ ಅಬಿವೃದ್ದಿಯ ಹಿನ್ನಲೆಗಾಗಿ ಎಂದು ಸಂತಾನ ಹರಣದ ಮಹತ್ವ ಜಾರಿಗೊಳಿಸಳಾಗುತ್ತಿದೆ, ಸಂತಾನ ಹರಣ ದೇಶದ ಅಬಿವೃದ್ದಿಗೆ ಮಾರ್ಗಸೂಚಿ ಎನ್ನುವುದು ಬಲು ದೊಡ್ಡ ಸುಳ್ಳು, ಅದು ರಾಜಕಾರಣಿಗಳ ಅಬಿವೃದ್ದಿ ಹಾಗು ಒಂದು ವರ್ಗ ಮತ್ತು ಸಮುದಾಯವನ್ನು ಈ ದೇಶದಲ್ಲಿ ನೇಪಥ್ಯಕ್ಕೆ ಸರಿಸಿಬಿಡಲು ನಡೆಸಿರುವ ಬಲು ದೊಡ್ಡ ಹುನ್ನಾರ, ಈ ಬಗ್ಗೆ ಎಚ್ಚರಿಕೆಯಿರಲಿ!! ಆರ್ಥಿಕತೆಯ ಭಯದಿಂದ ನಾವು ನಮ್ಮ ಮಕ್ಕಳನ್ನು ಕೊಂದು ಬುದ್ದಿವಂತರಾಗುವುದಕ್ಕಿಂತ ಕಂಡು ಕಾಣದ ಕೈಗಳ ಪಿತೂರಿಗೆ ಬುದ್ದಿಕಲಿಸಬೇಕಾಗಿರುವುದು ಕಾಲಗಟ್ಟದ ಅಗತ್ಯ.  

No comments: