Tuesday, September 30, 2014

ಸ್ನೇಹಿತರಾಗಿರೋ ಚಹಾ ಕುಡಿದುಕೊಂಡು

ಸ್ನೇಹಿತರ ಬಳಿ ಹಲವು ವಿಷಯಗಳನ್ನು ಚರ್ಚಿಸಿ ಸಂತೋಷ ಪಡುವ ನಾವು  ಕೆಲವು ನೋವುಗಳನ್ನುಹಂಚಲು ಇಷ್ಟಪಡುವುದಿಲ್ಲ ಆದರೆ ಹಂಚಿಕೊಂಡಾಗ ಸಿಗುವ ನಿರಾಳತೆ ಬಚ್ಚಿಟ್ಟಾಗ ಸಿಗಲು ಸಾದ್ಯವಿಲ್ಲ, ಹೊಟ್ಟೆಯ ಹಸಿವನ್ನು ತಣಿಸಲು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ತಿನ್ನುವ ನಮಗೆ ಸಂಜೆಯ ಟೀ ಕುಡಿಯುವುದು ಅತ್ಯಗತ್ಯ ಅಲ್ಲ, ಆದರೂ ತಲೆನೋವು ಬಾರದಿರಲಿ ಎನ್ನುವ ಸಲುವಾಗಿ ಹೆಚ್ಚಿನ ಜನರು ಅದಕ್ಕೆ ಒಗ್ಗಿಕೊಂಡಿದ್ದಾರೆ, ಅದೇ ರೀತಿ ಕೆಲವು ವಿಚಾರಗಳನ್ನು ಸ್ನೇಹಿತರ ಜೊತೆ ಹಂಚಿಕೊಂಡಾಗ ಚಹಾ ಕುಡಿಯದೆ ಬರುವ ತಾತ್ಕಾಲಿಕ ತಲೆನೋವನ್ನು ತಪ್ಪಿಸಬಹುದು, ಮನಸ್ಸಿನಲ್ಲಿ ಬಚ್ಚಿಟ್ಟು ಕಾಡುತ್ತಿರುವ ವಿಚಾರಗಳನ್ನು ಸ್ನೇಹಿತರ ಜೊತೆ ಮುಕ್ತವಾಗಿ ಚರ್ಚಿಸಿ ಪರಿಹಾರ ಪಡೆದು ನಿರಾಳವಾಗಿರಬಹುದು. 
ಯಾವುದಕ್ಕೂ ಸ್ನೇಹಿತರಾಗಿರೋ ಚಹಾ ಕುಡಿದುಕೊಂಡು. 

ಮಾನ ರಕ್ಷಣೆಗಾಗಿ ಮನವಿ!

ದಾರಿಹೋಕನೊಬ್ಬನಿಗೆ ಬೀದಿ ಬದಿ ಬಿದ್ದಿದ್ದ ಅಂಚೆ ಪತ್ರವೊಂದು ಕಾಣಸಿಕ್ಕಿತು ಅದನ್ನು ಎತ್ತಿಕೊಂಡು ಸಾಗುತ್ತಿದ್ದ ಅಂಚೆ ವಿತರಕನನ್ನು ಇದೋ ನಿಮ್ಮ ಪತ್ರ ಎಂದು ಕರೆದ! ಅಷ್ಟೊತ್ತಿಗೆ ಆತ ಮಾರ್ಗದಂಚಿನಲ್ಲಿ ಮರೆಯಾಗಿದ್ದ, ಪತ್ರ ಹಿಡಿದುಕೊಂಡು ಸಂಯಮ ತಡೆಯಲಾಗದ ದಾರಿಹೋಕ ಅದನ್ನು ತೆರೆದೇ ಬಿಟ್ಟ.....
ಪತ್ರ ಓದಿದೊಡನೆ ದಂಗಾಗಿ ಹೋದ.....

ಪತ್ರದಲ್ಲಿ......

ನಮಸ್ಕಾರಗಳು,
ಮಾನ ರಕ್ಷಣೆಗಾಗಿ ಮನವಿ!

ಇತ್ತೀಚೆಗೆ ನಮಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ, ಮಾತೆ ಎಂದು ಕರೆದವರು ಮಾತೆಯನ್ನು ಬಿಡದೆ ಅತ್ಯಾಚಾರ ಮಾಡಿದ ಘಟನೆ ನನಗೆ ತಡವಾಗಿ ತಿಳಿದು ಬಂತು ಆ ದಿನದಿಂದ ನನಗೆ ನಿದ್ದೆ ಬರುತ್ತಿಲ್ಲ ಹೊರಗೆ ಹೋದ ನನ್ನವರು ಪರಿಶುದ್ದರಾಗಿ ತಿರುಗಿ ಬರಲಾರರೋ ಎನ್ನುವ ಭಯ, ನನ್ನ ಮತ್ತು ನನ್ನವರ ಮೇಲೆ ಈ  ರಕ್ಷಕರು ಬಕ್ಷಕರಾಗಿ ತಮ್ಮ ಕಾಮವನ್ನು ತೀರಿಸುತ್ತಾರೋ ಎನ್ನುವ ಭಯವಿದೆ, ದಯವಿಟ್ಟು ರಕ್ಷಣೆ ನೀಡಿ ಇಲ್ಲದಿದ್ದರೆ ಒಂದು ಪರವಾನಿಗೆಯ ಶಾಶ್ತ್ರಾಸ್ತ್ರ ವನ್ನಾದರೂ ನೀಡಿ ಮನುಷ್ಯ ಕಾಮ ಪಿಶಾಚಿಗಳಿಂದ ರಕ್ಷಿಸಿ, ದಯವಿಟ್ಟು ನಮ್ಮನ್ನು ರಕ್ಷಿಸುತ್ತೇವೆ ಎಂದು ಹೇಳಿಕೊಂಡು ತಿರುಗಾಡುವವರಿಂದ ನಮ್ಮನ್ನು ರಕ್ಷಿಸಿ. ಮಾತೆ ಮಾತೆ ಎಂದು ನಮ್ಮ ಮಾನದ ಕಥೆಯನ್ನೇ ಇಲ್ಲವಾಗಿಸಲು ಹೊರಟವರಿಂದ ನಮ್ಮನ್ನು ರಕ್ಷಿಸಿ, ಸಾಧ್ಯವಾಗದಿದ್ದರೆ ಶಿಸ್ತಿನಿಂದ ಕಡಿದು ತಿನ್ನುವವರಿಗಾದರೂ ಮಾರಿ ಬಿಡಿ......

ನಿಮ್ಮನ್ನೇ ನಂಬಿದ್ದೇವೆ
ಇತೀ ತಮ್ಮ
ಮಾತು ಮಾತಿಗೂ ಮಾತೆ ಎಂದು ಕರೆಸಲ್ಪಟ್ಟವರು.

ಪತ್ರ ತೆರೆದ ತಪ್ಪಿಗೆ ತನ್ನನ್ನು ತಾನೇ ಶಪಿಸಿಕೊಂಡು ತನ್ನ ದಾರಿಯಲ್ಲಿ ನದೆದ.

ನ್ಯಾಯದ ಚುಕ್ಕಾಣಿ

ಸತ್ಯದ ವಕ್ತಾರರಾಗಿ,
ಸದ್ಗುಣ ಹೊಂದಿ, 
ನ್ಯಾಯದ ಚುಕ್ಕಾಣಿಗೆ 
ಬೆನ್ನೆಲುಬಾಗಿ,
ಅಸಹಾಯಕರಿಗೆ 
ಆಸರೆಯಾಗಿ, 
ಅಶಕ್ತ ಕೈಗಳಿಗೆ 
ಶಕ್ತಿಯಾಗಿ, 
ಸತ್ಯದ ಸ್ವಾವಲಂಬದ   
ನಿಲುವಿನಲ್ಲಿ, 
ಯುವಕರೇ ಮುನ್ನಡೆಯಿರಿ. 
ಗೆಲುವಿನ ನಿರೀಕ್ಷೆಯಲ್ಲಿ.
ಸತ್ಕರ್ಮದ ಹಾದಿಯಲ್ಲಿ, 
ಕಷ್ಟಗಳಿಗೆ ಸ್ಪಂದಿಸುವವರಾಗಿ, 
ಸಮಾಜದ ಬದಲಾವಣೆಯಲ್ಲಿ, 
ನ್ಯಾಯದ ಪರವಾಗಿ 
ಯುವಕರೇ ಮುನ್ನಡೆಯಿರಿ 

ಹೊಸ ಬೆಳದಿಂಗಳ ಕನಸಾಗಿ , 
ಶಾಂತಿಯ ಮರುಸ್ಥಾಪನೆಗಾಗಿ  
ಐಕ್ಯತೆಯ ಅಗತ್ಯಕ್ಕಾಗಿ, 
ಆಶಯಗಳೊಂದಿಗೆ 
ಯುವಕರೇ ಮುನ್ನಡೆಯಿರಿ.  

ಕಚ್ಚಾಡಿಸಿ

ನಾನು ಸ್ವರ್ಗಕ್ಕೆ!
ನೀನು ನರಕಕ್ಕೆ!
ಕಚ್ಚಾಡಿ
ಸೋದರನನ್ನು
ದೂರ
ಮಾಡಿಟ್ಟ. 

ದುಡುಕಿನಿಂದ
ಇಸ್ಲಾಮೀ
ಆಶಯವನ್ನು
ಧೂಲೀಪಟವಾಗಿಸಿಬಿಟ್ಟ

ಕಾಲ ಕಳೆಯಿತು
ಸಂಬಂದ
ದೂರವಾಗಿತ್ತು

ಅದೊಂದು ದಿನ
ಸೋದರ
ಇಹಲೋಕ ತ್ಯಜಿಸಿದ್ದ

ನೀನು ಸ್ವರ್ಗಕ್ಕೆ
ನೀ ಮಾಡಿದ ಪುಣ್ಯ
ಕಾರ್ಯಕ್ಕೆ
ನಿನ್ನನರಿಯದೆ ನಾ
ಎಡವಿದ್ದೆ
ನಿಂತು ಅತ್ತು ಬಿಟ್ಟ.

ಕಚ್ಚಾಡಿಸಿ ದೂರ
ಮಾಡಿದವರಾರು?
ಸೋದರರೊಳಗೆ ನರಕದ
ಭಾವ ತಂದವರಾರು? 

ಅರಿತು ಸ್ವರ್ಗದ ಕಡೆ
ನಡೆಯಬೇಕಾದವರು ನಾವು...... 




Friday, September 26, 2014

ಇಂಡಿಯನ್ ಜಾಹಿಲೀನ್.......


ಪ್ರದೀಪ್ ಬದಲಿಗೆ ಮಹಮ್ಮೆದ್ ಮೈಸೂರಿನ ಪ್ರಕರಣದಲ್ಲಿ ಇದ್ದಿದ್ದಲ್ಲಿ ಬಲುದೊಡ್ಡ ಚರ್ಚೆಯಾಗುತಿತ್ತು, ಕೇಜಿ ಲೆಕ್ಕದಲ್ಲಿ ಮಾರಲ್ಪಡಲು ಅರ್ಹವಾಗಿರುವ ಕೆಲವು ಪತ್ರಿಕೆಗಳು ದಪ್ಪ ಅಕ್ಷರದಲ್ಲಿ ಹೊಸ ವ್ಯಾಖ್ಯಾನದೊಂದಿಗೆ ವರ್ಣರಂಜಿತ ಮುಖ ಪುಟ ಪ್ರಕಟಿಸುತಿತ್ತು, ಕಲ್ಪನೆಗಳ ಚರ್ಚೆ ನಡೆಯುತ್ತಿತ್ತು, ಚರ್ಚಾ ಗೋಷ್ಟಿಯ ಹಿಂದಿನ ಪರದೆಯಲ್ಲಿ ಗಡ್ಡಾ ದರಿಸಿರುವ ಗನ್ ದಾರಿಯೊಬ್ಬ ಕಾಣಸಿಗುತ್ತಿದ್ದ ಆದರೆ ಸಿಕ್ಕಿರುವುದು ಪ್ರದೀಪ್. ೩೦ ಕಡೆಗಳಲ್ಲಿ ಸ್ಪೋಟ ನಡೆಸುವ ಬೆದರಿಕೆ ನೀಡಿ ಸಂದೇಶ ರವಾನಿಸಿದ ಆರೋಪ ಆತನ ಮೇಲೆ ಇದೆ, ಆದರೆ ಆತ ಚರ್ಚೆ ಅಲ್ಲ ಅಮಾಯಕ, ಆತನ ಮನೆ ಮತ್ತು ಸಂತಾನದ ಕಥೆಯನ್ನು ನಮ್ಮ ಮಾಧ್ಯಮಗಳು ಬಿಚ್ಚಿಡುವುದಿಲ್ಲ ಕಾರಣ ಟೆರರಿಸ್ಟ್ ಆಗಬೇಕಾದರೆ ಮಾಧ್ಯಮಗಳ ದ್ರಿಷ್ಟಿಯಲ್ಲಿ ಕೆಲವು ಮಾನದಂಡಗಳಿವೆ ಅದರ ಪ್ರಕಾರ ಗಡ್ಡಾ, ಪೈಜಾಮಾ ಅಥವಾ ಕಡೆ ಪಕ್ಷ ಮುಸ್ಲಿಂ ಹೆಸರು ಇರಬೇಕು.  ಪ್ರದೀಪನಿಗೆ ಮುಸ್ಲಿಮರ ಜೊತೆ ಸಂಬಂದ ಇದೆಯೇ ಎಂದು ಸ್ಟ್ರಿಂಗ್ ಆಪರೇಷನ್ ಮಾಡಲು ಹೊರಟಿರಬಹುದು ನಮ್ಮ ಮೇಕಿಂಗ್ ನ್ಯೂಸ್ ಚಾನೆಲ್ ಗಳು ಆ ಕಾರಣದಿಂದ ಚರ್ಚೆಯಲ್ಲಿ ಕಾಣುತ್ತಿಲ್ಲ ವಾಗಿರಬಹುದು. ಭಟ್ಕಳದ ನಂಟು ಹುಡುಕಲು ಹೋಗಿರಬಹುದು ಇನ್ನು ಕೆಲವು ಮಾದ್ಯಮಗಳು. ಪ್ರದೀಪ ಇಂಡಿಯನ್  ಜಾಹಿಲೀನ್ ಎಂದು ಅಷ್ಟು ಸುಲಭವಾಗಿ ಮಾಧ್ಯಮಗಳು ಒಪ್ಪಿಕೊಳ್ಳುವುದಿಲ್ಲ, ಪ್ರದೀಪ ಮಾನಸಿಕ ಸ್ಥಿಮಿತ ಕಳೆದುಕೊಂಡವನು, ಮಾನಸಿಕ ಅಸ್ವಸ್ಥ ಎಂದು ವಾದಿಸಲು ತೊಡಗಬಹುದು ಕೂಡಾ, ತದನತರ ಯಾವುದಾದರು ಗಡ್ಡದಾರಿಯ ಹಿಂದೆ ಮೇಕಿಂಗ್ ನ್ಯೂಸ್ ಮಾಡುತ್ತಾ ಸಮಯ ಕಳೆಯಬಹುದು ನಮ್ಮ ಕೆಲವು ಜಾಹಿಲೀನ್ ಮಾಧ್ಯಮಗಳು.  

Wednesday, September 24, 2014

ಲೇಟಾದಾಗ.....

ಹೈವೇ 
ರಸ್ತೆ 
ತನಗೊಬ್ಬನಿಗೆ 
ಎಂದು ತಿಳಿದಂತೆ 
ಅತಿ ವೇಗ, 
ಅಜಾಗರುಕತೆಯಿಂದ 
ವಾಹನ ಚಲಾಯಿಸಿದ 
ಆತ, 
ಕಾರಿನ ಸಮೇತ 
ಕಡಿದಾದ ಹೊಂಡಕ್ಕೆ 
ಬಿದ್ದ.  
ಆತನ 
ಹತ್ತಿರ ಕುಳಿತಿದ್ದ 
ಇನ್ನೊಬ್ಬ, 
ಇಹಲೋಕ ತ್ಯಜಿಸಿದ್ದ. 
ರಕ್ತದಿಂದ ತುಂಬಿದ್ದ 
ಈತ, 
ಲೇಟಾಯಿತು 
ಎಂದು ಗೊಣಗುತ್ತಿದ್ದ.  

Monday, September 22, 2014

ರಾಜಕೀಯ ಭಯೋತ್ಪಾದನೆ


ಲಕ್ಷಗಟ್ಟಲೆ ಮುಸ್ಲಿಮರು 
ಮದರಸಾ ಕೇಂದ್ರದ 
ನೆರಳಲ್ಲಿ ಬೆಳೆದವರು.

ಒಂದಿಬ್ಬರಿಗೆ ವಿಳಾಸ 
ನೀಡುವ ಸಲುವಾಗಿ 
ನೆರಳಿನ ಕೇಂದ್ರವನ್ನೇ 
ಭಯೋತ್ಪಾದನ 
ತಾಣವಾಗಿಸ 
ಹೊರಟರಿವರು.

ಮನೆಯಲ್ಲಿ, ಬೈಕಿನಲ್ಲಿ, 
ಬಾಂಬು ತಯಾರಿಸುವಲ್ಲಿ 
ಚಿದ್ರಗೊಂಡು 
ನರಳಾಡಿದವರು 
ದೇಶ ಸೇವಕರಾಗುವಾಗ, 
ಸ್ವಾತಂತ್ರದ ಬಾವುಟ 
ಹಾರಿಸುವ ಮದರಸಾಗಳು
ಆಯುಧಗಳ ತಾಣವೆಂಬ 
ಹೊಲಸು ರಾಜಕೀಯ.

ಒಂದೆರಡು ಗಂಟೆಯ 
ಪಾಠದಲ್ಲೇ 
ಜಗತ್ತಿಗೆ ಮಾದರಿ 
ವ್ಯಕ್ತಿಗಳನ್ನು ನೀಡಿದ 
ಮದರಸಾಗಳ ಬಗ್ಗೆ 
ಕೆಲವರು ನೀಡಿದ 
ಹುಚ್ಚು ಕಲ್ಪನೆಗಳೇ 
ಭಯೋತ್ಪಾದನೆ.

Saturday, September 20, 2014

ಹೆಜ್ಜೆ ತಪ್ಪಿಸುತ್ತಿರುವ ಓಲೈಕೆ (ಲೇಖನ)



ಮುಗ್ದತೆಯನ್ನು ಬಳಸಿ ದೇಶದಲ್ಲಿ ಮುಸ್ಲಿಮರ ಓಲೈಕೆ ನಡೆಯುತ್ತಲೇ ಬಂದಿರುವ ಪ್ರಸಂಗ, ಓಲೈಕೆಗಳು ಮುಸ್ಲಿಮರ ಮುಗ್ದ ಮನಸ್ಸನ್ನು ಗೆದ್ದಿದೆ ಕೂಡಾ, ಪ್ರಜಾಪ್ರಬುತ್ವ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಈ ದೇಶದ ಮುಸಲ್ಮಾನರು ದೇಶಕ್ಕಾಗಿ ಸಾಯಲು ಇಷ್ಟಪಡುತ್ತಾರೆ ಅವರು ದೇಶ ದ್ರೋಹ ವೆಸಗಲಾರರು ಎಂದಾಗ ಆ ಹೇಳಿಕೆಯನ್ನು ಎಲ್ಲೆಡೆ ಸ್ವಾಗತಿಸಲಾಗಿದೆ ಒಬ್ಬ ದೇಶದ ಪ್ರಧಾನಿ ಪ್ರಜಾಪ್ರಬುತ್ವ ವ್ಯವಸ್ಥೆಯ ಸಮತೋಲನಕ್ಕಾಗಿ ನೀಡಿದ ಹೇಳಿಕೆಯನ್ನು ಒಪ್ಪಿಕೊಳ್ಳಬಹುದು ಆದರೆ ಅದರ ಹಿನ್ನಲೆ ಮತ್ತು ಆಗು ಹೋಗುಗಳನ್ನು ಮರೆಯುವಂತಹ ರೀತಿಯಲ್ಲಿ ಸ್ವಾಗತಿಸೋದು ತರವಲ್ಲ,  ಬಿಜೆಪಿಯ ಮುಖಂಡರುಗಳು ಮುಸ್ಲಿಮರಲ್ಲಿ ಕ್ಷಮಾ ಭಾವನೆ ವ್ಯಕ್ತಪಡಿಸುತ್ತಿರುವು ಇದೇ ಮೊದಲ ಬಾರಿ ಅಲ್ಲ, ರಾಜನಾಥ್ ಸಿಂಗ್ ರಂತಹ ಪ್ರಮುಖ ನಾಯಕರು ಕ್ಷಮೆ ಕೇಳುತ್ತಲೇ ಬಂದಿದ್ದಾರೆ ಮತ್ತು ಸ್ವಾರ್ಥದ ಕ್ಷಮೆಗೆ ಮುಸಲ್ಮಾನರು ಕರಗಿದ್ದಾರೆ ಕೂಡಾ ಹಾಗಾಗಿ ಮತ್ತೆ ಮತ್ತೆ ಅನುಕಂಪದ ಓಲೈಕೆಗಳು ನಡೆಯುತ್ತಿದೆ, ನರೇಂದ್ರ ಮೋದಿಯವರು ಮುಸ್ಲಿಮರ ಪರವಾಗಿ ಮಾತನಾಡಿದರೂ ಅವರನ್ನು ಏಕೆ ಟೀಕೆಗೆ ಒಳಪಾಡಿಸಲಾಗುತ್ತಿದೆ ಎನ್ನೂದು ಕೂಡ ಬಲು ದೊಡ್ಡ ಪ್ರಶ್ನೆ! ಅದು ಅವರು ನಂಬಿಕೊಂಡು ಬಂದಂತಹ ಸಿದ್ದಾಂತ ಮತ್ತು ಅದರ ಅನುಸ್ಟಾನದ ವಿರುದ್ದ ನಡೆಯುವ ಪ್ರಬಲ ದ್ವನಿ,

ಅಷ್ಟಕ್ಕು ಮುಸ್ಲಿಮರಲ್ಲಿ ಕ್ಷಮಾ ಭಾವನೆ ವ್ಯಕ್ತಪಡಿಸುವವರು ಮುಸ್ಲಿಮರ ವಿರುದ್ದ ನಿಂತ ಸಲುವಾಗಿಯೇ ದೊಡ್ಡ ಮಟ್ಟಕ್ಕೆ ಬೆಳೆದಿರೋದು, ಇದೇ ಮಾತನ್ನು ಅವರು ಹಲವು ವರ್ಷಗಳ ಹಿಂದೆ ಒಪ್ಪಿಕೊಂಡಿದ್ದರೆ ಅವರಿಂದು ಇಷ್ಟು ದೊಡ್ಡ ನಾಯಕರಾಗಿ ಹೊರಹೊಮ್ಮುತ್ತಿರಲಿಲ್ಲ, ಇಂತಹ ಹೆಚ್ಚಿನೆಲ್ಲ ನಾಯಕರು ಮುಸ್ಲಿಮರ ವಿರುದ್ದ ನಿಂತ ಸಲುವಾಗಿಯೇ ರಾತ್ರೋರಾತ್ರಿ ನಾಯಕರೆನಿಸಿ ಕೊಂಡಿರುವುದು, ಚುನಾವಣೆಗೆ ಮುಂಚೆ ಮುಸ್ಲಿಮರ ಕ್ಷಮೆ ಕೇಳಿದವರು ಕೊನೆ ಕ್ಷಣದಲ್ಲಿ ತಮ್ಮ ಚುಣಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ತಾವು ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಮತ್ತು ಅ ಪ್ರಣಾಳಿಕೆ ಇವರ ಕ್ಷಮೆಗಳಿಗೆ ತದ್ವಿರುದ್ದವಾದ ಅರ್ಥ ನೀಡುತ್ತಿತ್ತು ಮತ್ತು ಅವರು ಏನು ಬಯಸುತ್ತಿದ್ದಾರೆ ಅನ್ನುವುದನ್ನು ಸ್ಪಷ್ಟವಾಗಿ ತೋರಿಸುತಿತ್ತು, ಅದೇ ಪ್ರಣಾಳಿಕೆಯ ಭಾಗವನ್ನು ಅವರು ಹಂತ ಹಂತವಾಗಿ ಅನುಷ್ಟಾನಗೊಳಿಸುತ್ತಿದ್ದಾರೆ ಮತ್ತು ಅದು ನಮಗಾರಿಗೂ ಅರಿವಾಗದ ರೀತಿಯಲ್ಲಿ, ಹಾಗೆ ಅದನ್ನು ಮರೆಮಾಚಲು ಮುಸ್ಲಿಮರ  ಮುಗ್ದತೆಯನ್ನು ಬಳಸಿಕೊಳ್ಳಲಾಗುತ್ತಿದೆ ಅದರ ಭಾಗವಾಗಿ ಈ  ಓಲೈಕೆಗಳು ಆಗಾಗ ನಡೆಯುತ್ತಿರುತ್ತದೆ ಅದೊಂದು ಸಹಜ ಪ್ರತಿಕ್ರೀಯೆ ಎಂದು ಬಣ್ಣಿಸಬಹುದು.


ಹೀಗೆ ಓಲೈಕೆಯನ್ನು ಸಮರ್ಥಿಸಿಕೊಂಡ ಒಂದು ವರ್ಗ ಎಲ್ಲವನ್ನು ಕಳೆದುಕೊಳ್ಳುವ ಹಂತ ಸೃಷ್ಠಿಯಾಗುತ್ತದೆ, ಮುಸ್ಲಿಮರು ದೇಶಕ್ಕಾಗಿ ಸಾಯಲು ಸಿದ್ದರಿದ್ದಾರೆ ಎಂದು ಒಪ್ಪಿಕೊಳ್ಳುವುದಾದರೆ ಮುಸ್ಲಿಮರಿಂದ ಈ ದೇಶಕ್ಕೆ ಅಪಾಯವವಿಲ್ಲ ಎಂದರ್ಥ, ಹಾಗಾದರೆ ಅಪಾಯ ಯಾರಿಂದ ಎನ್ನುವುದನ್ನು ಸ್ಪಷ್ಟಪಡಿಸಬೇಕಾಗುತ್ತದೆ, ವಿಳಾಸವಿಲ್ಲದ ಯಾರೋ ಮಾಡಿದ ದುಷ್ಕೃತ್ಯಕ್ಕೆ ಬಂದನವಾಗಿ ಜೈಲುಗಳಲ್ಲಿ ಇರುವ ಅಮಾಯಕ ಮುಸ್ಲಿಮರನ್ನು ಬಿಡುಗಡೆಗೊಳಿಸುವ ಕೆಲಸವನ್ನು ಶೀಘ್ರವಾಗಿ ಮೋದಿಯವರು ಮಾಡಬೇಕಾಗುತ್ತದೆ, ಇದು ಬರೀ ಹೇಳಿಕೆ ಮಾತ್ರ ಮತ್ತು ಬರೀ ಚರ್ಚೆಗೆ ಸೀಮಿತವಾದ ವಿಚಾರ, ಒಳ್ಳೆಯವರು ಎಂದು ಗಾಳಿಯಲ್ಲಿ ತೆಲಾಡಿಸಿ ತಮ್ಮ ಯೋಜನೆಗಳನ್ನು ಅನುಷ್ಟಾನಗೊಳಿಸುವ ಉದ್ದೇಶ.

ಪ್ರತಿರೋದವಿಲ್ಲದೆ ಅಂದುಕೊಂಡ ವಿಚಾರಗಳನ್ನು ಕಾರ್ಯರೂಪಕ್ಕೆ ಮಾಡಲು ಬಹಳ ಸುಲಬವಾಗಿ ಆಯ್ದುಕೊಂಡ ಮಾರ್ಗ, ನರೇಂದ್ರ ಮೋದಿಯವರು ಹೀಗೆ ನೀವು ಒಳ್ಳೆಯಯವರು ಎಂದು ಗಾಳಿಯಲ್ಲಿ ತೆಲಾಡಿಸುತ್ತಿರುವಾಗ ಅವರ ಆನುಯಾಯಿಗಳು ಅದೇ ದೇಶಪ್ರೇಮಿಗಳ ವಿರುದ್ದ ಲವ್ ಜಿಹಾದ್, ಮಾದರಸ ಭಯೋತ್ಪಾದನೆ ಎನ್ನುವ ಆರೋಪ ಹೊರಿಸುತ್ತಿದ್ದಾರೆ, ಅದರ ಬಗ್ಗೆ ದೇಶಪ್ರೇಮಿಗಳು ಎಂದು ಬಿಂಬಿಸಿದವರು ಚಕಾರವೆತ್ತುವುದಿಲ್ಲ ಇದರ ಮರ್ಮ ಅರಿಯಬೇಕಾಗಿದೆ, ಒಲೈಕೆಗಳಿಂದಲೇ ಮೇಲೆ ಬಂದವರು ಯಾವ ರೀತಿಯ ಒಲೈಕೆಗೂ ಹಿಂಜರಿಯಲಾರರು ಅವರು ಸದ್ದಡಗಿಸುವ ಸಲುವಾಗಿ ಯಾವ ಒಲೈಕೆಗು ಸಿದ್ದರಾದವರು, ಓಲೈಕೆಗೆ ಬಲಿಯಾಗಿ ಹೋರಾಟದ ಸ್ವರೂಪವಿಲ್ಲದ ಒಂದು ಸಮಾಜ ನಿರ್ಮಾಣವಾಗಿತ್ತಿದೆ ಮತ್ತು ಓಲೈಕೆಗೆ ಬಲಿಯಾಗಿ ಹಂತ ಹಂತವಾಗಿ ಸಿದ್ದಾಂತಗಳು ಅನುಷ್ಟಾನವಾಗುತ್ತಿದೆ, ಆದರೆ ಇದೆಲ್ಲದರ ಮದ್ಯೆ ಜತ್ಯಾತಿತವಾದಿಗಳು ಸ್ವಲ್ಪ ನಿದ್ದೆಯಂದ ಹೊರ ಬಂದು ವಾಸ್ತವಿಕತೆಯ ಅರಿವನ್ನು ಪಡೆಯಬೇಕಾಗುತ್ತದೆ, ಕಡೆ ಪಕ್ಷ ತೂಕಡಿಸಿ ಟೀಚರ್ ಮೂತ್ರ ಮಾಡಬೇಕಾಗಿದೆ ಎಂದು ಎದ್ದು ನಿಂತು ಅಳಲು ತೋಡಿಕೊಂಡ ಮಗುವಿನಂತಾದರು ಅಳಲು ತೋರ್ಪಡಿಸಲು ಸಿದ್ದವಾಗಬೇಕಾಗಿದೆ..... 

Wednesday, September 17, 2014

ಭಿನ್ನತೆ

ಭಿನ್ನತೆಯ ಹೆಸರಿನಲ್ಲಿ 
ಕಚ್ಚಾಡುವ 
ಸತ್ಯವಿಶ್ವಾಸಿಗಳು 
ನೆನಪಿಡಬೇಕು, 

ಭಿನ್ನತೆ 
ಭಿನ್ನತೆಯನ್ನೇ 
ಸೃಷ್ಟಿಸುತ್ತದೆ 
ಹೊರತು 

ಸ್ವರ್ಗದ ದಾರಿಯಲ್ಲ, 
ಅಲ್ಲಾಹನ ಪ್ರೀತಿಯಲ್ಲ, 
ಇಸ್ಲಾಮಿನ ನಡೆಯಲ್ಲ.  

Monday, September 15, 2014

ಟೆರರಿಸ್ಟ್ ಗಳಾಗಿ ಏಕೆ ಬಿಂಬಿತವಾಗುತ್ತಿದ್ದೇವೆ, ಪ್ರಶ್ನಿಸಿದರೆ ಉತ್ತರ ಸಿಗಬಹುದು!!


ಸತ್ಯವನ್ನು ಪರಿಚಯ ಪಡಿಸುವ ಮಾಧ್ಯಮಗಳ ಕೊರತೆಯಿಂದಾಗಿ ಖಾದರ್ ನಂತವರು ಬೇಕಾಬಿಟ್ಟಿ ಬ್ರೆಕಿಂಗ್ ನ್ಯೂಸ್ ಗಳಾಗುತ್ತಿದ್ದಾರೆ, ಮುಸ್ಲಿಂ ಹೆಸರು ಕೇಳಿ ಬಂದಾಗ ಪರಾಮರ್ಶಿಸದೇ ವೈಭವಿಕರಿಸಿ ಇಸ್ಲಾಮಿಗೆ ಧಕ್ಕೆ ತರಲು ಮಾಧ್ಯಮಗಳು ಎನಿಸಿಕೊಂಡವುಗಳು ತುದಿಗಾಲಲ್ಲಿ ನಿಂತಿವೆ. ಮಾರುವಾಗ ಗುಜರಿ ಅಂಗಡಿಯವನಲ್ಲಿ ತೂಕದ ಲೆಕ್ಕದಲ್ಲಿ ಬೆಲೆ ಪಡೆಯಲು ಮಾತ್ರವೇ ಅರ್ಹವಾಗಿರುವ ಪತ್ರಿಕೆಗಳು ತುಂಬಿ ಹೋಗಿವೆ, ಮಾಧ್ಯಮ ವೃತ್ತಿಗೆ ಅಸಹ್ಯವಾಗುವಂತೆ ನಡೆದುಕೊಳ್ಳುತ್ತಿವೆ ಹೆಚ್ಚಿನೆಲ್ಲ ಪತ್ರಿಕೆಗಳು.

ನ್ಯಾಯ ಸತ್ಯವಂತನ ಕಡೆಗೆ ಇದೆ ಖಾದರ್ ನಂತ ಅಮಾಯಕರು ಟೆರ್ರೆರಿಸ್ಟ್ ಎಂದು ಹಣೆ ಪಟ್ಟಿ ಕಟ್ಟಿ ನಿರ್ಧೋಷಿಗಳು ಎಂದು ಸಾಬೀತಾಗುತ್ತಿದ್ದಾರೆ, ವಿಪರ್ಯಾಸ ಕೆಲ ಮಾಧ್ಯಮಗಳಿಗೆ ಇನ್ನೂ ಅವರು ಟೆರರಿಸ್ಟ್! ವೈಭವೀಕರಿಸಿ ಸುಳ್ಳನ್ನು ಸತ್ಯ ಎಂದು ಸಾಬೀತು ಪಡಿಸಲು ಹೊರಟ ಕೆಲ ಮಾಧ್ಯಮಗಳು ತಪ್ಪಿನ ಅರಿವಿಲ್ಲದಂತೆ ಸುಮ್ಮನೆ ಕುಳಿತಿವೆ, ಮಾಡುವುದೇ ತಪ್ಪು ಅನ್ನುವಾಗ ತಪ್ಪಿತಸ್ತನ ಮನೋಭಾವ ಕುತಂತ್ರಿ ಮಾಧ್ಯಮಗಳಿಗೆ ಬರುವುದಾದರು ಹೇಗೆ? ಇಂತಹ ಪತ್ರಿಕೆಗಳು ಇನ್ಯಾವ ಖಾದರ್ ನನ್ನು ಬಲಿಪಶು ಮಾಡಿಸಬಹುದು ಎಂದು ಹೊಂಚು ಹಾಕಿ ತನ್ನ ಸಂಚಿನತ್ತ ಚಿತ್ತವನ್ನು ಕೇಂದ್ರೀಕರಿಸಿದೆ.

ಖಾದರ್ ನಂತವರು ಇವರಾಟಕ್ಕೆ ಬಲಿಯಾಗಿ ಟೆರರಿಸ್ಟ್ ಎಂದು ಬಿಂಬಿತವಾಗಿ ಮನಸೋತು ಜೀವನ ಕಳೆಯುತ್ತಿದ್ದಾರೆ, ವಂಚಿತರಾಗುತ್ತಿದ್ದಾರೆ, ಇನ್ನಷ್ಟು ಖಾದರ್ ಗಳು ಬಲಿಯಾಗುತ್ತಿದ್ದಾರೆ. ಕಾದರ್ ನಂತವರು ಟೆರರಿಸ್ಟ್ ಗಳಾಗಲು ಕಾರಣ ಯಾರು ಅನ್ನುವುದು ಕೂಡ ಬಲು ದೊಡ್ಡ ಪ್ರಶ್ನೆಯೇ ಸರಿ!! ಸತ್ಯವಂತರು ಮಾಧ್ಯಮಗಳತ್ತ ಮುಖ ಮಾಡದೆ ದೂರ ನಿಂತು ದುರಂತಕ್ಕೆ ಸಾಕ್ಷಿಯಾಗುತ್ತಿದ್ದಾರೆ! ಮತಿಗೆಟ್ಟವರು ಕಚ್ಚಾಡುತ್ತಿದ್ದಾರೆ ತಮ್ಮೊಳಗೆ! ನ್ಯಾಯಯುತರು ಮಾಧ್ಯಮ ರಂಗಕ್ಕೆ ಪ್ರವೇಶ ಮಾಡುವ ಪ್ರಯತ್ನ ನಡೆಸಿದರೂ ಬೆಂಬಲದ ಕೊರತೆಯ ಫಲವಾಗಿ ಸೋತು ಹೊಗುತ್ತಿದ್ದಾರೆ, ಇವೆಲ್ಲಾ ಕಾರಣದಿಂದ ಲದ್ದಿ ಪತ್ರಿಕೆಗಳು ರಾಜ್ಯದ ಹೆಸರಾಂತ ಪತ್ರಿಕೆಗಳು ಎಂದು ಬಿಂಬಿತವಾಗಿದೆ.

ಹಲವು ಮಾಧ್ಯಮಗಳು ಮುಸ್ಲಿಮರನ್ನು ಟೆರರಿಸ್ಟ್ ಎಂದು ಪ್ರಚಾರ ಪಡಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ, ಮಾತ್ರವಲ್ಲ ಅದರಲ್ಲಿ ಗೆದ್ದಿದೆ ಕೂಡ, ಅದರೂ ನಾವು ನಿಷ್ಕ್ರೀಯರು! ಸ್ವಾರ್ಥಿಗಳು ನಮ್ಮ ನಮ್ಮೊಳಗೇ!! ಕೆಲವು ಮಾಧ್ಯಮಗಳನ್ನು ನೀಚ ಪತ್ರಿಕೆಗಳು ಎನ್ನುವುದಕ್ಕಿಂತ ಹಲವು ಸಮಾಜ ಮುಖಿ ಪತ್ರಿಕೆಗಳು ಹುಟ್ಟಬೇಕಾಗಿದೆ ಪ್ರಸಕ್ತ ಕಾಲಮಾನಕ್ಕೆ, ಅವರು ನೀಚ ಪ್ರವೃತ್ತಿಯನ್ನೇ ಮಾಡಲೆಂದು ಬಂದವರು ಇನ್ನು ಅವರಿಂದ ಒಳಿತಿನ ನಿರೀಕ್ಷೆ ಮೂರ್ಖತನ.

ಮಾಧ್ಯಮ ರಂಗದಲ್ಲಿ ಮುಸ್ಲಿಮರ ಮಾತ್ರವಲ್ಲ ನೀತಿವಂತರ ಪ್ರವೇಶ ಅಗತ್ಯವಲ್ಲವೇ?  ನಾವು ಇನ್ನೊಂದು ಖಾದರ್ ಬಲಿಯಾಗುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳ ಬೇಡವೆ?  ಲದ್ದಿ ಪತ್ರಿಕೆಗಳು ಮುಸ್ಲಿಮರನ್ನು ಗುರಿಯಾಗಿಸಿ ಟೆರರಿಸ್ಟ್ ಎಂದು ಬಿಂಬಿಸಲು ಏನು ಕಾರಣ ಎಂದು ಅರಿಯಬೇಕಲ್ಲವೇ? ಮುಸ್ಲಿಮರೇ ಏಕೆ ಬಲಿಯಾಗುತ್ತಿದ್ದಾರೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಲ್ಲವೇ?  ಪ್ರಶ್ನಿಸಿಕೊಳ್ಳೋಣ! ನಮ್ಮೊಳಗೇ ಉತ್ತರ ಸಿಗಬಹುದು.  

Thursday, September 11, 2014

ರಕ್ತದ ಕೋಡಿ ಹರಿಸಿ ಕಷ್ಟ ಪಟ್ಟು ಪಡೆದು ಗಳಿಸಿದ ಸ್ವಾತಂತ್ರ್ಯ
ಕೋಟಿ ಕೋಟಿ ಲೂಟುವವರ ಕೈಯ್ಯಲ್ಲಿ ಇಂದು ನಮ್ಮ ಸ್ವಾತಂತ್ರ್ಯ

ಲೂಟಿ ಮಾಡಿ ಹರಿಯುವ ಗಲಭೆಯ ರಕ್ತವೇ ನಮಗೆ ಸಿಕ್ಕ ಸ್ವಾತಂತ್ರ್ಯ
ನಮ್ಮವರದೇ ಭಯದ ಕರಿನೆರಳಿನಲ್ಲಿ ಇಂಗ್ಲೀಷರು ಬಿಟ್ಟು ಹೋದ ಸ್ವಾತಂತ್ರ್ಯ

ಜಾತಿ ಭೇದ ವರ್ಣವಿಲ್ಲದೆ ನಡೆದ ಹೋರಾಟದ ಫಲವೇ ಸ್ವಾತಂತ್ರ್ಯ
ರಕ್ತದಲ್ಲೂ ಜಾತಿ ಹುಡುಕುವ ಕೀಚಕರ ಮದ್ಯೆ ಯಾವ ನಿರೀಕ್ಷೆಯ ಸ್ವಾತಂತ್ರ್ಯ 

ವರುಷ ಉರುಳಿ ಮತ್ತೆ ಮತ್ತೆ ಬರುತಿದೆ ಸಂಬ್ರಮದ ಸ್ವಾತಂತ್ರ್ಯ
ಹಸಿದ ಬಡವನಿಗೆ ಕೇಸರಿ ಬಿಳಿ ಹಸಿರು ಬಣ್ಣದಲ್ಲಿ ಯಾವ ಸ್ವಾತಂತ್ರ್ಯ

ಬಚ್ಚಿಟ್ಟು ಬಚ್ಚಿಡಲಾಗದ ಸತ್ಯ (ಕವನ)



ನೋವು ನಲಿವುಗಳ ಮಧ್ಯೆ ಬೆಳೆದವನು, 
ಬಂದುಗಳ ಪ್ರೀತಿಗೆ ಮನಸೋತವನು,
ಸಣ್ಣ ಪುಟ್ಟ ವಿಚಾರಕ್ಕೂ ತಗಾದೆ ತೆಗೆದವನು, 
ತಾಯಿಯೊಂದಿಗೂ ಕೋಪ ತೋರಿಸಿದವನು. 

ತಂದೆಯ ಪ್ರೀತಿ ಅಷ್ಟಾಗಿ ಕಾಣ ಸಿಗದವನು, 
ಅವರ ಜೊತೆ ಬೆರೆಯದವನು, 
ಅಪರೂಪಕ್ಕೆ ಊರಲ್ಲಿ ಕಂಡವನು, 
ಅವರ ಪ್ರೀತಿ, ಕೋಪ ಅರಿಯದವನು, 
ಅವರೀಗ ಹತ್ತಿರವಿರುವಾಗ ಮಾತು ಬೆಳೆಸದವನು, 
ನಿನ್ನೆ ಮೊನ್ನೆಯವರೆಗೆ ಅವರನ್ನು ಅಪರೂಪಕ್ಕೆ ಕಂಡವನು. 

ವಂಚಿತನಾಗಿ ನನ್ನವರ ಬಳಿಯೇ ಇರ ಬಯಸಿದವನು, 
ತಂದೆಯ ಸೌಮ್ಯತೆಯನ್ನು ಕಳೆದುಕೊಂಡವನು, 
ಹತ್ತಿರವಿರುವಾಗ ಅದನ್ನು ತೋರ್ಪಡಿಸಲಾಗದವನು, 
ಅಷ್ಟಕ್ಕೂ ಅವರನ್ನು ಅಪರೂಪಕ್ಕೆ ಕಂಡವನು. 
ಸಹೋದರಿ, ಸಹೋದರರೊಂದಿಗೆ ಬೆರೆತವನು, 
ಅರ್ಥಮಾಡಿಕೊಳ್ಳದಾಗ ರೇಗಿದವನು,  
ಅಣ್ಣಂದಿರ ಪ್ರೀತಿಗೆ ಕರಗಿದವನು,  
ದೌರ್ಬಾಗ್ಯಕ್ಕೆ ಅವರನ್ನು ದೂರದಿಂದ ಕಂಡವನು. 
  
ನನ್ನ ತಾಯಿಯಂತೆ, 
ನನ್ನ ಸೌಮ್ಯ ತಂದೆಯಂತೆ,  
ನನ್ನ ಅಣ್ಣಂದಿರಂತೆ, 
ನನ್ನ ಸಹೋದರಿಯರಂತೆ,
ತನ್ನವರನ್ನು ದೂರವಿಟ್ಟು ನೋವುಂಡ ಬಂದುಗಳಂತೆ, 
ಎಲ್ಲರನ್ನು ಮೀರಿಸುವಷ್ಟು ದೊಡ್ಡ ತ್ಯಾಗಿಯಾಗಲಾರೆ
ಎಲ್ಲವನ್ನು ಕಳೆದುಕೊಂಡವನಾಗಿ  
ಬದುಕಲು ಇಷ್ಟಪಡಲಾರೆ.
ಹಳೆಯ ದಾರಿಯಲ್ಲಿ ಸಾಗಿ
ನನ್ನವಳಿಗೆ,
ನನ್ನ ಮಕ್ಕಳಿಗೆ,
ನನ್ನವರಿಗೆ,
ದೂರವಾಗಿ ಇರಲಾರೆ. 

ಇದ್ದುದರಲ್ಲೇ ಕಷ್ಟ ಪಟ್ಟು
ಜೀವಿಸಬಯಸುವೆ, 
ನನ್ನ ನೋವು 
ಬಂಧುಗಳ ನೋವು 
ತಲೆಮಾರಿಗೆ ನಾ ಹಂಚಲಾರೆ. 

ನನ್ನವರು ಹಂಚಿಕೊಂಡರು, 
ಎಲ್ಲವನ್ನು ಕಳೆದುಕೊಂಡು.
ಮುದುಕನಾದ ಮೇಲೆ 
ನನ್ನವರ ಜೊತೆ ಬದುಕುವ, 
ಎಲ್ಲವನ್ನು ಕಳೆದುಕೊಂಡವ ನಾನಾಗಲಾರೆ.  

ಕೊನೆಯಲ್ಲಿ ಕೈಮೀರಿದರೆ!

ನನಗಾಗಿ ಅಲ್ಲ.....  
ನನ್ನವರಿಗಾಗಿ,  
ಎಲ್ಲವನ್ನು ಕಳೆದುಕೊಂಡ 
ನನ್ನವರ ಹಾಗೆ 
ಕಲ್ಪನೆಗಳನ್ನು ಬದಿಗಿಟ್ಟು 
ಬದುಕುವವನು ಕೂಡಾ ನಾನಾಗುವೆ, 
ನಿಮ್ಮಂತೆ ಬಚ್ಚಿಟ್ಟು ಬದುಕುವವನಾಗುವೆ! 
ಬದಲಾವಣೆಯ ಬಿರುಗಾಳಿಗೆ ಕೊನೆಯಾಗಿಸುವೆ. 




