Monday, March 31, 2014

ಶವದ ಮುಂದೆ ಅಂಗಳಾಚುವುದನ್ನು ಬಿಟ್ಟು ಬಿಡಿ, ಇದು ಬದಲಾವಣೆಗೆ ಸಕಾಲ (ಲೇಖನ)



ಸತ್ತು ಹೋಗಿರುವ ಒಂದು ಶವದ ಮುಂದೆ ನಿಮ್ಮ ರೋಧನೆಯನ್ನು ಹೇಳಲು ನೀವು ಇಷ್ಟಪಡುತ್ತೀರ? ಅಥವಾ ಸತ್ತು ಬಿದ್ದಿರುವ ಶವದಿಂದ ಏನಾದರು ಪವಾಡ ಸಂಭವಿಸಿ ನಿಮ್ಮ ರೋಧನೆ ಕೊನೆಗೊಳ್ಳಬಹುದು ಎನ್ನುವ ಮೂಡ ನಂಬಿಕೆಯೇ ನಿಮಗೆ ? ಸತ್ತು ಬಿದ್ದಿರುವ ಶವದಿಂದ ನೀವು ಎನೂ ನಿರೀಕ್ಸಿಸುತ್ತಿಲ್ಲ ಎಂದಾದಲ್ಲಿ ಅದೇ ಮಾತನ್ನು ನೀವೇ ಇಸ್ಟಪಟ್ಟು ಆರಿಸಿ ಕಳುಹಿಸಿದ ನಿಮ್ಮನ್ನು ನಿಯಂತ್ರಿಸುತ್ತಿರುವ ನಿಮ್ಮ ಮಂತ್ರಿ ಮಹಾಶಯರುಗಳಿಗೆ ಹೋಲಿಸಿಕೊಳ್ಳಿ.

ಸಧ್ರಡತೆಯಿಂದ ಬಾಳಿ ಬದುಕಬೇಕಾದ ಜನತೆ ಇನ್ನೂ ಕೂಡಾ ಸತ್ತು ಹೋಗಿರುವ ಒಂದು ಶವದ ಮುಂದೆ ಯಾಕೆ ಅಂಗಲಾಚಬೇಕು? ಸತ್ತು ಹೋದ ಶವವನ್ನು ದಫನ ಮಾಡಿ ಅದಕ್ಕೊಂದು ಅಂತ್ಯ ಕಾಣಿಸಬೇಕೆಂದು ನಿಮಗೆ ಅನ್ನಿಸುವುದಿಲ್ಲವೇ? ನಿಮಗೆ ಈಗ ನಿರ್ಧರಿಸುವ ಕಾಲ ಬಂದಿದೆ ನೀವು ಎಚ್ಚೆತ್ತುಕೊಳ್ಳಿ, ಸತ್ತು ಹೋದ ಶವದಿಂದ ಪವಾಡ ಸಂಭವಿಸಬಹುದೆಂದು ಇನ್ನು ನಿರೀಕ್ಷೆ ಇಟ್ಟುಕೊಳ್ಳಬೇಡಿ ಆ ಕಲ್ಪನೆಯನ್ನು ಬಿಟ್ಟು ಬಿಡಿ, ಶವ ಈಗಾಗಲೇ ಕೊಳೆತು ಎಲ್ಲೆಡೆ ಗಬ್ಬುನಾಥ ಬೀರುತ್ತಿದೆ, ಪ್ರಜಾಪ್ರಭುತ್ವದ ಅಡಿಯಲ್ಲಿ ಅದಕ್ಕೊಂದು ದಾರಿ ಕಾಣಿಸಿ ಬುದ್ದಿವಂತರಾಗಿ.

ಹಲವು ವರ್ಷಗಳಿಂದ ಮೌನಿಯಾಗಿರುವ ಒಬ್ಬ ಪ್ರಧಾನಿಯಿಂದ, ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಹಲವು ಕೈಗಳಿಂದ, ಬದಲಾವಣೆಯೆಂದರೆ ಏನು ಎಂದು ತಿಳಿಯದೆ ಕೇವಲ ಬೊಗಳೆ ಮಾತಿಗೆ ಬದಲಾವಣೆಯ ಗಾಳಿ ಬೀಸುತ್ತಿರುವ ರಾಕ್ಷರರ ಮಧ್ಯೆ, ಹಗರಣಗಳ ಧೀರರು, ನೀಲಿವಾಗ್ಮಿಗಳು, ಆತ್ಮಹತ್ಯೆ ನಾಟಕ ಮಾಡುವವರು ದೇಶದ ಸಂಪತ್ತು ಕೊಳ್ಳೆ ಹೊಡೆದಿರುವಾಗ ಇನ್ನು ಯಾವ ಪವಾಡ ಸಂಭವಿಸಲಿದೆಯೆಂದು ನೀವು ಕಾಯುತಿದ್ದೀರಿ? ಇವರು ಅಸಮರ್ಥರು ಎಂದು ಕಳೆದು ಹೋದ ದಿನಗಳಲ್ಲಿ ಗ್ರಹಿಸಿಕೊಳ್ಳಲು ಸಾದ್ಯವಾಗಲಿಲ್ಲವೇ? ನಿಮಗಿನ್ನು ಅರ್ಥವಾಗಲು ಸಮಯಾವಕಾಶ ಬೇಕೇ? ಇನ್ನು ಇವರಿಂದ ಯಾವ ನಿರೀಕ್ಷೆ ?

ಸಾಯುವವರೆಗೆ ಇವರೇ ಪರ್ಯಾಯ ವ್ಯವಸ್ಥೆ ಎನ್ನುವ ಕಲ್ಪನೆ ಬಿಟ್ಟು ಬಿಡಿ ಇನ್ನಾದರು ಸರಿಯಾದ ಅಭ್ಯರ್ಥಿಯನ್ನು ಆಯ್ಕೆ  ಮಾಡಿ ಮತ್ತೆ ಐದು ವರ್ಷ ಶವದ ಮುಂದೆ ಕಾಲ ಕಳೆಯಬೇಡಿ, ಆರಿಸುವಾಗ ಒಂದು ಕ್ಷಣ ಯೋಚಿಸಿ ದೇಶದ ಭವಿಷ್ಯಕ್ಕಾಗಿ ಉತ್ತಮ ವ್ಯಕ್ತಿಗೆ ನನ್ನ ಮತ ಎಂದು ನಿರ್ಧರಿಸಿ ಹಕ್ಕು ಚಲಾಯಿಸಿ, ಬದಲಾವಣೆಗಾಗಿ ನಿಮ್ಮ ಹಕ್ಕುಗಳನ್ನು ಬಳಸಿಕೊಳ್ಳಿ, ಉತ್ತಮ ಚಾರಿತ್ರ್ಯವುಳ್ಳ ಅಭ್ಯರ್ಥಿಗಳಿಗೆ ಮತ ಹಾಕಿ, ಜನರ ಪರವಾಗಿ ಕೆಲಸ ಮಾಡಿದವರ ಕೈ ಹಿಡಿಯಿರಿ, ರಾಜಕೀಯದಲ್ಲೊಂದು ಇತಿಹಾಸ ನಿರ್ಮಿಸಿ.

ಮತದಾನದ ದಿನ ಬಿಟ್ಟಿ ರಜೆ ಸಿಕ್ಕಿದೆ ಎಂದು ಹಾಯಾಗಿ ಮಲಗಿ ಕಾಲ ಕಳೆಯುವ ಮೂರ್ಖರ ಪಟ್ಟಿಯಲ್ಲಿ ನೀವು ಕೂಡಾ ಸೇರಿಕೊಳ್ಳಬೇಡಿ, ಜವಾಬ್ದಾರಿಯುತ ನಾಗರೀಕರಾಗಿ, ನಾಗರೀಕತೆಯ ಬೆಳವಣಿಗೆಯಲ್ಲಿ ಕೈ ಜೋಡಿಸಿ, ಬದಲಾಯಿಸುವ ದಿನ ಬಂದಿದೆ, ಇದು ಬದಲಾವಣೆಗೆ ಸಕಾಲ.

Saturday, March 29, 2014

ನಿರೀಕ್ಷೆಗಳನ್ನು ಹುಸಿ ಮಾಡಿದ ದೆಹಲಿ ಯಾತ್ರೆ (ಲೇಖನ)

.................... 
 
ಎಸ್ಟೇ ಪ್ರಯಾಣ ಮಾಡಿದ ಅನುಭವವಿದ್ದರೂ, ಅದೆಷ್ಟೇ ಊರು ಕೇರಿಗಳನ್ನು ಸುತ್ತಿದ್ದರೂ, ವಿವಿದ ಜಾತಿ, ಮತ, ಧರ್ಮ ಮತ್ತು ಭಾಷೆ ಮಾತನಾಡುವವರ ಮಧ್ಯೆ ತಿರುಗಾಡಿದ್ದರೂ, ಅನುಭವಿಸಿದ ಎಲ್ಲ ಅನುಭವಗಳಿಗಿಂತ ತನ್ನ ದೇಶದ ಅಭಿಮಾನದ ಸಂಕೇತದಂತಿರುವ ದೇಶದ ಪ್ರಖರತೆಯನ್ನು ಉತ್ತುಂಗಕ್ಕೇರಿಸುವ ರಾಜದಾನಿಯನ್ನು ಕಣ್ತುಂಬಿಕೊಲ್ಲುವುದರಲ್ಲಿ ಎಂತಹ ವ್ಯಕ್ತಿಯು ಕೂಡಾ ಹಲವು ನಿರೀಕ್ಷೆಗಳೊಂದಿಗೆ ಆ ಕ್ಷಣಕ್ಕಾಗಿ ಕಾಯುತ್ತಿರುತ್ತಾನೆ.

 ಹೀಗೆ ಹಲವು ನಿರೀಕ್ಷೆಗಳೊಂದಿಗೆ ಒಂದು ಪ್ರಯಾಣ ದೆಹಲಿ ಕಡೆಗೆ ಸಾಗಿತ್ತು. ರೈಲಿನ ಪ್ರಯಾಣವಾಗಿದ್ದರಿಂದ  ಹಾದುಹೋಗುವ ಕಡೆ ಜನರ ವಿವಿಧ ವೇಷಭೂಷಣ, ನಡತೆ, ವರ್ತನೆಗಳು ಕೆಲವೊಮ್ಮೆ ಗಂಭೀರತೆಯನ್ನು ಮೂಡಿಸುತ್ತಿತ್ತು   ಮತ್ತು ಹಲವಾರು ಬಾರಿ ಭಿಕ್ಷುಕರು ಹಾದು ಹೋಗುವ ಸಂದರ್ಭ ತಲೆಯನ್ನು ತಗ್ಗಿಸುವಂತೆ ಮಾಡಿದ್ದು ಕೂಡಾ ನಿಜ. ಹೊಸದೊಂದು ಪರಿಸರದಲ್ಲಿ ಹೊಂದಿಕೊಳ್ಳುವುದು ಕಷ್ಟವಾಗಿದ್ದರೂ ಪ್ರಯಾಣ ಮಕ್ಕಳಿರುವಾಗಲೇ ಒಮ್ಮೆಯಾದರೂ ನೋಡಬೇಕೆಂದು ಹಂಬಲಿಸಿದ್ದ ದೆಹಲಿ ಕಡೆಗೆ ಎಂದಾಗ ಮನಸ್ಸು ನಿರಾಳವಾಗುತಿತ್ತು.

ಬೆಳೆದು ಬಂದ ಹಾದಿಯಲ್ಲಿ ದೆಹಲಿಯನ್ನು ಕಂಡದ್ದು ಹಲವು ವಿಷೇಷತೆಗಳೊಂದಿಗೆ, ಕುತುಬ್ ಮಿನಾರ್, ಕೆಂಪುಕೋಟೆ,  ಇಂಡಿಯಾ ಗೇಟ್, ರಾಷ್ಟ್ರಪತಿ ಭವನ, ನಮ್ಮನ್ನಾಳುವ ಹಿರಿಯನ್ನರುಗಳಿರುವ ಪಾರ್ಲಿಮೆಂಟ್, ಗಾಂಧಿಯ ಸಮಾದಿ ಇರುವ ರಾಜ್ಘಾಟ್ ಮತ್ತು ಅಗಲವಾದ ರಸ್ತೆಗಳ ನಿರೀಕ್ಷೆಯಲ್ಲಿದ್ದ ನಮ್ಮನ್ನು ಇವಾವುವೂ ಸ್ವಾಗತಿಸಲೇ ಇಲ್ಲ!



                        
              ಇಸ್ಟೆಲ್ಲಾ ಇರುವ ದೆಹಲಿ ನಮ್ಮನ್ನು ಸ್ವಾಗತಿಸಿದ್ದಾದರೂ ಹೇಗೆ ??




ಇಂದಿನ ಪ್ರಜೆಗಳೇ ಈ ದೇಶದ ಮುಂದಿನ ನಾಯಕರು ಎನ್ನುವ ಮಾತಿಗೆ ಆಶಾಕಿರಣವಾಗಿ ಬೆಲೆಯಬೇಕಾಗಿದ್ದ  ಪುಟ್ಟ ಬಾಲೆ ತನ್ನ ಹೊಟ್ಟೆಪಾಡಿಗಾಗಿ ಮಧುರವಾದ ಕಂಠದಿಂದ ಹಾಡಿ ಜನರಿಂದ ಐದೋ ಹತ್ತೋ ಪಡೆದ ಮುಗ್ದ ಬಾಲೆ ದೆಹಲಿಯ ಕನಸು ಕಟ್ಟಿದ್ದ ನಮ್ಮನ್ನು ಸ್ವಾಗತಿಸಿದ್ದು, ಸ್ಲಂಗಳು ಕಾಣತೊಡಗಿದಂತೆ ಅಲ್ಲಿ ಮಲಗಿದ್ದ ರಾಜಧಾನಿಯ ನಿರ್ವಸಿತ ಜನತೆ ಮತ್ತು ಪರಿಸರ ದುರ್ವಾಸನೆಯೊಂದಿಗೆ ನಮ್ಮನ್ನು ಸುಂದರ ದೆಹಲಿಗೆ ಸ್ವಾಗತಿಸಬಹುದೆಂದು ನವೊಮ್ಮೆಯೂ ನಿರೀಕ್ಷಿಸಿರಲಿಲ್ಲ.  ದೂರದರ್ಶನದ ಪರದೆಯಲ್ಲಿ ಭ್ರಹದಾಕಾರದಲ್ಲಿ ಅಗಲವಾದ ರಸ್ತೆಯನ್ನು ಕಂಡಿದ್ದ ನಮ್ಮನ್ನು ನಮ್ಮ ಊರಿನಂತೆ ಇರುವ ಗುಂಡಿ ರಸ್ತೆಗಳು ನಮ್ಮನ್ನು ಸ್ವಾಗತಿಸಿ ನಿರಾಸದಾಯಕರನ್ನಾಗಿ ಮಾಡಬಹುದೆಂದು ನಾವಂದುಕೊಂಡಿರಲಿಲ್ಲ.

ಹಾಗೆ ಮುಂದುವರಿದು ಭಾರವಾದ ಮನಸ್ಸಿನಿಂದ ಕುತುಬ್ ಮಿನಾರ್, ಕೆಂಪುಕೋಟೆಯ ಭವ್ಯ ಕಲೆಯನ್ನು ನೋಡಿ ಕಣ್ತುಂಬಿಕೊಂಡೆವು,ಮುಂದೆ ಐಶರಾಮಿ ಬಂಗಲೆಗಳು, ಹೋಟೆಲುಗಳನ್ನು ನೋಡಿದಾಗ ಬಡವರ್ಗಕ್ಕೂ ಶ್ರೀಮಂತವರ್ಗಕ್ಕೂ ನಡೆದಿರುವ ತಾರತಮ್ಯ ಮರೆಯಲಾಗಲಿಲ್ಲ. ಹೀಗೆ ಮುಂದುವರೆದು "ಇಂಡಿಯಾ ಗೇಟ್" ನ ಸೌಂದರ್ಯವನ್ನು ಸವಿದು ರಾಜ್ಪಥ್ ರಸ್ತೆಯ ಇಕ್ಕೆಲಗಳನ್ನು ವೀಕ್ಷಿಸಿ ರಾಷ್ಟ್ರಪತಿ ಭವನ ಸಮೀಪಿಸುತ್ತಿದ್ದಂತೆ ದೂರದಿಂದ ಕಟ್ಟಡದ ವೈಭವ ನೋಡಿದಾಗ ಅದರ ಹಿಂದೆ ಶ್ರಮಪಟ್ಟವರ ನೆನಪಾಯಿತು ಮತ್ತು ಮನಸ್ಸಿನಲ್ಲೆನೋ ಪುಳಕ, ಆದರೆ ತಕ್ಷಣವೇ ಅದರಿಂದ ಹೊರಗೆ ಬರಬೇಕಾಯಿತು! ನಮ್ಮೊರಿನ ಹಾಗೆ ಅಗತ್ಯವಿಲ್ಲದೆ ಕೈ ತೋರಿಸಿ ತಪಾಸಣೆಗೆಂದು ನಿಲ್ಲಿಸುವ ಪೋಲಿಸ್ ಅಲ್ಲಿ ಕೂಡಾ ಇದ್ದ, ಮರದಡಿಯಲ್ಲಿ ನೂರು ರೂಪಾಯಿ ಕೊಟ್ಟಾಗ ಎಲ್ಲವೂ ಮನ್ನಿಸಲ್ಪಡುವ ವಿಧಿ ದೂರದಿಂದ ಕಂಡು ಮರುಕವಾಯಿತು, ಅಸಹಾಯಕರಾಗಿ ಅದಕ್ಕೆ ಸಾಕ್ಷಿಯಗಿದ್ದಕ್ಕಾಗಿಯೂ ವಿಷಾದವಾಯಿತು ಆದರೆ ಆಶ್ಚರ್ಯವೇನೆಂದರೆ ಹಿಂದೆಯೇ ಇಂಡಿಯಾ ಗೇಟ್ ಇರುವಾಗ ಮುಂದುಗಡೆ ರಾಷ್ಟ್ರಪತಿ ಭವನ ಇರುವಲ್ಲಿ ಮತ್ತು ಕೂಗಳತೆಯ ದೂರದಲ್ಲಿ ದೇಶದ ಕಾರ್ಯಂಗವಾದ ಪಾರ್ಲಿಮೆಂಟ್ ಇರುವ ಜಾಗದಲ್ಲಿ ಮಾತ್ರವಲ್ಲ ವಿಜಯ್ ಚೌಕ್ನಲ್ಲೇ ನೂರು ರೂಪಾಯಿಗೆ ಎಲ್ಲವೂ ನಡೆದು ಮುಗಿದು ಹೊಗುವುದನ್ನು ಕಂಡಾಗ ರಾಜಧಾನಿಯ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷಗಳೆಲ್ಲ ಹುಸಿಯಾಯಿತು.

 ಒಂದು ದೇಶದ ರಾಜಧಾನಿಯ ಕಾರ್ಯಾಂಗದ ತಳಸ್ಥಾನದಲ್ಲೇ ಭ್ರಷ್ಟಾಚಾರ ಯಾವ ಹಂಗಿಲ್ಲದೆ ನಡೆಯುವುದಾದರೆ  ಮರವಾಗಿ ಬೆಳೆದಿರುವ ಹೆಮ್ಮರವನ್ನು ಕಡಿಯಲು ಸಾದ್ಯವೋ ಎಂದು ಚಿಂತೆಯಾಯಿತು ಮಾತ್ರವಲ್ಲ ಭ್ರಷ್ಟಾಚಾರ ಅಳಿಸಿ ಹಾಕಬೇಕು ಎಂದು ಕಂಡಿದ್ದ ಕನಸು ನಿಲ್ಲಿಸಿ ಬಿಡಬೇಕೆನಿಸಿತು. ರಾಜಧಾನಿಯಲ್ಲೇ ಅವ್ಯವಸ್ಥೆಗಲು ತಾಂಡವಾಡುತ್ತಿರುವಾಗ, ಬಾಲಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವಾಗ, ಬಡವರು ತುಂಬಿ ತುಳುಕಾಡುತ್ತಿರುವಾಗ, ಭ್ರಷ್ಟಾಚಾರ ವ್ಯಾಪಕವಾಗಿ ಹಬ್ಬಿರುವಾಗ ಇನ್ನು ದೇಶದ ಹಳ್ಳಿಗಳ ವ್ಯವಸ್ಥೆ ಹೇಗಿರಬಹುದು ಎಂದು ಆಲೋಚಿಸಿದಾಗ ದೇಶದಿಂದ ಇದನ್ನೆಲ್ಲಾ ಅಳಿಸಿ ಹಾಕಲು ಅಸ್ಟೊಂದು ಸುಲಭವಿಲ್ಲ ಎಂದು ಭಾರವಾದ ಮನಸ್ಸಿನಿಂದ ಕನಸುಗಳನ್ನು ಕಟ್ಟಿಕೊಂಡು ದೆಹಲಿ ಯಾತ್ರೆ ಮಾಡಿದ್ದ ನಾವು ನೋವಿನೊಂದಿಗೆ ದೆಹಲಿಗೆ ವಿದಾಯ ಹೇಳಬೇಕಾಯಿತು.