ಕಾಶ್ಮೀರದ ಕಣ್ಣೀರು


ಕ್ಷಣ ಕ್ಷಣವೂ ಭಯೋತ್ಪಾದನೆಯ ನೆರಳಲ್ಲಿ, 
ಅಡಗಿದ್ದವು ಮಾನವೀಯತೆಯ ನೆಲೆ ಅಲ್ಲಿ, 
ಮನುಷ್ಯಟ್ಟಹಾಸಕ್ಕೆ ನಲುಗಿದ್ದ ನಾಡಿಂದು ನೀರಿನಲ್ಲಿ! 
ಕೋಟಿ ರೂಪಾಯಿಯ ಧನಿಕ ಪರದಾಡುತ್ತಿರುವುದೂ ಅದೇ ನೀರಿಗಾಗಿ!.

ಸೈನಿಕ ಸೇವೆಯ ಸಮರೋಪಾದಿಗೆ ಅಸಹನೆಯ ಕಲ್ಲು,
ನೆರವಿಗಾಗಿ ಧಾವಿಸಬೇಕಾಗಿದೆ ಮಾನವೀಯತೆಯ ಬಂಧು,
ಪ್ರಕೃತಿಯ ಅಟ್ಟಹಾಸಕ್ಕೆ ಕಾಶ್ಮೀರಿಯ ಸಂಕಷ್ಟ,
ರಕ್ತದ ತಪ್ಪಲಲ್ಲಿ ನೀರಿನ ಸೆಳೆಗೆ ಹಲವು ಬಲಿ.

ಪ್ರಾರ್ಥನೆ ಪರಿಹಾರದ ಭರವಸೆ ಇರಲಿ,
ಪ್ರವಾಹದ ಮಗ್ಗಳಿನಿಂದ ಕಾಶ್ಮೀರ ಹೊರಬರಲಿ,
ನೊಂದ ಜೀವಗಳಿಗೆ ಬದುಕು ಕಟ್ಟಿಕೊಲ್ಲುವ ದಿನ ಬರಲಿ,
ಭಾರತದ ಹೆಮ್ಮೆಯ ಭಾಗವಾಗಿ ಬೆಳೆಯಲಿ ಕಾಶ್ಮೀರ.

Wednesday, September 10, 2014

ಆವೇಶದ ಚರ್ಚೆಗಳು ಸಾಮಾನ್ಯರನ್ನು ಹಿರೋಗಳಾಗಿ ಮಾಡದಿರಲಿ (ಲೇಖನ)



ಬುರ್ಖಾದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ, ಕುರಾನಿನ ವಾಕ್ಯದ ಅರ್ದ ಅಂಶವನ್ನು ಲೇಪಿಸಿ ಅದರ ಹಿನ್ನಲೆಯನ್ನು ಮರೆತು
ವಿಭಿನ್ನ ಅರ್ಥವನ್ನು ಸಮಾಜಕ್ಕೆ ಪರಿಚಯಪಡಿಸುವ ಮನೋಸ್ಥಿತಿಗಳು ಬೆಳೆದು ಬರುತ್ತಿದೆ, ಆವೇಶದಲ್ಲಿ ಯಾರ ಮಾತು ಎಂದು ಅರಿಯದೆ ಅದನ್ನು ತಿಳಿಯುವ ಪುರುಸೊತ್ತಿಲ್ಲದೆ ಕೆಲವರು ಇಂತವರೆ ಎಂದು ನಿರ್ಧರಿಸುವ ಮೂಲಕ ಮಾತಿಗೆ ಮಾತು ಬೆಳೆಯುತ್ತಿದೆ, ಏಟಿಗೆ ಎದಿರೇಟು ನೀಡುವ ಭರದಲ್ಲಿ ಮುಸ್ಲಿಮ ಸಮುದಾಯದ ಕೆಲ ಯುವಕರು ಪ್ರಜ್ಞಾವಂತಿಕೆಯನ್ನು ಮರೆಯುತಿದ್ದಾರೆ, ತಮ್ಮ ವರ್ತನೆ ಹೇಗಿರಬೇಕು, ತಾವು ಹೇಗೆ ಸಮಾಜಕ್ಕೆ ಮಾದರಿ ಅನ್ನುವುದನ್ನು ತಳ್ಳಿ ಹಾಕುವಂತಿದ್ದಾರೆ. 

ಬುರ್ಖಾ ಸಮುದಾಯದ ಹೆಣ್ಣು ಮಕ್ಕಳಿಗೆ ಬೇಕೋ ಬೇಡವೇ? ಅದು ಅವರಿಗೆ ಹಿಂಸೆಯಾಗುತ್ತಿದೆ ಎಂದು ಚಿಂತಿಸಿ ಅದು ಅವರಿಗೆ ಬೇಕೋ ಬೇಡವೋ ಎಂದು ಗುಪ್ತ ಮತದಾನ ಮಾಡಬೇಕು ಆಗ ಸತ್ಯ ಹೊರಬರುತ್ತದೆ ಎಂದು ಹೇಳಿದಾಗ ಅದರ ಬಗ್ಗೆ ಚರ್ಚೆಗಳು ನಡೆಯುತಿದೆ, ಆ ಚರ್ಚೆಗಳು ಒಂದು ಹಂತ ಮೀರಿದಾಗ ಅದನ್ನು ಚರ್ಚೆ ಮಾಡಿದವರು ಇಂತಹ ಮನೋಸ್ಥಿತಿ ಉಳ್ಳವರ ಬಗ್ಗೆ ಒಂದು ಗುಪ್ತ ಮತದಾನ ನಡೆಸಿ ಇಂತಹ ಸಲಹೆ ನೀಡುವವರು ಈ ಸಮಾಜಕ್ಕೆ ಬೇಕೇ ಬೇಡವೇ ಎಂದು ಒಂದು ಗುಪ್ತ ಮತದಾನ ಮಾಡಿದರೆ ಹೇಗೆ ಎಂದು ಯೋಚಿಸಬಹುದಿತ್ತು, ಆದರೆ ಹಾಗೆ ಮತದಾನಗಳು  ಎಲ್ಲ ಸಮಸ್ಯೆಗೆ ಪರಿಹಾರ ಅಲ್ಲ, ಬುರ್ಖಾದ ಬಗ್ಗೆ ಹಾಗೆ ಹೇಳಿದಾಗ ಮತದಾನದ ಸಿದ್ದತೆಗ ನಡೆಸುವ ಪ್ರಯತ್ನಗಳು ನಡೆಯಬೇಕಿಲ್ಲ.

ಅಷ್ಟಕ್ಕೂಬುರ್ಖಾ ಬೇಕೋ ಬೇಡವೋ, ಅದು ಮಹಿಳೆಯರಿಗೆ  ಹಿಂಸೆಯೇ ಎನ್ನುವ ಒಂದು ಚರ್ಚೆಗೆ ಮುಸ್ಲಿಂ ಯುವಕರು ಅವ್ಯಾಚ್ಯ ಸಬ್ದಗಳನ್ನು ಬಳಸಿ ಕೊಪಿಷ್ಟರಾಗುವ ಬದಲು ಮನವರಿಕೆ ಮಾಡಿಕೊಡಬಹುದಿತ್ತು, ಅಲ್ಲಿಯೂ ಇಸ್ಲಾಮಿನ ಸ್ವಭಾವವನ್ನು ಪ್ರಕಟಿಸಬಹುದಿತ್ತು, ಆಗಲೂ ಆದರ್ಶದಿಂದ ಮೆರೆಯಬಹುದಿತ್ತು. ಅಷ್ಟಕ್ಕೂಬುರ್ಖಾ ಧರಿಸುವ ಮಹಿಳೆ ಅದರ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸದಿರುವಾಗ ಅದು ಅವಳಿಗೆ ಸಮಸ್ಯೆ ಅಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಿತ್ತು, ಚರ್ಚೆಗೆ ಇಳಿದಿರುವ ಕೆಲವರು ಚರ್ಚೆಯನ್ನಷ್ಟೇ ಬಯಸುತಿದ್ದಾರೆ ಆದರೆ ಪ್ರತಿಕ್ರೀಯಗಳು ಚರ್ಚೆಯಾಗಿ ಉಳಿದಿಲ್ಲ, ಕೆಲವೊಮ್ಮೆ ಅದು ನಿಂದನೆಯ ರೂಪವನ್ನು ಕೂಡಾ ಪಡೆದಿದೆ. ಕೋಪ ಭರಿತ ಚರ್ಚೆಗಳಿಂದ ಪರಿಹಾರ ದೊರಕದು ಅಂತಹ ಚರ್ಚೆಗಳು ಕೆಸರೆರೆಚಾಟಕ್ಕೆ ಮಾತ್ರ ದಾರಿ.

ಬುರ್ಖಾದ ಒಳಗಿರುವ ಮಹಿಳೆಯರಿಗೆ ದ್ವನಿಯಾಗಬೇಕು ಎನ್ನುವವರು ಅವರು ಧರಿಸಿರುವ ಬುರ್ಖಾದ ಒಳಗಿಂದಲೇ ದನಿಯಾಗಬಹುದಿತ್ತು, ಬದಲಾಗಿ ಅದನ್ನು ಕಳಚಿಟ್ಟು ಎಲ್ಲವನ್ನು ತೋರಿಸುವವಳಾಗಿ ಬಯಸಬಾರದಿತ್ತು!!  
ಬುರ್ಖಾವನ್ನು ಒಪ್ಪಿಕೊಂಡವರು ಒಪ್ಪಿಕೊಂಡಿದ್ದಾರೆ, ಅದರ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿದ್ದಾರೆ, ಒಪ್ಪದವರು ದೂರವುಳಿದಿದ್ದಾರೆ ಅವರ ಮೇಲೆ ಬಲವಂತಿಕೆಯೇ ಹೇರಿಕೆ ನಡೆದಿದಿಲ್ಲ, ನಡೆಸಲು ಸಾಧ್ಯವೂ ಇಲ್ಲ್ಲಮತ್ತು ಅದನ್ನು ತೀರ್ಮಾನಿಸುವಷ್ಟು ಮಹಿಳೆಯರು ಸಕ್ತರಾಗಿದ್ದಾರೆ.

ಇಸ್ಲಾಂ ಮಹಿಳೆಯರಿಗೆ ಸುರಕ್ಷತೆಯ ವಿಚಾರವಾಗಿ ಪರ್ದಾ ವ್ಯವಸ್ಥೆ ಯನ್ನು ಭೊಧಿಸಿದೆ, ಆ ಪರ್ದಾ ವ್ಯವಸ್ಥೆ ನಾನ ರೀತಿಯಲ್ಲಿ ಚಾಲ್ತಿಯಲ್ಲಿದೆ ಮತ್ತು ಅದರ ಭಾಗವೇ ನಾವು ಕಾಣುವ ಬುರ್ಖಾ.  ಬುರ್ಖಾ ಧರಿಸದೆ ಪರ್ದಾದಾರಿಯಾಗಿರುವ ಮುಸ್ಲಿಂ ಮಹಿಳೆಯರ ಬಗ್ಗೆ ಯಾವ ಬಲವಂತಿಕೆಯು ಬುರ್ಖಾ ಧರಿಸಿ ಎಂದು ತಿಳಿಸಿಲ್ಲ ಹಾಗಾಗಿದ್ದರೆ ಅದು ಅರೆ ಪ್ರಜ್ಞಾವಂತಿಕೆ, ಬುರ್ಖಾ ಪರ್ದಾದ ಒಂದು ನಮೂನೆ ಅಷ್ಟೇ. ಮುಸ್ಲಿಂ ಯುವಕರು ಕೂಡಾ ಬುರ್ಖಾ ಮತ್ತು ಪರ್ದಾದ ವ್ಯತ್ಯಾಸವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು,

ಮುಸ್ಲಿಮರ ವಿಚಾರಗಳ ಬಗ್ಗೆ ಚಕಾರವೆತ್ತುವವರು ಅದನು ಚರ್ಚೆ ಮಾಡಿ ಪರಿಹರಿಸಿಕೊಳ್ಳಲು ಇಷ್ಟಪಡುವವರಲ್ಲ, ಅವರು ಚರ್ಚೆಗಳ ಮೂಲಕ ಸದಾ ಸಮಾಜದಲ್ಲಿ ಚಾಲ್ತಿಯಲ್ಲಿರುವ ವಸ್ತುವಾಗಲು ಇಷ್ಟಪಡುತ್ತಾರೆ, ಅವರಿಗೆ ತಮ್ಮನ್ನು ಗುರುತಿಸಿಕೊಳ್ಳುವ ಹಂಬಲ, ಆವೇಶದ ಮಾತುಗಳುಲ್ಲ ಯುವಕರಿಂದ ಅವರಿಂದು ಹಿರೋಗಳಾಗುತಿದ್ದಾರೆ, ನಮ್ಮ ನಿಮ್ಮಂತೆಯೇ ಇರುವವರನ್ನು ಹಿರೋಗಳಾಗಿ ಮಾಡುವುದನ್ನು ನಿಲ್ಲಿಸಬೇಕು, ಮುಸ್ಲಿಮರು ಆವೆಶಕ್ಕಿಂತ ಹೆಚ್ಚು ಇಸ್ಲಾಮಿ ವಾಸ್ತವಿಕತೆಯ ಬಗ್ಗೆ ಮಾತನಾಡಿದರೆ ಹೀರೋಗಳಾಗಳು ಬಯಸುವರು ಯಾವ ದಾರಿಯಿಂದಲೂ ಹಿರೋಗಳಾಗಳು ಸಾದ್ಯವಿಲ್ಲ, ಕೆಸರೆರೆಚಾಟಗಳು ನಮ್ಮ ನಿಮ್ಮಂತೆ ಇರುವರನ್ನು ಹಿರೋಗಳಾಗಿ ಮಾಡದಿರಲಿ. 

Thursday, September 4, 2014

ಸಂಸ್ಕಾರವನ್ನರಿತು ಸ್ತ್ರೀ ಪುರುಷರು ಬೀದಿಗಿಳಿಯಲಿ (ಲೇಖನ)



ಪೆಪ್ಪರ್ ಸ್ಪ್ರೇ, ಮೆಣಸಿನ ಹುಡಿ ಬ್ಯಾಗಿನಲ್ಲಿ ಹಿಡಿದುಕೊಂಡು ಸ್ತ್ರೀಯರು ತಿರುಗಾಡುವಂತೆ ಪ್ರೋತ್ಸಾಹಿಸಿ ಅವರು ಸುರಕ್ಷಿತರು ಎಂಬ ಭಾವನೆ ಮೂಡಿಸುವುದು ಒಂದು ತಾತ್ಕಾಲಿಕ ಪರಿಹಾರ, ಇಂತಹ ಕಲ್ಪನೆಗಳು ಅಪರಾದ ಜಗತ್ತಿನಲ್ಲಿ ಮಹಿಳೆಯರಿಗೆ ಸ್ವಲ್ಪ ಮಟ್ಟಿನ ನಿರಾಳತೆ ಉಂಟು ಮಾಡಬಹುದು ಎಂಬುವುದು ಕೂಡಾ ವಾಸ್ತವ. ಮಹಿಳೆಯರ ವಸ್ತ್ರ ಧಾರಣೆ ಶೈಲಿ, ಮಹಿಳೆಯ ಅತಿಯಾದ ಮೈ ಮಾಟದ ಪ್ರದರ್ಶನ ಅತ್ಯಾಚಾರ ಸಮಸ್ಯೆಗೆ ಕಾರಣ ಎಂದು ಸಾಮಾನ್ಯವಾಗಿ ಬಿಂಬಿಸಲಾಗುತ್ತದೆ! ಒಂದು ಅರ್ಥದಲ್ಲಿ ಅದೆಲ್ಲ ಅತ್ಯಾಚಾರದ ಕಾರಣಗಳ ಪಟ್ಟಿಯಲ್ಲಿ ಒಂದು ಕಾರಣ ಎಂದು ಹೇಳಬಹುದು.


ವಸ್ತ್ರ ಧಾರಣೆ ಶೈಲಿ ಅತ್ಯಾಚಾರದ ಸಮಸ್ಯೆಗೆ ನಿರ್ದಿಸ್ಟ ಕಾರಣ ಎನ್ನುವಂತಿಲ್ಲ ಎನ್ನುವ ಪ್ರಶ್ನೆ ಕೂಡಾ ಮೂಡುತ್ತದೆ, ಅಸಹ್ಯ ವಸ್ತ್ರ ಧಾರಣೆ ಅತ್ಯಾಚಾರಕ್ಕೆ ಮುಖ್ಯ ಕಾರಣ ಅಲ್ಲ ಎನ್ನುವ ಚರ್ಚೆಗಳು ಕೂಡಾ ನಡೆಯುತ್ತದೆ, ಉದಾಹರಣೆಯಾಗಿ ನಾಲ್ಕು ವರ್ಷದ ಮಗುವಿನ ಮೇಲೆ ನಡೆಯುವ ಅತ್ಯಾಚಾರಕ್ಕೆ ಯಾವ ವಸ್ತ್ರ ಸಂಹಿತೆ ಕಾರಣವಾಯಿತು ಎಂದರೆ ಅದರ ಹಿಂದೆ ಕೂಡಾ ಆಲೋಚಿಸಬೇಕಾದ ವಾಸ್ತವ ಅಂಶಗಳಿವೆ ಅದು ಸ್ತ್ರೀಯ ಅಸಂಸ್ಕ್ರಿತಿಯ ಮೈ ಮಾಟಾ ಪ್ರದರ್ಶನದ ಭಾಗವಾಗಿ ನಡೆದ ಅತ್ಯಾಚಾರ ಎಂದು ಹೇಳಿದರೆ ಹೇಗೆ ತಪ್ಪಾಗಬಹುದು? ಯುವತ್ವದ ಮನಸ್ಸು ಹಾತೊರೆದಾಗ, ಮನಸ್ಸು ಕೆಟ್ಟಾಗ, ವಿಕಾರತೆಯ ಮಾನವೀಯತೆ ಕಳೆದ ಮನಸ್ಸುಗಳು ಇಂತಹ ಘಟನೆಗಳನ್ನು ಸೃಸ್ಟಿಸುತ್ತಿದೆ, ಅಸಂಸ್ಕ್ರಿತಿಯುತ ಮಹಿಳೆಯ ಮೈಮಾಟದ ಫಲವಾಗಿ ಮುಗ್ದ ಮಕ್ಕಳು ಅತ್ಯಾಚಾರಕ್ಕೆ ಬಲಿಪಸುವಾಗುತ್ತಿದೆ, ಅಸಹ್ಯ ವಸ್ತ್ರ ಅತ್ಯಾಚಾರಕ್ಕೆ ಪ್ರೇರೇಪಣೆ ನೀಡುತ್ತದೆ ಎಂದು  ಬಲವಾಗಿ ಬಿಂಬಿಸಬಹುದು.