ಆದರೆ ಇದೆಲ್ಲದರ ಮದ್ಯೆ ಒಂದಂತು ಸತ್ಯ, ಇತ್ತೀಚೆಗೆ ಕೇರಳದ ಹೈ ಕೋರ್ಟ್ ಹೇಳಿದಂತೆ ಜನರೇ ನೀವು ಪ್ರಶ್ನಿಸಬೇಕು ನೀವು ಪ್ರಶ್ನಿಸದ ಹೊರತು ಇಲ್ಲೇನು ಬದಲಾಗದು ಎನ್ನುವ ಮಾತನ್ನು ನಾವೆಲ್ಲ ಒಪ್ಪಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಈ ದೇಶವನ್ನು ಮೇಲ್ಕಂಡ ಎಲ್ಲ ಸಮಸ್ಯೆಗಳಿಂದ ಮುಕ್ತ ಗೊಳಿಸಲು ಮತ್ತು ನಾವು ಗುಲಾಮರಾಗಿ ಬದುಕುವುದನ್ನು ತಪ್ಪಿಸಲು ಸಾದ್ಯ, ಹಾಗೆ ಬದಲಾದ ಒಂದು ದೇಶವನ್ನು ನಮ್ಮ ಕಣ್ಣುಗಳಿಂದ ತುಂಬಿಕೊಳ್ಳಲು ಸಾದ್ಯವಾಗದಿದ್ದರೂ ಇದೇ ಕಣ್ಣುಗಳ ವಾರಸುದಾರರಿಗಾದರೂ ಬದಲಾದ ದೇಶವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಲು ಸಾದ್ಯ.

Wednesday, March 26, 2014

ಇನ್ ಆಂಡ್ ಔಟ್ ರಾಜಕೀಯ? (ಲೇಖನ)






ಇನ್ ಆಂಡ್ ಔಟ್ ರಾಜಕೀಯ ಎನ್ನುವುದು ರಾಜಕೀಯ ವ್ಯವಸ್ಥೆ ಅತ್ಯಂತ ಕೀಳು ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಸಾಕ್ಷಿ, ನಾಚಿಕೆ ಮಾನ ಮರ್ಯಾದಿಗಳಿದ್ದಿದ್ದರೆ ಇದೆಲ್ಲ ಪದೇ ಪದೇ ನಡೆಯಲು ಸಾಧ್ಯವಿಲ್ಲ, ನಾಚಿಕೆ ಮಾನ ಮರ್ಯಾದಿಗಳ ಬಗ್ಗೆ ಗಂಧ ಗಾಳಿಯಿಲ್ಲದ ವ್ಯಕ್ತಿಗಳಿಂದ ಇಷ್ಟು ಮಾತ್ರವಲ್ಲ ಇದಕ್ಕಿಂತಲೂ ಹೆಚ್ಚಿನದನ್ನೇ ಈ ನಿಷ್ಕ್ರೀಯ ಸಮಾಜ ನಿರೀಕ್ಷಿಸಬೇಕಾಗಿದೆ.

ಇಲ್ಲಿ ಕೋಮುವಾದವನ್ನು ಪಸರಿಸುವವವರು, ಅಭಿವೃದ್ಧಿಯ ಬಗ್ಗೆ ಮಾತನಾಡುವವರು, ಜಾತ್ಯತೀತತೆಯ ಮಾತೆತ್ತುವವರು, ಬಡವರ ಬಂಧುಗಳು ಎಂದು ಹೇಳುವವರು, ಅಲ್ಪಸಂಖ್ಯಾತರ ಪರವಾಗಿದ್ದೇವೆ ಎಂದು ಭಾಷಣ ಮಾಡುವವರು ಇರುವಾಗ ಒಟ್ಟಿನಲ್ಲಿ ಎಲ್ಲರೂ ಈ ವಂಚನೆಯ ನಾಟಕದಲ್ಲಿ ಪಾತ್ರಧಾರಿಗಳಾಗಿದ್ದಾರೆ. ಮಿತ ಕಾಲದಲ್ಲಿ ಗುರುತಿಸಲ್ಪಡುವ ಆತುರದಲ್ಲಿ ತಮ್ಮ ತತ್ವ ಆದರ್ಶಗಳನ್ನೆಲ್ಲ ಮೂಲೆಗುಂಪು ಮಾಡಿದ್ದಾರೆ.

ಇವರ ಗುಣ ನಡತೆಗಳ ಬಗ್ಗೆ ಸಂಶಯಿಸಿದ ಜನತೆ ಇವರಿಗೆ ಛೀ, ಥೂ ಎಂದು ಉಗಿದರೂ ಇವರು ಉಗಿಸಿಕೊಲ್ಲುತ್ತಾರೆಯೇ ಹೊರತು ಇವರ ನಿರ್ಣಯಗಳಲ್ಲಿ ಯಾವ ಬದಲಾವಣೆಯೂ ನಿರೀಕ್ಷಿಸಲು ಸಾಧ್ಯವಿಲ್ಲ, ಏಕೆಂದರೆ ಇವರು ಉಗಿಸಿಕೊಂಡು ಉಗುಳಿನ ಕೆಸರಿನಲ್ಲಿ ಲೀನವಾಗಿದ್ದಾರೆಯೇ ಹೊರತು ಇವರಿಗೆ ಜನತೆಯ ಅಸಹಾಯಕತೆಯ ಪರಿಚಯ ಯಾವ ಕಾಲದಲ್ಲಿಯೂ ಆಗಲು ಸಾದ್ಯವಿಲ್ಲ.

ಸ್ವಾತಂತ್ರ್ಯ ಕಳೆದು ಆರು ದಶಕಗಳ ಅವಧಿಯಲ್ಲಿ ಇಡೀ ದೇಶವನ್ನು ಅಪಹಾಸ್ಯ ಮಾಡುವಂತೆ ಏನೆಲ್ಲಾ ಮಾಡಬೇಕೋ ಅದೆನ್ನೆಲ್ಲ ಮಾಡಿ ಮುಗಿಸಿ ಆಗಿದೆ, ಇವರಿಗಿನ್ನು ಕ್ಯಾಕರಿಸಿ ಉಗಿದರೂ ಪ್ರಯೋಜನ ಇಲ್ಲ, ಶಾಶ್ವತವಾದ ವಿಶ್ರಾಂತಿಗಾಗಿ ಇವರೆನ್ನೆಲ್ಲ ಮನೆಯಲ್ಲಿ ಕೂರಿಸಬೇಕು, ಜನತೆಯ ಪರವಾಗಿ ಎಂದು ಹೇಳಿಕೊಂಡು ತಿರುಗಾಡುವ ಇವರೆಲ್ಲರಿಗೂ ಜನತೆ ತಮ್ಮ ನೈಜ ಅಕ್ರೋಶವನ್ನು ಪ್ರಜಾಪ್ರಭುತ್ವದ ಅಡಿಪಾಯದಲ್ಲಿ ತೋರಿಸಿಕೊಡಬೇಕು, ಅಂದು ಅದು ಕ್ಯಾಕರಿಸಿ ಉಗಿಯುವುದಕ್ಕಿಂತಲೂ ಹೆಚ್ಚು ಪರಿಣಾಮ ಬೀರುವಂತಹದ್ದು ಅಲ್ಲಿಯವರೆಗೆ ಇನ್ ಆಂಡ್ ಔಟ್ ರಾಜಕೀಯಕ್ಕೆ ವಿರಾಮ ನೀಡಲು ಸಾಧ್ಯವಿಲ್ಲ. 

Tuesday, March 25, 2014

ನ್ಯಾಯದ ಪರ ನಿಲ್ಲಿ (ಚುಟುಕ)



ಸತ್ಯ ಹೇಳಿದಾಗ ಹಲವು ಶತ್ರುಗಳು! 
ಸುಳ್ಳು ಹೇಳಿದರೆ ಇವರೆಲ್ಲ ಸಹಪಾಟಿಗಳು!

ಜಾಯಮಾನವೇ ಅಂತೆ ಕಂತೆಗಳ ಕಟ್ಟು ಕತೆ!
ಬಿಟ್ಟು ಬಂದವರೆಲ್ಲ ಬಿಚ್ಚಿಟ್ಟದ್ದು ಬಚ್ಚಿಟ್ಟ ಕತೆ!

ನ್ಯಾಯದಲ್ಲಿ ನಿಮಗಿರಲು ಸಾಧ್ಯವಾಗದಿದ್ದರೆ ಹೇಳಿಬಿಡಿ!
ಅನ್ಯಾಯದ ವಕ್ತಾರರೆಂದು ಜಗತ್ತಿಗೆ ಗೊತ್ತಾಗಲಿ!

ಕಣ್ಮರೆಯಾಗಿ ಹೋಗುವಿರಿ ನೊಂದವರ ಶಾಪಕ್ಕೆ!
ಸತ್ಕರ್ಮಿಗಳಾಗಿ ಈ  ಮಣ್ಣಿನಲ್ಲಿ ಬದುಕು ಕಟ್ಟಿಕೊಳ್ಳಿ!. 

Saturday, March 22, 2014

ರಾಜಕಾರಣದ ನಗೆ ಬರುವ ಸಾಲು (ಚುಟುಕ)


ಬೀನ್ಸು, ಕಡಲೇಕಾಯಿ ಇನ್ನಿತರ ತರಕಾರಿ ಹೆಚ್ಚಿ ಬೇಯಿಸಿದಾಗ ಸಾಂಬಾರು,
ಕಳ್ಳರು, ಸುಳಿಗೆಕೋರರು, ಅತ್ಯಾಚಾರಿಗಳು ಪ್ರಸಕ್ತ ರಾಜಕಾರಣದ ಮಾಲು. 
 
ಪದವಿ ಪಡೆದವನಿಗೆ ಇಂದು ಸುಲಭದಲ್ಲಿ ಸಿಗುತ್ತಿಲ್ಲ ಎಲ್ಲೂ ಜೋಬು,
ಜನರ ಸಮಸ್ಯೆ ಆಳಿಸದವನಿಗೆ ಪಾರ್ಲಿಮೆಂಟ್ನಲ್ಲೊಂದು ಧರ್ಮದ ಚೇರು. 

ನಮ್ಮನ್ನು ಆಳುತ್ತಿರುವವರ ವಾಸ್ತವಿಕತೆಯ ಬಗ್ಗೆ ನಗೆ ಬರುವ ಸಾಲು,
ಬಡವರು ಅಸಹಾಯಕತೆಯಿಂದ ನರಳುವುದೇ ದಿನನಿತ್ಯದ ಗೋಳು. 

ಕೀಳು ರಾಜಕಾರಣದಿಂದ ಅರ್ಥ ವ್ಯವಸ್ಥೆಯಲ್ಲಿ ಆಗಿದೆ ಏರು ಪೇರು,
ಮತದಾರ ಎಚ್ಚೆತ್ತುಕೊಳ್ಳುವವರೆಗೆ ರಾಜಕಾರಣದಲ್ಲಾಗದು ಮಾರ್ಪಾಡು. 

Friday, March 21, 2014

ದುಡ್ಡಿರಲಿ ಹಾಯಾಗಿ ನಿದ್ದೆ ಬರುವಸ್ಟು (ಚುಟುಕ)


 ಉತ್ಸಾಹವಿಟ್ಟು ಮುಂದೆ ಬರಬಯಸಿದವರು ಕೆಲವರು,
ಕುಗ್ಗಿಸಲು ನಂಬಿಕೊಂಡವರ ಕೆಲವೇ ಮಾತು ಸಾಕು.