ಅತ್ಯಚಾರಕ್ಕೆ ಸ್ತ್ರೀಯನ್ನೇ ಹೆಚ್ಚಾಗಿ ಹೊಣೆಯಾಗಿಸಲಾಗುತ್ತದೆ ಅದಕ್ಕಿಂತ ಹೆಚ್ಚಾಗಿ ಹೊಣೆಯಾಗಿಸಬೇಕಾಗಿರುವುದು ಪುರುಷನನ್ನು, ಹೆಣ್ಣನ್ನು ಸಂಸ್ಕೃತಿಯ ಬಂಧನದಲ್ಲಿ ಇಡಲು ಪ್ರೆರೇಪಿಸಬೇಕಾದವನು ಪುರುಷನೆನಿಸಿಕೊಂಡವನು ಪುರುಷನಾದವನು ಒಬ್ಬ ತಂದೆಯಾಗಿ, ಸಹೋದರನಾಗಿ, ಪತಿಯಾಗಿ ಹೆಣ್ಣನ್ನು ತನ್ನ ಹಿಡಿತದಲ್ಲಿ ಇಡಬೇಕು ಹಾಗಾದಾಗ ಪೆಪ್ಪರ್ ಸ್ಪ್ರೇ ಹಿಡಿದು ಮನೆಯ ಹೊರಗೆ ಮನೆಯ ಹೆಣ್ಣು ಮಕ್ಕಳನ್ನು ಕಳುಹಿಸಬೇಕಾದ ಕಾಲದಿಂದ ಮಾರು ದೂರ ಸರಿಯಬಹುದು. ಪೆಪ್ಪರ್ ಸ್ಪ್ರೇ ಹಿಡಿಯುವ ಕೈಗಳನ್ನು ಸಂಸ್ಕೃತಿಯ ಬಂಧನದಿಂದ ಬೆಸೆಯಬೇಕು ಈ ಹೊಣೆಗಾರಿಕೆಗಳೆಲ್ಲ ಇರುವುದು ಪುರುಷನಾದವನ ಮೇಲೆ ಇದನ್ನು ಪೂರ್ತಿಗೊಳಿಸದೆ ಹೆಣ್ಣನ್ನು ಹೊಣೆಯಾಗಿಸುವುದು ಸಮಸ್ಯೆಯ ಪರಿಹಾರಕ್ಕೆ ಕಂಡುಕೊಳ್ಳಬಹುದಾದ ವ್ಯವಸ್ಥೆಯಲ್ಲ.

ಅದೇ ರೀತಿ ಪುರುಷನಾದವನು ಬೀದಿಗಿಳಿಯುವಾಗ ಮೈ ಮಾಟ ಪ್ರದರ್ಶನದ ಹೆಣ್ಣಿಗೆ ಆಕರ್ಷಕನಾಗುವ ಬದಲು ತನ್ನ ಮನೆಯ ಹೆಣ್ಣು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿದಾದಲ್ಲಿ ಕ್ರಮೇಣ ಅಸಂಸ್ಕ್ರಿತಿಯ ಪ್ರದರ್ಶನದ ಹೆಣ್ಣಿನ ಪರಿಚಯ ಈ ಸಮಾಜಕ್ಕೆ ಮರೀಚಿಕೆಯಾಗಬಹುದು. ಯುವತ್ವದಲ್ಲಿ ಮನಸ್ಸು ವಿಚಾರತೆಯನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದಾದಲ್ಲಿ, ಮನಸ್ಸು ಕೆಡುವ ಪರಿಸ್ಥಿತಿಯಲ್ಲಿ ಇಸ್ಲಾಂ ಅತಿ ಹೆಚ್ಚು ಪ್ರೋತ್ಸಾಹ ಕೊಟ್ಟ ವಿವಾಹ ಬಂಧಕ್ಕೆ ಏರ್ಪಡುವ ಮೂಲಕ ಕೂಡಾ ವಿಕಾರತೆಯ ಅತ್ಯಾಚಾರದ ಅವ್ಯವಸ್ಥೆಗೆ ಕಡಿವಾಣ ಹಾಕಬಹುದು. ಒಂದು ಯುವ ಸಮಾಜವನ್ನು ಪರಿವರ್ತಿಸುವಲ್ಲಿ ನಿಸ್ಸಂದೇಹವಾಗಿ ಮದುವೆ ಮುಖ್ಯ ಪಾತ್ರ ವಹಿಸುತ್ತದೆ.  ಭಾವನೆಗಳು ದಾರಿ ತಪ್ಪುವ ಹಂತದಿಂದ ಹೊರಬರಲು ವಿವಾಹ ಬಂದನ ಸಹಕಾರಿಯಾಗಬಹುದು.

ಪುರುಷನು ತನ್ನನ್ನು ತಿದ್ದಿಕೊಂಡು ತನ್ನವರನ್ನು ತಿದ್ದಿದರೆ ಮಾತ್ರ ಈ ಸಮಸ್ಯೆಗೆ ಮುಕ್ತಾಯ ಹಾಕಲು ಸಾದ್ಯ,
ಸಮಾಜದಲ್ಲಿ ಇತ್ತೀಚಿಗೆ ಹಲವು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದೆ ಆದರೆ ಇಲ್ಲಿ ವಾಸ್ತವ ಸತ್ಯ ಹೆಚ್ಚಿನೆಲ್ಲ ಅತ್ಯಾಚಾರ ಎನಿಸಿಕೊಂಡ ಘಟನೆಗಳು ಒಪ್ಪಿ ನಡೆದವುಗಳು ಮತ್ತು ಅದು ಪರಿಸ್ಥಿತಿಯ ಒಂದು ಹಂತದಲ್ಲಿ ಒಪ್ಪದ ಸ್ಥಿತಿಗೆ ತಲುಪಿದಾಗ ಹೊರಬಿದ್ದವುಗಳು, ನಾಟಕೀಯ ಬೆಳವಣಿಗೆಯ ಭಾಗವಾಗಿ ಇಂದಿನ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಸಮಾಜದಲ್ಲಿ ಚರ್ಚೆಯಾಗುತ್ತಿದೆ. ಪ್ರತಿಷ್ಟಿತ ವ್ಯಕ್ತಿಗಳ ಅತ್ಯಾಚಾರ ಪ್ರಹಸನಗಳು ಕೂಡಾ ಸಾಮಾನ್ಯರಿಗೆ ಕೆಲವೊಮ್ಮೆ ದುಸ್ಸಾಹಸಕ್ಕೆ ಪ್ರೇರೇಪಣೆ ನೀಡುತ್ತದೆ.

ಸರಕಾರ ಅತ್ಯಾಚಾರ ತಡೆಗಟ್ಟಲು ಒಂದು ಸುಶಿಕ್ಷಿತ ಸಮಾಜವನ್ನು ನಿರ್ಮಿಸುವ ಕಾರ್ಯ ಯೋಜನೆ ರೂಪಿಸಬೇಕು, ಇಲ್ಲಿ ಸಂಸ್ಕೃತಿಯನ್ನು ಆಚರಣೆಯಲ್ಲಿ ಉಳಿಸುವುದು ಕೂಡಾ ಗಮನಾರ್ಹ ಭಾಗ. ವ್ಯಬಿಚಾರವನ್ನು ಸಕ್ರಮಗೊಳಿಸಿ ಅತ್ಯಾಚಾರವನ್ನು ತಡೆಗಟ್ಟಬಹುದು ಎನ್ನುವ ಮೂರ್ಖ ಕಲ್ಪನೆಗಳಿಗಿಂತ ವಿವಾಹ ಬಂಧನಕ್ಕೆ ಹೆಚ್ಚು ಒತ್ತು ನೀಡಬೇಕು ಎನ್ನುವ ಪರಿಕಲ್ಪನೆಗಳು ಸಮಾಜದಲ್ಲಿ ಬೆಳೆದು ಬರಬೇಕು, ಸ್ತ್ರೀ ಪುರುಷರಿಬ್ಬರು ಅತ್ಯಾಚಾರದ ಸಮಸ್ಯೆಗೆ ಸಮಾನ ಕಾರಣವಾಗಿರುವುದರಿಂದ ಬದಲಾವಣೆಯ ಪರಿಕಲ್ಪನೆ ಕೂಡಾ ಸಮಾನವಾಗಿ ಮೂಡಿ ಬರಬೇಕು, ಒಪ್ಪಿಕೊಂಡು ನಡೆಯುವ ಅನಧಿಕೃತತೆಗಲು ಇಲ್ಲವಾಗಬೇಕು, ಒಪ್ಪಿಕೊಳ್ಳದೆ ಬಲವಂತವಾಗಿ ನಡೆಯುವುದು ಅತ್ಯಾಚಾರವಾಗುವಾಗ ಒಪ್ಪಿಕೊಂಡು ನಡೆದು ಹೋದ ಘಟನೆಯು ಒಪ್ಪಿಕೊಳ್ಳದ ಹಂತ ತಲುಪಿದಾಗ ಅದನ್ನು ಅತ್ಯಾಚಾರ ಎಂದು ಒಪ್ಪಿಕೊಳ್ಳುವ ಕಲ್ಪನೆಯ ಬಗ್ಗೆ ಪ್ರಶ್ನೆಗಳು ಉದ್ಬವಿಸಬೇಕು ಅದರ ಬಗ್ಗೆ ಸತ್ಯಾಂಶಗಳ ಪರಾಮರ್ಶೆ ನಡೆಯಬೇಕು, ಸರಿ ತಪ್ಪುಗಳ ಚರ್ಚೆಯಾಗಬೇಕು. ಈ ಸಮಾಜದಲ್ಲಿ ಒಪ್ಪಿ ಒಪ್ಪದೇ ಇರುವ ಅತ್ಯಾಚಾರಗಳ ಸಂಖ್ಯೆ ಅಧಿಕವಾದುದರಿಂದ ಈ ತಪ್ಪಿಸುವಿಕೆಗಳನ್ನು ತಪ್ಪಿಸಬೇಕು.