ದುಡ್ಡು ಎಲ್ಲಕ್ಕೂ ಪರಿಹಾರವೆಂದರೆ ಯಾಕೆ ಪರಿಹಾರ ನೀಡಲಿಲ್ಲ?
ಕಟ್ಟಿಕೊಂಡ ಕನಸುಗಳಾವುವು ದುಡ್ಡಿನಿಂದ ಪುರ್ತಿಯಾಗಲೇ ಇಲ್ಲ !

ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ಯಾವತ್ತಿಗೂ ಬೇಡ,  
ದುಡ್ಡಿರಲಿ,ಆದರೆ ಅದಕ್ಕೆ ಮಿತಿ ಇರಲಿ, ಹಾಯಾಗಿ ನಿದ್ದೆ ಬರುವಸ್ಟು. 

Thursday, March 20, 2014

ಮಕ್ಕಳ ಹಕ್ಕುಗಳ ಜಾಗೃತಿ ಕೆಲಸ ಪರಿಣಾಮಕಾರಿಯಾಗಿ ನಡೆಯಲಿ (ಲೇಖನ)







ಬೀದಿ ಬದಿಯಲ್ಲೊಂದು ಅನಾಥವಾಗಿ ಬಿದ್ದುಕೊಂಡು ಅಳುತ್ತಿರುವ ಪುಟ್ಟ ಮಗು, ಸಮೀಪವೇ ನಡೆದುಕೊಂಡು ಹೋಗುವವರು ಅದನ್ನು ಗಮನಿಸಿಯೂ ಗಮನಿಸದಂತೆ, ಅಳುವಿನ ಸಬ್ದ ಕೇಳಿಯೂ ಕೇಳಿಸದಂತೆ ತಮ್ಮ ಪಾಡಿಗೆ ಹೊರಟು ಹೋಗುವ ಒಂದು ದುರಂತ ಕಾಲವನ್ನು ನಮಗೆ ಊಹಿಸಲು ಸಾದ್ಯವೇ? ಖಂಡಿತವಾಗಿಯೂ ಸಾಧ್ಯವಿದೆ ಯಾಕೆಂದರೆ ನಾನು ಮತ್ತು ನೀವು ಇವತ್ತು ಜೀವಿಸುತ್ತಿರುವುದು ಇಂತಹದೇ ಸನ್ನಿವೇಷವಿರುವ ವಾತಾವರಣದ ಅಡಿಯಲ್ಲಿ ಒಂದು ಅಪ್ರಮಾನಿತ ಕಾಲಘಟ್ಟದಲ್ಲಿ. 

ಮನುಷ್ಯನು ಆಧುನಿಕವಾಗಿ ಎಷ್ಟು ಮುಂದುವರಿಯುತಿದ್ದಾನೋ ಅಸ್ಟೇ ಮಾನವೀಯತೆಯ ವಿಚಾರಗಳಿಂದ
ದೂರವಾಗುತಿದ್ದಾನೆ, ಮಾನವೀಯ ಮೌಲ್ಯಗಳು ಮರೆಯಾಗುತ್ತಿದೆ, ದೊಡ್ಡ ಬಂಗಲೆಗಳಲ್ಲಿ ಸುಖ ವೈಬೋಗದಲ್ಲಿ ಜೀವಿಸುತ್ತಿರುವ ಮನುಷ್ಯನಿಗೆ ತಮ್ಮಂತೆಯೇ ಇರುವ ಬಡ ಜೀವಗಳ ಬಗ್ಗೆ ಕಾಳಜಿ ಇಲ್ಲದಾಗಿದೆ ಮತ್ತು ಅದರ ಬಗ್ಗೆ ಯೋಚಿಸುವಸ್ಟು ಸಮಯ ಕೂಡಾ ಇಲ್ಲವಾಗಿದೆ, ದುರಂತಗಳನ್ನು ಕಾಲಬುಡದಲ್ಲೇ ಇಟ್ಟುಕೊಂಡು,
ಆಹಾರವಿಲ್ಲದೆ ಅದೆಸ್ಟೋ ಮುಗ್ದ ಮಕ್ಕಳು ಪ್ರಾಣಕಳೆದುಕೊಳ್ಳುತ್ತಿರುವಾಗ ನಾವು ಪ್ರಕಾಶಿಸುತ್ತಿದ್ದೇವೆ ಎಂದು ಹಗಲು ಕನಸನ್ನು ತೋರಿಸಿ ನಮ್ಮನ್ನು ಕತ್ತಲೆಯಲ್ಲೇ ಕಾಲ ಕಳೆಯುವಂತೆ ಮಾಡಲಾಗಿದೆ. 

ಪ್ರತೀ ನಿಮಿಷಕ್ಕೆ ಹದಿನಾಲ್ಕು ಮಕ್ಕಳು ಸಾಯುತಿದ್ದಾರೆ, ಪ್ರತೀ ನೂರು ಮಕ್ಕಳಲ್ಲಿ ಹತ್ತೊಂಬತ್ತು ಮಕ್ಕಳು ಶಾಲೆ ಬಿಡುತ್ತಿದ್ದಾರೆ ಎಂದು ಹೇಳುವ ವರದಿಗಳನ್ನು ತಲೆಯ ಮೇಲೆ ಹಿಡಿದು ತಿರುಗಾಡುತಿದ್ದೆವೆಯೇ ಹೊರತು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ವ್ಯವಸ್ಥೆ  ಸರಿಯಾಗಿ ನಡೆದಿಲ್ಲ. ವರದಿಗಳ ನಂತರ ಗಮನಾರ್ಹ ಇಳಿಕೆ ಕಂಡಿರಬಹುದೇ ಹೊರತು ನಿರೀಕ್ಷಿಸಿದ ಮಟ್ಟಕ್ಕೆ ತಲುಪಲು ಇದುವರೆಗೆ ಸಾಧ್ಯವಾಗಿಲ್ಲ ಎನ್ನುವುದು ಸತ್ಯ

ಸರ್ಕಾರ ಮಕ್ಕಳಿಗೆ ಮೂಲಭೂತ  ವ್ಯವಸ್ಥೆ  ಕೊಡಿಸುತ್ತೇವೆ ಎಂದು ಹೇಳಿ ಕಣ್ಣಮುಚ್ಚಾಲೆ ಆಡುತ್ತಿದೆ, ಅಭಿವ್ರದ್ದಿಯ ಹೆಸರಿನಲ್ಲಿ ಎಲ್ಲೆಡೆ ವಂಚನೆ ನಡೆಯುತ್ತಿದೆ, ಶಾಲೆ ಬಿಟ್ಟು ಕೆಲಸಕ್ಕೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿಗಳು  ಹೇಳುವಾಗ ಅದನ್ನು ಮರೆಮಾಚುವ ಪ್ರಯತ್ನಗಳು ಕೂಡಾ ನಡೆದಿದೆ , ಪ್ರತಿ ಮಗುವಿಗೆ ಬದ್ದತೆಯನ್ನು ಕಲಿಸಿಕೊಡಬೇಕಾದ ಅಗತ್ಯ ಇದೆ ಎಂದು ತಿಳಿದಿರುವ ಸರಕಾರಗಳು ತನ್ನ ಬದ್ದತೆಯನ್ನೇ ಮರೆತು ಕೆಸರೆರೆಚಾಟದಲ್ಲಿ ತೊಡಗಿದೆ.

ಮಕ್ಕಳ ಹಕ್ಕುಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕು, ಮಕ್ಕಳ ಸಾಕ್ಷರತ ಪ್ರಮಾಣದ ಅಂತರದಲ್ಲಿ ಕಡಿತವನ್ನು ಕಾಪಾಡಿಕೊಳ್ಳಬೇಕು, ಮಕ್ಕಳ ಅರೋಗ್ಯದಲ್ಲಿ ಗುಣಮಟ್ಟವನ್ನು ಕಾಪಾಡಿ ಶಿಕ್ಷಣದ ಕೊರತೆ ನಿಗಿಸುವಂಥ ಕೆಲಸಗಳನ್ನು ಜವಾಬ್ದರಿಯುಲ್ಲ ವ್ಯಕ್ತಿಗಳು ಮಾಡಬೇಕಾಗಿದೆ ಅ ಮೂಲಕ ಸುಂದರ ಕನಸುಗಳನ್ನು ಆ ಮುಗ್ದ ಮಕ್ಕಳಲ್ಲಿ ಕಟ್ಟಿಕೊಡಲು ಸಾದ್ಯ .

ಚಹಾ ಹಿಡಿದುಕೊಂಡು ಬರುವ ಒಂದು ಪುಟ್ಟ ಮಗುವಿನಲ್ಲಿ ನೀವು ಕೇಳಿ ನೋಡಿ ನಿನ್ನ ವಯಸ್ಸೆಸ್ಟು ಅವನು ತಕ್ಷಣ ಹೇಳುವುದು "ಹದಿನೆಂಟು ಸಾರ್" ಅದು ಅವನೆಸ್ಟೇ  ವಯಸ್ಸಿನವನಾಗಿದ್ದರೂ ಕೂಡಾ, ನಮ್ಮ ವ್ಯವಸ್ಥೆ  ಅವನನ್ನು ಬೆಳೆಸಿದ್ದು ಹಾಗೆ, ಅವನು ಕಂಡು ಕೊಂಡ ಜೀವನದ ವ್ಯವಸ್ಥೆ ಹಾಗೆ, ಒಂದು ವೇಳೆ ಅವನು ಹಾಗೆ ಹೇಳದಿದ್ದರೆ ಅವನ ಹೊಟ್ಟೆ ತುಂಬುವುದಿಲ್ಲ ಆದ್ದರಿಂದ ಅವನು ತನ್ನ ಸಣ್ಣ ವಯಸ್ಸಿನಲ್ಲೇ ಸುಳ್ಳಿಗೆ ಮಾರುಹೊಗಿದ್ದಾನೆ. ನಾವು ಇದನ್ನು ನೋಡಿಕೊಂಡು ನೋಡದ ಹಾಗೆ ಮುಂದುವರಿಯಬೇಕೆ? ಸಮಸ್ಯೆಗೆ ನಿಜವಾದ ಕಾರಣ ಹುಡುಕುವ ಮತ್ತು ಪರಿಹಾರದ ವ್ಯವಸ್ಥೆಯನ್ನು ಇಲ್ಲಿ ಮಾಡಬೇಕಾದವರು  ಯಾರು? ಇದಕ್ಕೆಲ್ಲ ಉತ್ತರಿಸಬೇಕಾದವರು ಯಾರು?

ಮಕ್ಕಳನ್ನು ಇಂದು ಗಣಿಗಾರಿಕೆ ಮತ್ತು ಶ್ರಮಿಕ ವರ್ಗದ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ, ಮಕ್ಕಳು  ಶಾಲೆಗೆ ಹೋಗುವ  ಬದಲು ಕೆಲಸಕ್ಕೆಹೋದರೆ ಆಧಾರವಾಗಬಹುದು ಎಂದು ಬಡ ಹೆತ್ತವರು ತಿಳಿದುಕೊಂಡಿದ್ದಾರೆ, ಸರಕಾರಿ ಶಾಲೆಗಳ  ಮುಚ್ಚುಸುವಿಕೆ ಮತ್ತು ಖಾಸಗಿ ಶಾಲೆಗಳ ವಿಪರೀತ ಏರಿಕೆ ಕೂಡಾ ಈ ಸಮಸ್ಯೆ ಹೆಚ್ಚಾಗಲು ಕಾರಣ ಮತ್ತು ಹೆತ್ತವರು ಶಿಕ್ಷನದತ್ತ ಹೆಚ್ಚು ಒಲವು ತೋರಿಸದಿರಲು ಕೂಡಾ ಕಾರಣ, ಇನ್ನು ಇತ್ತೀಚಿಗಿನ ಕೆಲವು ಮೀಸಲಾತಿಗಳು ಸರಕಾರಿ ಶಾಲೆಗಳ ಮುಚ್ಚಿಸುವಿಕೆಗೆ  ಕಾರಣ ಆಗಬಹುದೆಂದು ಮೇಲ್ನೋಟಕ್ಕೆ ಕಾಣುತ್ತಿದೆ 

ಒಂದು ಕಾಲದಲ್ಲಿ ಸಮಾಜಕ್ಕೆ ಕಂಟಕವಾಗಿ ಅಂಟಿಕೊಂಡಿದ್ದ ಜೀತ ಪದ್ದತಿಯನ್ನು ಅಳಿಸಿ ಹಾಕಲು ಹೇಗೆ ಪರಿಣಾಮಕಾರಿ ಯೋಜನೆಗಳನ್ನು ತರಲಾಯಿತೋ ಅದೇ ರೀತಿ ಮಕ್ಕಳ ಸಮಸ್ಯೆ ನಿರ್ಮೂಲನೆಗೆ ಪರಿಣಾಮಕಾರಿ ವ್ಯವಸ್ಥೆಯನ್ನು ಬಲ ಪಡಿಸುವ ಕೆಲಸ ನಡೆದುಬರಬೇಕಾಗಿದೆ, ಆ ಮೂಲಕ ಬೆಳೆದು ಬರುವ ಮುಗ್ದ ಮಕ್ಕಳ ಬಾಳಿಗೆ ನೆರವಾಗಬೇಕು ಮತ್ತು   ಅವರನ್ನು ಭಾವನಾತ್ಮಕವಾಗಿ, ಮಾನಸಿಕವಾಗಿ, ಬೌದ್ದಿಕವಾಗಿ, ಭೌತಿಕವಾಗಿ, ಅಭಿವ್ರದ್ದಿಪಡಿಸಲು ಸರಕಾರಗಳು ಯೋಜನೆಯನ್ನು ತರಬೇಕು, ಸಮಿತಿಗಳು ಪುಸ್ತಕದ ಹಾಳೆಗಳಿಗೆ ಮಾತ್ರ ಸೀಮಿತವಾಗದೆ ವರದಿಗಳು ಅನುಸ್ಟಾನಗೊಳ್ಳಬೇಕು, ಮಕ್ಕಳು ಕಾರ್ಖಾನೆಗಳಿಂದ, ಗಣಿಗಾರಿಕೆಗಳಿಂದ, ಹೋಟೆಲು ಕೆಲಸದಿಂದ ಹೊರಗೆ ಬಂದು ಶಾಲೆಗಳತ್ತ ಹೆಜ್ಜೆ ಹಾಕಬೇಕು.

ಭಾರತದ ಮಕ್ಕಳಿಗೆ ಮೂಲಬೂತ ಹಕ್ಕುಗಳ ಜಾರಿಯಾಗುವಂತೆ ಮತ್ತು ಅದರ ಖಾತರಿ ಕಡೆಗೆ ಗಮನಾರ್ಹ ಬದ್ದತೆಗಳ ಅಗತ್ಯದ ಬಗ್ಗೆ ಸಮಾಜದಲ್ಲಿ ಜಾಗ್ರತಿ ಉಂಟಾಗಬೇಕು. ಇಲ್ಲಿ ಬದಲಾವಣೆಗಳು ಆಗಿರಬಹುದು ಆದರೆ ಅದು ನೀರಿಕ್ಷಿಸಿದ ಮಟ್ಟಕ್ಕೆ ತಲುಪಿಲ್ಲವಾದ್ದರಿಂದ ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಆ ರೀತಿಯಲ್ಲಿ ನಿರೀಕ್ಷೆಗಳನ್ನು ಪೂರ್ತಿಗೊಳಿಸುವಲ್ಲಿ ಯಶ್ವಿಯಾಗಬೇಕು. ಮಕ್ಕಳು ಬೀದಿಗಳಲ್ಲಿ ಮಲಗುವುದನ್ನು ನಿಲ್ಲಿಸಿ ಅವರಲ್ಲಿ ಸಾಮಾಜಿಕ ಬದ್ದತೆ ಉಂಟಾಗಿ ಸದ್ರಡವಾದ  ಸಮಾಜ ನಿರ್ಮಾಣದತ್ತ ಪರಿಣಾಮಕಾರಿ ಕೆಲಸಗಳು ನಡೆಯಬೇಕು.

Tuesday, March 18, 2014

ಮತ ಹಾಕುವ ಮುಂಚೆ ಯೋಚಿಸು! (ಚುಟುಕ)


ಪ್ರಜಾಪ್ರಭುತ್ವದ ದೇಶದಲ್ಲಿ ಮತ್ತೊಮ್ಮೆ ಚುನಾವಣೆ ಬಂದಿದೆ, 
ಹುಚ್ಚು ರಾಜಕಾರಣದ ಬಿಡುವಿಲ್ಲದ ಸೇವೆ ಆರಂಭವಾಗಿದೆ. 

ಭ್ರಷ್ಟಾಚಾರಿಗಳು, ಕೋಮುವಾದಿಗಳು ಕಣದಲ್ಲಿದ್ದಾರೆ,
ಲೂಟಿಕೋರರು, ಪಾತಕರು ಟಿಕೇಟು ಪಡೆದಿದ್ದಾರೆ.  

ಬಿಸಿಲಲ್ಲಿ ನಿಂತು ಮತ ಹಾಕುವವನೆ! ನೀನೊಮ್ಮೆ ಯೋಚಿಸು, 
ನಿ ತಪ್ಪಿ ಹೋದರೆ ಮತ್ತೆ ಐದು ವರುಷ! ಅದೇ ಪಾಡು ಮರೆಯದಿರು. 

Monday, March 17, 2014

ಸಿದ್ಧಾಂತವಿಲ್ಲದ ರಾಜಕಾರಣದ ನಡುವೆ ಅತಂತ್ರನಾದ ಮತದಾರ (ಲೇಖನ)








೨೧ ನೆಯ ಶತಮಾನವನ್ನು ಬಿಟ್ಟು ಸ್ವಲ್ಪ ಹಿಂದಿನ ಕಾಲದ ಕಡೆಗೆ ಹಿಂತಿರುಗಿ ಯೋಚಿಸುವುದಾದರೆ ಅಂದು ಕೂಡಾ ಹಲವು ರಾಷ್ಟ್ರೀಯತೆಯ ರಾಜಕೀಯ ಪಕ್ಷಗಳಿದ್ದವು ಮತ್ತು ಅದಕ್ಕೆ ಅದರದೇ ಆದ ನೈತಿಕ ಸಿದ್ಧಾಂತಗಳಿದ್ದವು ಅದರಲ್ಲಿ ಸ್ಥಿರವಾಗಿ ಗುರುತಿಸಿಕೊಂಡ ನಾಯಕರುಗಳು ಕೂಡಾ ಇದ್ದದ್ದು ಸತ್ಯ ಮತ್ತು ನಾಯಕರೆನಿಸಿಕೊಂಡವರನ್ನು ಕಾರ್ಯಕರ್ತರು ಕೂಡಾ ನಾಯಕರೆಂದೇ ಗುರುತಿಸಿಕೊಂಡಿದ್ದರು ಹಾಗಾಗಿ ಅಲ್ಲಿ ಒಂದು ಕಾಟಾಚಾರದ ರಾಜಕೀಯವಿರದೆ ಅವರೊಳಗೆ ಸಾಮ್ಯತೆ ಇದ್ದವು ಮತ್ತು ಅದನ್ನು ಅವರು ಪ್ರತಿಪಾದಿಸುತಿದ್ದರು. 

ಕಾಲ ಬದಲಾಗಿದೆ, ಶತಮಾನಗಳು ಉರುಳಿದೆ, ರಾಜಕೀಯ ವ್ಯವಸ್ಥೆ ಬುಡಮೇಲಾಗಿದೆ, ರಾಜಕೀಯ ದೊಂಬರಾಟವಾಗಿ ಗೊಂದಲದ ಗೂಡಾಗಿದೆ. ಯಡಿಯೂರಪ್ಪ, ಶ್ರೀರಾಮುಲುನಂತಹ ದಿಗ್ಗಜರು ಮತ್ತೊಮ್ಮೆ ಸ್ಥಾನ ಪಡೆಯುವ ತವಕದಲ್ಲಿದ್ದಾರೆ, ಜನತೆಗೆ ಹೇಳಿಕೊಳ್ಳುವಂತಹ ಕೊಡುಗೆಯೇನೂ ನೀಡಲಿಲ್ಲ ಎಂದು ಗೊತ್ತಿದ್ದರೂ ಜಾಫ಼ರ್ ಶರೀಫ್ ನಂತವರು ಟಿಕೆಟ್ಗಾಗಿ ಕ್ಯು ನಲ್ಲಿ ನಿಂತು ಕೈ ಸುಟ್ಟುಕೊಂಡಿದ್ದಾರೆ, ಇನ್ನಸ್ಟು ಮಂದಿ ಹೊಸ ಪಕ್ಷ ಕಟ್ಟಿ ಅದರ ಬೆಳವಣಿಗೆಯ ಕೆಲಸದಲ್ಲಿ ವಿಪರೀತ ಬ್ಯುಸಿ ಆಗಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ತೀರ್ಪು ನೀಡಲಿರುವ ಮತದಾರನನ್ನು ಮರೆತು ಬಿಟ್ಟಿದ್ದಾರೆ, ಈ ನಡುವೆ ಮತದಾರ ತನ್ನ  ನಾಯಕನನ್ನು ಗುರುತಿಸದ ಮಟ್ಟಿಗೆ ಕಂಗಾಲಾಗಿ ಹೋಗಿದ್ದಾನೆ, ರಾಜಕೀಯ ಕೆಸರೆರೆಚಾಟ ನಡೆಯುತ್ತಿದೆ ಆದರೆ ಮತದಾರ ಎಲ್ಲವನ್ನು ಸೂಕ್ಷಮವಾಗಿ ಗಮನಿಸುತಿದ್ದಾನೆ. 

ಕೈಯಲ್ಲಿ ಹೂ ಹಿಡಿಯುವ, ಬತ್ತ ಹಿಡಿಯುವ, ಹಿಡಸೂಡಿ ಹಿಡಿಯುವ ಪ್ರಮೇಯಗಲೂ ಬರುತ್ತಿದೆ, ನಂಬಿದವರನ್ನುನಡು ನೀರಿನಲ್ಲಿ ಕೈ ಬಿಟ್ಟವರು ಕೂಡಾ ಕಣದಲ್ಲಿದ್ದಾರೆ, ಫ಼ಸಲು ಇಲ್ಲ ಎಂದು ಹಲವರು ಬೇರೆಯವರ ಗದ್ದೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ.  ಲಜ್ಜೆಯನ್ನು ಮರೆತು ಜನರ ಮುಂದೆ ಬರಲು ಮತ್ತೊಮ್ಮೆ ತಯಾರಾಗಿದ್ದಾರೆ, ಸುಸ್ಥು ಆಯಾಸ ಎಲ್ಲ ಮರೆತು ಜನತೆಗಾಗಿ ಹೋರಾಟ ಮಾಡಲು ಮುಂದೆ ಬಂದಿದ್ದೇವೆ ಎನ್ನುತ್ತಿದ್ದಾರೆ, ಜನತೆಯ ಮುಂದೆ ಮತ್ತೊಮೆ ರಂಗದಲ್ಲಿ ನಾಟಕಕಾರರು ಬಂದಿದ್ದಾರೆ, ಆದರೆ ನಾಟಕವನ್ನು ಜನತೆ ತನ್ಮಯೆತೆಯಿಂದ ನೋಡುತ್ತಿದೆ ಮತ್ತು ಈಗಲೇ ಅಂಕ ನೀಡುವ ಲೆಕ್ಕಾಚಾರದಲ್ಲಿ  ಜನತೆ ತೊಡಗಿದೆ.

ಇವರೆಕೋ ಈ ಜನತೆಯನ್ನು ಯಾವ ಕಾಲದಲ್ಲಿಯೂ ಬದಲಾಯಿಸದಂತೆ ಕಾಣುತಿದ್ದಾರೆ, ಇವರು ಹಲವು ಕಾಲದಿಂದಲೂ ಬದಲಾಯಿಸಿದ್ದು ಪಕ್ಷವನ್ನು, ಚಿನ್ನೆಯನ್ನು, ಸ್ಪರ್ದಿಸುವ ಸ್ಥಳವನ್ನೇ ಹೊರತು ಮುಗ್ದ ಅಸಹಾಯಕ ಜನರ ಸಮಸ್ಯೆಯನ್ನಲ್ಲ.  ನೀರಿಲ್ಲದ, ಆಹಾರವಿಲ್ಲದ, ಮೂಲವಸತಿ ಇಲ್ಲದ ಜನರಿಗೆ ಸಾಂತ್ವನ ಇವರಿಂದ ಈ ಮೊದಲು ಕೂಡಾ ಸಿಕ್ಕಿಲ್ಲ ಇನ್ನು ಕೂಡಾ ಸಿಗುವ ಯಾವ ನಿರೀಕ್ಷೆಯೂ ಮತದಾರನಿಗಿಲ್ಲ, ಇವರು ಎಷ್ಟು ಬದಲಾದರು ಇವರ ಸಿದ್ದಾಂತ ಬದಲಾಗಿಲ್ಲ, ಇವರ ಸಿದ್ದಾಂತ ಈಗಲೂ ಬಡವರನ್ನು ಮತ್ತಸ್ಟು ಬಡತನಕ್ಕೆ ತಲ್ಲುವುದಾಗಿದೆ, ಮತದಾರರು ಇವರ ಸುಳ್ಳಿನ ಕಟ್ಟು ಕತೆ ಗೊತ್ತಿದ್ದು ಬಲಿಯಾಗುತಿದ್ದಾರೆ, ಎಲ್ಲವನ್ನು ಕಂಡು ಇವರು ಇವರ ಜೇಬುಗಳನ್ನು ತುಂಬಿಸುವುದರಲ್ಲೇ ನಿರತರಾಗಿದ್ದಾರೆ ಮತ್ತೆ ಇವರಿಂದ ಬೇರೇನೂ ನಿರೀಕ್ಷಿಸಲು ಜನತೆಗೆ ಸಾಧ್ಯ ಹೇಳಿ?.

ಇವುಗಳ ಮಧ್ಯೆ ಕೆಲವರು ಮೌಲ್ಯಾದಾರಿತ ವಿಷಯಗಳನ್ನು ಹಿಡಿದುಕೊಂಡು, ಮತ್ತು ಇನ್ನು ಕೆಲವರು ಕೆಲವು ಸೀಮಿತ ಸಿದ್ದಾಂತಗಳನ್ನು ಹಿಡಿದುಕೊಂಡು ಬಂದಿದ್ದಾರೆ ಮತ್ತು ಇನ್ನೊಂದು ಕಡೆ ಕೆಲವರು ಸಬಲೀಕರಣದ ಹೆಸರಿನಲ್ಲಿ ನಮ್ಮ ಮುಂದೆ ಇದ್ದಾರೆ ಆದರೆ ಸಾಮಾನ್ಯ ವ್ಯಕ್ತಿ ಮಾತ್ರ ಇವರ್ಯಾರನ್ನು ನಂಬಲು ತಯಾರಿಲ್ಲ, ದೇಶದಲ್ಲಿ ಎಷ್ಟು ಜನ ಏನೆಲ್ಲಾ ಸಿದ್ದಾಂತಗಳನ್ನು ಹಿಡಿದುಕೊಂಡು ಬಂದಿದ್ದರು ಮಾತು ಅವರು ಜೈಸಿದ ನಂತರ ಏನು ಮಾಡಿದ್ದಾರೆ ಎನ್ನುವುದು ನೋಡಿ  ಜನತೆ ರೋಸಿ ಹೊಗಿದೆ, ಮುಗ್ದ ಜನತೆ ಹೊಸಬರೊಂದಿಗೆ ಕೈ ಜೋಡಿಸಲು ಸಿದ್ದರಾಗಿಲ್ಲ, ಸಾಮಾನ್ಯರ ಮನ ಮುಟ್ಟುವಂತೆ ಯಾವ ರಾಜಕೀಯ ಪಕ್ಷಗಳು ಕೂಡಾ ಕೆಲಸ ಮಾಡಿಲ್ಲ.

ಯಡಿಯೂರಪ್ಪನಂತಹ ಪ್ರಭಾವಿ ರಾಜಕಾರಣಿಗಳು ತಾವಿದ್ದ ಪಕ್ಷವನ್ನು ತೊರೆದು ಹೊಸದಾಗಿ ಪಕ್ಷ ಕಟ್ಟಿ ತೆಂಗಿನ ಕಾಯಿಯ ಬೆಲೆ ಹೆಚ್ಚಿಸಲು ನೋಡಿದರು ಬೆಲೆ ಕುದುರಲಿಲ್ಲ ಎಂದಾಗ ಮೋದಿ ಅಲೆಯ ಹೆಸರು ಹೇಳಿ ಮಾತ್ರ್ ಪಕ್ಷಕ್ಕೆ ವಾಪಾಸಾಗಿ ಈಮೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ, ತಾನು ಪಕ್ಷ ಬಿಟ್ಟು ಹೋದಾಗ ಆಡಿದ್ದ ಮಾತುಗಳನ್ನು ಜನರು ಮರೆತು ಬಿಟ್ಟಿದ್ದಾರೆ ಎಂದು ತಿಳಿದಿದ್ದಾರೆ ಮತ್ತೊಮೆ ಕೈ ಚಾಚಿ ಮತ ಯಾಚಿಸಲು ರೆಡಿ ಆಗಿದ್ದಾರೆ, ಇನ್ನು ಶ್ರೀರಾಮುಲು ಎನ್ನುವ ಘಣಿ ಲೂಟಿಕೋರರ ಸಹಪಾಟಿ ತಾನು ತೆರೆದ ಹೊಸ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿಲ್ಲ ಎಂದು ಹೇಳಿ ಸಹಜವೆನ್ನುವಂತೆ  ಮೋದಿ ಅಲೆಯ ಹೆಸರು ಹೇಳಿ ವಾಪಸಾಗಿದ್ದಾರೆ, ಕೆಲವು ನಾಯಕರು ಇವರನ್ನು ಒಪ್ಪಿಕೊಂಡಿಲ್ಲ ಎಂದರೂ ಅವರೆಲ್ಲ ಒಪ್ಪಿಕೊಂಡಿದ್ದಾರೆ ಎಂದೇ ಇವರು ಸಮರ್ತಿಸುತಿದ್ದಾರೆ ಮತ್ತು ಗಹಗಹಿಸಿ ನಗುವಂತೆ ತನ್ನ ಸ್ವಾಭಿಮಾನಕ್ಕೆ ಅಡ್ಡಿಯಾಗಿದ್ದರಿಂದ ಪಕ್ಷ ಬಿಟ್ಟು ಹೋಗಿದ್ದೆ ಈಗ ದೇಶದ ಸ್ವಾಭಿಮಾನಕ್ಕಾಗಿ ಮರಳಿ ಪಕ್ಷಕ್ಕೆ ಬಂದಿದ್ದೇನೆ ಎಂದು ಹೇಳುತ್ತಾ ತಿರುಗಾಡತೊಡಗಿದ್ದಾರೆ, ಮನಸ್ಸಿನ ಮೂಲೆಯಲ್ಲಿ ಹೀಗಾದರೂ ತನ್ನ ಸ್ನೇಹಿತ ಹೊರಗಡೆ ಬರಲಿ ಎನ್ನುವ ಕನಸು, ಒಟ್ಟಿನಲ್ಲಿ ಇವರು  ಸ್ವಾಭಿಮಾನದ ಅರ್ಥವನ್ನು ತಮಗೆ ಬೇಕಾದ ಹಾಗೆ ಬಳಸಿಕೊಲ್ಲುತಿದ್ದಾರೆ.

ಇನ್ನು ಇಳಿ ವಯಸ್ಸಿನ ವ್ಯಕ್ತಿಯೊಬ್ಬರು ಕೈ ಕಾಲು ಹಿಡಿದಾಗಲೂ ಅವರಿಗೆ ಪಕ್ಷ ಟಿಕೆಟ್ ನೀಡದೆ ನೀರಾಸೆ ಮೂಡಿಸಿದೆ, ಆದರೂ ಅವರು ತನ್ನನ್ನು ನಂಬಿದ್ದ ಜನತೆಗೆ ಇಷ್ಟು ವರ್ಷ ತಾನೇನು ಮಾಡಿಲ್ಲ ಎನ್ನುವುದನ್ನು ಚಿಂತಿಸದೆ ಇನ್ನೊಂದು ಪಕ್ಷ ಸೇರಲು ತಯಾರಾದಂತೆ ವರ್ತಿಸುತಿದ್ದಾರೆ,  ನಾಚಿಕೆ ಮಾನ ಮಾರ್ಯಾದಿಗಳು ಇದ್ದರೆ  ತಾನೇ ಆ ಚಿಂತನೆಗಳು ಬರಲು ಸಾಧ್ಯ, ಕೆಲವರು ಬೇಡ ಬೇಡ ಎಂದರು ಅವರಿಗೆ ಮನ್ನಣೆ ನೀಡಿ ಸ್ವಾಗತಿಸಲಾಗಿದೆ. ಈ ರೀತಿ ಹಲವು ವಿಧಗಳಲ್ಲಿ ರಾಜಕೀಯ ದೊಂಬರಾಟ ಘರ್ಜನೆಯಿಂದ ಆರಂಭವಾಗಿದೆ. ತೀರ್ಪುಗಾರ ಎನಿಸಿಕೊಂಡವನು ಮಾತ್ರ ತನ್ನ ತೀರ್ಪಿನತ್ತ ಯೋಚಿಸತೊಡಗಿದ್ದಾನೆ ಇವರಿಗೆಲ್ಲ ಒಟ್ಟಾಗಿ ಬುದ್ದಿ ಕಲಿಸುವ ಪ್ರಯತ್ನದಲ್ಲಿದ್ದಾನೆ, ಎಲ್ಲವನ್ನೂ ಅವಲೋಕಿಸುತಿದ್ದಾನೆ.

ಕೆಲವರು ಬಹಿರಂಗವಾಗಿ ರಕ್ತ ಹರಿಸುತಿದ್ದಾರೆ ಇನ್ನು ಕೆಲವರು ತೆರೆ ಮರೆಯ ಹಿಂದೆ ನಿಂತು ಅದಕ್ಕೆ ಕುಮ್ಮಕ್ಕು ನೀಡುತಿದ್ದಾರೆ ಇವರ ಮಧ್ಯೆ ಅಮಾಯಕನೆನಿಸಿಕೊಂಡವರು ಮಾತ್ರ ಬಲಿಪಸುವಾಗುತಿದ್ದಾರೆ, ರಾಜಕೀಯ ಎನ್ನುವ ವ್ಯವಸ್ಥೆ ಕೆಟ್ಟು ದುರ್ನಾತ ಬೀರತೊಡಗಿದೆ, ಮುಂದಿರುವ ಚುಣಾವನೆಯಲ್ಲಾದರು ಮತದಾರರು ಯಾರನ್ನು ಆಯ್ಕೆ ಮಾಡಬೇಕು ಯಾರನ್ನು ಕೈ ಬಿಡಬೇಕು ಎಂದು ತಿರ್ಮಾನಿಸಲಿ, ಮತದಾರನಿಗೆ ಯಾರೂ ಸರಿಯಾದ ಅಭ್ಯರ್ತಿ ಇಲ್ಲ ಎನ್ನುವುದನ್ನು ಸೂಚಿಸಲು ಕೂಡಾ ವ್ಯವಸ್ಥೆ ಕಲ್ಪಿಸಲಾಗಿದೆ, ರಾಜಕೀಯ ವ್ಯವಸ್ಥೆಯಿಂದ ರೋಸಿಹೋದ ಮತದಾರ ಅದರ ಕಡೆಗೆ ಒಲವು ತೋರಿಸದಿದ್ದರೆ ಸರಿ.  ಏನಿದ್ದರೂ ಮತದಾರನಿಂದ ಮಾತ್ರ ಇದಕ್ಕೆಲ್ಲಾ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಲು ಸಾಧ್ಯ ಆ ಮೂಲಕ ಈಗಿನ ರಾಜಕೀಯ ವ್ಯವಸ್ಥೆಗೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಶತಮಾನಗಳ ಹಿಂದೆ ಇದ್ದ ಅಲ್ಪ ಸ್ವಲ್ಪ ಮಾನ ಮರ್ಯಾದಿ ಇದ್ದ ರಾಜಕಾರಣ ವ್ಯವಸ್ಥೆಯಾದರು ಮರಳಿ ಬರಲಿ. 

Friday, March 14, 2014

ಮೋದಿ,ಮೊಯಿಲಿ ವಿನಾಶಕ್ಕೆ ದಾರಿ (ಚುಟುಕ)



ಮೋದಿ ಬರ್ತಾನೆ ಮೋದಿ ಬರ್ತಾನೆ ಎಂದು ಹೇಳಿಕೊಟ್ಟರು, 
ಕೊನೆಯಲ್ಲಿ ಎಲ್ಲ ಸೇರಿ ಮೊಯಿಲಿಗೆ ಸೀಟು ಬಿಟ್ಟುಕೊಟ್ಟರು.  

ಮೋದಿಯಾದರೇನು? ಮೊಯಿಲಿಯಾದರೇನು? ಪರಿತಪಿಸುವ ಮುಗ್ದ ಜನರಿಗೆ, 
ನರಹಂತಕನು,ಜೀವನಾಡಿ ಕಿತ್ತುಕೊಲ್ಲುವವರು ವಿನಾಶಕ್ಕೆ ನಾಂದಿ ಅಲ್ಲವೇ?. 

ಮತದಾರರೇ ಮೊಸಹೋಗಬೆಡಿ ಮೋದಿ,ಮೊಯಿಲಿ ಹೆಸರು ಬೇರೆ,
ಒಂದರಲ್ಲಿ ರಕ್ತವಿದೆ, ಇನ್ನೊಂದರ ನಡೆ ನಿರಿಲ್ಲದ ಕಡೆಗೆ. 

Wednesday, March 12, 2014

ಸತ್ಯದ ಪಥದಲ್ಲಿ ನೋವುಗಳಿಂದಲೇ ಮುನ್ನಡೆಯಿರಿ (ಲೇಖನ)










ಹತಾಶೆಯ ಮುಖಭಾವದಿಂದ ಮನಸ್ಸಿನಲ್ಲಿ ನೋವನ್ನಿಟ್ಟು ನಗುಮುಖದಿಂದ ಎದುರುಗೊಳ್ಳುವ ಒಬ್ಬ ನಾಯಕನ  ಸಂಕಟ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅವನೊಬ್ಬ ಕಾರ್ಯಕರ್ತ ಎಂದೆನಿಸಲು ಅಸಮರ್ಥ. ಹತಾಶ ಮನೋಭಾವದ ನಡುವೆಯೂ ಸ್ಪೂರ್ತಿಧಾಯಕ ಮಾತುಗಳನ್ನಾಡುವ ದೈರ್ಯವಿದ್ದರೆ, ತಾನು ನಂಬಿಕೊಂಡಿರುವ ಬದಲಾವಣೆಯ ಸಿದ್ದಾಂತದ ಕಾರ್ಯದಲ್ಲಿ ನಾಯಕನೊಬ್ಬ ಮುಂದುವರಿಯುದಾದರೆ ಸರ್ವ ಲೋಕಗಳ ಪ್ರಭುವಿಣಾನೆ ಆತ ಮುನ್ನಡೆಸುತ್ತಿರುವ ಜನಾಂಧೋಲನದ ಜನಮುನ್ನಡೆಗೆ ಒಂದು ಕಾಲದಲ್ಲಿ ಜಯವಿದೆ ಅಂದು ಆ ದಿನ ಈ ಸಮಾಜಕ್ಕೆ ಅರ್ಪಿತವಾಗಲಿದೆ. 

ದೇವನೇ ನೀನು ವಾಗ್ದಾನಿಸಿದಂತೆ ಒಂದು ಸಮರ್ಥವಾದ ಗುಂಪನ್ನು ಏಕೆ ಕಳುಹಿಸಿಕೊಡಬಾರದು ಎಂದು ನಾಯಕನಾದವನು ನಿರುತ್ಸಾಹದ ಕಾರ್ಯಕರ್ತರ ಬಗ್ಗೆ ಪ್ರಾರ್ಥಿಸಲು ಹೊರಡುವುದಾದರೆ ಅದು ಯಾರ ತಪ್ಪು?  ನಾಯಕನಿಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದ್ದ ಕಾರ್ಯಕರ್ತರ ತಪ್ಪೇ? ಆತನ ಬೆನ್ನು ತಟ್ಟಬೇಕಾಗಿದ್ದ, ಆತನನ್ನು ಮುಂದೆ ಕಳುಹಿಸಿ, ಆತನಿಗೆ ಪೂರಕ ವ್ಯವಸ್ಥೆಗಳನ್ನು ನೀಡಿ ಬೆಂಬಲಿಸದವರ ತಪ್ಪೇ? ಅದಕ್ಕೆ ಅದರದೇ ಆದ ಕಾರಣವಿರಬಹುದು, ಕಾರಣ ಹುಡುಕುವ ಪ್ರಯತ್ನದಲ್ಲಿ ಕಾಲ ಕಳೆಯದೆ ಮುಂದಿರುವ ಧೌತ್ಯಗಳತ್ತ  ಎದೆಗುಂದದೆ ಹೆಜ್ಜೆ ಇಡಬೇಕಾಗಿದೆ. 

ಸಮಾಜ ಪರಿವರ್ತನೆಯ ದಾರಿಯಲ್ಲಿ ಸೋಲುಗಳು ಸಹಜ, ಆದರೆ ಸೊಲು ನಿರ್ನಾಮದ ಕಡೆಗೆ ಸಾಗಬಾರದು, ಧೈರ್ಯದಿಂದ, ಸತ್ಯದಿಂದ, ನಿಸ್ಟೆಯಿಂದ ಕೆಲಸ ಮಾಡಿದಾಗ ಮರ್ಧಿತರ, ಅಸಹಾಕಯರ, ಶೋಷಿತರ ಪರವಾಗಿ ನಿಂತು ಮನುಷ್ಯತ್ವದ ಪರವಾಗಿ ಹೋರಾಟಗಳು ನಡೆಯಬೇಕು, ದುರ್ಬಲ ವ್ಯವಸ್ಥೆಯನ್ನು ಕಂಡು ಅದೇ ದಾರಿಯಲಿ ಸಾಗುವ ಬದಲು ಅನ್ಯಾಯದ, ಅಕ್ರಮದ, ಅನೀತಿಯ ವಿರುದ್ದ ಜನಜಾಗ್ರತಿ ಹೋರಾಟಗಳು ನಡೆಯಬೇಕು, ಅ ಹೋರಾಟಗಳಲ್ಲಿ ನಮ್ಮೆಲ್ಲರ ಪಾತ್ರವಿರಬೇಕು ಮತ್ತು ನಾವು ಮುಂದಿನ ಸಾಲುಗಳಲ್ಲಿ ನಿಂತವರಾಗಿರಬೇಕು.

ಒಂದು ಕಾಲದಲ್ಲಿ ಮಕ್ಕಾದ ಮಣ್ಣಿನಲ್ಲಿ ಅಸಹಾಯಕರ ವಿಮೋಚನೆಗಾಗಿ, ಮರ್ದಿತರ ಪರವಾಗಿ, ಅನಾಥೆಯರ ಸಂರಕ್ಷಣೆಗಾಗಿ, ಮಾನವಿಯತೆಯ ಹರಿಕಾರರಾಗಿ, ಸಂಪತ್ತಿನ ದುರ್ಬಳಕೆಯ ವಿರುದ್ದ ದ್ವನಿ ಎತ್ತಿ, ಅನ್ಯಾಯದ ವ್ಯವಸ್ಥೆಯ ವಿರುದ್ದ ಹೋರಾಡಿ, ಆದರ್ಶ ಸಮರ ನಿರ್ವಹಿಸಿದ ಒಬ್ಬ ಪ್ರವಾದಿಯನ್ನು ನೆನಪಿಸಿಕೊಳ್ಳುತ್ತಾ ಹೋರಾಟದಲ್ಲಿ ಮುಂದುವರೆಯಬೇಕು, ಆ ಮೂಲಕ ಸಾಮ್ರಾಜ್ಯಶಾಹಿ, ಬಂಡವಾಳಷಾಹಿ, ಫ್ಯಾಸಿಸ್ಟ್ ಶಕ್ತಿಗಳ ವಿರುದ್ದ ಸಮರ ಸಾರಬೇಕು. 

ಆದರ್ಶವುಳ್ಳ ಹೋರಾಟದಲ್ಲಿ, ಅದಕ್ಕಾಗಿ ಮುನ್ನುಗುವ ಪ್ರಯಾಣದಲ್ಲಿ ಹೊರಾಡಲು ತಿರ್ಮಾನಿಸಿದವರು ಖಂಡಿತ ನಿರಾಶದಾಯಕರಾಗಬೇಕಾಗಿಲ್ಲ, ವಿಜಯದ ಪತಾಕೆ ಯಾರಿಗೂ ತಾನಾಗಿಯೇ ಬಂದು ಅಪ್ಪಿಕೊಂಡ ಉದಾಹರಣೆಗಳು ಎಲ್ಲಿಯೂ ಕಾಣ ಸಿಗುವುದಿಲ್ಲ, ಹೋರಾಟ ಎಂದ ಮೇಲೆ ತ್ಯಾಗ, ಬಲಿದಾನಗಳು ಇರಲೇಬೇಕು. ಯವ್ವನವನ್ನು ಆದರ್ಶಕ್ಕಾಗಿ, ನೀತಿಗಾಗಿ ಉಪಯೋಗಿಸಿಕೊಳ್ಳಬೇಕು ಮತ್ತು ಆ ನಿಟ್ಟಿನಲ್ಲಿರುವ ಸಮರದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು, ಕೆಲವೇ ಕೆಲವು ಭಾಗ್ಯಶಾಲಿಗಳಿಗೆ ಮಾತ್ರ ಜನರ ಪರವಾಗಿ ಹೋರಾಡಲು ಅವಕಾಸ ಲಭಿಸಿದೆ, ಆ ಮೂಲಕ ಆದಿವಾಸಿಗಳ, ದಲಿತರ ಪ್ರತಿದ್ವನಿಯಾಗಬೇಕು ಮತ್ತು  ಸದಾಚಾರದ ಕಲ್ಪನೆ ಹುಟ್ಟುಹಾಕುವತ್ತ ಪಯಣ ಸಾಗಬೇಕಾಗಿದೆ.

ವೈವಿದ್ಯತೆಯನ್ನು ಅಂಗೀಕರಿಸುವ, ಬಹುಸಂಸ್ಕೃತಿ ಇರುವ ದೇಶದಲ್ಲಿ ಮನುಷ್ಯನ ಮೌಲ್ವಿಕ ಗುಣಗಳು ಮರೆಮಾಚಿಸಲ್ಪಡುತ್ತಿರುವ, ಸಹೋದರತೆ ಮರೆಯಾಗುತ್ತಿರುವ ಸಮಾಜದಲ್ಲಿ ಅದನ್ನೆಲ್ಲ ಮರಳಿ ಸ್ಥಾಪಿಸುವ ನಿಟ್ಟಿನಲ್ಲಿ ಸಬಲೀಕರಣದ ಕಡೆಗೆ ಹೋರಾಟಗಳು ಆರಂಬವಾಗಬೇಕು. ಜನಮುನ್ನಡೆ ಹೋರಾಟಗಳು ಅದು ನೋವನ್ನು ನುಂಗಿಕೊಂಡೆ ನಡೆದಿರುವಂತದ್ದು, ಅಲ್ಲಿ ಸೋಲಿತ್ತು, ಆದರೆ ಸೋಲು ಸೋಲಾಗಿಯೇ ಉಳಿಯಲಿಲ್ಲ ಕಡೆಗೆ ಅದು ವಿಜಯದತ್ತ  ಸಾಗಿತ್ತು ಮತ್ತೆಂದೂ ಆ ವಿಜಯಿಗಳು ಸೋಲಿನತ್ತ ಮುಖ ತಿರುಗಿಸಲೇ ಇಲ್ಲ ಎನ್ನುವುದು ವಾಸ್ತವ. ಅಂತಹ ಆದರ್ಶ ನಮ್ಮಲ್ಲಿರಲಿ, ಸತ್ಯದ ಪಥದಲ್ಲಿ ನಡೆಯುವವನಿಗೆ ನೋವುಗಳು ಸಹಜ, ನೋವುಗಲಿಂದಲೇ ಮುನ್ನಡೆಯೋಣ.

ನಮ್ಮ ಜೊತೆ ಇದ್ದ ಕೆಲವು ವ್ಯಕ್ತಿಗಳು ನಮನ್ನು ಅಗಲಿದಾಗ ನಾವು ಕುಗ್ಗುವ,  ಹತಾಶರಾಗುವ, ವ್ಯಥೆಪಡುವ ಅಗತ್ಯವಿಲ್ಲ, ನಾವು ಇಲ್ಲಿ ಏನೂ ಕಳೆದುಕೊಂಡಿಲ್ಲ, ಜನಮುನ್ನಡೆ ಕುಗ್ಗಬೆಕಾಗಿಯೂ ಇಲ್ಲ, ಆದರ್ಶಗಳನ್ನು ಒಪ್ಪುವ, ಸಮಾಜದ  ಅಶಾದಾಯವಾದಿಗಳನ್ನು ಒಟ್ಟು ಸೇರಿಸಿಕೊಂಡು ಮುಂದೆ ಸಾಗೋಣ ಅದರಲ್ಲಿ ಜಯವಿದೆ, ಆ ವಿಜಯದ  ಬಗ್ಗೆ ನಿರೀಕ್ಷೆಯಿದೆ, ನಮ್ಮ ನಿಜವಾದ ಕೆಲಸಗಳು ಇನ್ನಸ್ಟೇ ಆರಂಬವಾಗಬೇಕಾಗಿದೆ.

ನಮ್ಮೊಂದಿಗೆ ಕೈ ಜೋಡಿಸುವ ಯುವಕರೊಂದಿಗೆ ನಾವು ಮುನ್ನಡೆಯೋಣ, ಸಮಾಜದಲ್ಲಿ ಕಡೆಗನಿಸಲ್ಪಟ್ಟವರು ನಮ್ಮ ನಿರೀಕ್ಷೆಯಲ್ಲಿದ್ದಾರೆ, ಅವರು ನಮ್ಮನ್ನು ಕಾಯುತಿದ್ಡಾರೆ, ಸಮಸ್ಯೆಗೆ ಸ್ಪಂದಿಸುವವರು ಬರಲಿದ್ದಾರೆ ಎನ್ನುವ ಆತುರದಲ್ಲಿದ್ದಾರೆ.  ನಾವು ಇನ್ನಸ್ಟು ಹೊಸ ಜಾಗಗಳಲ್ಲಿ ಪರಿಚಿತರಾಗಬೇಕು, ಈ ಕಾಲಕ್ಕೆ ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡುವ ನಿಟ್ಟಿನಲ್ಲಿ ಹೆಜ್ಜೆಗಳು ಸಾಗಲಿ, ಧೈರ್ಯಗುಂದದೆ ಜನಮುನ್ನಡೆ ಮುಂದುವರೆದು ಒಂದು ಜನಾಂಧೋಳನವಾಗಲಿ ಆ ಮೂಲಕ ದೇವನ ಆದೇಶವನ್ನು ಪಾಲಿಸುವ ನಡೆ ನಮ್ಮದಾಗಿರಲಿ. 
 



Tuesday, March 11, 2014

ಪರಿಣಾಮ!! (ಚುಟುಕ)


ಸಮಾಜ ಸೇವೆಯ ಹೆಸರಿಟ್ಟ ಹಲವು ಗುಂಪು!!
ಎಷ್ಟು ಬದಲಾಗಿದೆ? ಏನು ಬದಲಾಗಿದೆ?

ಲೆಕ್ಕ ಮೀರಿದೆ ಸಂಘಟನೆಗಳ ಸಂಖ್ಯೆ!!
ಗುರಿ ತಲುಪಿದವೆಸ್ಟು ? ಮುರಿದುಬಿದ್ದವೆಸ್ಟು ? 

ವೇದಿಕೆ ಹತ್ತಿದರೆ ಬಾಯಲ್ಲಿ ಬರೀ ವೇದಾಂತ!!
ನೈತಿಕತೆ ಎಷ್ಟು? ಪ್ರಾಮಾಣಿಕರು ಯಾರು? 

ಕೊನೆಯಲ್ಲಿ ಹಿಂತಿರುಗಿ ನೋಡಿದಾಗ ಪರಿಣಾಮ!!
ಬದಲಾದ ಜನತೆಯೇ? ಬಡತನದ ಬೆಗುದಿಯೇ?

ನೀನಾಗು ಕಿಂಗ್ (ಚುಟುಕ)





ಸಮಯವಾದಾಗ ನಾವೆಲ್ಲ ಕೆಲಸಕ್ಕೆ ಹಾಜರ್
ಅದಾನ್ ಕೇಳಿದಾಗ ಮಸೀದಿಗೆ ನಾವು ಗೈರು ಹಾಜರ್

ಕೆಲಸಕ್ಕೆ ರಜೆ ಹಾಕುವುದಾದರೆ ಮಲಕನಿಗೆ ರಿಂಗ್ ಆಗು   
ಐದು ಹೊತ್ತು ನಮಾಜ್ ಮಾಡಿದರೆ ನೀನಾಗುವೆ ಕಿಂಗ್


ಮರಣ (ಚುಟುಕ)







ಸತ್ತರೆ ಕಬರಿಗೆ ಹೋಗುವುದು ಸಾಮಾನ್ಯ .......

ಜೀವಂತವಿರುವಾಗ ಬದುಕಲಿಕ್ಕೆ ಹೋರಾಡುವವರು ನಾವೆಲ್ಲ .....



ಕಣ್ಣೀರು ಬರುವುದು ಗೆಳೆಯನು ಕಬರಿನಲ್ಲಿ ಮಲಗಿದಾಗ .....

ನಾಳೆ ನಾವು ಸತ್ತಾಗ ಯಾರಾದರು ಇದ್ದರೆ ಅದುವೇ ಸ್ವಭಾಗ್ಯ .....